<p>ಕಾಗವಾಡ: ‘ಗಡಿ ಭಾಗದ ಕವಲಗುಡ್ಡ ಗ್ರಾಮದಲ್ಲಿ ಸಾವಿರಾರು ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜೊತೆಗೆ ಧಾರ್ಮಿಕ ಕಾರ್ಯಕ್ರಮ ಕೈಗೊಂಡು ಸುತ್ತಲಿನ ಗ್ರಾಮಗಳ ಜನರನ್ನು ಧರ್ಮದ ಹಾದಿಯಲ್ಲಿ ಸಾಗುವ ಹಾಗೆ ಅಮರೇಶ್ವರ ಮಹಾರಾಜರು ಮಾಡುತ್ತಿದ್ದಾರೆ’ ಎಂದು ಮಖಣಾಪುರ ಸೋಮಲಿಂಗೇಶ್ವರ ಸ್ವಾಮೀಜಿ ಹೇಳಿದರು.</p>.<p>ಕವಲಗುಡ್ಡ ಸಿದ್ಧಯೋಗಿ ಸಿದ್ಧಾಶ್ರಮದಲ್ಲಿ ಈಚೆಗೆ ಅಮರೇಶ್ವರ ಮಹಾರಾಜರ ನೇತೃತ್ವದಲ್ಲಿ ಸಿದ್ಧರತ್ನ ಮದಗೊಂಡೇಶ್ವರ ಮಹಾರಾಜರ ಗುರು ಸ್ಮರಣೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ 7 ದಿನಗಳ ಕನಕ-ಬಸವ ಭಾವ ಬೆಳಕು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.</p>.<p>ಚಿಂತಕ ವೀರೇಶ ಪಾಟೀಲ ಮಾತನಾಡಿ, ‘ಕನಕದಾಸರ ಮತ್ತು ಬಸವೇಶ್ವರರ ಸಂದೇಶಗಳ ಸಾರವನ್ನು ಎಲ್ಲರಿಗೂ ತಿಳಿಸುವುದಕ್ಕಾಗಿ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಈ ಕಾರ್ಯಕ್ರಮ ಹಮ್ಮಿಕೊಂಡು ಮನುಕುಲದ ಏಳಿಗೆಯನ್ನು ಬಯಸಿರುವರು’ ಎಂದು ಹೇಳಿದರು. ಅಮರೇಶ್ವರ ಮಹಾರಾಜರು, ಜೋಕಾನಟ್ಟಿ ಬಿಳಿಯಾಣಿಸಿದ್ದ ಮಹಾರಾಜರು, ಹಿಪ್ಪರಗಿ ಸಿದ್ಧಾರೂಢ ಶರಣರು, ಕೋಳಿಗುಡ್ಡ ಸ್ವರೂಪಾನಂದ ಸ್ವಾಮೀಜಿ, ಯಾದವಾಡ ಸಿದ್ದೇಶ್ವರ ಸ್ವಾಮೀಜಿ, ಬಾಡಗಿ ಬನಸಿದ್ದ ಮಹಾರಾಜರು ಇದ್ದರು. ಭಾಗ್ಯಶ್ರೀ ಕಾಳೆಗೋಳ ಕಾರ್ಯಕ್ರಮ ನಿರೂಪಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260506-21-285238447</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾಗವಾಡ: ‘ಗಡಿ ಭಾಗದ ಕವಲಗುಡ್ಡ ಗ್ರಾಮದಲ್ಲಿ ಸಾವಿರಾರು ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜೊತೆಗೆ ಧಾರ್ಮಿಕ ಕಾರ್ಯಕ್ರಮ ಕೈಗೊಂಡು ಸುತ್ತಲಿನ ಗ್ರಾಮಗಳ ಜನರನ್ನು ಧರ್ಮದ ಹಾದಿಯಲ್ಲಿ ಸಾಗುವ ಹಾಗೆ ಅಮರೇಶ್ವರ ಮಹಾರಾಜರು ಮಾಡುತ್ತಿದ್ದಾರೆ’ ಎಂದು ಮಖಣಾಪುರ ಸೋಮಲಿಂಗೇಶ್ವರ ಸ್ವಾಮೀಜಿ ಹೇಳಿದರು.</p>.<p>ಕವಲಗುಡ್ಡ ಸಿದ್ಧಯೋಗಿ ಸಿದ್ಧಾಶ್ರಮದಲ್ಲಿ ಈಚೆಗೆ ಅಮರೇಶ್ವರ ಮಹಾರಾಜರ ನೇತೃತ್ವದಲ್ಲಿ ಸಿದ್ಧರತ್ನ ಮದಗೊಂಡೇಶ್ವರ ಮಹಾರಾಜರ ಗುರು ಸ್ಮರಣೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ 7 ದಿನಗಳ ಕನಕ-ಬಸವ ಭಾವ ಬೆಳಕು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.</p>.<p>ಚಿಂತಕ ವೀರೇಶ ಪಾಟೀಲ ಮಾತನಾಡಿ, ‘ಕನಕದಾಸರ ಮತ್ತು ಬಸವೇಶ್ವರರ ಸಂದೇಶಗಳ ಸಾರವನ್ನು ಎಲ್ಲರಿಗೂ ತಿಳಿಸುವುದಕ್ಕಾಗಿ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಈ ಕಾರ್ಯಕ್ರಮ ಹಮ್ಮಿಕೊಂಡು ಮನುಕುಲದ ಏಳಿಗೆಯನ್ನು ಬಯಸಿರುವರು’ ಎಂದು ಹೇಳಿದರು. ಅಮರೇಶ್ವರ ಮಹಾರಾಜರು, ಜೋಕಾನಟ್ಟಿ ಬಿಳಿಯಾಣಿಸಿದ್ದ ಮಹಾರಾಜರು, ಹಿಪ್ಪರಗಿ ಸಿದ್ಧಾರೂಢ ಶರಣರು, ಕೋಳಿಗುಡ್ಡ ಸ್ವರೂಪಾನಂದ ಸ್ವಾಮೀಜಿ, ಯಾದವಾಡ ಸಿದ್ದೇಶ್ವರ ಸ್ವಾಮೀಜಿ, ಬಾಡಗಿ ಬನಸಿದ್ದ ಮಹಾರಾಜರು ಇದ್ದರು. ಭಾಗ್ಯಶ್ರೀ ಕಾಳೆಗೋಳ ಕಾರ್ಯಕ್ರಮ ನಿರೂಪಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260506-21-285238447</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>