<p>ಹೊನ್ನಾಳಿ: ‘ಈ ಜಗತ್ತು ಜೈನಧರ್ಮವನ್ನು ಪರಿಪಾಲನೆ ಮಾಡಿದರೆ ಯಾವ ಯುದ್ಧಗಳು ನಡೆಯುತ್ತಿರಲಿಲ್ಲ’ ಎಂದು ಕಾಗಿನೆಲೆ ಕನಕ ಗುರುಪೀಠದ ಹೊಸದುರ್ಗ ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.</p>.<p>ತಾಲ್ಲೂಕಿನ ಬಳ್ಳೇಶ್ವರ ಗ್ರಾಮದಲ್ಲಿ ಭಾನುವಾರ 1008 ಭಗವಾನ್ ಪಾರ್ಶ್ವನಾಥ ದಿಗಂಬರ ಜೈನ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ನಾಗಶಿಲಾ ಮರುಪ್ರತಿಷ್ಠಾಪನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಅವರು, ‘ಪ್ರಸ್ತುತ ನಡೆಯುತ್ತಿರುವ ಇರಾನ್, ಇಸ್ರೇಲ್, ಅಮೆರಿಕ ಯುದ್ಧದ ಕುರಿತು ಪ್ರಾಸಂಗಿಕವಾಗಿ ಪ್ರಸ್ತಾಪಿಸಿದರು.</p>.<p>‘900 ವರ್ಷಗಳ ಇತಿಹಾಸವಿರುವ ನಾಗಶಿಲೆಗೆ ಮರು ಪ್ರತಿಷ್ಠಾಪನೆ ಮಾಡುವ ಮೂಲಕ ಈ ಟ್ರಸ್ಟ್ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಇಲ್ಲಿನ ಜೈನಬಸದಿಯಲ್ಲಿ ಶಿವನಮೂರ್ತಿ, ಅದರ ಮುಂದೆ ನಂದಿಯ ವಿಗ್ರಹವಿದೆ. ಇದು ಏನನ್ನು ಸೂಚಿಸುತ್ತದೆಯೋ ಅದೇ ರೀತಿಯಲ್ಲಿ ಈ ಗ್ರಾಮದಲ್ಲಿ ಸರ್ವಧರ್ಮಿಯರು ಒಟ್ಟಾಗಿ ಬಾಳುತ್ತಿರುವುದು ಸಂತೋಷದ ಸಂಗತಿ’ ಎಂದು ಹೇಳಿದರು.</p>.<p>‘ಬುದ್ಧ, ಬಸವ, ಗಾಂಧಿ ತತ್ವವನ್ನು ಯಾರಾದರೂ ಅನುಸರಿಸುತ್ತಿದ್ದಾರೆ ಎಂದರೆ ಅದು ಜೈನ ಸಮುದಾಯ ಮಾತ್ರ’ ಎಂದು ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ ಹೇಳಿದರು.</p>.<p>‘ನಮ್ಮ ಸರ್ಕಾರ ಬಿಡುಗಡೆ ಮಾಡಿದ್ದ ₹ 50 ಕೋಟಿ ಅನುದಾನದಲ್ಲಿ ಸುಮಾರು ₹ 13 ಕೋಟಿಯಷ್ಟು ಅನುದಾನವನ್ನು ಎಲ್ಲಾ ಸಮುದಾಯಗಳ ದೇವಸ್ಥಾನಗಳಿಗೆ ಕೊಟ್ಟಿದ್ದೇನೆ. ದೊಡ್ಡ ಜಾತಿ, ಸಣ್ಣ ಜಾತಿ ಎಂಬುದನ್ನು ನೋಡದೇ ಪ್ರತಿಯೊಂದು ದೇವಸ್ಥಾನಗಳಿಗೆ ತಲಾ ₹ 20 ಲಕ್ಷದಷ್ಟು ಅನುದಾನ ನೀಡಿದ್ದಾಗಿ’ ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.</p>.<p>ಸಚಿವ ಡಿ.ಸುಧಾಕರ್ ಅವರ ಸಹೋದರ ಪಿ.ಭರತ್ರಾಜ್ ಮಾತನಾಡಿ, ‘ಸಮುದಾಯ ಭವನಕ್ಕೆ ಕೊಳವೆಬಾವಿ ಕೊರೆಯಿಸಿ, ಅದಕ್ಕೆ ಬೇಕಾದ ಎಲ್ಲಾ ಪೂರಕ ಸಾಮಗ್ರಿಗಳನ್ನು ಕೊಡಿಸಲಾಗುವುದು. ಭವನದ ಉದ್ಘಾಟನೆ ಹೊತ್ತಿಗೆ ಅವರ ಆರೋಗ್ಯ ಸುಧಾರಿಸಿದರೆ ಅವರನ್ನು ಕರೆತರಲಾಗುವುದು’ ಎಂದರು.</p>.<p>‘ಸಮುದಾಯ ಭವನದ ನಿರ್ಮಾಣಕ್ಕೆ ₹ 1 ಲಕ್ಷ ದೇಣಿಗೆ ನೀಡುವುದಾಗಿ’ ಭದ್ರಾವತಿಯ ಪ್ರಕಾಶ್ಚಂದ್ ಜೈನ್ ಹೇಳಿದರು.</p>.<p>ತಾಲ್ಲೂಕು ಕುಂಚಿಟಿಗ ಸಮಾಜದ ಮುಖಂಡ ಸುರೇಶ್ ತಕ್ಕನಹಳ್ಳಿ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ಎಂ. ಪ್ರಮೋದ್ ಅಧ್ಯಕ್ಷತೆ ವಹಿಸಿದ್ದರು.</p>.<p>ವೇದಿಕೆಯಲ್ಲಿ ಉಡುಪಿಯ ನಾಗಬ್ರಹ್ಮ ಪ್ರತಿಷ್ಠಾಚಾರ್ಯ ಪ್ರಸನ್ನಕುಮಾರ್ ಇಂದ್ರ, ಶ್ರೇಯಾಂಸು ಪಟೇಲ್, ನಾಗಪ್ಪ ಮಾಸಣಗಿ ಹಾಗೂ ಇತರರು ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260504-43-2143914745</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊನ್ನಾಳಿ: ‘ಈ ಜಗತ್ತು ಜೈನಧರ್ಮವನ್ನು ಪರಿಪಾಲನೆ ಮಾಡಿದರೆ ಯಾವ ಯುದ್ಧಗಳು ನಡೆಯುತ್ತಿರಲಿಲ್ಲ’ ಎಂದು ಕಾಗಿನೆಲೆ ಕನಕ ಗುರುಪೀಠದ ಹೊಸದುರ್ಗ ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.</p>.<p>ತಾಲ್ಲೂಕಿನ ಬಳ್ಳೇಶ್ವರ ಗ್ರಾಮದಲ್ಲಿ ಭಾನುವಾರ 1008 ಭಗವಾನ್ ಪಾರ್ಶ್ವನಾಥ ದಿಗಂಬರ ಜೈನ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ನಾಗಶಿಲಾ ಮರುಪ್ರತಿಷ್ಠಾಪನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಅವರು, ‘ಪ್ರಸ್ತುತ ನಡೆಯುತ್ತಿರುವ ಇರಾನ್, ಇಸ್ರೇಲ್, ಅಮೆರಿಕ ಯುದ್ಧದ ಕುರಿತು ಪ್ರಾಸಂಗಿಕವಾಗಿ ಪ್ರಸ್ತಾಪಿಸಿದರು.</p>.<p>‘900 ವರ್ಷಗಳ ಇತಿಹಾಸವಿರುವ ನಾಗಶಿಲೆಗೆ ಮರು ಪ್ರತಿಷ್ಠಾಪನೆ ಮಾಡುವ ಮೂಲಕ ಈ ಟ್ರಸ್ಟ್ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಇಲ್ಲಿನ ಜೈನಬಸದಿಯಲ್ಲಿ ಶಿವನಮೂರ್ತಿ, ಅದರ ಮುಂದೆ ನಂದಿಯ ವಿಗ್ರಹವಿದೆ. ಇದು ಏನನ್ನು ಸೂಚಿಸುತ್ತದೆಯೋ ಅದೇ ರೀತಿಯಲ್ಲಿ ಈ ಗ್ರಾಮದಲ್ಲಿ ಸರ್ವಧರ್ಮಿಯರು ಒಟ್ಟಾಗಿ ಬಾಳುತ್ತಿರುವುದು ಸಂತೋಷದ ಸಂಗತಿ’ ಎಂದು ಹೇಳಿದರು.</p>.<p>‘ಬುದ್ಧ, ಬಸವ, ಗಾಂಧಿ ತತ್ವವನ್ನು ಯಾರಾದರೂ ಅನುಸರಿಸುತ್ತಿದ್ದಾರೆ ಎಂದರೆ ಅದು ಜೈನ ಸಮುದಾಯ ಮಾತ್ರ’ ಎಂದು ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ ಹೇಳಿದರು.</p>.<p>‘ನಮ್ಮ ಸರ್ಕಾರ ಬಿಡುಗಡೆ ಮಾಡಿದ್ದ ₹ 50 ಕೋಟಿ ಅನುದಾನದಲ್ಲಿ ಸುಮಾರು ₹ 13 ಕೋಟಿಯಷ್ಟು ಅನುದಾನವನ್ನು ಎಲ್ಲಾ ಸಮುದಾಯಗಳ ದೇವಸ್ಥಾನಗಳಿಗೆ ಕೊಟ್ಟಿದ್ದೇನೆ. ದೊಡ್ಡ ಜಾತಿ, ಸಣ್ಣ ಜಾತಿ ಎಂಬುದನ್ನು ನೋಡದೇ ಪ್ರತಿಯೊಂದು ದೇವಸ್ಥಾನಗಳಿಗೆ ತಲಾ ₹ 20 ಲಕ್ಷದಷ್ಟು ಅನುದಾನ ನೀಡಿದ್ದಾಗಿ’ ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.</p>.<p>ಸಚಿವ ಡಿ.ಸುಧಾಕರ್ ಅವರ ಸಹೋದರ ಪಿ.ಭರತ್ರಾಜ್ ಮಾತನಾಡಿ, ‘ಸಮುದಾಯ ಭವನಕ್ಕೆ ಕೊಳವೆಬಾವಿ ಕೊರೆಯಿಸಿ, ಅದಕ್ಕೆ ಬೇಕಾದ ಎಲ್ಲಾ ಪೂರಕ ಸಾಮಗ್ರಿಗಳನ್ನು ಕೊಡಿಸಲಾಗುವುದು. ಭವನದ ಉದ್ಘಾಟನೆ ಹೊತ್ತಿಗೆ ಅವರ ಆರೋಗ್ಯ ಸುಧಾರಿಸಿದರೆ ಅವರನ್ನು ಕರೆತರಲಾಗುವುದು’ ಎಂದರು.</p>.<p>‘ಸಮುದಾಯ ಭವನದ ನಿರ್ಮಾಣಕ್ಕೆ ₹ 1 ಲಕ್ಷ ದೇಣಿಗೆ ನೀಡುವುದಾಗಿ’ ಭದ್ರಾವತಿಯ ಪ್ರಕಾಶ್ಚಂದ್ ಜೈನ್ ಹೇಳಿದರು.</p>.<p>ತಾಲ್ಲೂಕು ಕುಂಚಿಟಿಗ ಸಮಾಜದ ಮುಖಂಡ ಸುರೇಶ್ ತಕ್ಕನಹಳ್ಳಿ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ಎಂ. ಪ್ರಮೋದ್ ಅಧ್ಯಕ್ಷತೆ ವಹಿಸಿದ್ದರು.</p>.<p>ವೇದಿಕೆಯಲ್ಲಿ ಉಡುಪಿಯ ನಾಗಬ್ರಹ್ಮ ಪ್ರತಿಷ್ಠಾಚಾರ್ಯ ಪ್ರಸನ್ನಕುಮಾರ್ ಇಂದ್ರ, ಶ್ರೇಯಾಂಸು ಪಟೇಲ್, ನಾಗಪ್ಪ ಮಾಸಣಗಿ ಹಾಗೂ ಇತರರು ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260504-43-2143914745</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>