<p>ಹೂವಿನಹಡಗಲಿ: ಶರಣರು, ದಾರ್ಶನಿಕರ ವಿಚಾರಧಾರೆಗಳು ಸಾರ್ವ ಕಾಲಿಕ ಪ್ರಸ್ತುತವಾಗಿದ್ದು, ಮನುಕುಲಕ್ಕೆ ದಾರಿದೀಪವಾಗಿವೆ ಉಪನ್ಯಾಸಕಿ ಶ್ವೇತಾ ಬೀರಬ್ಬಿ ಹೇಳಿದರು.</p>.<p>ಪಟ್ಟಣದ ಗವಿಸಿದ್ದೇಶ್ವರ ಶಾಖಾ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ 215ನೇ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.</p>.<p>ಸಂತರು ಮಾನವೀಯತೆ, ಸಮಾನತೆ, ಶಾಂತಿಯ ತತ್ವಗಳನ್ನು ಸಾರಿದ್ದಾರೆ. ಬಸವಣ್ಣನವರ ಕಾಯಕವೇ ಕೈಲಾಸ ತತ್ವ ಶ್ರಮದ ಗೌರವವನ್ನು ಎತ್ತಿಹಿಡಿದಿದೆ ಎಂದರು.</p>.<p>ಪತ್ರಕರ್ತ ಎಂ.ದಯಾನಂದ ಮಾತನಾಡಿ,ದಾರ್ಶನಿಕರ ವಿಚಾರಗಳು ಕೇವಲ ಧಾರ್ಮಿಕ ಚೌಕಟ್ಟಿಗೆ ಸೀಮಿತವಾಗದೇ, ಸಾಮಾಜಿಕ ಬದಲಾವಣೆಗೆ ಪ್ರೇರಣೆ ಯಾಗಿವೆ ಎಂದರು.</p>.<p>ಹಿರಿಶಾಂತವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.</p>.<p>ಪುರಸಭೆ ಮುಖ್ಯಾಧಿಕಾರಿ ಜಿ.ಹನುಮಂತಪ್ಪ ಉದ್ಘಾಟಿಸಿದರು.</p>.<p>ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ಎಂ ನಾಗಭೂಷಣ, ಚುಸಾಪ ಅಧ್ಯಕ್ಷ ನಾಗರಾಜ ಮಲ್ಕಿಒಡೆಯರ್, ನಿವೃತ್ತ ಎಂಜಿನಿಯರ್ ಎಚ್ .ಎಂ.ಶಶಿಧರಯ್ಯ, ಕಳಕರಡ್ಡಿ, ಜ್ಯೋತಿ ಪ್ರಕಾಶ, ಟಿ ಗಂಗಮ್ಮ, ದೇವಣ್ಣ, ಎಚ್ .ಬಿ. ರಾಜಣ್ಣ, ಎಚ್.ಎಂ .ಚನ್ನಬಸಯ್ಯ ಇದ್ದರು. ಸೋಮಶೇಖರ ಬಳೆಗಾರ ಭಾವಗೀತೆ ಹಾಡಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260507-25-2111652508</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೂವಿನಹಡಗಲಿ: ಶರಣರು, ದಾರ್ಶನಿಕರ ವಿಚಾರಧಾರೆಗಳು ಸಾರ್ವ ಕಾಲಿಕ ಪ್ರಸ್ತುತವಾಗಿದ್ದು, ಮನುಕುಲಕ್ಕೆ ದಾರಿದೀಪವಾಗಿವೆ ಉಪನ್ಯಾಸಕಿ ಶ್ವೇತಾ ಬೀರಬ್ಬಿ ಹೇಳಿದರು.</p>.<p>ಪಟ್ಟಣದ ಗವಿಸಿದ್ದೇಶ್ವರ ಶಾಖಾ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ 215ನೇ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.</p>.<p>ಸಂತರು ಮಾನವೀಯತೆ, ಸಮಾನತೆ, ಶಾಂತಿಯ ತತ್ವಗಳನ್ನು ಸಾರಿದ್ದಾರೆ. ಬಸವಣ್ಣನವರ ಕಾಯಕವೇ ಕೈಲಾಸ ತತ್ವ ಶ್ರಮದ ಗೌರವವನ್ನು ಎತ್ತಿಹಿಡಿದಿದೆ ಎಂದರು.</p>.<p>ಪತ್ರಕರ್ತ ಎಂ.ದಯಾನಂದ ಮಾತನಾಡಿ,ದಾರ್ಶನಿಕರ ವಿಚಾರಗಳು ಕೇವಲ ಧಾರ್ಮಿಕ ಚೌಕಟ್ಟಿಗೆ ಸೀಮಿತವಾಗದೇ, ಸಾಮಾಜಿಕ ಬದಲಾವಣೆಗೆ ಪ್ರೇರಣೆ ಯಾಗಿವೆ ಎಂದರು.</p>.<p>ಹಿರಿಶಾಂತವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.</p>.<p>ಪುರಸಭೆ ಮುಖ್ಯಾಧಿಕಾರಿ ಜಿ.ಹನುಮಂತಪ್ಪ ಉದ್ಘಾಟಿಸಿದರು.</p>.<p>ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ಎಂ ನಾಗಭೂಷಣ, ಚುಸಾಪ ಅಧ್ಯಕ್ಷ ನಾಗರಾಜ ಮಲ್ಕಿಒಡೆಯರ್, ನಿವೃತ್ತ ಎಂಜಿನಿಯರ್ ಎಚ್ .ಎಂ.ಶಶಿಧರಯ್ಯ, ಕಳಕರಡ್ಡಿ, ಜ್ಯೋತಿ ಪ್ರಕಾಶ, ಟಿ ಗಂಗಮ್ಮ, ದೇವಣ್ಣ, ಎಚ್ .ಬಿ. ರಾಜಣ್ಣ, ಎಚ್.ಎಂ .ಚನ್ನಬಸಯ್ಯ ಇದ್ದರು. ಸೋಮಶೇಖರ ಬಳೆಗಾರ ಭಾವಗೀತೆ ಹಾಡಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260507-25-2111652508</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>