<p>ಹಗರಿಬೊಮ್ಮನಹಳ್ಳಿ: ‘ಮನುಷ್ಯನಲ್ಲಿ ಆಸೆಗಳು ಇತಿಮಿತಿಯಲ್ಲಿ ಇರಬೇಕೇ ಹೊರತು ದುರಾಸೆ ಇರಬಾರದು’ ಎಂದು ಬಾಳೆಹೊನ್ನೂರಿನ ರಂಭಾಪುರಿ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.</p>.<p>ತಾಲ್ಲೂಕಿನ ಗಿರಿಗೊಂಡನಹಳ್ಳಿ ಗ್ರಾಮದಲ್ಲಿ ನಡೆದ ವಿಘ್ನೇಶ್ವರ, ಈಶ್ವರ, ಬಸವೇಶ್ವರ, ಆಂಜನೇಯಸ್ವಾಮಿ, ನಾಗದೇವತೆಯ ನೂತನ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ದೇವಾಸ್ಥಾನದ ಜೋಡು ಗೋಪುರಗಳ ಕಳಸಾರೋಹಣ ಕಾರ್ಯಕ್ರಮ ಅಂಗವಾಗಿ ನಡೆದ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಮನುಷ್ಯ ಭೌತಿಕವಾಗಿ ಅಪಾರವಾದ ಸಂಪತ್ತು ಹಾಗೂ ಅಧಿಕಾರದ ಅಂತಸ್ತನ್ನು ಹೊಂದಿದ್ದರೂ ನೆಮ್ಮದಿ ಕಾಣದಾಗಿ ದ್ದಾನೆ. ದೇವರು ಇದ್ದಾನೆ ಎಂಬ ನಂಬಿಕೆ ಕಳೆದುಕೊಳ್ಳಬಾರದು. ದೇವನೊಬ್ಬ ನಾಮ ಹಲವು. ಯಾವ ಹೆಸರಿನಿಂದ ಕರೆದರೂ ಪರಮಾತ್ಮ ಒಬ್ಬನೇ ಆಗಿದ್ದಾನೆ ಎನ್ನುವ ಭಾವನೆಯು ಎಲ್ಲರಲ್ಲಿಯೂ ಮೂಡಬೇಕು’ ಎಂದರು.</p>.<p>‘ದೇವರಲ್ಲಿ ನಂಬಿಕೆ, ಅಪನಂಬಿಕೆ, ಅವಿಶ್ವಾಸ ಇರುವಂಥವರನ್ನೂ ಕಾಣುತ್ತೇವೆ. ಭಗವಂತ ಕೊಟ್ಟಂತಹ ಭೂಮಿ, ನೀರು, ಅನ್ನ, ಗಾಳಿಯ ಕೊಡುಗೆ ಯಾರೂ ಕೊಡಲು ಸಾಧ್ಯವಿಲ್ಲ. ದೇವರು, ಧರ್ಮ, ಜಾತಿ, ಭಾಷೆ ಹಾಗೂ ಪ್ರಾಂತೀಯ ಹೆಸರಿನಲ್ಲಿ ದುರ್ಘಟನೆಗಳು ನಡೆಯುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.</p>.<p>ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿದರು.</p>.<p>ಮುಖಂಡ ಹೊಳಗುಂದಿ ಹನುಮಜ್ಜ, ‘ದೇವಸ್ಥಾನದ ಅಭಿವೃದ್ಧಿಗೆ ಹೂವಿನಹಡಗಲಿ ಕ್ಷೇತ್ರದ ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ₹10 ಲಕ್ಷ, ಶಾಸಕ ಕೃಷ್ಣಾನಾಯ್ಕ ₹5 ಲಕ್ಷ ದೇಣಿಗೆ ಸೇರಿದಂತೆ ಗ್ರಾಮದ ಭಕ್ತರು ನೀಡಿದ ಭಕ್ತಿಯ ಕಾಣಿಕೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.</p>.<p>ಮುಖಂಡರಾದ ಮುದುಕಪ್ಪ ಮೇಟಿ, ಉಮೇಶಪ್ಪ, ಸೆರೆಗಾರ ಕನಕಪ್ಪ, ಸಂಜೀವಪ್ಪ, ಬಸವರಾಜ್, ವೈ.ಕೊಟ್ರಗೌಡ, ಕೆ.ಕೊಟ್ರಬಸಪ್ಪ, ಹಕ್ಕಂಡಿ ಶಿವಲಿಂಗಪ್ಪ, ಹೊಳಗುಂದಿ ಚೌಡಪ್ಪ, ತಳವಾರ ನಾಗಪ್ಪ, ಡಾ.ಹಿಟ್ನಾಳ್ ರಮೇಶ್, ಎಂ.ಕಲ್ಲಪ್ಪ, ಪ್ರಕಾಶ, ದೊಡ್ಡಬಸಪ್ಪ, ಪೂಜಾರ ರಾಜಪ್ಪ, ಶಂಭಣ್ಣ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260426-25-1116745306</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಗರಿಬೊಮ್ಮನಹಳ್ಳಿ: ‘ಮನುಷ್ಯನಲ್ಲಿ ಆಸೆಗಳು ಇತಿಮಿತಿಯಲ್ಲಿ ಇರಬೇಕೇ ಹೊರತು ದುರಾಸೆ ಇರಬಾರದು’ ಎಂದು ಬಾಳೆಹೊನ್ನೂರಿನ ರಂಭಾಪುರಿ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.</p>.<p>ತಾಲ್ಲೂಕಿನ ಗಿರಿಗೊಂಡನಹಳ್ಳಿ ಗ್ರಾಮದಲ್ಲಿ ನಡೆದ ವಿಘ್ನೇಶ್ವರ, ಈಶ್ವರ, ಬಸವೇಶ್ವರ, ಆಂಜನೇಯಸ್ವಾಮಿ, ನಾಗದೇವತೆಯ ನೂತನ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ದೇವಾಸ್ಥಾನದ ಜೋಡು ಗೋಪುರಗಳ ಕಳಸಾರೋಹಣ ಕಾರ್ಯಕ್ರಮ ಅಂಗವಾಗಿ ನಡೆದ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಮನುಷ್ಯ ಭೌತಿಕವಾಗಿ ಅಪಾರವಾದ ಸಂಪತ್ತು ಹಾಗೂ ಅಧಿಕಾರದ ಅಂತಸ್ತನ್ನು ಹೊಂದಿದ್ದರೂ ನೆಮ್ಮದಿ ಕಾಣದಾಗಿ ದ್ದಾನೆ. ದೇವರು ಇದ್ದಾನೆ ಎಂಬ ನಂಬಿಕೆ ಕಳೆದುಕೊಳ್ಳಬಾರದು. ದೇವನೊಬ್ಬ ನಾಮ ಹಲವು. ಯಾವ ಹೆಸರಿನಿಂದ ಕರೆದರೂ ಪರಮಾತ್ಮ ಒಬ್ಬನೇ ಆಗಿದ್ದಾನೆ ಎನ್ನುವ ಭಾವನೆಯು ಎಲ್ಲರಲ್ಲಿಯೂ ಮೂಡಬೇಕು’ ಎಂದರು.</p>.<p>‘ದೇವರಲ್ಲಿ ನಂಬಿಕೆ, ಅಪನಂಬಿಕೆ, ಅವಿಶ್ವಾಸ ಇರುವಂಥವರನ್ನೂ ಕಾಣುತ್ತೇವೆ. ಭಗವಂತ ಕೊಟ್ಟಂತಹ ಭೂಮಿ, ನೀರು, ಅನ್ನ, ಗಾಳಿಯ ಕೊಡುಗೆ ಯಾರೂ ಕೊಡಲು ಸಾಧ್ಯವಿಲ್ಲ. ದೇವರು, ಧರ್ಮ, ಜಾತಿ, ಭಾಷೆ ಹಾಗೂ ಪ್ರಾಂತೀಯ ಹೆಸರಿನಲ್ಲಿ ದುರ್ಘಟನೆಗಳು ನಡೆಯುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.</p>.<p>ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿದರು.</p>.<p>ಮುಖಂಡ ಹೊಳಗುಂದಿ ಹನುಮಜ್ಜ, ‘ದೇವಸ್ಥಾನದ ಅಭಿವೃದ್ಧಿಗೆ ಹೂವಿನಹಡಗಲಿ ಕ್ಷೇತ್ರದ ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ₹10 ಲಕ್ಷ, ಶಾಸಕ ಕೃಷ್ಣಾನಾಯ್ಕ ₹5 ಲಕ್ಷ ದೇಣಿಗೆ ಸೇರಿದಂತೆ ಗ್ರಾಮದ ಭಕ್ತರು ನೀಡಿದ ಭಕ್ತಿಯ ಕಾಣಿಕೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.</p>.<p>ಮುಖಂಡರಾದ ಮುದುಕಪ್ಪ ಮೇಟಿ, ಉಮೇಶಪ್ಪ, ಸೆರೆಗಾರ ಕನಕಪ್ಪ, ಸಂಜೀವಪ್ಪ, ಬಸವರಾಜ್, ವೈ.ಕೊಟ್ರಗೌಡ, ಕೆ.ಕೊಟ್ರಬಸಪ್ಪ, ಹಕ್ಕಂಡಿ ಶಿವಲಿಂಗಪ್ಪ, ಹೊಳಗುಂದಿ ಚೌಡಪ್ಪ, ತಳವಾರ ನಾಗಪ್ಪ, ಡಾ.ಹಿಟ್ನಾಳ್ ರಮೇಶ್, ಎಂ.ಕಲ್ಲಪ್ಪ, ಪ್ರಕಾಶ, ದೊಡ್ಡಬಸಪ್ಪ, ಪೂಜಾರ ರಾಜಪ್ಪ, ಶಂಭಣ್ಣ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260426-25-1116745306</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>