<p>ಧಾರವಾಡ: ‘ನಾಡಿನಲ್ಲಿ ಹಲವಾರು ಧರ್ಮಗಳು ಸಾಮರಸ್ಯದ ಬಾಳ್ವೆಯ ಅರಿವು ಮತ್ತು ಅನುಭಾವವನ್ನು ನೀಡಿದವು’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಬಸವರಾಜ ಕಲ್ಗುಡಿ ಅಭಿಪ್ರಾಯಪಟ್ಟರು.</p>.<p>ಕರ್ನಾಟಕ ವಿ.ವಿ ಬಸವೇಶ್ವರ ಪೀಠದ ವತಿಯಿಂದ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಕನ್ನಡ ಸಾಹಿತ್ಯ ಪರಂಪರೆ ಮತ್ತು ಅನುಭಾವ’ ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಸಾಮರಸ್ಯದ ಜೀವನ ನಡೆಸಲು ಅನೇಕ ಧರ್ಮಗಳು ತಾತ್ವಿಕ ಚಿಂತನೆಗಳನ್ನು ನೀಡಿವೆ. ಎಲ್ಲ ಧರ್ಮಗಳ ಸಾರ ಸಹಬಾಳ್ವೆ’ ಎಂದರು.</p>.<p>ಕುಲಪತಿ ಪ್ರೊ.ಎ.ಎಂ.ಖಾನ್ ಮಾತನಾಡಿ, ‘ಶಿಕ್ಷಣವು ಮನುಷ್ಯನಲ್ಲಿ ಉತ್ತಮ ಸಂಸ್ಕಾರ ಬೆಳೆಸುತ್ತದೆ. ಮನುಷ್ಯರಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಮೂಡಿಸಲು ಎಲ್ಲ ಧರ್ಮಗಳು ಸಹಾಯಕವಾಗಿವೆ’ ಎಂದರು.</p>.<p>ಪ್ರಭಾರ ಕುಲಸಚಿವ ಪ್ರೊ.ಎ.ಎಚ್.ಅಗಡಿ ಮಾತನಾಡಿ, ‘12ನೇ ಶತಮಾನದಲ್ಲಿ ವಚನಕಾರರು ವಚನಗಳ ಮೂಲಕ ಸತ್ಯ, ಕಾಯಕ ಸೇರಿದಂತೆ ಜೀವನ ಸಂದೇಶ ಮೌಲ್ಯಗಳನ್ನು ಸಾರಿದರು. ಎಲ್ಲ ಧರ್ಮಗಳು ಜೀವನದ ಸೌಹಾರ್ದತೆಯ ಸಂದೇಶವನ್ನು ನೀಡಿವೆ’ ಎಂದರು.</p>.<p>ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಎಂ.ಕಡಕೋಳ, ಬಸವೇಶ್ವರ ಪೀಠದ ಸಂಯೋಜಕ ನಿಜಲಿಂಗಪ್ಪ ಮಟ್ಟಿಹಾಳ, ಸಿಂಡಿಕೇಟ್ ಸದಸ್ಯರಾದ ಶ್ಯಾಮ ಮಲ್ಲನಗೌಡರ, ರಾಬರ್ಟ್ ದದ್ದಾಪೂರಿ, ಸಂಶೋಧಕ ಪ್ರೊ.ವೀರಣ್ಣ ರಾಜೂರ, ಕೆ.ಆರ್.ದುರ್ಗಾದಾಸ್, ಈರಣ್ಣ ಇಂಜನಗೇರಿ, ಪ್ರೊ.ಶಿರಾಳಶೆಟ್ಟಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260510-24-119876701</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಧಾರವಾಡ: ‘ನಾಡಿನಲ್ಲಿ ಹಲವಾರು ಧರ್ಮಗಳು ಸಾಮರಸ್ಯದ ಬಾಳ್ವೆಯ ಅರಿವು ಮತ್ತು ಅನುಭಾವವನ್ನು ನೀಡಿದವು’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಬಸವರಾಜ ಕಲ್ಗುಡಿ ಅಭಿಪ್ರಾಯಪಟ್ಟರು.</p>.<p>ಕರ್ನಾಟಕ ವಿ.ವಿ ಬಸವೇಶ್ವರ ಪೀಠದ ವತಿಯಿಂದ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಕನ್ನಡ ಸಾಹಿತ್ಯ ಪರಂಪರೆ ಮತ್ತು ಅನುಭಾವ’ ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಸಾಮರಸ್ಯದ ಜೀವನ ನಡೆಸಲು ಅನೇಕ ಧರ್ಮಗಳು ತಾತ್ವಿಕ ಚಿಂತನೆಗಳನ್ನು ನೀಡಿವೆ. ಎಲ್ಲ ಧರ್ಮಗಳ ಸಾರ ಸಹಬಾಳ್ವೆ’ ಎಂದರು.</p>.<p>ಕುಲಪತಿ ಪ್ರೊ.ಎ.ಎಂ.ಖಾನ್ ಮಾತನಾಡಿ, ‘ಶಿಕ್ಷಣವು ಮನುಷ್ಯನಲ್ಲಿ ಉತ್ತಮ ಸಂಸ್ಕಾರ ಬೆಳೆಸುತ್ತದೆ. ಮನುಷ್ಯರಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಮೂಡಿಸಲು ಎಲ್ಲ ಧರ್ಮಗಳು ಸಹಾಯಕವಾಗಿವೆ’ ಎಂದರು.</p>.<p>ಪ್ರಭಾರ ಕುಲಸಚಿವ ಪ್ರೊ.ಎ.ಎಚ್.ಅಗಡಿ ಮಾತನಾಡಿ, ‘12ನೇ ಶತಮಾನದಲ್ಲಿ ವಚನಕಾರರು ವಚನಗಳ ಮೂಲಕ ಸತ್ಯ, ಕಾಯಕ ಸೇರಿದಂತೆ ಜೀವನ ಸಂದೇಶ ಮೌಲ್ಯಗಳನ್ನು ಸಾರಿದರು. ಎಲ್ಲ ಧರ್ಮಗಳು ಜೀವನದ ಸೌಹಾರ್ದತೆಯ ಸಂದೇಶವನ್ನು ನೀಡಿವೆ’ ಎಂದರು.</p>.<p>ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಎಂ.ಕಡಕೋಳ, ಬಸವೇಶ್ವರ ಪೀಠದ ಸಂಯೋಜಕ ನಿಜಲಿಂಗಪ್ಪ ಮಟ್ಟಿಹಾಳ, ಸಿಂಡಿಕೇಟ್ ಸದಸ್ಯರಾದ ಶ್ಯಾಮ ಮಲ್ಲನಗೌಡರ, ರಾಬರ್ಟ್ ದದ್ದಾಪೂರಿ, ಸಂಶೋಧಕ ಪ್ರೊ.ವೀರಣ್ಣ ರಾಜೂರ, ಕೆ.ಆರ್.ದುರ್ಗಾದಾಸ್, ಈರಣ್ಣ ಇಂಜನಗೇರಿ, ಪ್ರೊ.ಶಿರಾಳಶೆಟ್ಟಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260510-24-119876701</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>