<p>ಹುಣಸೂರು: ‘ಮಹಾನ್ ಮಾನವತಾವಾದಿ ಶಾಂತಿಧೂತ ಗೌತಮ ಬುದ್ಧ ಅವರನ್ನು ವಿಶ್ವವೇ ಅಂಗೀಕರಿಸಿದ್ದರೂ ಭಾರತೀಯರಾದ ನಾವು ಆತನ ತತ್ವ ಸಿದ್ಧಾಂತ ಆಪ್ಪಿಕೊಳ್ಳುವಲ್ಲಿ ವಿಫಲವಾಗಿದ್ದೇವೆ’ ಎಂದು ತಹಶೀಲ್ದಾರ್ ಮಂಜುನಾಥ್ ಹೇಳಿದರು.</p>.<p>ನಗರದ ಅಂಬೇಡ್ಕರ್ ಭವನದಲ್ಲಿ ಬುದ್ಧ ಪೂರ್ಣಿಮೆ ಅಂಗವಾಗಿ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಗೌತಮ ಬುದ್ಧ ತಮ್ಮ 35ನೇ ವಯಸ್ಸಿನಲ್ಲಿ ವೈಶಾಖ ಪೂರ್ಣಿಮೆಯ ದಿನದಂದು ಬೋಧಗಯಾದಲ್ಲಿ ಬೋಧಿ ವೃಕ್ಷ ಅಡಿಯಲ್ಲಿ ಧ್ಯಾನಮಗ್ನರಾಗಿ ಕಾಮ, ಕ್ರೋಧ, ಲೋಭ, ಭಯಗಳಿಂದ ಹೊರ ಬಂದರು. ಬುದ್ಧರಾಗಿ ಜೀವಮಾನದುದ್ದಕ್ಕೂ ಶಾಂತಿ ಮತ್ತು ಮಾನವ ಧರ್ಮವನ್ನು ಪ್ರಚಾರದಲ್ಲಿ ತೊಡಗಿದರು’ ಎಂದು ಮಾಹಿತಿ ನೀಡಿದರು.</p>.<p>‘ನೆರೆಯ ದೇಶಗಳಾದ ಶ್ರೀಲಂಕಾ, ನೇಪಾಳ, ಚೀನಾ, ಜಪಾನ್ ಸೇರಿದಂತೆ ಹಲವು ರಾಷ್ಟ್ರಗಳು ಇಂದು ಬುದ್ಧ ತತ್ವ, ಸಿದ್ದಾಂತವನ್ನು ಅಪ್ಪಿಕೊಂಡು ಶಾಂತಿ ಮಂತ್ರ ಜಪಿಸುತ್ತಿವೆ. ಆದರೆ ಭಾರತದಲ್ಲಿ ಇಂದಿಗೂ ಅದರ ಆಳ ಅಗಲ ತಿಳಿಯುವ ಹಂತದಲ್ಲಿದ್ದೇವೆ’ ಎಂದರು.</p>.<p>‘ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಬಳಿಕ ದೇಶದಲ್ಲಿ ಹೆಚ್ಚಿನ ಪ್ರಚಾರ ಸಿಕ್ಕಿತು. ಮಹಾತ್ಮ ಗಾಂಧೀಜಿ ಅವರೂ ಬುದ್ಧನ ತತ್ವ ಸಿದ್ದಾಂತಕ್ಕೆ ಮಾರುಹೋಗಿ ಅಹಿಂಸೆಯ ಮಾರ್ಗ ಅಳವಡಿಸಿಕೊಂಡು ಬ್ರಿಟಿಷ್ ವಿರುದ್ಧ ಹೋರಾಟ ನಡೆಸಿದರು. ಶಾಂತ ಸ್ವರೂಪಿಗಳನ್ನು ಗೆಲ್ಲುವುದು ಕಷ್ಟಕರ ಎಂಬುದನ್ನು ತೋರಿದರು’ ಎಂದರು.</p>.<p>ಕಾರ್ಯಕ್ರಮದಲ್ಲಿ ಡಿವೈಎಸ್ಪಿ ರವಿ ಮಾತನಾಡಿದರು. ದಸಂಸ ಮುಖಂಡ ನಿಂಗರಾಜ್ ಮಲ್ಲಾಡಿ, ಕಿರಂಗೂರು ಸ್ವಾಮಿ, ಡಿ.ಕುಮಾರ್, ಅಶೋಕ್, ಹೊನ್ನಪ್ಪ, ಬಿಳಿಕೆರೆ ಬಸವರಾಜ್, ಕುಮಾರ್, ಪುಟ್ಟರಾಜ್, ಅತ್ತಿಕುಪ್ಪೆ ರಾಮಕೃಷ್ಣ ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260502-38-1376977729</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಣಸೂರು: ‘ಮಹಾನ್ ಮಾನವತಾವಾದಿ ಶಾಂತಿಧೂತ ಗೌತಮ ಬುದ್ಧ ಅವರನ್ನು ವಿಶ್ವವೇ ಅಂಗೀಕರಿಸಿದ್ದರೂ ಭಾರತೀಯರಾದ ನಾವು ಆತನ ತತ್ವ ಸಿದ್ಧಾಂತ ಆಪ್ಪಿಕೊಳ್ಳುವಲ್ಲಿ ವಿಫಲವಾಗಿದ್ದೇವೆ’ ಎಂದು ತಹಶೀಲ್ದಾರ್ ಮಂಜುನಾಥ್ ಹೇಳಿದರು.</p>.<p>ನಗರದ ಅಂಬೇಡ್ಕರ್ ಭವನದಲ್ಲಿ ಬುದ್ಧ ಪೂರ್ಣಿಮೆ ಅಂಗವಾಗಿ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಗೌತಮ ಬುದ್ಧ ತಮ್ಮ 35ನೇ ವಯಸ್ಸಿನಲ್ಲಿ ವೈಶಾಖ ಪೂರ್ಣಿಮೆಯ ದಿನದಂದು ಬೋಧಗಯಾದಲ್ಲಿ ಬೋಧಿ ವೃಕ್ಷ ಅಡಿಯಲ್ಲಿ ಧ್ಯಾನಮಗ್ನರಾಗಿ ಕಾಮ, ಕ್ರೋಧ, ಲೋಭ, ಭಯಗಳಿಂದ ಹೊರ ಬಂದರು. ಬುದ್ಧರಾಗಿ ಜೀವಮಾನದುದ್ದಕ್ಕೂ ಶಾಂತಿ ಮತ್ತು ಮಾನವ ಧರ್ಮವನ್ನು ಪ್ರಚಾರದಲ್ಲಿ ತೊಡಗಿದರು’ ಎಂದು ಮಾಹಿತಿ ನೀಡಿದರು.</p>.<p>‘ನೆರೆಯ ದೇಶಗಳಾದ ಶ್ರೀಲಂಕಾ, ನೇಪಾಳ, ಚೀನಾ, ಜಪಾನ್ ಸೇರಿದಂತೆ ಹಲವು ರಾಷ್ಟ್ರಗಳು ಇಂದು ಬುದ್ಧ ತತ್ವ, ಸಿದ್ದಾಂತವನ್ನು ಅಪ್ಪಿಕೊಂಡು ಶಾಂತಿ ಮಂತ್ರ ಜಪಿಸುತ್ತಿವೆ. ಆದರೆ ಭಾರತದಲ್ಲಿ ಇಂದಿಗೂ ಅದರ ಆಳ ಅಗಲ ತಿಳಿಯುವ ಹಂತದಲ್ಲಿದ್ದೇವೆ’ ಎಂದರು.</p>.<p>‘ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಬಳಿಕ ದೇಶದಲ್ಲಿ ಹೆಚ್ಚಿನ ಪ್ರಚಾರ ಸಿಕ್ಕಿತು. ಮಹಾತ್ಮ ಗಾಂಧೀಜಿ ಅವರೂ ಬುದ್ಧನ ತತ್ವ ಸಿದ್ದಾಂತಕ್ಕೆ ಮಾರುಹೋಗಿ ಅಹಿಂಸೆಯ ಮಾರ್ಗ ಅಳವಡಿಸಿಕೊಂಡು ಬ್ರಿಟಿಷ್ ವಿರುದ್ಧ ಹೋರಾಟ ನಡೆಸಿದರು. ಶಾಂತ ಸ್ವರೂಪಿಗಳನ್ನು ಗೆಲ್ಲುವುದು ಕಷ್ಟಕರ ಎಂಬುದನ್ನು ತೋರಿದರು’ ಎಂದರು.</p>.<p>ಕಾರ್ಯಕ್ರಮದಲ್ಲಿ ಡಿವೈಎಸ್ಪಿ ರವಿ ಮಾತನಾಡಿದರು. ದಸಂಸ ಮುಖಂಡ ನಿಂಗರಾಜ್ ಮಲ್ಲಾಡಿ, ಕಿರಂಗೂರು ಸ್ವಾಮಿ, ಡಿ.ಕುಮಾರ್, ಅಶೋಕ್, ಹೊನ್ನಪ್ಪ, ಬಿಳಿಕೆರೆ ಬಸವರಾಜ್, ಕುಮಾರ್, ಪುಟ್ಟರಾಜ್, ಅತ್ತಿಕುಪ್ಪೆ ರಾಮಕೃಷ್ಣ ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260502-38-1376977729</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>