<p>ಮುದ್ದೇಬಿಹಾಳ: ಕುರಬಾನಿ ಎಂದರೆ ಕೇವಲ ಪ್ರಾಣಿಯನ್ನು ಬಲಿ ಕೊಡುವುದಲ್ಲ. ತಮ್ಮ ಅಹಂಕಾರ, ಕೋಪ, ದ್ವೇಷ, ಸ್ವಾರ್ಥ ಹಾಗೂ ಕೆಟ್ಟ ಅಭ್ಯಾಸಗಳನ್ನು ಅಲ್ಲಾಹನ ಮಾರ್ಗದಲ್ಲಿ ತ್ಯಾಗ ಮಾಡುವುದೇ ನಿಜವಾದ ಕುರಬಾನಿ ಎಂದು ಜಾಮಿಯಾ ಮಸೀದಿಯ ಮೌಲಾನಾ ಆಫ್ತಾಬ್ ಹೇಳಿದರು.</p>.<p>ಪಟ್ಟಣದ ತಾಳಿಕೋಟೆ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಬಕ್ರೀದ್ ಅಂಗವಾಗಿ ಮುಸ್ಲಿಮರ ಸಾಮೂಹಿಕ ಪ್ರಾರ್ಥನೆಯ ಸಂದರ್ಭದಲ್ಲಿ ಅವರು ಮಾತನಾಡಿದರು.</p>.<p>‘ನಾವು ವರ್ಷಗಳಿಂದ ಕುರಬಾನಿ ಮಾಡುತ್ತಿದ್ದೇವೆ. ಆದರೆ ನಮ್ಮ ಜೀವನ, ನಡತೆ, ಮಾತು ಹಾಗೂ ಸ್ವಭಾವದಲ್ಲಿ ಬದಲಾವಣೆ ಆಗಿದೆಯೇ ಎಂಬುದನ್ನು ಪ್ರತಿಯೊಬ್ಬರೂ ಆತ್ಮಪರಿಶೀಲನೆ ಮಾಡಬೇಕು. ಕುರಬಾನಿಯ ನಿಜವಾದ ಅರ್ಥ ನಮ್ಮೊಳಗಿನ ಕೆಟ್ಟ ಗುಣಗಳನ್ನು ತ್ಯಜಿಸುವುದಾಗಿದೆ’ ಎಂದು ಹೇಳಿದರು.</p>.<p>ಸಮಾಜದಲ್ಲಿ ಪರಸ್ಪರ ಕ್ಷಮೆ, ಪ್ರೀತಿ ಮತ್ತು ಸಹೋದರತ್ವವನ್ನು ಬೆಳೆಸುವಂತೆ ಕರೆ ನೀಡಿದ ಅವರು, ‘ಯಾರಾದರೂ ನಮ್ಮನ್ನು ನೋಯಿಸಿದ್ದರೆ ಅವರನ್ನು ಅಲ್ಲಾಹನಿಗಾಗಿ ಕ್ಷಮಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಅದುವೇ ದೊಡ್ಡ ಕುರಬಾನಿ’ ಎಂದು ತಿಳಿಸಿದರು.</p>.<p>‘ಇಸ್ಲಾಂ ಧರ್ಮದಲ್ಲಿ ಪಾವಿತ್ರ್ಯ ಮತ್ತು ಸ್ವಚ್ಛತೆಗೆ ಅತ್ಯಂತ ಮಹತ್ವ ಇದೆ. ಕುರಬಾನಿ ನಂತರ ಪರಿಸರ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ’ ಎಂದು ಹೇಳಿದರು.</p>.<p>ಸಾಮಾಜಿಕ ಜಾಲತಾಣಗಳ ದುರುಪಯೋಗ ಬೇಡವೆಂದು ಎಚ್ಚರಿಕೆ ನೀಡಿದ ಅವರು, ಕುರಬಾನಿಯ ಫೋಟೊ ಹಾಗೂ ವಿಡಿಯೊಗಳನ್ನು ಅನಗತ್ಯವಾಗಿ ಹಂಚಿಕೊಳ್ಳದೇ ಧಾರ್ಮಿಕ ಭಾವನೆಗಳಿಗೆ ಗೌರವ ನೀಡಬೇಕು. ಯುವಕರು ಇಸ್ಲಾಂನ ತ್ಯಾಗ, ಶಿಸ್ತು ಹಾಗೂ ಸೇವಾ ಮನೋಭಾವವನ್ನು ಅಳವಡಿಸಿಕೊಂಡು ಸಮಾಜದ ಒಳಿತಿಗಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.</p>.<p>ಪಟ್ಟಣದ ಸಂದಲ್ ಮಸೀದಿ, ಬಾಗಬಾನ್ ಮಸೀದಿ, ಮದೀನಾ ಮಸೀದಿ, ಮಕ್ಕಾ ಮಸೀದಿ, ಮೀನಾ ಮಸೀದಿ, ಅಬೂಬಕರ್ ಮಸೀದಿ, ಅಫಾತ್ ಮಸೀದಿ, ಉಮರ್ ಫಾರೂಖ್ ಮಸೀದಿ, ಮುಸ್ತಫಾ ಮಸೀದಿ, ಆಕ್ಸಾ ಮಸೀದಿ, ತಯ್ಯಬಾ ಮಸೀದಿ ಹಾಗೂ ಬಿಲಾಲ್ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಜಾಮಿಯಾ ಮಸೀದಿ ಸಮೀಪದಿಂದ ಭಕ್ತರು ತಕ್ಬೀರ್ ಘೋಷಣೆಗಳೊಂದಿಗೆ ಈದ್ಗಾ ಮೈದಾನಕ್ಕೆ ಆಗಮಿಸಿದರು.</p>.<p>ಡಾ. ಎ.ಎಂ. ಮುಲ್ಲಾ, ಡಿ.ಡಿ. ಬಾಗವಾನ್, ಅಲೀಮ್ ಮೊಮೀನ್, ಅಬ್ದುಲ್ ಗನಿ ನದಾಫ್, ಉಸ್ಮಾನ್ ಗನಿ ಮುಲ್ಲಾ, ಅಬ್ದುಲ್ ಗಫೂರ್ ಮಕಾನದಾರ್, ಮಹಿಬೂಬ ಗೊಳಸಂಗಿ, ಹುಸೇನ ಮುಲ್ಲಾ, ಸದ್ದಾಂ ಕುಂಟೋಜಿ, ಎನ್.ಬಿ. ಮುದ್ನಾಳ, ವಹಾಬ್ ಮೊಮೀನ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260529-26-1578344634</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುದ್ದೇಬಿಹಾಳ: ಕುರಬಾನಿ ಎಂದರೆ ಕೇವಲ ಪ್ರಾಣಿಯನ್ನು ಬಲಿ ಕೊಡುವುದಲ್ಲ. ತಮ್ಮ ಅಹಂಕಾರ, ಕೋಪ, ದ್ವೇಷ, ಸ್ವಾರ್ಥ ಹಾಗೂ ಕೆಟ್ಟ ಅಭ್ಯಾಸಗಳನ್ನು ಅಲ್ಲಾಹನ ಮಾರ್ಗದಲ್ಲಿ ತ್ಯಾಗ ಮಾಡುವುದೇ ನಿಜವಾದ ಕುರಬಾನಿ ಎಂದು ಜಾಮಿಯಾ ಮಸೀದಿಯ ಮೌಲಾನಾ ಆಫ್ತಾಬ್ ಹೇಳಿದರು.</p>.<p>ಪಟ್ಟಣದ ತಾಳಿಕೋಟೆ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಬಕ್ರೀದ್ ಅಂಗವಾಗಿ ಮುಸ್ಲಿಮರ ಸಾಮೂಹಿಕ ಪ್ರಾರ್ಥನೆಯ ಸಂದರ್ಭದಲ್ಲಿ ಅವರು ಮಾತನಾಡಿದರು.</p>.<p>‘ನಾವು ವರ್ಷಗಳಿಂದ ಕುರಬಾನಿ ಮಾಡುತ್ತಿದ್ದೇವೆ. ಆದರೆ ನಮ್ಮ ಜೀವನ, ನಡತೆ, ಮಾತು ಹಾಗೂ ಸ್ವಭಾವದಲ್ಲಿ ಬದಲಾವಣೆ ಆಗಿದೆಯೇ ಎಂಬುದನ್ನು ಪ್ರತಿಯೊಬ್ಬರೂ ಆತ್ಮಪರಿಶೀಲನೆ ಮಾಡಬೇಕು. ಕುರಬಾನಿಯ ನಿಜವಾದ ಅರ್ಥ ನಮ್ಮೊಳಗಿನ ಕೆಟ್ಟ ಗುಣಗಳನ್ನು ತ್ಯಜಿಸುವುದಾಗಿದೆ’ ಎಂದು ಹೇಳಿದರು.</p>.<p>ಸಮಾಜದಲ್ಲಿ ಪರಸ್ಪರ ಕ್ಷಮೆ, ಪ್ರೀತಿ ಮತ್ತು ಸಹೋದರತ್ವವನ್ನು ಬೆಳೆಸುವಂತೆ ಕರೆ ನೀಡಿದ ಅವರು, ‘ಯಾರಾದರೂ ನಮ್ಮನ್ನು ನೋಯಿಸಿದ್ದರೆ ಅವರನ್ನು ಅಲ್ಲಾಹನಿಗಾಗಿ ಕ್ಷಮಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಅದುವೇ ದೊಡ್ಡ ಕುರಬಾನಿ’ ಎಂದು ತಿಳಿಸಿದರು.</p>.<p>‘ಇಸ್ಲಾಂ ಧರ್ಮದಲ್ಲಿ ಪಾವಿತ್ರ್ಯ ಮತ್ತು ಸ್ವಚ್ಛತೆಗೆ ಅತ್ಯಂತ ಮಹತ್ವ ಇದೆ. ಕುರಬಾನಿ ನಂತರ ಪರಿಸರ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ’ ಎಂದು ಹೇಳಿದರು.</p>.<p>ಸಾಮಾಜಿಕ ಜಾಲತಾಣಗಳ ದುರುಪಯೋಗ ಬೇಡವೆಂದು ಎಚ್ಚರಿಕೆ ನೀಡಿದ ಅವರು, ಕುರಬಾನಿಯ ಫೋಟೊ ಹಾಗೂ ವಿಡಿಯೊಗಳನ್ನು ಅನಗತ್ಯವಾಗಿ ಹಂಚಿಕೊಳ್ಳದೇ ಧಾರ್ಮಿಕ ಭಾವನೆಗಳಿಗೆ ಗೌರವ ನೀಡಬೇಕು. ಯುವಕರು ಇಸ್ಲಾಂನ ತ್ಯಾಗ, ಶಿಸ್ತು ಹಾಗೂ ಸೇವಾ ಮನೋಭಾವವನ್ನು ಅಳವಡಿಸಿಕೊಂಡು ಸಮಾಜದ ಒಳಿತಿಗಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.</p>.<p>ಪಟ್ಟಣದ ಸಂದಲ್ ಮಸೀದಿ, ಬಾಗಬಾನ್ ಮಸೀದಿ, ಮದೀನಾ ಮಸೀದಿ, ಮಕ್ಕಾ ಮಸೀದಿ, ಮೀನಾ ಮಸೀದಿ, ಅಬೂಬಕರ್ ಮಸೀದಿ, ಅಫಾತ್ ಮಸೀದಿ, ಉಮರ್ ಫಾರೂಖ್ ಮಸೀದಿ, ಮುಸ್ತಫಾ ಮಸೀದಿ, ಆಕ್ಸಾ ಮಸೀದಿ, ತಯ್ಯಬಾ ಮಸೀದಿ ಹಾಗೂ ಬಿಲಾಲ್ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಜಾಮಿಯಾ ಮಸೀದಿ ಸಮೀಪದಿಂದ ಭಕ್ತರು ತಕ್ಬೀರ್ ಘೋಷಣೆಗಳೊಂದಿಗೆ ಈದ್ಗಾ ಮೈದಾನಕ್ಕೆ ಆಗಮಿಸಿದರು.</p>.<p>ಡಾ. ಎ.ಎಂ. ಮುಲ್ಲಾ, ಡಿ.ಡಿ. ಬಾಗವಾನ್, ಅಲೀಮ್ ಮೊಮೀನ್, ಅಬ್ದುಲ್ ಗನಿ ನದಾಫ್, ಉಸ್ಮಾನ್ ಗನಿ ಮುಲ್ಲಾ, ಅಬ್ದುಲ್ ಗಫೂರ್ ಮಕಾನದಾರ್, ಮಹಿಬೂಬ ಗೊಳಸಂಗಿ, ಹುಸೇನ ಮುಲ್ಲಾ, ಸದ್ದಾಂ ಕುಂಟೋಜಿ, ಎನ್.ಬಿ. ಮುದ್ನಾಳ, ವಹಾಬ್ ಮೊಮೀನ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260529-26-1578344634</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>