<p>ಮೈಸೂರು: ‘ಧಾರ್ಮಿಕ ಕಾರ್ಯಕ್ರಮಗಳು ನಮ್ಮನ್ನು ಬಲಶಾಲಿಯಾಗಿಸುತ್ತವೆ. ಸಾಮೂಹಿಕ ಪ್ರಾರ್ಥನೆಗಳು ಸನಾತನ ಧರ್ಮ ಉಳಿಸುತ್ತಿವೆ’ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.</p>.<p>ಹಿಮಾಲಯ ಪ್ರತಿಷ್ಠಾನ ಹಾಗೂ ಎಸ್ಎಸ್ಜೆಜಿ ಮತ್ತು ನಿಂಬುಜಾದೇವಿ ಅಮ್ಮನವರ ದೇವಸ್ಥಾನ ಟ್ರಸ್ಟ್ನಿಂದ ಇಲ್ಲಿನ ನಜರ್ಬಾದ್ನ ನಿಂಬುಜಾದೇವಿ ದೇವಸ್ಥಾನದಲ್ಲಿ ಭಾನುವಾರ ನಡೆದ ಶಂಕರಾಚಾರ್ಯ ಜಯಂತಿಯಲ್ಲಿ ಸಾಧಕರಿಗೆ ಶಂಕರಾಚಾರ್ಯ ಸದ್ಭಾವನಾ ಪ್ರಶಸ್ತಿ ವಿತರಿಸಿ ಮಾತನಾಡಿದರು.</p>.<p>‘ಜಯಂತಿಗಳ ಆಚರಣೆ ಮೂಲಕ ಮಹಾಪುರುಷರ ಜೀವನದ ಘಟನೆಗಳನ್ನು ತಿಳಿದುಕೊಳ್ಳಬಹುದು. ಶಂಕರ, ರಾಮಾನುಜಾಚಾರ್ಯ, ಮಧ್ವಾಚಾರ್ಯರಾದಿಯಾಗಿ ಅನೇಕ ಮಹಾಪುರುಷರು ಸಮಾಜವನ್ನು ಪರಿವರ್ತಿಸಲು, ಅಸ್ಪೃಶ್ಯತೆ ನಿವಾರಿಸಲು ಶ್ರಮಿಸಿದ್ದಾರೆ. ಅವರ ಸಂದೇಶಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಬದಲಾವಣೆ ಸಾಧ್ಯ’ ಎಂದರು.</p>.<p>ಜಯಂತಿಗಳಿಂದ ಶಕ್ತಿ: ‘ಈಚೆಗೆ ಹಿಂದೂ ಧರ್ಮ, ಸನಾತನ ಧರ್ಮ ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ. ತಿರುಪತಿ ಲಡ್ಡು ವಿವಾದ, ಶಬರಿಮಲೆ ಪ್ರವೇಶ, ಧರ್ಮಸ್ಥಳ ವಿಷಯಗಳು ಇದಕ್ಕೆ ಉದಾಹರಣೆ. ಹಿಂದೂಗಳ ಶ್ರದ್ಧಾಕೇಂದ್ರಗಳ ಮೇಲೆ ದಾಳಿ ಮಾಡುವವರನ್ನು ಸಾಮೂಹಿಕ ಪ್ರಾರ್ಥನೆ, ಜಯಂತಿಗಳ ಆಚರಣೆಯೂ ಹಿಮ್ಮೆಟ್ಟಿಸುತ್ತಿದೆ’ ಎಂದು ಹೇಳಿದರು.</p>.<p>ಆಡಳಿತ ಸೇವೆ– ಸಿ.ಎನ್.ದಿವಾಕರ್, ಸಾರ್ವಜನಿಕ ಆಡಳಿತ ಸೇವೆ– ಎಂ.ಎಸ್.ರಾಜಶ್ರೀ, ಪತ್ರಿಕಾರಂಗ– ಬಿ. ರಾಘವೇಂದ್ರ, ಸಮಾಜಸೇವೆ– ವಿ,ನಾಗರಾಜು, ಸಂಗೀತ– ಮಧುಸೂದನ ಅವರಿಗೆ ಶಂಕರಾಚಾರ್ಯ ಸದ್ಭಾವನಾ ಪ್ರಶಸ್ತಿ ನೀಡಲಾಯಿತು.</p>.<p>ವಿದ್ವಾಂಸ ಕೆ.ಅನಂತರಾಮು ಅವರು ಶಂಕರಾಚಾರ್ಯ ಫೋಟೊಗೆ ಪುಷ್ಪ ನಮನ ಸಲ್ಲಿಸಿದರು. ಸಮಾಜಸೇವಕ ಕೆ.ರಘುರಾಂ ವಾಜಪೇಯಿ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಉಪಾಧ್ಯಕ್ಷ ಜನಾರ್ಧನ ಜೆಟ್ಟಿ, ಕಾರ್ಯದರ್ಶಿ ಎಂ.ಕಿರಣ್, ಪ್ರತಿಷ್ಠಾನ ಅಧ್ಯಕ್ಷ ಎಸ್.ಅನಂತ, ಎಸ್.ನಾಗೇಶ್ ಬಾಬು ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260504-39-2082127222</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ‘ಧಾರ್ಮಿಕ ಕಾರ್ಯಕ್ರಮಗಳು ನಮ್ಮನ್ನು ಬಲಶಾಲಿಯಾಗಿಸುತ್ತವೆ. ಸಾಮೂಹಿಕ ಪ್ರಾರ್ಥನೆಗಳು ಸನಾತನ ಧರ್ಮ ಉಳಿಸುತ್ತಿವೆ’ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.</p>.<p>ಹಿಮಾಲಯ ಪ್ರತಿಷ್ಠಾನ ಹಾಗೂ ಎಸ್ಎಸ್ಜೆಜಿ ಮತ್ತು ನಿಂಬುಜಾದೇವಿ ಅಮ್ಮನವರ ದೇವಸ್ಥಾನ ಟ್ರಸ್ಟ್ನಿಂದ ಇಲ್ಲಿನ ನಜರ್ಬಾದ್ನ ನಿಂಬುಜಾದೇವಿ ದೇವಸ್ಥಾನದಲ್ಲಿ ಭಾನುವಾರ ನಡೆದ ಶಂಕರಾಚಾರ್ಯ ಜಯಂತಿಯಲ್ಲಿ ಸಾಧಕರಿಗೆ ಶಂಕರಾಚಾರ್ಯ ಸದ್ಭಾವನಾ ಪ್ರಶಸ್ತಿ ವಿತರಿಸಿ ಮಾತನಾಡಿದರು.</p>.<p>‘ಜಯಂತಿಗಳ ಆಚರಣೆ ಮೂಲಕ ಮಹಾಪುರುಷರ ಜೀವನದ ಘಟನೆಗಳನ್ನು ತಿಳಿದುಕೊಳ್ಳಬಹುದು. ಶಂಕರ, ರಾಮಾನುಜಾಚಾರ್ಯ, ಮಧ್ವಾಚಾರ್ಯರಾದಿಯಾಗಿ ಅನೇಕ ಮಹಾಪುರುಷರು ಸಮಾಜವನ್ನು ಪರಿವರ್ತಿಸಲು, ಅಸ್ಪೃಶ್ಯತೆ ನಿವಾರಿಸಲು ಶ್ರಮಿಸಿದ್ದಾರೆ. ಅವರ ಸಂದೇಶಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಬದಲಾವಣೆ ಸಾಧ್ಯ’ ಎಂದರು.</p>.<p>ಜಯಂತಿಗಳಿಂದ ಶಕ್ತಿ: ‘ಈಚೆಗೆ ಹಿಂದೂ ಧರ್ಮ, ಸನಾತನ ಧರ್ಮ ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ. ತಿರುಪತಿ ಲಡ್ಡು ವಿವಾದ, ಶಬರಿಮಲೆ ಪ್ರವೇಶ, ಧರ್ಮಸ್ಥಳ ವಿಷಯಗಳು ಇದಕ್ಕೆ ಉದಾಹರಣೆ. ಹಿಂದೂಗಳ ಶ್ರದ್ಧಾಕೇಂದ್ರಗಳ ಮೇಲೆ ದಾಳಿ ಮಾಡುವವರನ್ನು ಸಾಮೂಹಿಕ ಪ್ರಾರ್ಥನೆ, ಜಯಂತಿಗಳ ಆಚರಣೆಯೂ ಹಿಮ್ಮೆಟ್ಟಿಸುತ್ತಿದೆ’ ಎಂದು ಹೇಳಿದರು.</p>.<p>ಆಡಳಿತ ಸೇವೆ– ಸಿ.ಎನ್.ದಿವಾಕರ್, ಸಾರ್ವಜನಿಕ ಆಡಳಿತ ಸೇವೆ– ಎಂ.ಎಸ್.ರಾಜಶ್ರೀ, ಪತ್ರಿಕಾರಂಗ– ಬಿ. ರಾಘವೇಂದ್ರ, ಸಮಾಜಸೇವೆ– ವಿ,ನಾಗರಾಜು, ಸಂಗೀತ– ಮಧುಸೂದನ ಅವರಿಗೆ ಶಂಕರಾಚಾರ್ಯ ಸದ್ಭಾವನಾ ಪ್ರಶಸ್ತಿ ನೀಡಲಾಯಿತು.</p>.<p>ವಿದ್ವಾಂಸ ಕೆ.ಅನಂತರಾಮು ಅವರು ಶಂಕರಾಚಾರ್ಯ ಫೋಟೊಗೆ ಪುಷ್ಪ ನಮನ ಸಲ್ಲಿಸಿದರು. ಸಮಾಜಸೇವಕ ಕೆ.ರಘುರಾಂ ವಾಜಪೇಯಿ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಉಪಾಧ್ಯಕ್ಷ ಜನಾರ್ಧನ ಜೆಟ್ಟಿ, ಕಾರ್ಯದರ್ಶಿ ಎಂ.ಕಿರಣ್, ಪ್ರತಿಷ್ಠಾನ ಅಧ್ಯಕ್ಷ ಎಸ್.ಅನಂತ, ಎಸ್.ನಾಗೇಶ್ ಬಾಬು ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260504-39-2082127222</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>