<p>ಹುಣಸಗಿ: ‘ಈ ಪ್ರಾಪಂಚಿಕ ಹಾಗೂ ಸಾಂಸಾರಿಕ ಎಂಬ ಭವದಲ್ಲಿನ ಬಂಧನದಿಂದ ಮುಕ್ತರಾಗಿಲು ಶರಣರ ಸಂಗ ಹಾಗೂ ಭಗವಂತನ ಸ್ಮರಣೆ ಮುಖ್ಯ’ ಎಂದು ಅಲ್ಲಮಪ್ರಭು ಹೊಕ್ರಾಣಿ ಹೇಳಿದರು.</p>.<p>ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ಮಹಲಿನ ಮಠದಲ್ಲಿ ಹಮ್ಮಿಕೊಂಡಿದ್ದ ‘18ನೇ ವಚನ ಹುಣ್ಣಿಮೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭವ ಬಂಧನ ಕುರಿತು ಮಾತನಾಡಿದರು.</p>.<p>‘ಬಹುತೇಕರು ನಮ್ಮಲ್ಲಿರುವ ಅರಿಷಡ್ವರ್ಗಗಳಿಗೆ ಕಟ್ಟು ಬಿದ್ದು, ಅವುಗಳನ್ನು ತೃಪ್ತಿ ಪಡಿಸಿಕೊಳ್ಳುವುದರಲ್ಲಿಯೇ ಜೀವನದಲ್ಲಿ ಹೆಣಗಾಡುತ್ತೇವೆ. ಆದರೆ, ನಮ್ಮ ನಿಜವಾದ ಸುಖದ ಕುರಿತು ಚಿಂತಿಸದಿದ್ದಲ್ಲಿ ಭವ ಎಂಬುದು ಬಂಧನವಾಗಲಿದೆ’ ಎಂದು ಹೇಳಿದರು.</p>.<p>ಶರಣ ದಾನಪ್ಪ ಅಪ್ಪಾಗೋಳ ಮಾತನಾಡಿ, ‘ಭವ ಎಂಬ ಪ್ರಪಂಚಕ್ಕೆ ಬಂದಿರುವ ಪ್ರತಿಯೊಬ್ಬರು ಬಂಧಿಗಳಿದ್ದು, ಅದರಿಂದ ಮುಕ್ತರಾಗಲು ಇಂತಹ ಸತ್ಸಂಗಗಳು ಅಗತ್ಯ’ ಎಂದು ನುಡಿದರು.</p>.<p>ಮಹಲಿನ ಮಠದ ವೃಷಬೇಂದ್ರ ಅಪ್ಪ ಅವರು ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.</p>.<p>‘ಸಂಸಾರ ಎಂಬ ಕೌಟುಂಬಿಕ ಬಂಧನಲ್ಲಿದ್ದುಕೊಂಡರೂ ಶರಣರು ತಮ್ಮ ನಡೆ–ನುಡಿ ಸದ್ಭಾವದ ಮೂಲಕ ಎಲ್ಲದರಿಂದಲೂ ಬಂಧ ಮುಕ್ತರಾಗಿ ನಿಶಬ್ಧದ ಕಡೆಗೆ ತೆರಳುವ ಮೂಲಕ ಶೂನ್ಯ ಸಂಪಾದನೆ ಮಾಡಿದ್ದಾರೆ. ಆದ್ದರಿಂದ ಶರಣ ಜೀವನದಲ್ಲಿ ಬಂಧದಿಂದ ಮುಕ್ತರಾಗುವ ಕಲೆ ತಿಳಿದುಕೊಳ್ಳಬಹುದಾಗಿದೆ’ ಎಂದು ಹೇಳಿದರು.</p>.<p>ಕಸಾಪ ವಲಯ ಅಧ್ಯಕ್ಷ ಕೋರಿಸಂಗಯ್ಯ ಗಡ್ಡದ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಲ್ಲಮಪ್ರಭು ಕೊಡೇಕಲ್ಲಮಠ, ಹನುಮಯ್ಯ ಕೆಂಡದ, ಬಸಮ್ಮ ಕೆಂಡದ, ಜನ್ನಮ್ಮ ಡಂಬಳ, ನೀಲಮ್ಮ ಪಂಜಗಲ್ಲ, ಸಂಗಮ್ಮ ಹಾವೇರಿ ಸೇರಿದಂತೆ ಇತರರು ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260505-30-1264551128</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಣಸಗಿ: ‘ಈ ಪ್ರಾಪಂಚಿಕ ಹಾಗೂ ಸಾಂಸಾರಿಕ ಎಂಬ ಭವದಲ್ಲಿನ ಬಂಧನದಿಂದ ಮುಕ್ತರಾಗಿಲು ಶರಣರ ಸಂಗ ಹಾಗೂ ಭಗವಂತನ ಸ್ಮರಣೆ ಮುಖ್ಯ’ ಎಂದು ಅಲ್ಲಮಪ್ರಭು ಹೊಕ್ರಾಣಿ ಹೇಳಿದರು.</p>.<p>ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ಮಹಲಿನ ಮಠದಲ್ಲಿ ಹಮ್ಮಿಕೊಂಡಿದ್ದ ‘18ನೇ ವಚನ ಹುಣ್ಣಿಮೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭವ ಬಂಧನ ಕುರಿತು ಮಾತನಾಡಿದರು.</p>.<p>‘ಬಹುತೇಕರು ನಮ್ಮಲ್ಲಿರುವ ಅರಿಷಡ್ವರ್ಗಗಳಿಗೆ ಕಟ್ಟು ಬಿದ್ದು, ಅವುಗಳನ್ನು ತೃಪ್ತಿ ಪಡಿಸಿಕೊಳ್ಳುವುದರಲ್ಲಿಯೇ ಜೀವನದಲ್ಲಿ ಹೆಣಗಾಡುತ್ತೇವೆ. ಆದರೆ, ನಮ್ಮ ನಿಜವಾದ ಸುಖದ ಕುರಿತು ಚಿಂತಿಸದಿದ್ದಲ್ಲಿ ಭವ ಎಂಬುದು ಬಂಧನವಾಗಲಿದೆ’ ಎಂದು ಹೇಳಿದರು.</p>.<p>ಶರಣ ದಾನಪ್ಪ ಅಪ್ಪಾಗೋಳ ಮಾತನಾಡಿ, ‘ಭವ ಎಂಬ ಪ್ರಪಂಚಕ್ಕೆ ಬಂದಿರುವ ಪ್ರತಿಯೊಬ್ಬರು ಬಂಧಿಗಳಿದ್ದು, ಅದರಿಂದ ಮುಕ್ತರಾಗಲು ಇಂತಹ ಸತ್ಸಂಗಗಳು ಅಗತ್ಯ’ ಎಂದು ನುಡಿದರು.</p>.<p>ಮಹಲಿನ ಮಠದ ವೃಷಬೇಂದ್ರ ಅಪ್ಪ ಅವರು ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.</p>.<p>‘ಸಂಸಾರ ಎಂಬ ಕೌಟುಂಬಿಕ ಬಂಧನಲ್ಲಿದ್ದುಕೊಂಡರೂ ಶರಣರು ತಮ್ಮ ನಡೆ–ನುಡಿ ಸದ್ಭಾವದ ಮೂಲಕ ಎಲ್ಲದರಿಂದಲೂ ಬಂಧ ಮುಕ್ತರಾಗಿ ನಿಶಬ್ಧದ ಕಡೆಗೆ ತೆರಳುವ ಮೂಲಕ ಶೂನ್ಯ ಸಂಪಾದನೆ ಮಾಡಿದ್ದಾರೆ. ಆದ್ದರಿಂದ ಶರಣ ಜೀವನದಲ್ಲಿ ಬಂಧದಿಂದ ಮುಕ್ತರಾಗುವ ಕಲೆ ತಿಳಿದುಕೊಳ್ಳಬಹುದಾಗಿದೆ’ ಎಂದು ಹೇಳಿದರು.</p>.<p>ಕಸಾಪ ವಲಯ ಅಧ್ಯಕ್ಷ ಕೋರಿಸಂಗಯ್ಯ ಗಡ್ಡದ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಲ್ಲಮಪ್ರಭು ಕೊಡೇಕಲ್ಲಮಠ, ಹನುಮಯ್ಯ ಕೆಂಡದ, ಬಸಮ್ಮ ಕೆಂಡದ, ಜನ್ನಮ್ಮ ಡಂಬಳ, ನೀಲಮ್ಮ ಪಂಜಗಲ್ಲ, ಸಂಗಮ್ಮ ಹಾವೇರಿ ಸೇರಿದಂತೆ ಇತರರು ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260505-30-1264551128</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>