<p>ದೇವನಹಳ್ಳಿ: ಜಗತ್ತಿಗೆ ಜ್ಞಾನದ ಬೆಳಕು ಚೆಲ್ಲಿದ ಮಹಾನ್ ವ್ಯಕ್ತಿ ಭಗವಾನ್ ಬುದ್ಧನ ತತ್ವಾದರ್ಶಗಳು ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತ. ಅವುಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡರೆ ಶಾಂತಿ ಮತ್ತು ಸಮಾನತೆ ಸಮಾಜ ನಿರ್ಮಿಸಬಹುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಹೇಳಿದರು.</p>.<p>ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಭಗವಾನ್ ಬುದ್ಧ ಜಯಂತಿ ಉದ್ಘಾಟಿಸಿ ಮಾತನಾಡಿದರು.</p>.<p>ಬುದ್ಧ ಜಯಂತಿ ಕೇವಲ ಆಚರಣೆಯ ದಿನವಲ್ಲ, ಮಾನವೀಯ ಮೌಲ್ಯಗಳನ್ನು ಪುನರ್ಸ್ಮರಣೆ ಮಾಡುವ ಪವಿತ್ರ ಕ್ಷಣವಾಗಿದೆ. ರಾಜಕುಮಾರ ಸಿದ್ಧಾರ್ಥನಾಗಿ ಐಷಾರಾಮಿ ಜೀವನ ನಡೆಸುತ್ತಿದ್ದ ಗೌತಮ ಬುದ್ಧ ಮಾನವನ ದುಃಖದ ಮೂಲವನ್ನು ಅರಿಯುವ ಉದ್ದೇಶದಿಂದ ಸಕಲ ಸುಖಸೌಕರ್ಯವನ್ನು ತ್ಯಜಿಸಿ ಧ್ಯಾನ ಮಾರ್ಗವನ್ನು ಅನುಸರಿಸಿದರು. ಬೋಧಿವೃಕ್ಷದ ಕೆಳಗೆ ಅವರಿಗೆ ದೊರೆತ ಜ್ಞಾನೋದಯವು ಮಾನವಕುಲಕ್ಕೆ ಶಾಶ್ವತ ಮಾರ್ಗದರ್ಶನವಾಗಿದೆ ಎಂದರು.</p>.<p>ಬುದ್ಧ ಬೋಧಿಸಿದ ಅಹಿಂಸೆ, ಸತ್ಯ, ದಯೆ, ಸಮತ್ವ, ಮಧ್ಯಮ ಮಾರ್ಗ ಇಂತಹ ತತ್ವಗಳು ಹಿಂಸಾಚಾರ, ಅಸಹಿಷ್ಣುತೆ ಮತ್ತು ದ್ವೇಷ ಹೆಚ್ಚುತ್ತಿರುವ ಇಂದಿನ ಕಾಲಘಟ್ಟಕ್ಕೆ ಔಷಧಿಯಾಗಿದೆ. ಆಸೆ ಮತ್ತು ಅತೃಪ್ತಿಯೇ ದುಃಖದ ಮೂಲವೆಂದು ಬೋಧಿಸಿದ ಬುದ್ಧರ ಸಂದೇಶಗಳು ಮಾನಸಿಕ ಶಾಂತಿ ಮತ್ತು ಸಮತೋಲನಯುತ ಬದುಕಿಗೆ ಪ್ರೇರಣೆ ನೀಡುತ್ತವೆ ಎಂದು ಹೇಳಿದರು.</p>.<p>ಬುದ್ಧರನ್ನು ‘ಏಷ್ಯಾದ ಬೆಳಕು’ ಎಂದು ಕರೆಯುವುದು ಯಾದೃಚ್ಛಿಕವಲ್ಲ. 2,500 ವರ್ಷಗಳ ಹಿಂದೆ ನೀಡಿದ ಸಂದೇಶಗಳು ಇಂದಿಗೂ ಜೀವಂತವಾಗಿವೆ. ಬೌದ್ಧ ಧರ್ಮವು ವಿಶ್ವದಾದ್ಯಂತ ಶಾಂತಿ, ಸಹಿಷ್ಣುತೆ ಮತ್ತು ಸಹಬಾಳ್ವೆಯ ಸಂದೇಶವನ್ನು ಹರಡಿದೆ ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಿವಕುಮಾರ್ ತಿಳಿಸಿದರು.</p>.<p>ಸಾಮ್ರಾಟ ಅಶೋಕನು ಬೌದ್ಧ ಧರ್ಮ ಅನುಸರಿಸಿ ಆಡಳಿತದಲ್ಲಿ ಧರ್ಮನಿಷ್ಠೆ ಮತ್ತು ಮಾನವೀಯತೆ ಸ್ಥಾಪಿಸಿದ್ದು ಇತಿಹಾಸದಲ್ಲೇ ಮಹತ್ವದ್ದಾಗಿದೆ. ಜಗಜ್ಯೋತಿ ಬಸವಣ್ಣನವರ ಸಮಾನತೆಯ ಸಂದೇಶಕ್ಕೂ ಬುದ್ಧ ತತ್ವಗಳಿಗೆ ಸಾಮ್ಯತೆ ಇದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಹ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಬೌದ್ಧ ಧರ್ಮವನ್ನು ಸ್ವೀಕರಿಸಿ ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಇಟ್ಟರು ಎಂದು ಹೇಳಿದರು.</p>.<p>ತಹಶೀಲ್ದಾರ್ ಎಂ.ಅನಿಲ್, ಇಒ ಶ್ರೀನಾಥ್ ಗೌಡ, ಕುಂದಾಣ ಆನಂದ ಬುದ್ಧ ವಿಹಾರದ ನ್ಯಾನಲೋಕ ಬಂತೇಜ, ಅನಿರುದ್ಧ ಬಂತೇಜಿ, ಸಮಾಜದ ಮುಖಂಡರಾದ ಕಾರಹಳ್ಳಿ ಶ್ರೀನಿವಾಸ್, ವಕೀಲ ಸಿದ್ಧಾರ್ಥ್, ಚೌಡಪ್ಪನಹಳ್ಳಿ ಲೋಕೇಶ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260502-15-1705699980</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದೇವನಹಳ್ಳಿ: ಜಗತ್ತಿಗೆ ಜ್ಞಾನದ ಬೆಳಕು ಚೆಲ್ಲಿದ ಮಹಾನ್ ವ್ಯಕ್ತಿ ಭಗವಾನ್ ಬುದ್ಧನ ತತ್ವಾದರ್ಶಗಳು ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತ. ಅವುಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡರೆ ಶಾಂತಿ ಮತ್ತು ಸಮಾನತೆ ಸಮಾಜ ನಿರ್ಮಿಸಬಹುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಹೇಳಿದರು.</p>.<p>ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಭಗವಾನ್ ಬುದ್ಧ ಜಯಂತಿ ಉದ್ಘಾಟಿಸಿ ಮಾತನಾಡಿದರು.</p>.<p>ಬುದ್ಧ ಜಯಂತಿ ಕೇವಲ ಆಚರಣೆಯ ದಿನವಲ್ಲ, ಮಾನವೀಯ ಮೌಲ್ಯಗಳನ್ನು ಪುನರ್ಸ್ಮರಣೆ ಮಾಡುವ ಪವಿತ್ರ ಕ್ಷಣವಾಗಿದೆ. ರಾಜಕುಮಾರ ಸಿದ್ಧಾರ್ಥನಾಗಿ ಐಷಾರಾಮಿ ಜೀವನ ನಡೆಸುತ್ತಿದ್ದ ಗೌತಮ ಬುದ್ಧ ಮಾನವನ ದುಃಖದ ಮೂಲವನ್ನು ಅರಿಯುವ ಉದ್ದೇಶದಿಂದ ಸಕಲ ಸುಖಸೌಕರ್ಯವನ್ನು ತ್ಯಜಿಸಿ ಧ್ಯಾನ ಮಾರ್ಗವನ್ನು ಅನುಸರಿಸಿದರು. ಬೋಧಿವೃಕ್ಷದ ಕೆಳಗೆ ಅವರಿಗೆ ದೊರೆತ ಜ್ಞಾನೋದಯವು ಮಾನವಕುಲಕ್ಕೆ ಶಾಶ್ವತ ಮಾರ್ಗದರ್ಶನವಾಗಿದೆ ಎಂದರು.</p>.<p>ಬುದ್ಧ ಬೋಧಿಸಿದ ಅಹಿಂಸೆ, ಸತ್ಯ, ದಯೆ, ಸಮತ್ವ, ಮಧ್ಯಮ ಮಾರ್ಗ ಇಂತಹ ತತ್ವಗಳು ಹಿಂಸಾಚಾರ, ಅಸಹಿಷ್ಣುತೆ ಮತ್ತು ದ್ವೇಷ ಹೆಚ್ಚುತ್ತಿರುವ ಇಂದಿನ ಕಾಲಘಟ್ಟಕ್ಕೆ ಔಷಧಿಯಾಗಿದೆ. ಆಸೆ ಮತ್ತು ಅತೃಪ್ತಿಯೇ ದುಃಖದ ಮೂಲವೆಂದು ಬೋಧಿಸಿದ ಬುದ್ಧರ ಸಂದೇಶಗಳು ಮಾನಸಿಕ ಶಾಂತಿ ಮತ್ತು ಸಮತೋಲನಯುತ ಬದುಕಿಗೆ ಪ್ರೇರಣೆ ನೀಡುತ್ತವೆ ಎಂದು ಹೇಳಿದರು.</p>.<p>ಬುದ್ಧರನ್ನು ‘ಏಷ್ಯಾದ ಬೆಳಕು’ ಎಂದು ಕರೆಯುವುದು ಯಾದೃಚ್ಛಿಕವಲ್ಲ. 2,500 ವರ್ಷಗಳ ಹಿಂದೆ ನೀಡಿದ ಸಂದೇಶಗಳು ಇಂದಿಗೂ ಜೀವಂತವಾಗಿವೆ. ಬೌದ್ಧ ಧರ್ಮವು ವಿಶ್ವದಾದ್ಯಂತ ಶಾಂತಿ, ಸಹಿಷ್ಣುತೆ ಮತ್ತು ಸಹಬಾಳ್ವೆಯ ಸಂದೇಶವನ್ನು ಹರಡಿದೆ ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಿವಕುಮಾರ್ ತಿಳಿಸಿದರು.</p>.<p>ಸಾಮ್ರಾಟ ಅಶೋಕನು ಬೌದ್ಧ ಧರ್ಮ ಅನುಸರಿಸಿ ಆಡಳಿತದಲ್ಲಿ ಧರ್ಮನಿಷ್ಠೆ ಮತ್ತು ಮಾನವೀಯತೆ ಸ್ಥಾಪಿಸಿದ್ದು ಇತಿಹಾಸದಲ್ಲೇ ಮಹತ್ವದ್ದಾಗಿದೆ. ಜಗಜ್ಯೋತಿ ಬಸವಣ್ಣನವರ ಸಮಾನತೆಯ ಸಂದೇಶಕ್ಕೂ ಬುದ್ಧ ತತ್ವಗಳಿಗೆ ಸಾಮ್ಯತೆ ಇದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಹ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಬೌದ್ಧ ಧರ್ಮವನ್ನು ಸ್ವೀಕರಿಸಿ ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಇಟ್ಟರು ಎಂದು ಹೇಳಿದರು.</p>.<p>ತಹಶೀಲ್ದಾರ್ ಎಂ.ಅನಿಲ್, ಇಒ ಶ್ರೀನಾಥ್ ಗೌಡ, ಕುಂದಾಣ ಆನಂದ ಬುದ್ಧ ವಿಹಾರದ ನ್ಯಾನಲೋಕ ಬಂತೇಜ, ಅನಿರುದ್ಧ ಬಂತೇಜಿ, ಸಮಾಜದ ಮುಖಂಡರಾದ ಕಾರಹಳ್ಳಿ ಶ್ರೀನಿವಾಸ್, ವಕೀಲ ಸಿದ್ಧಾರ್ಥ್, ಚೌಡಪ್ಪನಹಳ್ಳಿ ಲೋಕೇಶ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260502-15-1705699980</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>