‘ನಮಗೆ ಅತ್ಯಂತ ರುಚಿಸುವ ವಿಷಯವನ್ನೇ ನಾವು ಭಗವಂತನ ಹತ್ತಿರ ಕೇಳುತ್ತೇವೆ; ಹಾಗೂ ಯಾವ ವಿಷಯದಲ್ಲಿ ನಮ್ಮ ಜೀವನದ ಅತ್ಯಂತ ಹಾನಿ ಇರುತ್ತದೋ ಅದೇ ನಮಗೆ ರುಚಿಸುತ್ತದೆ ಎಂದು ಕಂಡುಬರುತ್ತದೆ. ಆದ್ದರಿಂದ ನಾನು ನಿಮಗೆ ಹೇಳುವುದೇನೆಂದರೆ, ನೀವು ಭಗವಂತನ ಹತ್ತಿರ ಏನಾದರೂ ಕೇಳುವುದಕ್ಕಿಂತಲೂ, ‘ಭಗವಂತ, ನೀನು ದಾತಾ, ನೀನು ಎಲ್ಲ ದೃಷ್ಟಿಯಿಂದಲೂ ಯೋಗ್ಯವಾದುದನ್ನೇ ಮಾಡುತ್ತೀ; ಅಂದಮೇಲೆ ನಾನು ನಿನ್ನ ಹತ್ತಿರ ಏನಾದರೂ ಕೇಳುವುದಕ್ಕಿಂತಲೂ, ನೀನೇ ನನಗೆ ಉಚಿತವಾದುದನ್ನು ಕೊಡು’ ಎಂದು ಕೇಳಬೇಕು... ಬೇಡುವ ಮನುಷ್ಯನು ತನ್ನ ಯೋಗ್ಯತೆಯನ್ನು ನೋಡಿಕೊಂಡೇ ಬೇಡುತ್ತಾನೆ. ಮನೆಯ ಮುಂದೆ ಬಂದ ಭಿಕ್ಷಕನು ನಿಮ್ಮ ಮನೆಯನ್ನು ನನ್ನ ಹೆಸರಿಗೆ ಮಾಡಿಕೊಡಿರಿ ಎಂದು ಕೇಳುವುದಿಲ್ಲ. ಅವನು ನನಗೆ ನಾಲ್ಕು ದುಡ್ಡು ಕೊಡಿರಿ; ಒಂದು ಹೊತ್ತಿನ ಅನ್ನ ಕೊಡಿರಿ ಎಂದು ತನ್ನ ಯೋಗ್ಯತೆ ನೋಡಿಕೊಂಡೇ ಕೇಳುತ್ತಾನೆ. ಅದರಂತೆ ಕೊಡುವವನು ಎಷ್ಟೇ ದೊಡ್ಡವನಾಗಿದ್ದರೂ ನಾವು ನಮ್ಮ ಯೋಗ್ಯತೆಗನುಸಾರ ಕೇಳುತ್ತೇವೆ. ಮಹಾದಾನಿಯಾದ ಭಗವಂತನು ವಸ್ತುವಿನ ಹೊರತು ಸಮಾಧಾನ ಕೊಡುವವಂಥವನಿರುತ್ತಾನೆ. ಆದ್ದರಿಂದ ನಾವು ಅವನಿಗೆ ‘ಹೇ ಭಗವಂತನೇ! ನಿನಗೆ ರುಚಿಸಿದ್ದನ್ನೇ ನನಗೆ ಕೊಡು. ನಾನು ಹೇಗಾಗಬೇಕೆಂದು ನಿನಗೆ ಅನಿಸುತ್ತದೋ ಅದನ್ನೇ ನನಗೆ ಕೊಡು’ ಎಂದು ಕೇಳುವುದೇ ಅವಶ್ಯವಿರುತ್ತದೆ.’