<p>ಕಾಸರಗೋಡು: ಕುತ್ತಿಕೋಲು ತಂಬುರಾಟಿ ಭಗವತಿ ಕ್ಷೇತ್ರದ ಬ್ರಹ್ಮಕಲಶೋತ್ಸವ ಮತ್ತು ಕಳಿಯಾಟ ಮಹೋತ್ಸವ ಏ.18ರಿಂದ 28ರವರೆಗೆ ನಡೆಯಲಿದೆ.</p>.<p>ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇರುವೈಲು ಕೇಶವ ತಂತ್ರಿ ವೈದಿಕ ವಿಧಿವಿಧಾನದ ನೇತೃತ್ವ ವಹಿಸುವರು ಎಂದು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಎ.ಮಾಧವನ್ ನಾಯರ್ ಕಳಕ್ಕರ ತಿಳಿಸಿದರು.</p>.<p>18ರಂದು ಬೆಳಿಗ್ಗೆ 10 ಗಂಟೆಗೆ ಹಸಿರು ಹೊರೆಕಾಣಿಕೆ ಮೆರವಣಿಗೆ, 11 ಗಂಟೆಗೆ ಮಾತೃ ಸಂಗಮ, 19ರಂದು ಮಧ್ಯಾಹ್ನ 3.30ಕ್ಕೆ ಧಾರ್ಮಿಕ ಸಭೆ, 20ರಂದು ಮಧ್ಯಾಹ್ನ 3 ಗಂಟೆಗೆ ನಮ್ಮೂರ ಇತಿಹಾಸ ಸಂವಾದ, 21ರಂದು ಮಧ್ಯಾಹ್ನ 3 ಗಂಟೆಗೆ ಸರ್ವ ಧರ್ಮ ಸಮ್ಮೇಳನ, 22ರಂದು ಮಧ್ಯಾಹ್ನ 3 ಗಂಟೆಗೆ ಚರಿತ್ರೆ ವಿಚಾರ ಸಂಕಿರಣ, 23ರಂದು ಮಧ್ಯಾಹ್ನ 12 ಗಂಟೆಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. 25, 26, 27, 28ರಂದು ಕಳಿಯಾಟ ನಡೆಯಲಿದ್ದು, ವಿವಿಧ ದೈವಗಳ ಕೋಲ ನಡೆಯಲಿದೆ ಎಂದರು.</p>.<p>ಕುಞಿಕೃಷ್ಣನ್ ಪನಿಚ್ಚಿಲಿಂಕಾಲ್, ಪಿ.ವಿ.ಗೋಪಾಲನ್, ಪಿ.ವಿ.ಶ್ರೀಧರನ್, ಬಿ.ವಿಜಯನ್, ಕೆ.ಅರವಿಂದನ್, ರತೀಶ್ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260417-29-1473842939</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾಸರಗೋಡು: ಕುತ್ತಿಕೋಲು ತಂಬುರಾಟಿ ಭಗವತಿ ಕ್ಷೇತ್ರದ ಬ್ರಹ್ಮಕಲಶೋತ್ಸವ ಮತ್ತು ಕಳಿಯಾಟ ಮಹೋತ್ಸವ ಏ.18ರಿಂದ 28ರವರೆಗೆ ನಡೆಯಲಿದೆ.</p>.<p>ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇರುವೈಲು ಕೇಶವ ತಂತ್ರಿ ವೈದಿಕ ವಿಧಿವಿಧಾನದ ನೇತೃತ್ವ ವಹಿಸುವರು ಎಂದು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಎ.ಮಾಧವನ್ ನಾಯರ್ ಕಳಕ್ಕರ ತಿಳಿಸಿದರು.</p>.<p>18ರಂದು ಬೆಳಿಗ್ಗೆ 10 ಗಂಟೆಗೆ ಹಸಿರು ಹೊರೆಕಾಣಿಕೆ ಮೆರವಣಿಗೆ, 11 ಗಂಟೆಗೆ ಮಾತೃ ಸಂಗಮ, 19ರಂದು ಮಧ್ಯಾಹ್ನ 3.30ಕ್ಕೆ ಧಾರ್ಮಿಕ ಸಭೆ, 20ರಂದು ಮಧ್ಯಾಹ್ನ 3 ಗಂಟೆಗೆ ನಮ್ಮೂರ ಇತಿಹಾಸ ಸಂವಾದ, 21ರಂದು ಮಧ್ಯಾಹ್ನ 3 ಗಂಟೆಗೆ ಸರ್ವ ಧರ್ಮ ಸಮ್ಮೇಳನ, 22ರಂದು ಮಧ್ಯಾಹ್ನ 3 ಗಂಟೆಗೆ ಚರಿತ್ರೆ ವಿಚಾರ ಸಂಕಿರಣ, 23ರಂದು ಮಧ್ಯಾಹ್ನ 12 ಗಂಟೆಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. 25, 26, 27, 28ರಂದು ಕಳಿಯಾಟ ನಡೆಯಲಿದ್ದು, ವಿವಿಧ ದೈವಗಳ ಕೋಲ ನಡೆಯಲಿದೆ ಎಂದರು.</p>.<p>ಕುಞಿಕೃಷ್ಣನ್ ಪನಿಚ್ಚಿಲಿಂಕಾಲ್, ಪಿ.ವಿ.ಗೋಪಾಲನ್, ಪಿ.ವಿ.ಶ್ರೀಧರನ್, ಬಿ.ವಿಜಯನ್, ಕೆ.ಅರವಿಂದನ್, ರತೀಶ್ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260417-29-1473842939</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>