<p>ಹರಿಹರ: ‘ಶೂದ್ರ ವರ್ಗದಲ್ಲಿ ಹುಟ್ಟಿದ ಕನಕದಾಸರು, ಜ್ಞಾನಾರ್ಜನೆ ಮೂಲಕ ಸಮ ಸಮಾಜದ ಸಿದ್ಧಾಂತವನ್ನು ಪಸರಿಸಿದರು’ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀ ಹೇಳಿದರು.</p>.<p>ಇಲ್ಲಿನ ಕನಕ ಗುರುಪೀಠದ ಶಾಖಾ ಮಠದಲ್ಲಿ ಭಾನುವಾರ ಆಯೋಜಿಸಿದ್ದ ‘ತಲ್ಲಣಿಸದಿರು ಮನವೇ’ ಮಾಸಿಕ ಸತ್ಸಂಗ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.</p>.<p>‘ಶೂದ್ರ ವರ್ಗದಲ್ಲಿ ಹುಟ್ಟಿದ್ದರಿಂದ ಕನಕದಾಸರಿಗೆ ಅಸ್ಪೃಶ್ಯತೆ, ಮೇಲು–ಕೀಳು, ಲಿಂಗ ಬೇಧದಂತಹ ಅನಿಷ್ಟ ಆಚರಣೆಗಳು ಅರಿವಿಗೆ ಬಂದು ಅವುಗಳ ವಿರುದ್ಧ ಪ್ರಬಲವಾಗಿ ಧ್ವನಿ ಎತ್ತಿದರು. 12ನೇ ಶತಮಾನದಲ್ಲಿ ಬಸವಣ್ಣ, 20ನೇ ಶತಮಾನದಲ್ಲಿ ಬಿ.ಆರ್.ಅಂಬೇಡ್ಕರ್ ಸೇರಿದಂತೆ ಈ ನಾಡಿನ ದಾಸ ಪರಂಪರೆಯವರು, ಹಲವು ದಾರ್ಶನಿಕರು ಸಮ ಸಮಾಜದ ತತ್ವಗಳನ್ನೇ ತಿಳಿಸಿದ್ದಾರೆ. ಆದರೆ ದೇಶದಲ್ಲಿಂದು ಜಾತ್ಯತೀತ ತತ್ವಗಳು ಭಾಷಣಕ್ಕೆ, ವೇದಿಕೆಗೆ ಸೀಮಿತವಾಗಿರುವುದು ವಿಪರ್ಯಾಸ’ ಎಂದರು.</p>.<p>‘ಮಠದಲ್ಲಿ ಪ್ರತಿ ತಿಂಗಳ 4ನೇ ಶನಿವಾರ ಸತ್ಸಂಗ ಆಯೋಜಿಸಲಾಗುತ್ತಿದೆ. ದೇಶಕ್ಕೆ ಅಗತ್ಯವಾಗಿರುವ ಜಾತ್ಯತೀತ ಮನೋಭಾವ, ಪರಸ್ಪರ ಸಹಕಾರ ಅಂಶಗಳನ್ನು ಪಸರಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಭಕ್ತರು ಭಾಗವಹಿಸಬೇಕು’ ಎಂದು ಹೇಳಿದರು.</p>.<p>‘ದಾರ್ಶನಿಕರ ಸಾಧನೆಗಳನ್ನು ಮೆಲುಕು ಹಾಕುವುದರಿಂದ ತಲ್ಲಣಗೊಂಡ ಮನಸ್ಸು ಶಾಂತವಾಗುತ್ತದೆ. ಪ್ರಶಾಂತ ಮನಃಸ್ಥಿತಿ ಹೊಂದಿದ ವ್ಯಕ್ತಿ ಉನ್ನತ ಗುರಿಯೊಂದಿಗೆ ಸಮಾಜ ಮೆಚ್ಚುವ ಸಾಧನೆ ಮಾಡಲು ಸಾಧ್ಯ’ ಎಂದು ಸಿಪಿಐ ಸುರೇಶ್ ಸಗರಿ ಅಭಿಪ್ರಾಯಪಟ್ಟರು.</p>.<p>‘ಬೀರದೇವರಿಗೆ ಮೂಲವಾಗಿ ಬಂದಿರುವುದು ಭಂಡಾರ. ಆದರೆ 12ನೇ ಶತಮಾನದ ನಂತರ ರೇವಣಸಿದ್ದರು ವಿಭೂತಿಯನ್ನು ಆಚರಣೆಗೆ ತಂದರು’ ಎಂದು ವಿಭೂತಿ ಮತ್ತು ಭಂಡಾರ ಆಚರಣೆ ಬಂದ ಬಗೆಯನ್ನು ಕಮಲಾಪುರದ ಸಾಹಿತಿ ಷಣ್ಮುಖಪ್ಪ ವಿವರಿಸಿದರು.</p>.<p>ಪ್ರವಚನಕಾರ ರೇವಣಪ್ಪ ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಉಮಾಪತಿ, ಕಾರ್ಯದರ್ಶಿ ಶರಣ್ ಕುಮಾರ್ ಹೆಗಡೆ, ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎನ್.ವೀರಣ್ಣ ಮತ್ತು ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.</p>.<p>ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಘಟಕದ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್, ಕನಕ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕುಬೇಂದ್ರಪ್ಪ ಮೆಕ್ಕೆಪ್ಪನವರ್, ಕಾಂಗ್ರೆಸ್ ಮುಖಂಡ ಸಿ.ಎನ್.ಹುಲಿಗೇಶ್, ರಾಮಣ್ಣ, ಸೋಮಣ್ಣ, ಬಿ.ಬಿ.ಮಲ್ಲೇಶ್, ಡಿ.ಕೆ. ಕರಿಬಸಪ್ಪ, ದಂಡಿ ತಿಪ್ಪೇಸ್ವಾಮಿ ಹಾಗೂ ಇತರರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-43-606475138</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹರಿಹರ: ‘ಶೂದ್ರ ವರ್ಗದಲ್ಲಿ ಹುಟ್ಟಿದ ಕನಕದಾಸರು, ಜ್ಞಾನಾರ್ಜನೆ ಮೂಲಕ ಸಮ ಸಮಾಜದ ಸಿದ್ಧಾಂತವನ್ನು ಪಸರಿಸಿದರು’ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀ ಹೇಳಿದರು.</p>.<p>ಇಲ್ಲಿನ ಕನಕ ಗುರುಪೀಠದ ಶಾಖಾ ಮಠದಲ್ಲಿ ಭಾನುವಾರ ಆಯೋಜಿಸಿದ್ದ ‘ತಲ್ಲಣಿಸದಿರು ಮನವೇ’ ಮಾಸಿಕ ಸತ್ಸಂಗ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.</p>.<p>‘ಶೂದ್ರ ವರ್ಗದಲ್ಲಿ ಹುಟ್ಟಿದ್ದರಿಂದ ಕನಕದಾಸರಿಗೆ ಅಸ್ಪೃಶ್ಯತೆ, ಮೇಲು–ಕೀಳು, ಲಿಂಗ ಬೇಧದಂತಹ ಅನಿಷ್ಟ ಆಚರಣೆಗಳು ಅರಿವಿಗೆ ಬಂದು ಅವುಗಳ ವಿರುದ್ಧ ಪ್ರಬಲವಾಗಿ ಧ್ವನಿ ಎತ್ತಿದರು. 12ನೇ ಶತಮಾನದಲ್ಲಿ ಬಸವಣ್ಣ, 20ನೇ ಶತಮಾನದಲ್ಲಿ ಬಿ.ಆರ್.ಅಂಬೇಡ್ಕರ್ ಸೇರಿದಂತೆ ಈ ನಾಡಿನ ದಾಸ ಪರಂಪರೆಯವರು, ಹಲವು ದಾರ್ಶನಿಕರು ಸಮ ಸಮಾಜದ ತತ್ವಗಳನ್ನೇ ತಿಳಿಸಿದ್ದಾರೆ. ಆದರೆ ದೇಶದಲ್ಲಿಂದು ಜಾತ್ಯತೀತ ತತ್ವಗಳು ಭಾಷಣಕ್ಕೆ, ವೇದಿಕೆಗೆ ಸೀಮಿತವಾಗಿರುವುದು ವಿಪರ್ಯಾಸ’ ಎಂದರು.</p>.<p>‘ಮಠದಲ್ಲಿ ಪ್ರತಿ ತಿಂಗಳ 4ನೇ ಶನಿವಾರ ಸತ್ಸಂಗ ಆಯೋಜಿಸಲಾಗುತ್ತಿದೆ. ದೇಶಕ್ಕೆ ಅಗತ್ಯವಾಗಿರುವ ಜಾತ್ಯತೀತ ಮನೋಭಾವ, ಪರಸ್ಪರ ಸಹಕಾರ ಅಂಶಗಳನ್ನು ಪಸರಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಭಕ್ತರು ಭಾಗವಹಿಸಬೇಕು’ ಎಂದು ಹೇಳಿದರು.</p>.<p>‘ದಾರ್ಶನಿಕರ ಸಾಧನೆಗಳನ್ನು ಮೆಲುಕು ಹಾಕುವುದರಿಂದ ತಲ್ಲಣಗೊಂಡ ಮನಸ್ಸು ಶಾಂತವಾಗುತ್ತದೆ. ಪ್ರಶಾಂತ ಮನಃಸ್ಥಿತಿ ಹೊಂದಿದ ವ್ಯಕ್ತಿ ಉನ್ನತ ಗುರಿಯೊಂದಿಗೆ ಸಮಾಜ ಮೆಚ್ಚುವ ಸಾಧನೆ ಮಾಡಲು ಸಾಧ್ಯ’ ಎಂದು ಸಿಪಿಐ ಸುರೇಶ್ ಸಗರಿ ಅಭಿಪ್ರಾಯಪಟ್ಟರು.</p>.<p>‘ಬೀರದೇವರಿಗೆ ಮೂಲವಾಗಿ ಬಂದಿರುವುದು ಭಂಡಾರ. ಆದರೆ 12ನೇ ಶತಮಾನದ ನಂತರ ರೇವಣಸಿದ್ದರು ವಿಭೂತಿಯನ್ನು ಆಚರಣೆಗೆ ತಂದರು’ ಎಂದು ವಿಭೂತಿ ಮತ್ತು ಭಂಡಾರ ಆಚರಣೆ ಬಂದ ಬಗೆಯನ್ನು ಕಮಲಾಪುರದ ಸಾಹಿತಿ ಷಣ್ಮುಖಪ್ಪ ವಿವರಿಸಿದರು.</p>.<p>ಪ್ರವಚನಕಾರ ರೇವಣಪ್ಪ ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಉಮಾಪತಿ, ಕಾರ್ಯದರ್ಶಿ ಶರಣ್ ಕುಮಾರ್ ಹೆಗಡೆ, ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎನ್.ವೀರಣ್ಣ ಮತ್ತು ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.</p>.<p>ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಘಟಕದ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್, ಕನಕ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕುಬೇಂದ್ರಪ್ಪ ಮೆಕ್ಕೆಪ್ಪನವರ್, ಕಾಂಗ್ರೆಸ್ ಮುಖಂಡ ಸಿ.ಎನ್.ಹುಲಿಗೇಶ್, ರಾಮಣ್ಣ, ಸೋಮಣ್ಣ, ಬಿ.ಬಿ.ಮಲ್ಲೇಶ್, ಡಿ.ಕೆ. ಕರಿಬಸಪ್ಪ, ದಂಡಿ ತಿಪ್ಪೇಸ್ವಾಮಿ ಹಾಗೂ ಇತರರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-43-606475138</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>