<p>ಪಾವಗಡ: ಅಹಿಂಸೆ, ಶಾಂತಿ, ಸತ್ಯದಿಂದ ಜೀವನ ಮಾಡಬೇಕು. ಬದುಕು-ಬದುಕಲು ಬಿಡು ಎಂಬ ಸಂದೇಶದ ಮೂಲಕ ವಿಶ್ವಕ್ಕೆ ಶಾಂತಿ ಸಾರಿದ ಮಹಾನ್ ಪುರುಷ ಮಹಾವೀರ ಎಂದು ಶೈಲೇಶ್ ಜೈನ್ ತಿಳಿಸಿದರು.</p>.<p>ಪಟ್ಟಣದ ಶಿರಾರಸ್ತೆಯಲ್ಲಿ ಜೈನಸಮುದಾಯದಿಂದ ನಡೆದ ಮಹಾವೀರ ಜಯಂತಿಯಲ್ಲಿ ಅವರು ಮಾತನಾಡಿದರು.</p>.<p>ಮಹಾವೀರರ ಶಾಂತಿ ಮತ್ತು ಅಹಿಂಸೆಯ ಸಂದೇಶಗಳು ಇಂದಿನ ಸಂಘರ್ಷಮಯ ಜಗತ್ತಿಗೆ ಅತ್ಯಂತ ಪ್ರಸ್ತುತ. ವಿಶ್ವದಲ್ಲೆಡೆ ಮಹಾವೀರರ ಶಾಂತಿ ಸಂದೇಶವನ್ನು ಪಾಲಿಸಿದ್ದರೆ ಇರಾನ್–ಇಸ್ರೇಲ್, ಅಮೇರಿಕಾ ನಡುವೆ ಯುದ್ಧ ಸಂಭವಿಸುತ್ತಿರಲಿಲ್ಲ ಎಂದರು.</p>.<p>ಅಜಿತ್ ರಾಜಯ್ಯ ಮಾತನಾಡಿ, ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಅಹಿಂಸಾ ಪರಮೋ ಧರ್ಮಃ ಎಂಬ ತತ್ವದಡಿ, ಸರ್ವ ಜೀವಿಗಳ ಮೇಲೆ ದಯೆ ತೋರಲು ಕರೆ ನೀಡಿದ ಇವರು, ತಪಸ್ಸು ಮತ್ತು ತ್ಯಾಗದ ಮೂಲಕ ಮಾರ್ಗದರ್ಶನ ನೀಡಿದರು ಎಂದರು.</p>.<p>ಮಹಾವೀರ ಚಿತ್ರಕ್ಕೆ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಹೆಸರುಬೇಳೆ, ಪಾನಕ ವಿತರಿಸಲಾಯಿತು.</p>.<p>ಜೈನ ಸಮುದಾಯದ ಸುಂದರ್ ರಾಜಯ್ಯ, ವೃಷಭರಾಜ್, ಹರಿಹಂತ್ ಜೈನ್, ತರುಣ್ ಜೈನ್, ಅನಂತ ದರ್ಶನ್ ಜೈನ್, ಅಮಿತ್, ಪ್ರಫುಲ್, ಸಮ್ಮೇದ್, ಜ್ವಾಲಾ ಸುಂದರ್, ಪುನೀತಾ ಶೈಲೇಶ್, ಸವಿತಾ, ಪ್ರಫುಲ್, ರಂಜಿತ, ದರ್ಶಿತ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260401-17-278508782</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಾವಗಡ: ಅಹಿಂಸೆ, ಶಾಂತಿ, ಸತ್ಯದಿಂದ ಜೀವನ ಮಾಡಬೇಕು. ಬದುಕು-ಬದುಕಲು ಬಿಡು ಎಂಬ ಸಂದೇಶದ ಮೂಲಕ ವಿಶ್ವಕ್ಕೆ ಶಾಂತಿ ಸಾರಿದ ಮಹಾನ್ ಪುರುಷ ಮಹಾವೀರ ಎಂದು ಶೈಲೇಶ್ ಜೈನ್ ತಿಳಿಸಿದರು.</p>.<p>ಪಟ್ಟಣದ ಶಿರಾರಸ್ತೆಯಲ್ಲಿ ಜೈನಸಮುದಾಯದಿಂದ ನಡೆದ ಮಹಾವೀರ ಜಯಂತಿಯಲ್ಲಿ ಅವರು ಮಾತನಾಡಿದರು.</p>.<p>ಮಹಾವೀರರ ಶಾಂತಿ ಮತ್ತು ಅಹಿಂಸೆಯ ಸಂದೇಶಗಳು ಇಂದಿನ ಸಂಘರ್ಷಮಯ ಜಗತ್ತಿಗೆ ಅತ್ಯಂತ ಪ್ರಸ್ತುತ. ವಿಶ್ವದಲ್ಲೆಡೆ ಮಹಾವೀರರ ಶಾಂತಿ ಸಂದೇಶವನ್ನು ಪಾಲಿಸಿದ್ದರೆ ಇರಾನ್–ಇಸ್ರೇಲ್, ಅಮೇರಿಕಾ ನಡುವೆ ಯುದ್ಧ ಸಂಭವಿಸುತ್ತಿರಲಿಲ್ಲ ಎಂದರು.</p>.<p>ಅಜಿತ್ ರಾಜಯ್ಯ ಮಾತನಾಡಿ, ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಅಹಿಂಸಾ ಪರಮೋ ಧರ್ಮಃ ಎಂಬ ತತ್ವದಡಿ, ಸರ್ವ ಜೀವಿಗಳ ಮೇಲೆ ದಯೆ ತೋರಲು ಕರೆ ನೀಡಿದ ಇವರು, ತಪಸ್ಸು ಮತ್ತು ತ್ಯಾಗದ ಮೂಲಕ ಮಾರ್ಗದರ್ಶನ ನೀಡಿದರು ಎಂದರು.</p>.<p>ಮಹಾವೀರ ಚಿತ್ರಕ್ಕೆ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಹೆಸರುಬೇಳೆ, ಪಾನಕ ವಿತರಿಸಲಾಯಿತು.</p>.<p>ಜೈನ ಸಮುದಾಯದ ಸುಂದರ್ ರಾಜಯ್ಯ, ವೃಷಭರಾಜ್, ಹರಿಹಂತ್ ಜೈನ್, ತರುಣ್ ಜೈನ್, ಅನಂತ ದರ್ಶನ್ ಜೈನ್, ಅಮಿತ್, ಪ್ರಫುಲ್, ಸಮ್ಮೇದ್, ಜ್ವಾಲಾ ಸುಂದರ್, ಪುನೀತಾ ಶೈಲೇಶ್, ಸವಿತಾ, ಪ್ರಫುಲ್, ರಂಜಿತ, ದರ್ಶಿತ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260401-17-278508782</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>