<p>ಮೂಡಲಗಿ: ‘ಮನುಕುಲವನ್ನು ಪ್ರೀತಿಸುವುದೇ ನಿಜವಾದ ಧರ್ಮ. ಬುದ್ಧ, ಬಸವಣ್ಣನವರು ಇದನ್ನು ವಿಶ್ವಕ್ಕೆ ಸಾರಿದ್ದರು’ ಎಂದು ಅಥಣಿಯ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ಹೇಳಿದರು.</p>.<p>ಕನ್ನಡ ಸಾಹಿತ್ಯ ಪರಿಷತ್ತು, ಜ್ಞಾನದೀಪ್ತಿ ಸಾಹಿತ್ಯ ಪ್ರತಿಷ್ಠಾನದ ಸಹಯೋಗದಲ್ಲಿ ಇಲ್ಲಿನ ಸತ್ಯಸಾಯಿ ಮಂದಿರದ ಆವರಣದಲ್ಲಿ ಆಯೋಜಿಸಿದ್ದ ಬೆಳದಿಂಗಳ ಸಾಹಿತ್ಯ ಚಿಂತನ– ಮಂಥನ ಸುವರ್ಣ ಸಂಚಿಕೆಯ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಪ್ರೀತಿಯಿಂದ ಜಗತ್ತನ್ನು ಗೆಲ್ಲುವ ಮಾರ್ಗವನ್ನು ಸಂತರು, ಪ್ರವಾದಿಗಳು ತೋರಿಸಿಕೊಟ್ಟಿದ್ದರು. ವಿಶ್ವ ಪ್ರಜ್ಞೆಯೇ ಬುದ್ಧ, ಬಸವ ಪ್ರಜ್ಞೆಯಾಗಿದೆ’ ಎಂದರು.</p>.<p>ಸಾಹಿತಿ ವಿ.ಎಸ್. ಮಾಳಿ ಮಾತನಾಡಿ, ‘ಬುದ್ಧ– ಬಸವ ಸಮನ್ವಯವು ಮಾನವೀಯತೆ, ಸಮಾನತೆ ಮತ್ತು ಜ್ಞಾನಾಧಾರಿತ ಸಮಾಜ ನಡೆಸುವ ಸನ್ಮಾರ್ಗವಾಗಿತ್ತು. ವೈಚಾರಿಕ ನಿಲುವಿನಲ್ಲಿ ಬಸವಣ್ಣನವರು ಬುದ್ದನಗಿಂತ ಒಂದು ಹೆಜ್ಜೆ ಮುಂದೆ ಇದ್ದರು’ ಎಂದು ಪ್ರತಿಪಾದಿಸಿದರು.</p>.<p>‘ಅಂಬೇಡ್ಕರರು ಬೌದ್ಧ ಧರ್ಮಕ್ಕೆ ಸೇರುವ ಮೂಲಕ ಬುದ್ಧನನ್ನು ಭಾರತದಲ್ಲಿ ಪ್ರಸ್ತುತವಾಗಿರಿಸಲು ಸಾಧ್ಯವಾಗಿದೆ’ ಎಂದರು.</p>.<p>ಬೆಳಗಾವಿಯ ಮಹಾನಗರ ಪಾಲಿಕೆ ಉಪ ಮೇಯರ್ ಹಣಮಂತ ಕೊಂಗಾಲಿ, ಕಾರ್ಮಿಕ ಇಲಾಖೆಯ ಕಲಬುರ್ಗಿ ವಿಭಾಗೀಯ ಆಯುಕ್ತ ವೆಂಕಟೇಶ ಶಿಂಧಿಹಟ್ಟಿ, ಕಸಾಪ ಅಧ್ಯಕ್ಷ ಸಂಜಯ ಶಿಂಧಿಹಟ್ಟಿ ಮಾತನಾಡಿದರು.</p>.<p>ಸತ್ಯಸಾಯಿ ಸೇವಾ ಸಮಿತಿ ಸಂಚಾಲಕ ಹಣಮಂತ ಸೋರಗಾಂವಿ ಅಧ್ಯಕ್ಷತೆ ವಹಿಸಿದ್ದರು. ಎ.ಎಲ್. ಶಿಂಧಿಹಟ್ಟಿ, ಎಸ್.ಎಂ. ಕಮದಾಳ, ಆರ್.ಟಿ. ಲಂಕೆಪ್ಪನ್ನವರ, ಬಾಲಶೇಖರ ಬಂದಿ, ಮಹಾವೀರ ಸಲ್ಲಾಗೋಳ, ಬಸವಂತ ತರಕಾರ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260505-21-128937737</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೂಡಲಗಿ: ‘ಮನುಕುಲವನ್ನು ಪ್ರೀತಿಸುವುದೇ ನಿಜವಾದ ಧರ್ಮ. ಬುದ್ಧ, ಬಸವಣ್ಣನವರು ಇದನ್ನು ವಿಶ್ವಕ್ಕೆ ಸಾರಿದ್ದರು’ ಎಂದು ಅಥಣಿಯ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ಹೇಳಿದರು.</p>.<p>ಕನ್ನಡ ಸಾಹಿತ್ಯ ಪರಿಷತ್ತು, ಜ್ಞಾನದೀಪ್ತಿ ಸಾಹಿತ್ಯ ಪ್ರತಿಷ್ಠಾನದ ಸಹಯೋಗದಲ್ಲಿ ಇಲ್ಲಿನ ಸತ್ಯಸಾಯಿ ಮಂದಿರದ ಆವರಣದಲ್ಲಿ ಆಯೋಜಿಸಿದ್ದ ಬೆಳದಿಂಗಳ ಸಾಹಿತ್ಯ ಚಿಂತನ– ಮಂಥನ ಸುವರ್ಣ ಸಂಚಿಕೆಯ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಪ್ರೀತಿಯಿಂದ ಜಗತ್ತನ್ನು ಗೆಲ್ಲುವ ಮಾರ್ಗವನ್ನು ಸಂತರು, ಪ್ರವಾದಿಗಳು ತೋರಿಸಿಕೊಟ್ಟಿದ್ದರು. ವಿಶ್ವ ಪ್ರಜ್ಞೆಯೇ ಬುದ್ಧ, ಬಸವ ಪ್ರಜ್ಞೆಯಾಗಿದೆ’ ಎಂದರು.</p>.<p>ಸಾಹಿತಿ ವಿ.ಎಸ್. ಮಾಳಿ ಮಾತನಾಡಿ, ‘ಬುದ್ಧ– ಬಸವ ಸಮನ್ವಯವು ಮಾನವೀಯತೆ, ಸಮಾನತೆ ಮತ್ತು ಜ್ಞಾನಾಧಾರಿತ ಸಮಾಜ ನಡೆಸುವ ಸನ್ಮಾರ್ಗವಾಗಿತ್ತು. ವೈಚಾರಿಕ ನಿಲುವಿನಲ್ಲಿ ಬಸವಣ್ಣನವರು ಬುದ್ದನಗಿಂತ ಒಂದು ಹೆಜ್ಜೆ ಮುಂದೆ ಇದ್ದರು’ ಎಂದು ಪ್ರತಿಪಾದಿಸಿದರು.</p>.<p>‘ಅಂಬೇಡ್ಕರರು ಬೌದ್ಧ ಧರ್ಮಕ್ಕೆ ಸೇರುವ ಮೂಲಕ ಬುದ್ಧನನ್ನು ಭಾರತದಲ್ಲಿ ಪ್ರಸ್ತುತವಾಗಿರಿಸಲು ಸಾಧ್ಯವಾಗಿದೆ’ ಎಂದರು.</p>.<p>ಬೆಳಗಾವಿಯ ಮಹಾನಗರ ಪಾಲಿಕೆ ಉಪ ಮೇಯರ್ ಹಣಮಂತ ಕೊಂಗಾಲಿ, ಕಾರ್ಮಿಕ ಇಲಾಖೆಯ ಕಲಬುರ್ಗಿ ವಿಭಾಗೀಯ ಆಯುಕ್ತ ವೆಂಕಟೇಶ ಶಿಂಧಿಹಟ್ಟಿ, ಕಸಾಪ ಅಧ್ಯಕ್ಷ ಸಂಜಯ ಶಿಂಧಿಹಟ್ಟಿ ಮಾತನಾಡಿದರು.</p>.<p>ಸತ್ಯಸಾಯಿ ಸೇವಾ ಸಮಿತಿ ಸಂಚಾಲಕ ಹಣಮಂತ ಸೋರಗಾಂವಿ ಅಧ್ಯಕ್ಷತೆ ವಹಿಸಿದ್ದರು. ಎ.ಎಲ್. ಶಿಂಧಿಹಟ್ಟಿ, ಎಸ್.ಎಂ. ಕಮದಾಳ, ಆರ್.ಟಿ. ಲಂಕೆಪ್ಪನ್ನವರ, ಬಾಲಶೇಖರ ಬಂದಿ, ಮಹಾವೀರ ಸಲ್ಲಾಗೋಳ, ಬಸವಂತ ತರಕಾರ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260505-21-128937737</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>