<p>ಕಂಪ್ಲಿ: ‘ಮಾನವೀಯ ಮೌಲ್ಯ ಹಾಗೂ ಜೀವನ ಮೌಲ್ಯವೇ ನಿಜವಾದ ಸಂಸ್ಕೃತಿ’ ಎಂದು ಜೈನ ಗುರು ಆಚಾರ್ಯ ವಿಮಲಸಾಗರ್ ಸೂರ್ ಜಿ ತಿಳಿಸಿದರು.</p>.<p>ಪಟ್ಟಣದ ಶ್ರೀಮುನಿ ಸುವ್ರತ್ಸ್ವಾಮಿ ಹುಂಡಿಯಾ ಛತ್ರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ‘ಅಹಂ ಯಾರಲ್ಲಿ ಇರುತ್ತದೆಯೋ ಅವರಲ್ಲಿ ವ್ಯಕ್ತಿತ್ವ ಜ್ಯೋತಿ ಬೆಳಗುವುದಿಲ್ಲ’ ಎಂದರು.</p>.<p>ಗುರು ಹಿರಿಯರು ಬೋಧಿಸಿದ ಸತ್ಸಂಗ, ಸತ್ಕರ್ಮ, ಸದಾಲೋಚನೆ, ದೇಶಪ್ರೇಮ, ಕುಟುಂಬ ಪ್ರೀತಿಯನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತಂದೆ, ತಾಯಿ ಆಶೋತ್ತರಗಳನ್ನು ಮಕ್ಕಳು ಅರಿತು ಈಡೇರಿಸಬೇಕು. ಯುವಜನತೆ ಭವಿಷ್ಯದ ಸುಭದ್ರ ಭಾರತವನ್ನು ನಿರ್ಮಿಸಬೇಕಿದೆ ಎಂದು ತಿಳಿಸಿದರು.</p>.<p>ಶಾಸಕ ಜೆ.ಎನ್. ಗಣೇಶ್, ಜೈನ್ ಸಮಾಜದ ಅಧ್ಯಕ್ಷ ಜವೇರಿಲಾಲ್ ಬಾಗ್ರೇಚಾ, ಪ್ರಮುಖರಾದ ಶಾಂತಿಲಾಲ್ ಸಿಂಘ್ವಿ, ಶಾಂತಿಲಾಲ್ ಬಾಲಾರ್, ಫತೇಕುಮಾರ್ ಭಾಫ್ಣ, ರಾಜು ಹುಂಡಿಯಾ, ಅಮೃತಲಾಲ್, ರಾಮಲಾಲ್, ಜೈನ್ ಸೇವಾ ಟ್ರಸ್ಟ್ ಪದಾಧಿಕಾರಿಗಳು, ಜೈನ ಸಮುದಾಯದವರು ಹಾಜರಿದ್ದರು.</p>.<p>ಇದಕ್ಕು ಮುನ್ನ ಆಚಾರ್ಯ ವಿಮಲಸಾಗರ್ಸೂರ್ಜಿ ಅವರೊಂದಿಗೆ ಐದು ಜನ ಶಿಷ್ಯರ ಮೆರವಣಿಗೆ ಪಟ್ಟಣದಲ್ಲಿ ಸಂಭ್ರಮದಿಂದ ಜರುಗಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260523-25-642928118</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಂಪ್ಲಿ: ‘ಮಾನವೀಯ ಮೌಲ್ಯ ಹಾಗೂ ಜೀವನ ಮೌಲ್ಯವೇ ನಿಜವಾದ ಸಂಸ್ಕೃತಿ’ ಎಂದು ಜೈನ ಗುರು ಆಚಾರ್ಯ ವಿಮಲಸಾಗರ್ ಸೂರ್ ಜಿ ತಿಳಿಸಿದರು.</p>.<p>ಪಟ್ಟಣದ ಶ್ರೀಮುನಿ ಸುವ್ರತ್ಸ್ವಾಮಿ ಹುಂಡಿಯಾ ಛತ್ರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ‘ಅಹಂ ಯಾರಲ್ಲಿ ಇರುತ್ತದೆಯೋ ಅವರಲ್ಲಿ ವ್ಯಕ್ತಿತ್ವ ಜ್ಯೋತಿ ಬೆಳಗುವುದಿಲ್ಲ’ ಎಂದರು.</p>.<p>ಗುರು ಹಿರಿಯರು ಬೋಧಿಸಿದ ಸತ್ಸಂಗ, ಸತ್ಕರ್ಮ, ಸದಾಲೋಚನೆ, ದೇಶಪ್ರೇಮ, ಕುಟುಂಬ ಪ್ರೀತಿಯನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತಂದೆ, ತಾಯಿ ಆಶೋತ್ತರಗಳನ್ನು ಮಕ್ಕಳು ಅರಿತು ಈಡೇರಿಸಬೇಕು. ಯುವಜನತೆ ಭವಿಷ್ಯದ ಸುಭದ್ರ ಭಾರತವನ್ನು ನಿರ್ಮಿಸಬೇಕಿದೆ ಎಂದು ತಿಳಿಸಿದರು.</p>.<p>ಶಾಸಕ ಜೆ.ಎನ್. ಗಣೇಶ್, ಜೈನ್ ಸಮಾಜದ ಅಧ್ಯಕ್ಷ ಜವೇರಿಲಾಲ್ ಬಾಗ್ರೇಚಾ, ಪ್ರಮುಖರಾದ ಶಾಂತಿಲಾಲ್ ಸಿಂಘ್ವಿ, ಶಾಂತಿಲಾಲ್ ಬಾಲಾರ್, ಫತೇಕುಮಾರ್ ಭಾಫ್ಣ, ರಾಜು ಹುಂಡಿಯಾ, ಅಮೃತಲಾಲ್, ರಾಮಲಾಲ್, ಜೈನ್ ಸೇವಾ ಟ್ರಸ್ಟ್ ಪದಾಧಿಕಾರಿಗಳು, ಜೈನ ಸಮುದಾಯದವರು ಹಾಜರಿದ್ದರು.</p>.<p>ಇದಕ್ಕು ಮುನ್ನ ಆಚಾರ್ಯ ವಿಮಲಸಾಗರ್ಸೂರ್ಜಿ ಅವರೊಂದಿಗೆ ಐದು ಜನ ಶಿಷ್ಯರ ಮೆರವಣಿಗೆ ಪಟ್ಟಣದಲ್ಲಿ ಸಂಭ್ರಮದಿಂದ ಜರುಗಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260523-25-642928118</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>