<p>ಬ್ಯಾಡಗಿ: ‘ಪೂರ್ವಜರ ಆಚಾರ ವಿಚಾರಗಳನ್ನು ಅರಿತು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಜಂಗಮರು ಧರ್ಮರಕ್ಷಣೆಗೆ ಮುಂದಾಗಬೇಕು’ ಎಂದು ಶಿಕಾರಿಪುರದ ದಿಂಡದಹಳ್ಳಿ ಪಶುಪತಿ ಶಿವಾನಂದ ಸ್ವಾಮೀಜಿ ಹೇಳಿದರು.</p>.<p>ಪಟ್ಟಣದ ರೇಣುಕಾಚಾರ್ಯ ಮಂದಿರದಲ್ಲಿ ಪಂಚಾಚಾರ್ಯ ಯುವ ವೇದಿಕೆ ಜಿಲ್ಲೆಯ 34 ಜಂಗಮ ವಟುಗಳಿಗೆ ಈಚೆಗೆ ಆಯೋಜಿಸಿದ್ದ ಅಯ್ಯಾಚಾರ (ಶಿವದೀಕ್ಷೆ) ಕಾರ್ಯಕ್ರಮವನ್ನು ನೆರವೇರಿಸಿ ಆಶೀರ್ವಚನ ನೀಡಿದರು.</p>.<p>ಶಿವದೀಕ್ಷಾ ಪಡೆದವರು ನಿತ್ಯ ಸ್ನಾನದ ಬಳಿಕ ಶಿವಪೂಜೆ ನೆರವೇರಿಸುವುದನ್ನು ಜೀವನದುದ್ದಕ್ಕೂ ನೆರವೇರಿಸುವ ಮೂಲಕ ನೈತಿಕ ಮೌಲ್ಯ ಹಾಗೂ ಪರೋಪಕಾರ ಗುಣಗಳನ್ನು ಅಳವಡಿಕೊಳ್ಳಬೇಕೆಂದು ಸಲಹೆ ನೀಡಿದರು.</p>.<p>ರಾಣೆಬೆನ್ನೂರು ಶನೀಶ್ವರ ಹಿರೇಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಅಯ್ಯಾಚಾರ ಪಡೆದ ಎಲ್ಲರೂ ಕನಿಷ್ಠ 5 ಮನೆಗಳಿಗೆ ತೆರಳಿ ದವಸ, ಧಾನ್ಯ ಭಿಕ್ಷೆ ಪಡೆಯುವ ಪದ್ದತಿ ನಡೆಸಬೇಕೆಂದು ಹೇಳಿದರು.</p>.<p>ಕುಮಾರೇಶ್ವರರ ಧಾರ್ಮಿಕ ಪಾಠ ಶಾಲೆಯ ಮುಖ್ಯಸ್ಥ ರಾಚಯ್ಯ ಓದಿಸೋಮಠ, ವೀರಯ್ಯ ಹಿರೇಮಠ, ಚನ್ನಬಸವ ಹಿರೇಮಠ ನೇತೃತ್ವದಲ್ಲಿ ಶಿವದೀಕ್ಷಾ ಕಾರ್ಯಕ್ರಮ ನೆರವೇರಿಸಲಾಯಿತು. ಸಾಯಿಬಾಬಾ ಮಂದಿರದ ಧರ್ಮಾಧಿಕಾರಿ ಮಂಜಯ್ಯಸ್ವಾಮಿ ಹಿರೇಮಠ ಮಂತ್ರೋಚಾರದ ಮಹತ್ವ ಹಾಗೂ ಶಿಷ್ಟಾಚಾರಗಳ ಕುರಿತು ಮಾಹಿತಿ ನೀಡಿದರು.</p>.<p>ಈ ವೇಳೆ ಪಂಚಾಚಾರ್ಯ ಯುವ ವೇದಿಕೆಯ ಅಧ್ಯಕ್ಷ ಶರಣಯ್ಯ ಬೂದಿಹಾಳಮಠ, ಮೃತ್ಯುಂಜಯ ಹಿರೇಮಠ, ಗಿರಿಶ ಇಂಡಿಮಠ, ಕೆ.ಸಿ.ಸೊಪ್ಪಿನಮಠ, ರಾಜಶೇಖರ ಹಾಲೇವಾಡಿಮಠ ಹಾಗೂ ಇನ್ನಿತರರು ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260423-22-45509779</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬ್ಯಾಡಗಿ: ‘ಪೂರ್ವಜರ ಆಚಾರ ವಿಚಾರಗಳನ್ನು ಅರಿತು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಜಂಗಮರು ಧರ್ಮರಕ್ಷಣೆಗೆ ಮುಂದಾಗಬೇಕು’ ಎಂದು ಶಿಕಾರಿಪುರದ ದಿಂಡದಹಳ್ಳಿ ಪಶುಪತಿ ಶಿವಾನಂದ ಸ್ವಾಮೀಜಿ ಹೇಳಿದರು.</p>.<p>ಪಟ್ಟಣದ ರೇಣುಕಾಚಾರ್ಯ ಮಂದಿರದಲ್ಲಿ ಪಂಚಾಚಾರ್ಯ ಯುವ ವೇದಿಕೆ ಜಿಲ್ಲೆಯ 34 ಜಂಗಮ ವಟುಗಳಿಗೆ ಈಚೆಗೆ ಆಯೋಜಿಸಿದ್ದ ಅಯ್ಯಾಚಾರ (ಶಿವದೀಕ್ಷೆ) ಕಾರ್ಯಕ್ರಮವನ್ನು ನೆರವೇರಿಸಿ ಆಶೀರ್ವಚನ ನೀಡಿದರು.</p>.<p>ಶಿವದೀಕ್ಷಾ ಪಡೆದವರು ನಿತ್ಯ ಸ್ನಾನದ ಬಳಿಕ ಶಿವಪೂಜೆ ನೆರವೇರಿಸುವುದನ್ನು ಜೀವನದುದ್ದಕ್ಕೂ ನೆರವೇರಿಸುವ ಮೂಲಕ ನೈತಿಕ ಮೌಲ್ಯ ಹಾಗೂ ಪರೋಪಕಾರ ಗುಣಗಳನ್ನು ಅಳವಡಿಕೊಳ್ಳಬೇಕೆಂದು ಸಲಹೆ ನೀಡಿದರು.</p>.<p>ರಾಣೆಬೆನ್ನೂರು ಶನೀಶ್ವರ ಹಿರೇಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಅಯ್ಯಾಚಾರ ಪಡೆದ ಎಲ್ಲರೂ ಕನಿಷ್ಠ 5 ಮನೆಗಳಿಗೆ ತೆರಳಿ ದವಸ, ಧಾನ್ಯ ಭಿಕ್ಷೆ ಪಡೆಯುವ ಪದ್ದತಿ ನಡೆಸಬೇಕೆಂದು ಹೇಳಿದರು.</p>.<p>ಕುಮಾರೇಶ್ವರರ ಧಾರ್ಮಿಕ ಪಾಠ ಶಾಲೆಯ ಮುಖ್ಯಸ್ಥ ರಾಚಯ್ಯ ಓದಿಸೋಮಠ, ವೀರಯ್ಯ ಹಿರೇಮಠ, ಚನ್ನಬಸವ ಹಿರೇಮಠ ನೇತೃತ್ವದಲ್ಲಿ ಶಿವದೀಕ್ಷಾ ಕಾರ್ಯಕ್ರಮ ನೆರವೇರಿಸಲಾಯಿತು. ಸಾಯಿಬಾಬಾ ಮಂದಿರದ ಧರ್ಮಾಧಿಕಾರಿ ಮಂಜಯ್ಯಸ್ವಾಮಿ ಹಿರೇಮಠ ಮಂತ್ರೋಚಾರದ ಮಹತ್ವ ಹಾಗೂ ಶಿಷ್ಟಾಚಾರಗಳ ಕುರಿತು ಮಾಹಿತಿ ನೀಡಿದರು.</p>.<p>ಈ ವೇಳೆ ಪಂಚಾಚಾರ್ಯ ಯುವ ವೇದಿಕೆಯ ಅಧ್ಯಕ್ಷ ಶರಣಯ್ಯ ಬೂದಿಹಾಳಮಠ, ಮೃತ್ಯುಂಜಯ ಹಿರೇಮಠ, ಗಿರಿಶ ಇಂಡಿಮಠ, ಕೆ.ಸಿ.ಸೊಪ್ಪಿನಮಠ, ರಾಜಶೇಖರ ಹಾಲೇವಾಡಿಮಠ ಹಾಗೂ ಇನ್ನಿತರರು ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260423-22-45509779</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>