<p>ಕಿಕ್ಕೇರಿ: ಪಟ್ಟಣದ ವಿಪ್ರ ಮಹಿಳಾ ಸಮಾಜದವರು ಸುಬ್ಬರಾಯಛತ್ರದಲ್ಲಿ ಅಧಿಕಮಾಸದಲ್ಲಿ ನೆಮ್ಮದಿಗಾಗಿ ಭಾನುವಾರ ಸಾಮೂಹಿಕವಾಗಿ ಲಲಿತ ಸಹಸ್ರನಾಮ ಪಠಣ ನೆರವೇರಿಸಿದರು.</p>.<p>ಗುರುವಾರದಿಂದ ಆರಂಭ ವಾದ ಲಲಿತ ಸಹಸ್ರನಾಮ ಪಠಣವನ್ನು ಭಾನುವಾರ ಒಂದು ಸಾವಿರ ಸ್ತೋತ್ರಕ್ಕೆ ಸಮಾಪ್ತಿಗೊಳಿಸಿದರು. ಹೋಬಳಿಯ ವಿವಿಧೆಡೆಯಿಂದ ವಿಪ್ರ ಮಹಿಳೆಯರು ಸಂಭ್ರಮದಿಂದ ಭಾಗವಹಿಸಿದ್ದರು. ವಿಪ್ರ ಬಾಂಧವ ಸೇವಾ ಸಮತಿ ಸಹಕಾರದಲ್ಲಿ ನಿತ್ಯ ಸಂಜೆ ಮಹಿಳೆಯರು ಒಂದೆಡೆ ಸೇರಿ ಶಂಕರಾಚಾರ್ಯರು, ಜಗನ್ಮಾತೆ ಮಹಾಲಕ್ಷ್ಮೀ , ಸರಸ್ವತಿ ದೇವಿ ಪೂಜೆ ನಡೆಸಿದರು. ಆರತಿ ಬೆಳಗಿ ಲೋಕಕಲ್ಯಾಣಕ್ಕೆ ಪ್ರಾರ್ಥಿಸಿದರು.ವೇದಬ್ರಹ್ಮ ಅನಿಲ್ಶಾಸ್ತ್ರೀ ಮಾರ್ಗದರ್ಶನದಲ್ಲಿ ಲಲಿತ ಸಹಸ್ರಹೋಮ, ಗಣಹೋಮ ನಡೆದು, ವಿವಿಧ ಪೂಜೆಗಳು , ಅಷ್ಟದ್ರವ್ಯಗಳ ಸೇವೆ ನೆರವೇರಿತು. ಮಹಮಂಗಳಾರತಿ, ತೀರ್ಥ ಪ್ರಸಾದ, ಅನ್ನ ಪ್ರಸಾದ ಇತ್ತು.</p>.<p>ಭಾಗ್ಯಮ್ಮ, ಸುಮಾ, ವೇದಾವತಿ, ಹೇಮಲತಾ, ಮಧು, ಗಿರಿಜಾ, ಸುಧಾಮಣಿ, ಸುರಭಿ, ಮೇಘನಾ, ಅನುರಾಧ, ಲಕ್ಷ್ಮೀ , ಕಲಾವತಿ, ಶಶಿಕಲಾ, ರಜಿನಿ, ಅನಂತಸ್ವಾಮಿ, ವೆಂಕಟೇಶ್, ಮಹಾಬಲರಾವ್, ಮಹಾಬಲಶರ್ಮ, ಅನಿಲ್ಶಾಸ್ತ್ರೀ , ಸೀತಾರಾಮು, ಚಂದ್ರಶೇಖರಯ್ಯ, ಕೆ.ಎಸ್. ಪರಮೇಶ್ವರಯ್ಯ, ನರಸಿಂಹ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260601-40-1445694851</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಿಕ್ಕೇರಿ: ಪಟ್ಟಣದ ವಿಪ್ರ ಮಹಿಳಾ ಸಮಾಜದವರು ಸುಬ್ಬರಾಯಛತ್ರದಲ್ಲಿ ಅಧಿಕಮಾಸದಲ್ಲಿ ನೆಮ್ಮದಿಗಾಗಿ ಭಾನುವಾರ ಸಾಮೂಹಿಕವಾಗಿ ಲಲಿತ ಸಹಸ್ರನಾಮ ಪಠಣ ನೆರವೇರಿಸಿದರು.</p>.<p>ಗುರುವಾರದಿಂದ ಆರಂಭ ವಾದ ಲಲಿತ ಸಹಸ್ರನಾಮ ಪಠಣವನ್ನು ಭಾನುವಾರ ಒಂದು ಸಾವಿರ ಸ್ತೋತ್ರಕ್ಕೆ ಸಮಾಪ್ತಿಗೊಳಿಸಿದರು. ಹೋಬಳಿಯ ವಿವಿಧೆಡೆಯಿಂದ ವಿಪ್ರ ಮಹಿಳೆಯರು ಸಂಭ್ರಮದಿಂದ ಭಾಗವಹಿಸಿದ್ದರು. ವಿಪ್ರ ಬಾಂಧವ ಸೇವಾ ಸಮತಿ ಸಹಕಾರದಲ್ಲಿ ನಿತ್ಯ ಸಂಜೆ ಮಹಿಳೆಯರು ಒಂದೆಡೆ ಸೇರಿ ಶಂಕರಾಚಾರ್ಯರು, ಜಗನ್ಮಾತೆ ಮಹಾಲಕ್ಷ್ಮೀ , ಸರಸ್ವತಿ ದೇವಿ ಪೂಜೆ ನಡೆಸಿದರು. ಆರತಿ ಬೆಳಗಿ ಲೋಕಕಲ್ಯಾಣಕ್ಕೆ ಪ್ರಾರ್ಥಿಸಿದರು.ವೇದಬ್ರಹ್ಮ ಅನಿಲ್ಶಾಸ್ತ್ರೀ ಮಾರ್ಗದರ್ಶನದಲ್ಲಿ ಲಲಿತ ಸಹಸ್ರಹೋಮ, ಗಣಹೋಮ ನಡೆದು, ವಿವಿಧ ಪೂಜೆಗಳು , ಅಷ್ಟದ್ರವ್ಯಗಳ ಸೇವೆ ನೆರವೇರಿತು. ಮಹಮಂಗಳಾರತಿ, ತೀರ್ಥ ಪ್ರಸಾದ, ಅನ್ನ ಪ್ರಸಾದ ಇತ್ತು.</p>.<p>ಭಾಗ್ಯಮ್ಮ, ಸುಮಾ, ವೇದಾವತಿ, ಹೇಮಲತಾ, ಮಧು, ಗಿರಿಜಾ, ಸುಧಾಮಣಿ, ಸುರಭಿ, ಮೇಘನಾ, ಅನುರಾಧ, ಲಕ್ಷ್ಮೀ , ಕಲಾವತಿ, ಶಶಿಕಲಾ, ರಜಿನಿ, ಅನಂತಸ್ವಾಮಿ, ವೆಂಕಟೇಶ್, ಮಹಾಬಲರಾವ್, ಮಹಾಬಲಶರ್ಮ, ಅನಿಲ್ಶಾಸ್ತ್ರೀ , ಸೀತಾರಾಮು, ಚಂದ್ರಶೇಖರಯ್ಯ, ಕೆ.ಎಸ್. ಪರಮೇಶ್ವರಯ್ಯ, ನರಸಿಂಹ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260601-40-1445694851</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>