ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ: 12-3-2023ರಿಂದ 18-3-2023 ರವರೆಗೆ

ಅಕ್ಷರ ಗಾತ್ರ

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)

ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಬೇಕಾದ ಸೌಲಭ್ಯ ದೊರೆತು ಹೆಚ್ಚಿನ ಫಲಿತಾಂಶವನ್ನು ಪಡೆಯುವರು. ಆದಾಯ ಕಡಿಮೆ ಇದ್ದರೂ ಸರಿಯಾಗಿ ಹಣ ನಿರ್ವಹಣೆ ಮಾಡಿದಲ್ಲಿ ತೊಂದರೆ ಇರುವುದಿಲ್ಲ. ನಿಮ್ಮ ಹಣ ವಸೂಲಿಗೆ ಬಂಧುಗಳು ಸಹಕಾರ ನೀಡುವರು. ಕೃಷಿ ಕಾರ್ಯಗಳು ಭರದಿಂದ ಸಾಗುತ್ತವೆ. ಹೊಸ ವಾಹನ ಖರೀದಿಯ ಆಸಕ್ತಿ ಇದ್ದರೂ ಹಣದ ಬಗ್ಗೆ ಆಲೋಚನೆ ಮಾಡಿ ನಿರ್ಧಾರ ಕೈಗೊಳ್ಳಿರಿ. ವಿದೇಶಕ್ಕೆ ಓದಲು ಹೋಗಿರುವ ತಾಂತ್ರಿಕ ವಿದ್ಯಾರ್ಥಿಗಳಿಗೆ ಕೆಲಸ ಸಿಗುವ ಸಾಧ್ಯತೆ ಇದೆ. ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೆ ಸ್ವಲ್ಪ ಹಿನ್ನಡೆ ಅನಿಸಿದರೂ ವ್ಯಾಪಾರದಲ್ಲಿ ನಷ್ಟವಿಲ್ಲ. ಕೈಮಗ್ಗದಲ್ಲಿ ಬಟ್ಟೆ ತಯಾರಿಸುವವರಿಗೆ ಹೆಚ್ಚು ಬೇಡಿಕೆ ಬರುತ್ತದೆ. ರೈತರಿಗೆ ಅವರು ಬೆಳೆದ ಬೆಳೆಯಿಂದ ಹೆಚ್ಚು ಆದಾಯ ಬರುತ್ತದೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ನಿಧಾನ ಗತಿ ಇರುತ್ತದೆ.

ವೃಷಭ ರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ಕಟ್ಟಡ ನಿರ್ಮಾಣ ಮಾಡುವವರಿಗೆ ಹೊಸ ಕಟ್ಟಡ ನಿರ್ಮಾಣ ಕಾರ್ಯ ದೊರೆಯುವುದು. ಧನ ಆದಾಯವು ನಿರೀಕ್ಷಿತ ಮಟ್ಟಕ್ಕೆ ಇರುತ್ತದೆ. ಚಿನ್ನ, ಬೆಳ್ಳಿ ವ್ಯಾಪಾರಿಗಳಿಗೆ ವ್ಯವಹಾರ ಹೆಚ್ಚಾಗಿ ಆದಾಯ ಹೆಚ್ಚುತ್ತದೆ. ಸ್ನೇಹ ಪರ ಸ್ವಭಾವದಿಂದಾಗಿ ವೈಯಕ್ತಿಕ ಸ್ಥಾನಮಾನಗಳು ಹೆಚ್ಚಾಗುವುದು. ಕುಟುಂಬದಲ್ಲಿ ನಿಮ್ಮ ಮಾತಿಗೆ ಹೆಚ್ಚು ಬೆಲೆಬಂದು ಗೌರವ ಹೆಚ್ಚಾಗುತ್ತದೆ. ಕೆಲವರಿಗೆ ಸ್ವಂತ ಉದ್ದಿಮೆ ಸ್ಥಾಪಿಸುವ ಆಸೆ ಕೈಗೂಡುತ್ತದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಕಿರಿಕಿರಿ ಕಂಡರೂ ಯಾವುದೇ ತೊಂದರೆಯಾಗುವುದಿಲ್ಲ. ವೃತ್ತಿಯಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಬೆಲೆ ದೊರೆಯುತ್ತದೆ. ಕೀಲು ನೋವು ಕೆಲವರಿಗೆ ಬಾಧಿಸಬಹುದು. ಆಸ್ತಿ ತಗಾದೆ ವಿಚಾರಗಳಲ್ಲಿ ನಿಮಗೆ ಸ್ವಲ್ಪ ಯಶಸ್ಸು ದೊರೆಯುತ್ತದೆ. ತೆರಿಗೆ ತಜ್ಞರಿಗೆ ಬೇಡಿಕೆ ಹೆಚ್ಚಾಗಿ ಆದಾಯವೂ ಹೆಚ್ಚುತ್ತದೆ.

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಕುಟುಂಬ ಹಾಗೂ ಸ್ನೇಹಿತರ ನಡುವಿನ ಸಂಬಂಧ ಉತ್ತಮಗೊಳ್ಳುತ್ತದೆ. ರಾಜಕೀಯ ಪಟುಗಳು ತಮ್ಮ ಅಭಿವೃದ್ಧಿಗಾಗಿ ಸಾಕಷ್ಟು ಹೋರಾಟ ನಡೆಸಬೇಕಾಗುತ್ತದೆ. ಪರಿಸ್ಥಿತಿಯನ್ನು ಅವಲೋಕಿಸಿಕೊಂಡು ಮುಂದಿನ ಹೆಜ್ಜೆ ಇಡಿರಿ. ಸಹವರ್ತಿಗಳೊಡನೆ ಸಂಯಮದಿಂದ ವರ್ತಿಸುವುದು ಅಗತ್ಯ. ಯಾವುದೇ ಕಟ್ಟುಪಾಡಿಲ್ಲದೆ ಕಾರ್ಮಿಕರೊಡನೆ ನಡೆದುಕೊಳ್ಳುವುದರಿಂದ ಕೆಲಸ ಸರಾಗವಾಗುತ್ತದೆ. ಗೃಹ ನಿರ್ಮಾಣ ಕಾರ್ಯದಲ್ಲಿ ಪ್ರಗತಿ ಕಾಣಬಹುದು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ಇರುವುದಿಲ್ಲ. ಧನ ಆದಾಯವು ಸಾಮಾನ್ಯ ಮಟ್ಟದಲ್ಲಿರುತ್ತದೆ. ವೃತ್ತಿಯಲ್ಲಿ ಪ್ರಗತಿ ಇರುತ್ತದೆ. ಕೃಷಿಕರಿಗೆ ಹೆಚ್ಚು ಆದಾಯವಿರುವುದಿಲ್ಲ. ಹಳೆಯ ಸಾಲಗಳನ್ನು ಈಗ ತೀರಿಸಿಕೊಳ್ಳಬಹುದು. ತಂದೆಯು ಕೆಲ ವಿಷಯಗಳಿಗೆ ಆಕ್ಷೇಪಣೆ ಮಾಡುತ್ತಾರೆ.

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)

ವಿನಾ ಕಾರಣ ಬಂಧುಗಳ ನಡುವೆ ವೈಮನಸ್ಯ ಬರಬಹುದು. ಮಾತನಾಡುವಾಗ ಹೆಚ್ಚು ಎಚ್ಚರವಹಿಸುವುದು ಒಳ್ಳೆಯದು. ಕಠಿಣ ಮಾತುಗಳು ಖಂಡಿತ ಬೇಡ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಶತ್ರುಗಳ ಉಪಟಳದಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಡಬೇಕಾಗುತ್ತದೆ. ಹೊಸ ಉದ್ಯಮವನ್ನು ಆರಂಭಿಸಬೇಕೆನ್ನುತ್ತಿರುವವರಿಗೆ ಸೂಕ್ತ ಹಣಕಾಸಿನ ಸಹಾಯ ಬ್ಯಾಂಕ್‌ಗಳಿಂದ ದೊರೆಯುತ್ತದೆ. ಕ್ರೀಡಾಪಟುಗಳಿಗೆ ಅಭ್ಯಾಸದ ಕೊರತೆಯಿಂದ ಸ್ವಲ್ಪಮಟ್ಟಿನ ಹಿನ್ನಡೆ ಕಾಡಬಹುದು. ನಿಮ್ಮ ಮೇಲುಸ್ತುವಾರಿಯಲ್ಲಿ ಕೆಲವು ಕೆಲಸಗಳು ಸರಾಗವಾಗಿ ಆಗುತ್ತವೆ. ವ್ಯವಹಾರದಲ್ಲಿ ಪಾಲುದಾರರನ್ನು ಸೇರಿಸಿಕೊಳ್ಳುವಾಗ ಸರಿಯಾಗಿ ಅವಲೋಕನ ಮಾಡಿರಿ. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ ಇರುತ್ತದೆ. ಆರೋಗ್ಯದಲ್ಲಿ ಏನೂ ವ್ಯತ್ಯಾಸ ಇರುವುದಿಲ್ಲ.

ಸಿಂಹ ರಾಶಿ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ಕೆಲವು ಸರ್ಕಾರಿ ಅಧಿಕಾರಿಗಳಿಗೆ ಕೆಲಸದ ಒತ್ತಡ ಕಡಿಮೆಯಾಗುತ್ತದೆ. ಧನ ಆದಾಯವು ಸ್ವಲ್ಪ ಮಂದಗತಿಯಲ್ಲಿರುತ್ತದೆ. ಬಂಧುಗಳ ಬಗ್ಗೆ ನಿಮ್ಮ ಮನಸ್ಸಿನಲ್ಲಿರುವ ತಪ್ಪು ಕಲ್ಪನೆಗಳನ್ನು ನಿವಾರಣೆ ಮಾಡಿಕೊಳ್ಳಿರಿ. ವಿದೇಶಿ ವ್ಯವಹಾರ ಮಾಡುವವರಿಗೆ ಅಭಿವೃದ್ಧಿ ಇರುತ್ತದೆ ಹಾಗೂ ವ್ಯವಹಾರ ವಿಸ್ತರಣೆ ಆಗುತ್ತದೆ. ಯಂತ್ರೋಪಕರಣಗಳನ್ನು ಮಾರಾಟ ಮಾಡುವ ಸಂಸ್ಥೆಯನ್ನು ನಡೆಸುತ್ತಿರುವವರಿಗೆ ಹೆಚ್ಚಿನ ವ್ಯವಹಾರವಿರುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ಆಸಕ್ತಿ ಮೂಡುತ್ತದೆ. ನೀವು ಕೊಳ್ಳಬೇಕೆಂದಿದ್ದ ಸ್ಥಿರಾಸ್ತಿಯನ್ನು ಈಗ ಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಸ್ವಲ್ಪಮಟ್ಟಿನ ಹಿನ್ನಡೆ ಕಾಡಬಹುದು. ಕೆಲವರಿಗೆ ತಲೆನೋವು ಬಾಧಿಸಬಹುದು. ಸಂಗಾತಿಯು ನಿಮ್ಮ ಮೇಲೆ ಕೋಪಗೊಳ್ಳಬಹುದು, ತಾಳ್ಮೆ ಅದಕ್ಕೆ ಉತ್ತರ. ಕೃಷಿಕರಿಗೆ ಬಿಡುವಿಲ್ಲದ ಕೆಲಸಗಳಿರುತ್ತವೆ, ಹಾಗೆಯೇ ಆದಾಯವೂ ಇರುತ್ತದೆ.

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಉದ್ಯೋಗವನ್ನು ಅರಸುತ್ತಿರುವವರಿಗೆ ಹೊಸ ರೀತಿಯ ಮಾರ್ಗಗಳು ಗೋಚರಿಸುತ್ತವೆ. ಸಂಸಾರದಲ್ಲಿ ನಿಮ್ಮ ನಿರ್ಣಯಗಳಿಗೆ ಸಕಾರಾತ್ಮಕವಾದ ಬೆಂಬಲ ದೊರೆಯುತ್ತದೆ. ಸ್ವತ್ತುಗಳ ಮಾರಾಟದ ವಿಷಯದಲ್ಲಿ ಬಂಧುಗಳ ಕಿರಿಕಿರಿ ಎದುರಾಗಬಹುದು. ನಿಮ್ಮಲ್ಲಿರುವ ಅಪನಂಬಿಕೆ ನಿಮ್ಮ ಏಳಿಗೆಗೆ ಅಡ್ಡಿಯಾಗಬಹುದು. ಮಕ್ಕಳಿಗಾಗಿ ಒಡವೆ ಕೊಳ್ಳುವ ಸಂದರ್ಭವಿದೆ. ಆಸ್ತಿ ವಿಚಾರದಲ್ಲಿ ಬಂಧುಗಳ ಅಥವಾ ಸಹೋದರರ ಜೊತೆ ನ್ಯಾಯಾಲಯದ ಹೊರಗೆ ಹೊಂದಾಣಿಕೆಯನ್ನು ಮಾಡಿಕೊಳ್ಳುವುದು ಒಳ್ಳೆಯದು. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶ ದೊರೆಯುವ ಸಂದರ್ಭವಿದೆ. ಕೃಷಿ ಉತ್ಪಾದನೆ ಹೆಚ್ಚುತ್ತದೆ. ವಿದೇಶಿ ವ್ಯವಹಾರವನ್ನು ಮಾಡುವವರಿಗೆ ಅನುಕೂಲವಿರುತ್ತದೆ.

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)

ವಿದ್ಯಾರ್ಥಿಗಳಿಗೆ ಮೋಜು ಮಸ್ತಿಯತ್ತ ಗಮನ ಹರಿಯುವುದು, ಈ ಬಗ್ಗೆ ಸ್ವಲ್ಪ ಎಚ್ಚರಿಕೆ ವಹಿಸಿರಿ. ಮೆಡಿಕಲ್ ವಿದ್ಯಾರ್ಥಿಗಳು ಹೆಚ್ಚು ಶ್ರಮ ಹಾಕುವುದು ಅಗತ್ಯ. ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವಕಾಶ ದೊರೆಯುತ್ತದೆ. ಕೆಲವು ಹಿರಿಯ ಅಧಿಕಾರಿಗಳ ಸಹಕಾರದಿಂದ ಕೆಲವೊಂದು ಕೆಲಸಗಳು ಸರಾಗವಾಗಿ ನಡೆಯುತ್ತದೆ. ಸ್ನೇಹಿತರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ದೊಡ್ಡ ಸಹಕಾರ ಸಿಗುತ್ತದೆ. ಬೇರೆಯವರ ಮೇಲೆ ಆಪಾದನೆ ಮಾಡಲು ಹೋಗಿ ನೀವೇ ಸಾಕಷ್ಟು ಮುಜುಗರಕ್ಕೆ ಸಿಲುಕುವಿರಿ. ವ್ಯವಸಾಯಗಾರರಿಗೆ ಅವರ ಬೆಳೆಗೆ ಹೆಚ್ಚಿನ ಬೆಲೆ ದೊರೆಯುವ ಸಂದರ್ಭವಿದೆ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶದ ಯೋಗವಿದೆ. ನರ ದೌರ್ಬಲ್ಯ ಇರುವವರು ಹೆಚ್ಚು ಎಚ್ಚರಿಕೆಯನ್ನು ವಹಿಸುವುದು ಒಳ್ಳೆಯದು. ಧನ ಆದಾಯವು ಮಂದಗತಿಯಲ್ಲಿ ಇರುತ್ತದೆ.

ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)

ಸಹೋದ್ಯೋಗಿಗಳೊಡನೆ ಅಥವಾ ಆಪ್ತರೊಡನೆ ವ್ಯವಹಾರಗಳು ಖಂಡಿತಾ ಬೇಡ. ಅದು ನಿಷ್ಠುರಕ್ಕೆ ಕಾರಣವಾಗುತ್ತದೆ. ಕೆಲವರಿಗೆ ತಮ್ಮ ವ್ಯವಹಾರಗಳನ್ನು ಮಕ್ಕಳಿಗೆ ಒಪ್ಪಿಸಿ ನಿಶ್ಚಿಂತೆಯಿಂದ ಇರುವ ಅವಕಾಶವಿದೆ. ತಮ್ಮ ವೃತ್ತಿಯನ್ನು ಬದಲಾವಣೆ ಮಾಡಲಿಚ್ಛಿಸುವವರು ಈಗ ಮಾಡಿಕೊಳ್ಳಬಹುದು. ಧನ ಆದಾಯವು ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ಇರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಮುನ್ನಡೆ ಕಾಣಬಹುದು. ಆಸ್ತಿ ವಿಚಾರದಲ್ಲಿ ಇದ್ದ ಗೊಂದಲಗಳು ಸ್ವಲ್ಪಮಟ್ಟಿಗೆ ನಿವಾರಣೆಯಾಗಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶವನ್ನು ಪಡೆಯುವ ಯೋಗವಿದೆ. ಮೂಳೆ ನೋವು ಇರುವವರು ಸ್ವಲ್ಪಎಚ್ಚರ ವಹಿಸಿರಿ. ಬಂಧುಗಳ ನಡುವೆ ಉತ್ತಮ ಹೊಂದಾಣಿಕೆಯನ್ನು ಕಾಣಬಹುದು. ವ್ಯವಹಾರಗಳಲ್ಲಿ ಅನಿರೀಕ್ಷಿತವಾಗಿ ಉನ್ನತ ಸ್ಥಾನ ದೊರೆಯುತ್ತದೆ. ವೃತ್ತಿಯಲ್ಲಿ ಅಂತಹ ವ್ಯತ್ಯಾಸವಿರುವುದಿಲ್ಲ.

ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1 )

ನಿಮ್ಮ ವ್ಯಾಪಾರ ವ್ಯವಹಾರಗಳಿಗೆ ವಿದೇಶಿ ಸಂಪರ್ಕ ದೊರೆತು ಉತ್ತಮ ಸಾಧನೆ ಮಾಡುವ ಯೋಗವಿದೆ. ಅನ್ವೇಷಣೆಯ ಸ್ವಭಾವವು ಹೊಸ ತಿರುವು ಪಡೆದು ನಿಮ್ಮನ್ನು ಹೊಸ ದಿಕ್ಕಿನತ್ತ ಕರೆದೊಯ್ಯುತ್ತದೆ. ವ್ಯವಹಾರಗಳಲ್ಲಿ ಉತ್ತಮ ಫಲಿತಾಂಶವನ್ನು ನೀವು ಕಾಣಬಹುದು. ಅದಿರು ವ್ಯಾಪಾರಿಗಳಿಗೆ ಬೇಕಾಗಿದ್ದ ಪರವಾನಗಿ ದೊರೆಯುತ್ತದೆ. ನಿಮ್ಮ ನಂಬಿಕೆಗಳನ್ನು ಪ್ರತಿಪಾದಿಸಲು ಯಾವುದೇ ಅಂಜಿಕೆ ಬೇಡ. ನಿಮ್ಮ ಉದಾತ್ತ ಚಿಂತನೆಯ ಬಗ್ಗೆ ಸಮಾಜದಿಂದ ಗೌರವ ಸಿಗುತ್ತದೆ. ಹಣದ ಒಳಹರಿವು ಮಧ್ಯಮ ಗತಿಯಲ್ಲಿರುತ್ತದೆ. ವಿದೇಶಿ ವಿದ್ಯಾಭ್ಯಾಸವನ್ನು ಮಾಡಬೇಕೆಂದಿರುವವರಿಗೆ ಸೂಕ್ತ ವ್ಯವಸ್ಥೆಗಳು ಆಗುತ್ತವೆ. ಹರಿತವಾದ ಆಯುಧಗಳನ್ನು ಬಳಸುವಾಗ ಬಹಳ ಎಚ್ಚರವಹಿಸಿರಿ. ಸಂಗಾತಿ ಕಡೆಯಿಂದ ನಿಮಗೆ ಧನ ಸಹಾಯ ದೊರೆಯುತ್ತದೆ.

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ನಿಮ್ಮ ಒಳ್ಳೆಯತನ ದುರುಪಯೋಗವಾಗದಂತೆ ಎಚ್ಚರವಹಿಸಿರಿ. ಇಲಾಖೆ ಪರೀಕ್ಷೆ ತೆಗೆದುಕೊಳ್ಳುವವರಿಗೆ ಉತ್ತಮ ಫಲಿತಾಂಶ ಸಿಗುವ ಸಾಧ್ಯತೆ ಇದೆ. ತಮ್ಮ ಪ್ರತಿಷ್ಠೆಗಾಗಿ ಕೆಲವರು ನಿಮ್ಮ ಜೊತೆ ಹೊಂದಾಣಿಕೆಯನ್ನು ಮಾಡಿಕೊಳ್ಳುವರು. ಮನಸ್ಸಿಗೆ ಮುದ ನೀಡುವ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ನಿಮ್ಮ ವ್ಯವಹಾರದಲ್ಲಿನ ಲಾಭಗಳನ್ನು ವ್ಯವಹಾರದ ಅಭಿವೃದ್ಧಿಗಾಗಿ ಬಳಸಿರಿ. ಒಳಹರಿವು ಸಾಮಾನ್ಯ ಗತಿಯಲ್ಲಿರುತ್ತದೆ. ವಿದೇಶದಲ್ಲಿರುವವರು ಸ್ಥಿರಾಸ್ತಿಗಳನ್ನು ಮಾಡಿಕೊಳ್ಳಬಹುದು. ಕ್ರೀಡಾಪಟುಗಳಿಗೆ ಉತ್ತಮ ಸಾಧನೆ ಮಾಡಲು ತರಬೇತಿ ದೊರೆಯುತ್ತದೆ. ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತಯಾರಿಸುವವರಿಗೆ ಮತ್ತು ಮಾರಾಟ ಮಾಡುವವರಿಗೆ ಉತ್ತಮ ಬೆಳವಣಿಗೆ ಇರುತ್ತದೆ. ಧಾರ್ಮಿಕ ವಿಚಾರಗಳಲ್ಲಿ ಹೆಚ್ಚು ಆಸಕ್ತಿ ಮೂಡುತ್ತದೆ.

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ವಿದ್ಯಾರ್ಥಿಗಳು ಸ್ವಲ್ಪ ಶ್ರಮಪಟ್ಟಲ್ಲಿ ನಿರೀಕ್ಷೆಗೆ ಮೀರಿದ ಫಲಿತಾಂಶವನ್ನು ಪಡೆಯಬಹುದು. ಬಹಳ ದಿನದಿಂದ ನೀವು ಅಪೇಕ್ಷಿಸುತ್ತಿದ್ದ ವಸ್ತುವೊಂದು ನಿಮಗೆ ದೊರೆಯುತ್ತದೆ. ಧನ ಆದಾಯವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ಆಸ್ತಿ ಮಾಡುವ ವಿಚಾರದಲ್ಲಿ ಮುನ್ನಡೆಯನ್ನು ಕಾಣಬಹುದು. ವ್ಯಾಪಾರ ವ್ಯವಹಾರಗಳಲ್ಲಿ ಲಾಭವಿರುತ್ತದೆ. ಅನಿರೀಕ್ಷಿತವಾಗಿ ಕೆಲವು ಸಂಘ ಸಂಸ್ಥೆಗಳ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾದ ಸಂದರ್ಭ ಬರುತ್ತದೆ. ಯುವಕರ ಉಡಾಫೆ ಮಾತುಗಳು ಅವರಿಗೆ ಉರುಳಾಗುತ್ತವೆ. ಸಂಗಾತಿ ಕಡೆಯಿಂದ ಆರ್ಥಿಕ ಸಹಕಾರ ದೊರೆಯುವ ಸಂದರ್ಭವಿದೆ. ಅದಿರು ವ್ಯಾಪಾರಿಗಳಿಗೆ ಅನಿರೀಕ್ಷಿತ ಪರವಾನಗಿಗಳು ದೊರೆತು ಗಣಿಗಾರಿಕೆ ಮುಂದುವರೆಯುತ್ತದೆ. ಒಡವೆ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಿರುತ್ತದೆ.

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ

ಹಂಗಾಮಿ ವೃತ್ತಿಯಲ್ಲಿರುವ ಕೆಲವರಿಗೆ ವೃತ್ತಿ ಕಾಯಂ ಆಗುವ ಸಂದರ್ಭವಿದೆ. ಅವಿವಾಹಿತರಿಗೆ ವಿವಾಹ ಸಂಬಂಧ ಒದಗಿಬರುತ್ತದೆ. ವಿದೇಶದಲ್ಲಿ ಕೆಲಸ ಮಾಡುತ್ತಿರುವ ಕೆಲವರಿಗೆ ಆದಾಯ ಹೆಚ್ಚುತ್ತದೆ. ಹಿರಿಯ ವ್ಯಕ್ತಿಗಳಿಗೆ ಅಗೌರವ ತೋರಿಸುವುದು ನಿಮಗೆ ಹಿನ್ನಡೆ ತರುತ್ತದೆ. ಒಡವೆ ಕೊಳ್ಳಲು ಸಾಕಷ್ಟು ಹಣ ಖರ್ಚು ಮಾಡುವಿರಿ. ಓದು ಅಥವಾ ಉದ್ಯೋಗ ಎಂಬ ದ್ವಂದ್ವ ಬರುವ ಸಾಧ್ಯತೆ ಇದೆ. ಸರಿಯಾದ ಆಯ್ಕೆಯನ್ನು ಮಾಡಿಕೊಳ್ಳಿರಿ. ಬಂಧುಗಳೊಡನೆ ಹೊಂದಾಣಿಕೆ ಮಾಡಿಕೊಳ್ಳುವುದು ನಿಮಗೆ ಅತಿ ಅನಿವಾರ್ಯವಾಗಬಹುದು. ನಿರೀಕ್ಷಿಸಿದ ಆಸ್ತಿಯನ್ನು ಮಾಡುವ ಯೋಗವಿದೆ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶ ಇರುತ್ತದೆ. ಕಾಲಿನ ತೊಂದರೆ ಕಾಣಿಸಬಹುದು. ಸಂಗಾತಿಯ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ಕೆಲವರಿಗೆ ಶೀತ ಬಾಧೆ ಕಾಡಬಹುದು. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT