<p>ಹುಬ್ಬಳ್ಳಿ: ‘ಶಿಕ್ಷಣ, ಸಂಘಟನೆಯಿಂದ ಮಾತ್ರ ಯಾವುದೇ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.</p>.<p>ಹಳೇ ಹುಬ್ಬಳ್ಳಿಯ ಬಾಂತಿಕಟ್ಟಾದಲ್ಲಿ ನಿರ್ಮಿಸಲಾದ ಶಂಕರ ಶಿವಾಚಾರ್ಯ ಶತಮಾನೋತ್ಸವ ಭವನದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಕುರುಹಿನಶೆಟ್ಟಿ ಸಮಾಜದವರು ಕಾಯಕವನ್ನು ನಂಬಿ ಬದಕುತ್ತಿದ್ದಾರೆ.ಇತ್ತೀಚೆಗೆ ಹೊಸ ತಲೆಮಾರಿನ ಯುವಕರು ಇತರ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಆದರೆ ಇಂದಿಗೂ ಹಲವು ಕುಟುಂಬಗಳು ತಮ್ಮ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತಿವೆ’ ಎಂದರು.</p>.<p>‘ಸಮಾಜ ಸಂಘಟನೆ, ಧಾರ್ಮಿಕ ಕಾರ್ಯಕ್ರಮಗಳ ಕುರಿತು ಯುವಕರಲ್ಲಿ ಅರಿವು ಮೂಡಿಸಬೇಕಿದೆ’ ಎಂದು ಹೇಳಿದರು.</p>.<p>ಕನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ,‘ಸಮಾಜದ ಅಭಿವೃದ್ಧಿಯಲ್ಲಿ ಕಾಯಕ ಸಮಾಜಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಕಾಯಕಯೋಗಿಗಳು ದೇಶಕ್ಕೆ ದೊಡ್ಡ ಕೊಡುಗೆ ನೀಡುತ್ತಿದ್ದಾರೆ’ ಎಂದರು.</p>.<p>ಮುಧೋಳದ ರಾಮಾರೂಢಮಠದ ಶಂಕರಾರೂಢ ಸ್ವಾಮೀಜಿ, ಬಿಳ್ಳೂರು ವಿರಕ್ತಮಠದ ರಾಜಯೋಗಿ ಚನ್ನಬಸವ ಸ್ವಾಮೀಜಿ, ಚಿತ್ತಾಪುರದ ಸವಿತಾನಂದ ಸ್ವಾಮೀಜಿ, ಚಿಂಚಲಿ ಸಿದ್ದಪ್ರಸಾದ ಸ್ವಾಮೀಜಿ, ನಾಗಠಾಣ ಪ್ರಜ್ಞಾನಂದ ಸ್ವಾಮೀಜಿ, ಸಿದ್ದಣ್ಣ ಡಂಬಳ, ಈರಣ್ಣ ಜಡಿ, ಮನೋಹರ ಶಿರೋಳ, ಅಂಬಾದಾಸ ಕಾಮೂರ್ತಿ, ಸುಮಿತ್ರಾ ಗುಂಜಾಳ, ಇತರರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260424-24-1568736251</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಬ್ಬಳ್ಳಿ: ‘ಶಿಕ್ಷಣ, ಸಂಘಟನೆಯಿಂದ ಮಾತ್ರ ಯಾವುದೇ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.</p>.<p>ಹಳೇ ಹುಬ್ಬಳ್ಳಿಯ ಬಾಂತಿಕಟ್ಟಾದಲ್ಲಿ ನಿರ್ಮಿಸಲಾದ ಶಂಕರ ಶಿವಾಚಾರ್ಯ ಶತಮಾನೋತ್ಸವ ಭವನದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಕುರುಹಿನಶೆಟ್ಟಿ ಸಮಾಜದವರು ಕಾಯಕವನ್ನು ನಂಬಿ ಬದಕುತ್ತಿದ್ದಾರೆ.ಇತ್ತೀಚೆಗೆ ಹೊಸ ತಲೆಮಾರಿನ ಯುವಕರು ಇತರ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಆದರೆ ಇಂದಿಗೂ ಹಲವು ಕುಟುಂಬಗಳು ತಮ್ಮ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತಿವೆ’ ಎಂದರು.</p>.<p>‘ಸಮಾಜ ಸಂಘಟನೆ, ಧಾರ್ಮಿಕ ಕಾರ್ಯಕ್ರಮಗಳ ಕುರಿತು ಯುವಕರಲ್ಲಿ ಅರಿವು ಮೂಡಿಸಬೇಕಿದೆ’ ಎಂದು ಹೇಳಿದರು.</p>.<p>ಕನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ,‘ಸಮಾಜದ ಅಭಿವೃದ್ಧಿಯಲ್ಲಿ ಕಾಯಕ ಸಮಾಜಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಕಾಯಕಯೋಗಿಗಳು ದೇಶಕ್ಕೆ ದೊಡ್ಡ ಕೊಡುಗೆ ನೀಡುತ್ತಿದ್ದಾರೆ’ ಎಂದರು.</p>.<p>ಮುಧೋಳದ ರಾಮಾರೂಢಮಠದ ಶಂಕರಾರೂಢ ಸ್ವಾಮೀಜಿ, ಬಿಳ್ಳೂರು ವಿರಕ್ತಮಠದ ರಾಜಯೋಗಿ ಚನ್ನಬಸವ ಸ್ವಾಮೀಜಿ, ಚಿತ್ತಾಪುರದ ಸವಿತಾನಂದ ಸ್ವಾಮೀಜಿ, ಚಿಂಚಲಿ ಸಿದ್ದಪ್ರಸಾದ ಸ್ವಾಮೀಜಿ, ನಾಗಠಾಣ ಪ್ರಜ್ಞಾನಂದ ಸ್ವಾಮೀಜಿ, ಸಿದ್ದಣ್ಣ ಡಂಬಳ, ಈರಣ್ಣ ಜಡಿ, ಮನೋಹರ ಶಿರೋಳ, ಅಂಬಾದಾಸ ಕಾಮೂರ್ತಿ, ಸುಮಿತ್ರಾ ಗುಂಜಾಳ, ಇತರರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260424-24-1568736251</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>