<p>ಮುಂಡರಗಿ: ‘ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ದೇವಾಂಗ ಜ್ಯೋತಿಯು ನಾಡಿನಾದ್ಯಂತ ಸಂಚರಿಸುತ್ತಿದ್ದು, ಅದರ ಉದ್ದೇಶವನ್ನು ಸಮಾಜದವರು ಈಡೇರಿಸಬೇಕು. ಆ ಮೂಲಕ ದೇವಾಂಗ ಜ್ಯೋತಿಗೆ ಗೌರವ ಸಲ್ಲಿಸಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿ ಅವಿನಾಶ ಗೋಡಕಿಂಡಿ ತಿಳಿಸಿದರು.</p>.<p>ಪಟ್ಟಣದ ಬನಂಕರಿ ದೇವಸ್ಥಾನದಲ್ಲಿ ಗುರುವಾರ ನಡೆದ ದೇವಾಂಗ ಜ್ಯೋತಿ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>ದಯಾನಂದ ಪುರಿ ಮಹಾಸ್ವಾಮಿ ಅವರ 36ನೇ ಪಟ್ಟಾಭಿಷೇಕ ಮಹೋತ್ಸವ ಹಾಗೂ ದೇವಾಂಗ ಜಾಗೃತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಬದಾಮಿಯ ಬನಶಂಕರಿಯಲ್ಲಿ ಮೇ 9 ಹಾಗೂ 10ರಂದು ಸಮಾರಂಭ ಜರುಗಲಿದ್ದು, ಸಮಾಜದ ಎಲ್ಲ ಬಾಂಧವರು ಸಮಾರಂಭದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.</p>.<p>ಕೃಷ್ಣಮೂರ್ತಿ ಗುಬ್ಬಿ, ನಾಗರಾಜ ಭೂತನವರ, ಕೃಷ್ಣಮೂರ್ತಿ ದೊತ್ರಗಾವಿ, ಮಲ್ಲಪ್ಪ ದೊತ್ರಗಾವಿ, ಶಂಕ್ರಪ್ಪ ಹುಳ್ಳಿ, ಸಂಗಮೇಶ ನಿಡಗುಂದಿ, ಕೃಷ್ಣಪ್ಪ ಗಡ್ಡಿ, ಬಸನಗೌಡ ಪಾಟೀಲ, ಪಕೀರಪ್ಪ ಪಂಜಿ, ಲೋಕಪ್ಪ ಧೋತ್ರಗಾವಿ, ಬಸವರಾಜ ಗೋದಿ, ಲಕ್ಷ್ಮೀ ಪಾಟೀಲ, ಲಕ್ಷ್ಮೀ ದೊತ್ರಗಾವಿ, ಪಾರ್ವತಿ ಪಂಜೀ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260329-23-3988478</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುಂಡರಗಿ: ‘ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ದೇವಾಂಗ ಜ್ಯೋತಿಯು ನಾಡಿನಾದ್ಯಂತ ಸಂಚರಿಸುತ್ತಿದ್ದು, ಅದರ ಉದ್ದೇಶವನ್ನು ಸಮಾಜದವರು ಈಡೇರಿಸಬೇಕು. ಆ ಮೂಲಕ ದೇವಾಂಗ ಜ್ಯೋತಿಗೆ ಗೌರವ ಸಲ್ಲಿಸಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿ ಅವಿನಾಶ ಗೋಡಕಿಂಡಿ ತಿಳಿಸಿದರು.</p>.<p>ಪಟ್ಟಣದ ಬನಂಕರಿ ದೇವಸ್ಥಾನದಲ್ಲಿ ಗುರುವಾರ ನಡೆದ ದೇವಾಂಗ ಜ್ಯೋತಿ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>ದಯಾನಂದ ಪುರಿ ಮಹಾಸ್ವಾಮಿ ಅವರ 36ನೇ ಪಟ್ಟಾಭಿಷೇಕ ಮಹೋತ್ಸವ ಹಾಗೂ ದೇವಾಂಗ ಜಾಗೃತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಬದಾಮಿಯ ಬನಶಂಕರಿಯಲ್ಲಿ ಮೇ 9 ಹಾಗೂ 10ರಂದು ಸಮಾರಂಭ ಜರುಗಲಿದ್ದು, ಸಮಾಜದ ಎಲ್ಲ ಬಾಂಧವರು ಸಮಾರಂಭದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.</p>.<p>ಕೃಷ್ಣಮೂರ್ತಿ ಗುಬ್ಬಿ, ನಾಗರಾಜ ಭೂತನವರ, ಕೃಷ್ಣಮೂರ್ತಿ ದೊತ್ರಗಾವಿ, ಮಲ್ಲಪ್ಪ ದೊತ್ರಗಾವಿ, ಶಂಕ್ರಪ್ಪ ಹುಳ್ಳಿ, ಸಂಗಮೇಶ ನಿಡಗುಂದಿ, ಕೃಷ್ಣಪ್ಪ ಗಡ್ಡಿ, ಬಸನಗೌಡ ಪಾಟೀಲ, ಪಕೀರಪ್ಪ ಪಂಜಿ, ಲೋಕಪ್ಪ ಧೋತ್ರಗಾವಿ, ಬಸವರಾಜ ಗೋದಿ, ಲಕ್ಷ್ಮೀ ಪಾಟೀಲ, ಲಕ್ಷ್ಮೀ ದೊತ್ರಗಾವಿ, ಪಾರ್ವತಿ ಪಂಜೀ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260329-23-3988478</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>