<p><strong>ಹಳೇಬೀಡು:</strong> ಅಹಿಂಸೆಯ ಸಂದೇಶವನ್ನು ಸಾರಿದ ಜೈನ ಧರ್ಮದ 24ನೇ ತೀರ್ಥಂಕರ ಭಗವಾನ್ ಮಹಾವೀರರ 2625ನೇ ಜನ್ಮ ಜಯಂತ್ಯುತ್ಸವ ಸೋಮವಾರ ಅಡಗೂರು ಜಿನ ಮಂದಿರ ದಲ್ಲಿ ವೈಭವದಿಂದ ನೆರವೇರಿತು.</p>.<p>ಮಹಾವೀರ ಜೈನ ಸಂಘ, ರತ್ನತ್ರಯ ಮಹಿಳಾ ಸಮಾಜ ಹಾಗೂ ಅಡಗೂರು ಜೈನ ಸಮಾಜದ ಆಶ್ರಯದಲ್ಲಿ ಧಾರ್ಮಿಕ ವಿಧಾನ ನಡೆದವು.</p>.<p>ಬೆಳಿಗ್ಗೆ 5ರಿಂದಲೇ ಪುರೋಹಿತರ ಮಂತ್ರ ಪಠಣ ಹಾಗೂ ವಾದ್ಯ ವೈಭವ ಮೊಳಗಿತು. ಬೆಳಿಗ್ಗೆ ನಿತ್ಯ ಪೂಜೆಯಿಂದ ಧಾರ್ಮಿಕ ಆಚರಣೆ ಆರಂಭವಾಯಿತು. ನಂತರ ಜಯಂತಿಯ ಪೂಜೆ ನೆರವೇರಿಸಲಾಯಿತು.</p>.<p>8ಕ್ಕೆ ತೀರ್ಥಂಕರರ ಮಸ್ತಕಾಭಿಷೇಕಕ್ಕೆ ಸುಮಂಗಲೆಯರಿಂದ ಆಗ್ರೋದಕ ತರುವ ಮೆರವಣಿಗೆ ನಡೆಯಿತು. ಮೆರವಣಿಗೆಯೊಂದಿಗೆ ಪಲ್ಲಕ್ಕಿ ಉತ್ಸವ ಊರಿನ ಪ್ರಮುಖ ಬೀದಿಗಳಲ್ಲಿ ಸಾಗಿತು. ಮಹಾವೀರರ ಉತ್ಸವ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಿದ ನಂತರ ಹೂವಿನಿಂದ ಅಲಂಕರಿಸಿದ್ದ ಪಲ್ಲಕ್ಕಿಯಲ್ಲಿ ಆರೋಹಣ ಮಾಡಲಾಯಿತು.</p>.<p>‘ಜೈ ಜೈ ವೀರ ಜೈ ಮಹಾವೀರ’, ‘ಅಹಿಂಸೋ ಪರಮೋ ಧರ್ಮ ಕೀ ಜೈ’ ಎಂಬ ಜಯಘೋಷದೊಂದಿಗೆ ಮೆರವಣಿಗೆ ಸಾಗಿತು. ಪಲ್ಲಕ್ಕಿಯ ಇಕ್ಕೆಲಗಳಲ್ಲಿ ಜೈನ ಶ್ರಾವಕ, ಶ್ರಾವಕಿಯರು ಬಣ್ಣದ ಛತ್ರಿಗಳನ್ನು ಹಿಡಿದು ಚಾಮರ ಬೀಸುತ್ತ ಹೆಜ್ಜೆ ಹಾಕಿದರು. ಪಂಚ ಕಳಸ, ಅಷ್ಟಮಂಗಲ ಹಾಗೂ ಪಂಚವರ್ಣದ ಬಾವುಟ ಮೆರವಣಿಗೆಗೆ ಕಳೆ ನೀಡಿದವು.</p>.<p>ಕಳಸ ಹೊತ್ತ ಮಹಿಳೆಯರು ಜಿನ ಗಾಯನ ಹಾಡುತ್ತ ಸಾಗಿದರು. ಜಿನ ಮಂದಿರ ರಸ್ತೆ, ಹಾಸನ ರಸ್ತೆ, ಕರಿಗಲ್ಲು ಬೀದಿ ಹಾಗೂ ಕಲ್ಲೇಶ್ವರ ದೇವಾಲಯದ ಮೂಲಕ ಪಲ್ಲಕ್ಕಿ ಉತ್ಸವ ಜಿನ ಮಂದಿರಕ್ಕೆ ತಲುಪಿತು. ಜಿನ ಮಂದಿರವನ್ನು ಮೂರು ಸುತ್ತು ಹಾಕಿದ ನಂತರ ಉತ್ಸವ ಸಮಾಪ್ತಿ ಆಯಿತು.</p>.<p>ನಂತರ ಜಿನಮಂದಿರ ಪಕ್ಕದ ಮಹಾವೀರ ಭವನದ ಸಭಾಂಗಣ ವೇದಿಕೆಯಲ್ಲಿ ನಿರ್ಮಿಸಿದ ಆಕರ್ಷಕ ಮಂಟಪದಲ್ಲಿ ಉತ್ಸವ ಮೂರ್ತಿ ಕೂರಿಸಲಾಯಿತು. ವಿವಿಧ ಅಭಿಷೇಕಗಳ ಹರಾಜು ಪ್ರಕ್ರಿಯೆ ನಡೆಸಿದ ನಂತರ ಮಹಾವೀರರ ಮಸ್ತಕಾಭೀಷೇಕ ನೆರವೇರಿತು.</p>.<p>108 ಕಳಸಗಳಿಂದ ಜಲಾಭಿಷೇಕ ಮಾಡಿದಾಕ್ಷಣ ಅಮೃತ ಶಿಲೆಯ ಭಗವಾನ್ ಮಹಾವೀರರ ಮೂರ್ತಿಯು ವಿವಿಧ ಭಂಗಿಯಲ್ಲಿ ಕಂಗೊಳಿಸಿತು. ಎಳನೀರು, ಕ್ಷೀರ(ಹಾಲು), ಇಕ್ಷುರಸ (ಕಬ್ಬಿನಹಾಲು), ನಾಲ್ಕು ದಿಕ್ಕಿನಲ್ಲಿ ಸ್ಥಾಪಿಸಿದ ಚತುಷ್ಕೋನ ಕಳಸ, ಶ್ರೀಗಂಧ, ಅರಿಶಿನ, ಕಲ್ಕಚೂರ್ಣ (ಅಕ್ಕಿಹಿಟ್ಟು), ಚಂದನ, ಕಷಾಯಗಳ ಅಭಿಷೇಕದಲ್ಲಿ ಮೂರ್ತಿ ಬಣ್ಣದೋಕುಳಿಯಲ್ಲಿ ಮಿಂದೆದಂತೆ ಕಂಗೊಳಿಸಿತು.</p>.<p>ಸಕಲ ಜೀವಿಗಳಿಗೆ ಶಾಂತಿ ನೆಮ್ಮದಿ ಮುಕ್ತಿ ದೊರಕಲಿ ಎಂದು ಮಹಾಶಾಂತಿ ಮಂತ್ರದೊಂದಿಗೆ ಶಾಂತಿಧಾರೆ ನೆರವೇರಿಸಲಾಯಿತು. ಭಗವಾನ್ ಮಹಾವೀರರ ಆರತಿ ಹಾಡಿನೊಂದಿಗೆ ಮಹಾಮಂಗಳಾರತಿ ನೆರವೇರಿತು. ನಂತರ ಪುಷ್ಪಾಲಂಕೃತ ಮಂಟಪದಲ್ಲಿ ಮಹಾವೀರರ ಉತ್ಸವ ಮೂರ್ತಿ ಆರೋಹಣ ಮಾಡಿ ವಾದ್ಯ ಗೋಷ್ಠಿ, ಡೊಳ್ಳಿನ ಸದ್ದಿನೊಂದಿಗೆ ಊರಿನ ಸುತ್ತ ಮೆರವಣಿಗೆ ಮಾಡಲಾಯಿತು.</p>.<p>ರಾಣೆಬೆನ್ನೂರಿನ ಹನುಮಾನ್ ಬ್ರಾಸ್ ಬ್ರ್ಯಾಂಡ್ ರೋಡ್ ಆರ್ಕೆಸ್ಟ್ರಾ ಮೆರವಣೆಗೆಯ ವೈಭವ ಹೆಚ್ಚಿಸಿತು. ಯುವಕರು ಬ್ಯಾಂಡ್ ಸೆಟ್ ಹಾಗೂ ಹಾಡುಗಳ ಲಯಕ್ಕೆ ಕುಣಿದು ಸಂಭ್ರಮಿಸಿದರು.</p>.<p>ಮುಖಂಡ ಎ.ಬಿ.ಕಾಂತರಾಜು, ಜೈನ ಸಮಾಜ ಅಧ್ಯಕ್ಷ ಎಂ.ಎ.ನಾಗೇಂದ್ರ ಕುಮಾರ್, ಕಾರ್ಯದರ್ಶಿ ಎಂ.ಎನ್.ಶಶಿಕುಮಾರ್, ಖಜಾಂಚಿ ಧವನ್ ಜೈನ್, ಪದಾಧಿಕಾರಿಗಳಾದ ಮನ್ಮಥ ರಾಜು, ಚಂದ್ರಪ್ರಭ, ಕರುಣಾಕರ, ಅತುಲ್ ಜೈನ್, ವಿಜಯ್ ಕುಮಾರ್, ಸುಮತಿ ಕುಮಾರ್, ನಾಗಚಂದ್ರ, ವಾದಿರಾಜ್, ರತ್ನತ್ರಯ ಮಹಿಳಾ ಸಮಾಜ ಅಧ್ಯಕ್ಷೆ ಪುಷ್ಪಾ ರತ್ನರಾಜು, ಕಾರ್ಯದರ್ಶಿ ಸುಧಾ ಕುಮಾರಿ, ಪದಾಧಿಕಾರಿಗಳಾದ ರೇಖಾ ಧವನ್, ಸುನಿತಾ ಕುಮಾರಿ, ಭಾರತಿ ಅತುಲ್, ಜಯಪದ್ಮ ಪಾಲ್ಗೊಂಡಿದ್ದರು.</p>.<div><blockquote>ಅಡಗೂರಿನ ಮಹಾವೀರ ಭವನ ಅಭಿವೃದ್ದಿಗೆ ಶಾಸಕರ ನಿಧಿಯಿಂದ ₹5ಲಕ್ಷ ಅನುದಾನ ಕೊಡಲಾಗುವುದು. ರಾಜವೈಭವ ತೊರೆದ ಮಹಾವೀರರು ತಮಗಾಗಿ ಏನನ್ನೂ ಬಯಸದೇ, ಸಕಲ ಜೀವರಾಶಿಯ ಹಿತ ಚಿಂತನೆ ಮಾಡಿದ್ದಾರೆ.</blockquote><span class="attribution">ಎಚ್.ಕೆ.ಸುರೇಶ್, ಶಾಸಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಳೇಬೀಡು:</strong> ಅಹಿಂಸೆಯ ಸಂದೇಶವನ್ನು ಸಾರಿದ ಜೈನ ಧರ್ಮದ 24ನೇ ತೀರ್ಥಂಕರ ಭಗವಾನ್ ಮಹಾವೀರರ 2625ನೇ ಜನ್ಮ ಜಯಂತ್ಯುತ್ಸವ ಸೋಮವಾರ ಅಡಗೂರು ಜಿನ ಮಂದಿರ ದಲ್ಲಿ ವೈಭವದಿಂದ ನೆರವೇರಿತು.</p>.<p>ಮಹಾವೀರ ಜೈನ ಸಂಘ, ರತ್ನತ್ರಯ ಮಹಿಳಾ ಸಮಾಜ ಹಾಗೂ ಅಡಗೂರು ಜೈನ ಸಮಾಜದ ಆಶ್ರಯದಲ್ಲಿ ಧಾರ್ಮಿಕ ವಿಧಾನ ನಡೆದವು.</p>.<p>ಬೆಳಿಗ್ಗೆ 5ರಿಂದಲೇ ಪುರೋಹಿತರ ಮಂತ್ರ ಪಠಣ ಹಾಗೂ ವಾದ್ಯ ವೈಭವ ಮೊಳಗಿತು. ಬೆಳಿಗ್ಗೆ ನಿತ್ಯ ಪೂಜೆಯಿಂದ ಧಾರ್ಮಿಕ ಆಚರಣೆ ಆರಂಭವಾಯಿತು. ನಂತರ ಜಯಂತಿಯ ಪೂಜೆ ನೆರವೇರಿಸಲಾಯಿತು.</p>.<p>8ಕ್ಕೆ ತೀರ್ಥಂಕರರ ಮಸ್ತಕಾಭಿಷೇಕಕ್ಕೆ ಸುಮಂಗಲೆಯರಿಂದ ಆಗ್ರೋದಕ ತರುವ ಮೆರವಣಿಗೆ ನಡೆಯಿತು. ಮೆರವಣಿಗೆಯೊಂದಿಗೆ ಪಲ್ಲಕ್ಕಿ ಉತ್ಸವ ಊರಿನ ಪ್ರಮುಖ ಬೀದಿಗಳಲ್ಲಿ ಸಾಗಿತು. ಮಹಾವೀರರ ಉತ್ಸವ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಿದ ನಂತರ ಹೂವಿನಿಂದ ಅಲಂಕರಿಸಿದ್ದ ಪಲ್ಲಕ್ಕಿಯಲ್ಲಿ ಆರೋಹಣ ಮಾಡಲಾಯಿತು.</p>.<p>‘ಜೈ ಜೈ ವೀರ ಜೈ ಮಹಾವೀರ’, ‘ಅಹಿಂಸೋ ಪರಮೋ ಧರ್ಮ ಕೀ ಜೈ’ ಎಂಬ ಜಯಘೋಷದೊಂದಿಗೆ ಮೆರವಣಿಗೆ ಸಾಗಿತು. ಪಲ್ಲಕ್ಕಿಯ ಇಕ್ಕೆಲಗಳಲ್ಲಿ ಜೈನ ಶ್ರಾವಕ, ಶ್ರಾವಕಿಯರು ಬಣ್ಣದ ಛತ್ರಿಗಳನ್ನು ಹಿಡಿದು ಚಾಮರ ಬೀಸುತ್ತ ಹೆಜ್ಜೆ ಹಾಕಿದರು. ಪಂಚ ಕಳಸ, ಅಷ್ಟಮಂಗಲ ಹಾಗೂ ಪಂಚವರ್ಣದ ಬಾವುಟ ಮೆರವಣಿಗೆಗೆ ಕಳೆ ನೀಡಿದವು.</p>.<p>ಕಳಸ ಹೊತ್ತ ಮಹಿಳೆಯರು ಜಿನ ಗಾಯನ ಹಾಡುತ್ತ ಸಾಗಿದರು. ಜಿನ ಮಂದಿರ ರಸ್ತೆ, ಹಾಸನ ರಸ್ತೆ, ಕರಿಗಲ್ಲು ಬೀದಿ ಹಾಗೂ ಕಲ್ಲೇಶ್ವರ ದೇವಾಲಯದ ಮೂಲಕ ಪಲ್ಲಕ್ಕಿ ಉತ್ಸವ ಜಿನ ಮಂದಿರಕ್ಕೆ ತಲುಪಿತು. ಜಿನ ಮಂದಿರವನ್ನು ಮೂರು ಸುತ್ತು ಹಾಕಿದ ನಂತರ ಉತ್ಸವ ಸಮಾಪ್ತಿ ಆಯಿತು.</p>.<p>ನಂತರ ಜಿನಮಂದಿರ ಪಕ್ಕದ ಮಹಾವೀರ ಭವನದ ಸಭಾಂಗಣ ವೇದಿಕೆಯಲ್ಲಿ ನಿರ್ಮಿಸಿದ ಆಕರ್ಷಕ ಮಂಟಪದಲ್ಲಿ ಉತ್ಸವ ಮೂರ್ತಿ ಕೂರಿಸಲಾಯಿತು. ವಿವಿಧ ಅಭಿಷೇಕಗಳ ಹರಾಜು ಪ್ರಕ್ರಿಯೆ ನಡೆಸಿದ ನಂತರ ಮಹಾವೀರರ ಮಸ್ತಕಾಭೀಷೇಕ ನೆರವೇರಿತು.</p>.<p>108 ಕಳಸಗಳಿಂದ ಜಲಾಭಿಷೇಕ ಮಾಡಿದಾಕ್ಷಣ ಅಮೃತ ಶಿಲೆಯ ಭಗವಾನ್ ಮಹಾವೀರರ ಮೂರ್ತಿಯು ವಿವಿಧ ಭಂಗಿಯಲ್ಲಿ ಕಂಗೊಳಿಸಿತು. ಎಳನೀರು, ಕ್ಷೀರ(ಹಾಲು), ಇಕ್ಷುರಸ (ಕಬ್ಬಿನಹಾಲು), ನಾಲ್ಕು ದಿಕ್ಕಿನಲ್ಲಿ ಸ್ಥಾಪಿಸಿದ ಚತುಷ್ಕೋನ ಕಳಸ, ಶ್ರೀಗಂಧ, ಅರಿಶಿನ, ಕಲ್ಕಚೂರ್ಣ (ಅಕ್ಕಿಹಿಟ್ಟು), ಚಂದನ, ಕಷಾಯಗಳ ಅಭಿಷೇಕದಲ್ಲಿ ಮೂರ್ತಿ ಬಣ್ಣದೋಕುಳಿಯಲ್ಲಿ ಮಿಂದೆದಂತೆ ಕಂಗೊಳಿಸಿತು.</p>.<p>ಸಕಲ ಜೀವಿಗಳಿಗೆ ಶಾಂತಿ ನೆಮ್ಮದಿ ಮುಕ್ತಿ ದೊರಕಲಿ ಎಂದು ಮಹಾಶಾಂತಿ ಮಂತ್ರದೊಂದಿಗೆ ಶಾಂತಿಧಾರೆ ನೆರವೇರಿಸಲಾಯಿತು. ಭಗವಾನ್ ಮಹಾವೀರರ ಆರತಿ ಹಾಡಿನೊಂದಿಗೆ ಮಹಾಮಂಗಳಾರತಿ ನೆರವೇರಿತು. ನಂತರ ಪುಷ್ಪಾಲಂಕೃತ ಮಂಟಪದಲ್ಲಿ ಮಹಾವೀರರ ಉತ್ಸವ ಮೂರ್ತಿ ಆರೋಹಣ ಮಾಡಿ ವಾದ್ಯ ಗೋಷ್ಠಿ, ಡೊಳ್ಳಿನ ಸದ್ದಿನೊಂದಿಗೆ ಊರಿನ ಸುತ್ತ ಮೆರವಣಿಗೆ ಮಾಡಲಾಯಿತು.</p>.<p>ರಾಣೆಬೆನ್ನೂರಿನ ಹನುಮಾನ್ ಬ್ರಾಸ್ ಬ್ರ್ಯಾಂಡ್ ರೋಡ್ ಆರ್ಕೆಸ್ಟ್ರಾ ಮೆರವಣೆಗೆಯ ವೈಭವ ಹೆಚ್ಚಿಸಿತು. ಯುವಕರು ಬ್ಯಾಂಡ್ ಸೆಟ್ ಹಾಗೂ ಹಾಡುಗಳ ಲಯಕ್ಕೆ ಕುಣಿದು ಸಂಭ್ರಮಿಸಿದರು.</p>.<p>ಮುಖಂಡ ಎ.ಬಿ.ಕಾಂತರಾಜು, ಜೈನ ಸಮಾಜ ಅಧ್ಯಕ್ಷ ಎಂ.ಎ.ನಾಗೇಂದ್ರ ಕುಮಾರ್, ಕಾರ್ಯದರ್ಶಿ ಎಂ.ಎನ್.ಶಶಿಕುಮಾರ್, ಖಜಾಂಚಿ ಧವನ್ ಜೈನ್, ಪದಾಧಿಕಾರಿಗಳಾದ ಮನ್ಮಥ ರಾಜು, ಚಂದ್ರಪ್ರಭ, ಕರುಣಾಕರ, ಅತುಲ್ ಜೈನ್, ವಿಜಯ್ ಕುಮಾರ್, ಸುಮತಿ ಕುಮಾರ್, ನಾಗಚಂದ್ರ, ವಾದಿರಾಜ್, ರತ್ನತ್ರಯ ಮಹಿಳಾ ಸಮಾಜ ಅಧ್ಯಕ್ಷೆ ಪುಷ್ಪಾ ರತ್ನರಾಜು, ಕಾರ್ಯದರ್ಶಿ ಸುಧಾ ಕುಮಾರಿ, ಪದಾಧಿಕಾರಿಗಳಾದ ರೇಖಾ ಧವನ್, ಸುನಿತಾ ಕುಮಾರಿ, ಭಾರತಿ ಅತುಲ್, ಜಯಪದ್ಮ ಪಾಲ್ಗೊಂಡಿದ್ದರು.</p>.<div><blockquote>ಅಡಗೂರಿನ ಮಹಾವೀರ ಭವನ ಅಭಿವೃದ್ದಿಗೆ ಶಾಸಕರ ನಿಧಿಯಿಂದ ₹5ಲಕ್ಷ ಅನುದಾನ ಕೊಡಲಾಗುವುದು. ರಾಜವೈಭವ ತೊರೆದ ಮಹಾವೀರರು ತಮಗಾಗಿ ಏನನ್ನೂ ಬಯಸದೇ, ಸಕಲ ಜೀವರಾಶಿಯ ಹಿತ ಚಿಂತನೆ ಮಾಡಿದ್ದಾರೆ.</blockquote><span class="attribution">ಎಚ್.ಕೆ.ಸುರೇಶ್, ಶಾಸಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>