<p>ಹುಬ್ಬಳ್ಳಿ: ‘ಪ್ರಸ್ತುತ ಶೈಕ್ಷಣಿಕವಾಗಿ ನಾವು ಸಾಕಷ್ಟು ಉನ್ನತಿ ಸಾಧಿಸಿದ್ದರೂ, ಸಂಸ್ಕಾರದಲ್ಲಿ ಎಡವುತ್ತಿದ್ದೇವೆ. ಇದಕ್ಕೆ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಕಾರಣವಾಗಿದೆ. ಗಾಯತ್ರಿ ಮಂತ್ರ ಜಪ ನಿತ್ಯದ ಬದುಕಿನ ಭಾಗವಾದರೆ, ಸರ್ವಸಿದ್ದಿ ಸಾಧ್ಯ’ ಎಂದು ವಿಶ್ವಭಾರತೀ ವೇದಪೀಠದ ಅಧ್ಯಕ್ಷ ಸಮೀರಣಾಚಾರ್ಯ ಕಂಠಪಲ್ಲಿ ಹೇಳಿದರು.</p>.<p>ಸಮರ್ಥ ಸೇವಾ ಕೇಂದ್ರ ಟ್ರಸ್ಟ್ ಮತ್ತು ಪ್ರವರ್ತಿತ ಅಖಿಲ ಭಾರತ ಬ್ರಾಹ್ಮಣ ಕ್ಷೇಮಾಭಿವೃದ್ಧಿ ನಿಧಿ ವತಿಯಿಂದ ಗುರುವಾರ ಭವಾನಿ ನಗರದ ರಾಘವೇಂದ್ರ ಮಠದ ಸುಜಯೀಂದ್ರ ಭವನದಲ್ಲಿ ಹಮ್ಮಿಕೊಂಡಿದ್ದ ‘ಜೀವನಮ್ ಸ್ವಾವಲಂಬನಮ್’ ಕಾರ್ಯಾಗಾರದ ಸನಾತನ ಸಂಸ್ಕಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು.</p>.<p>‘ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಮಧ್ವಾಚಾರ್ಯರು ಪಠಿಸಿದ್ದು ಗಾಯತ್ರಿ ಮಂತ್ರವಾಗಿದೆ. ವಿಪ್ರೇತರ ಸಮುದಾಯದ ಅನೇಕರು ಸಹ ಗಾಯತ್ರಿ ಮಂತ್ರ ಜಪದ ಪ್ರಭಾವದಿಂದ ಉನ್ನತಿ ಹೊಂದಿದ್ದಾರೆ’ ಎಂದರು.</p>.<p>ವೇ.ಮೂ. ಸತ್ಯನಾರಾಯಣಾಚಾರ್ಯ, ವೆಂಕಟೇಶ ಜೋಶಿ, ಹನುಮಂತಣ್ಣ ಟಕ್ಕಳಕಿ ಸಂಸ್ಕಾರದ ಮಹತ್ವ, ಮಕ್ಕಳು, ಪಾಲಕರ ಜವಾಬ್ದಾರಿ ಕುರಿತು ಮಾತನಾಡಿದರು. ಭಾಸ್ಕರ ಪಾಟೀಲ, ಶ್ರೀಪಾದ ಶಾಸ್ತ್ರಿ, ಅಶೋಕ ಕುಲಕರ್ಣಿ ಸಂಗ್ರೇಶಕೊಪ್ಪ ಇದ್ದರು.</p>.<p>ಸಮಾರೋಪ ಸಮಾರಂಭದಲ್ಲಿ ಟಿಟಿಡಿ ಜಿಲ್ಲಾ ಸಂಚಾಲಕ ಗೋಪಾಲ ಕುಲಕರ್ಣಿ ಮಾತನಾಡಿ, ‘ಎಲ್ಲ ಕ್ಷೇತ್ರದಲ್ಲಿ ವಿಪ್ರರು ಸಾಧನೆ ಮಾಡಿದ್ದು, ಇಂದು ಸ್ವಾವಲಂಬಿ ಆಗುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪರಸ್ಪರ ಸಹಾಯ, ಸಹಕಾರ ಮನೋಭಾವದಿಂದ ಮುನ್ನಡೆಯಬೇಕು’ ಎಂದರು.</p>.<p>ಧಾರವಾಡದ ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆಯ ಅಧ್ಯಕ್ಷ ರಾಜೀವ ಪಾಟೀಲ್ ಕುಲಕರ್ಣಿ ಮಾತನಾಡಿದರು. ಪ್ರೊ.ಸಿ.ಆರ್. ಜೋಶಿ ಅಧ್ಯಕ್ಷತೆ ವಹಿಸಿದ್ದರು. ನರಸಿಂಹರಾವ್ ಸೋಮಲಾಪುರ, ಸಿ.ಎಂ. ದೀಕ್ಷಿತ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260530-24-55083143</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಬ್ಬಳ್ಳಿ: ‘ಪ್ರಸ್ತುತ ಶೈಕ್ಷಣಿಕವಾಗಿ ನಾವು ಸಾಕಷ್ಟು ಉನ್ನತಿ ಸಾಧಿಸಿದ್ದರೂ, ಸಂಸ್ಕಾರದಲ್ಲಿ ಎಡವುತ್ತಿದ್ದೇವೆ. ಇದಕ್ಕೆ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಕಾರಣವಾಗಿದೆ. ಗಾಯತ್ರಿ ಮಂತ್ರ ಜಪ ನಿತ್ಯದ ಬದುಕಿನ ಭಾಗವಾದರೆ, ಸರ್ವಸಿದ್ದಿ ಸಾಧ್ಯ’ ಎಂದು ವಿಶ್ವಭಾರತೀ ವೇದಪೀಠದ ಅಧ್ಯಕ್ಷ ಸಮೀರಣಾಚಾರ್ಯ ಕಂಠಪಲ್ಲಿ ಹೇಳಿದರು.</p>.<p>ಸಮರ್ಥ ಸೇವಾ ಕೇಂದ್ರ ಟ್ರಸ್ಟ್ ಮತ್ತು ಪ್ರವರ್ತಿತ ಅಖಿಲ ಭಾರತ ಬ್ರಾಹ್ಮಣ ಕ್ಷೇಮಾಭಿವೃದ್ಧಿ ನಿಧಿ ವತಿಯಿಂದ ಗುರುವಾರ ಭವಾನಿ ನಗರದ ರಾಘವೇಂದ್ರ ಮಠದ ಸುಜಯೀಂದ್ರ ಭವನದಲ್ಲಿ ಹಮ್ಮಿಕೊಂಡಿದ್ದ ‘ಜೀವನಮ್ ಸ್ವಾವಲಂಬನಮ್’ ಕಾರ್ಯಾಗಾರದ ಸನಾತನ ಸಂಸ್ಕಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು.</p>.<p>‘ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಮಧ್ವಾಚಾರ್ಯರು ಪಠಿಸಿದ್ದು ಗಾಯತ್ರಿ ಮಂತ್ರವಾಗಿದೆ. ವಿಪ್ರೇತರ ಸಮುದಾಯದ ಅನೇಕರು ಸಹ ಗಾಯತ್ರಿ ಮಂತ್ರ ಜಪದ ಪ್ರಭಾವದಿಂದ ಉನ್ನತಿ ಹೊಂದಿದ್ದಾರೆ’ ಎಂದರು.</p>.<p>ವೇ.ಮೂ. ಸತ್ಯನಾರಾಯಣಾಚಾರ್ಯ, ವೆಂಕಟೇಶ ಜೋಶಿ, ಹನುಮಂತಣ್ಣ ಟಕ್ಕಳಕಿ ಸಂಸ್ಕಾರದ ಮಹತ್ವ, ಮಕ್ಕಳು, ಪಾಲಕರ ಜವಾಬ್ದಾರಿ ಕುರಿತು ಮಾತನಾಡಿದರು. ಭಾಸ್ಕರ ಪಾಟೀಲ, ಶ್ರೀಪಾದ ಶಾಸ್ತ್ರಿ, ಅಶೋಕ ಕುಲಕರ್ಣಿ ಸಂಗ್ರೇಶಕೊಪ್ಪ ಇದ್ದರು.</p>.<p>ಸಮಾರೋಪ ಸಮಾರಂಭದಲ್ಲಿ ಟಿಟಿಡಿ ಜಿಲ್ಲಾ ಸಂಚಾಲಕ ಗೋಪಾಲ ಕುಲಕರ್ಣಿ ಮಾತನಾಡಿ, ‘ಎಲ್ಲ ಕ್ಷೇತ್ರದಲ್ಲಿ ವಿಪ್ರರು ಸಾಧನೆ ಮಾಡಿದ್ದು, ಇಂದು ಸ್ವಾವಲಂಬಿ ಆಗುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪರಸ್ಪರ ಸಹಾಯ, ಸಹಕಾರ ಮನೋಭಾವದಿಂದ ಮುನ್ನಡೆಯಬೇಕು’ ಎಂದರು.</p>.<p>ಧಾರವಾಡದ ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆಯ ಅಧ್ಯಕ್ಷ ರಾಜೀವ ಪಾಟೀಲ್ ಕುಲಕರ್ಣಿ ಮಾತನಾಡಿದರು. ಪ್ರೊ.ಸಿ.ಆರ್. ಜೋಶಿ ಅಧ್ಯಕ್ಷತೆ ವಹಿಸಿದ್ದರು. ನರಸಿಂಹರಾವ್ ಸೋಮಲಾಪುರ, ಸಿ.ಎಂ. ದೀಕ್ಷಿತ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260530-24-55083143</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>