ನಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದೈತೇ: ಜ್ಞಾನದಂತಹ ಪವಿತ್ರವಾದ ವಸ್ತು ಈ ಜಗತ್ತಿನಲ್ಲಿ ಇನ್ನೊಂದಿಲ್ಲ. ಜ್ಞಾನವಿಲ್ಲದಿದ್ದರೆ ನಮ್ಮ ಬದುಕು ಶೂನ್ಯವಾಗುವುದು. ಅದಕ್ಕಾಗಿ ಶರಣರು, ಸಂತರು ಮಹಾತ್ಮರು ಜ್ಞಾನವನ್ನು ಪ್ರೀತಿಸಿದರು; ಗೌರವಿಸಿದರು; ಪೂಜಿಸಿದರು. ನಮ್ಮ ಅಂತರಂಗದಲ್ಲಿರುವ ಅಜ್ಞಾನ ಅಂಧಕಾರವನ್ನು ಅಳಿಯುವುದಕ್ಕಾಗಿ ಜ್ಞಾನ ಜ್ಯೋತಿಯನ್ನು ಬೆಳಗಿಸಿ. ಬದುಕಿನಲ್ಲಿ ಪರಮಶಾಂತಿ, ಪರಮಾನಂದ ನೆಲೆಗೊಳ್ಳುವಂತೆ ಮಾಡುವುದು ಜ್ಞಾನ. ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಎಂದಿರುವರು ಬಸವಣ್ಣ. ಜ್ಞಾನವು ಮಾನವನನ್ನು ಮಹಾದೇವನನ್ನಾಗಿ ಮಾಡುವುದು