ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ: 21–08–2022 ರಿಂದ 27-8-2022ರವರೆಗೆ

ಅಕ್ಷರ ಗಾತ್ರ

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)

ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಹೈನುಗಾರಿಕೆ ಮಾಡುವವರಿಗೆ ಉತ್ಪತ್ತಿ ಜಾಸ್ತಿಯಾಗುತ್ತದೆ. ಪಶು ಆಹಾರಗಳನ್ನು ತಯಾರಿಸಿ ಮಾರಾಟ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಮಾತಿನಲ್ಲಿ ಮೃದುತ್ವವಿದ್ದರೂ ಅದರ ಕಠಿಣತೆ ಜನರಿಗೆ ಅರ್ಥವಾಗಿ ದ್ವಂದ್ವಾರ್ಥಕ್ಕೆ ಕಾರಣವಾಗುತ್ತದೆ. ಆಭರಣ ತಯಾರಿಸುವವರಿಗೆ ಹೆಚ್ಚು ಬೇಡಿಕೆ ಬರುತ್ತದೆ. ವಿದ್ಯಾರ್ಥಿಗಳಿಗೆ ಬಹಳ ಸಾಧನೆ ಮಾಡುವ ಕಾಲ. ರಕ್ತ ಸಂಬಂಧಿ ಕಾಯಿಲೆಗಳು ಅಥವಾ ನರದೌರ್ಬಲ್ಯ ಇರುವವರು ಎಚ್ಚರ ವಹಿಸಿರಿ. ಸಂಗಾತಿ ಮಾಡುವ ವಿಪರೀತ ಖರ್ಚು ನಿಮ್ಮನ್ನು ಚಿಂತೆಗೀಡುಮಾಡುತ್ತದೆ. ಪಿತ್ರಾರ್ಜಿತ ಆಸ್ತಿಯಿಂದ ಆದಾಯ ಪಡೆಯಬಹುದು. ಉದ್ಯೋಗದಲ್ಲಿ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಉದ್ದಿಮೆಗಳಿಗೆ ಕೆಲಸಗಾರರನ್ನು ಒದಗಿಸುವ ಸಂಸ್ಥೆಗಳಿಗೆ ಹೆಚ್ಚು ಬೇಡಿಕೆ ಬರುತ್ತದೆ.

ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ಅವಿವಾಹಿತರಿಗೆ ಕಂಕಣ ಬಲದ ಯೋಗವಿದೆ. ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುವ ಯೋಗವಿದೆ. ಹಣದ ಒಳಹರಿವು ನಿಮ್ಮ ಅವಶ್ಯಕತೆಯನ್ನು ಪೂರೈಸುತ್ತದೆ. ದಿನಸಿ ವ್ಯಾಪಾರದಲ್ಲಿ ಪ್ರಗತಿಯನ್ನು ಕಾಣಬಹುದು. ವೈಯಕ್ತಿಕ ವಿಷಯಗಳ ಬಗ್ಗೆ ಹೆಚ್ಚು ನಿಗಾವಹಿಸುವುದು ಬಹಳ ಉತ್ತಮ. ನಿಮ್ಮ ಹಿರಿಯರ ಕನಸಿನ ಯೋಜನೆಯೊಂದನ್ನು ಪ್ರಾರಂಭ ಮಾಡಲು ಆಲೋಚನೆಯ ಮಾಡುವಿರಿ. ಕೃಷಿಕರು ದಲ್ಲಾಳಿಗಳಿಂದ ಮೋಸ ಹೋಗುವ ಸಾಧ್ಯತೆಗಳಿವೆ, ಎಚ್ಚರವಹಿಸಿರಿ. ಆತ್ಮೀಯರೊಂದಿಗೆ ವ್ಯವಹಾರಗಳ ಬಗ್ಗೆ ಚರ್ಚೆ ನಡೆಸಿ ಕೆಲ ನಿರ್ಧಾರಗಳ ಪರಿಶೀಲನೆ ಮಾಡುವಿರಿ. ವೃತ್ತಿಯ ಸ್ಥಳದಲ್ಲೇ ನಿಮ್ಮ ನಿರ್ಧಾರಗಳನ್ನು ಜಾರಿಮಾಡಲು ಮೇಲಧಿಕಾರಿಗಳ ಸಹಾಯ ದೊರೆಯುತ್ತದೆ. ಹಣ ಹೂಡಿಕೆ ವಿಚಾರದಲ್ಲಿ ನಿಮ್ಮ ನಿರ್ಧಾರ ಸರಿಯಾಗಿರುತ್ತದೆ.

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಮನೆಯವರೊಂದಿಗೆ ತೀರ್ಥಯಾತ್ರೆ ಹೋಗಲು ಚಿಂತನೆ ನಡೆಸುವಿರಿ. ರಾಜಕಾರಣಿಗಳಿಗೆ ಹೆಚ್ಚು ಸಮಯ ತಮ್ಮ ಕ್ಷೇತ್ರದಲ್ಲಿ ಕಳೆಯಬೇಕಾದ ಅನಿವಾರ್ಯವಿರುತ್ತದೆ. ಹಣದ ಒಳಹರಿವು ನಿರೀಕ್ಷೆಯಷ್ಟು ಇರುತ್ತದೆ. ಒಡಹುಟ್ಟಿದವರಿಂದ ನಿಮಗೆ ಸಹಕಾರ ದೊರೆಯುತ್ತದೆ. ವಾಣಿಜ್ಯ ಅಥವಾ ಆರ್ಥಿಕ ಒಪ್ಪಂದಗಳನ್ನು ಮಾಡಿಕೊಳ್ಳುವಾಗ ಅದರ ವಿವರ ತಿಳಿದು ಮಾಡಿರಿ. ರಾಸಾಯನಿಕ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವವರಿಗೆ ವ್ಯವಹಾರ ವಿಸ್ತರಿಸುತ್ತದೆ. ವಿದೇಶಿ ಧನವಿನಿಮಯದ ವ್ಯವಹಾರವನ್ನು ಮಾಡುವವರಿಗೆ ಲಾಭವಿರುತ್ತದೆ. ವಿದೇಶದಲ್ಲಿ ವ್ಯಾಪಾರ ವ್ಯವಹಾರಗಳನ್ನು ಆರಂಭಿಸಬೇಕೆಂದು ಆಶಿಸುತ್ತಿರುವವರಿಗೆ ಅವಕಾಶಗಳು ದೊರೆಯುತ್ತವೆ. ಉದ್ಯೋಗದಲ್ಲಿ ಇದ್ದ ಗೋಜಲುಗಳು ಈಗ ನಿವಾರಣೆಯಾಗುತ್ತವೆ.

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)

ಈ ವಾರ ಸ್ವಲ್ಪ ಆನಂದದಾಯಕವಾಗಿರುತ್ತದೆ. ಹಣದ ಒಳಹರಿವು ವೆಚ್ಚಕ್ಕೆ ಸರಿ ಹೋಗುವಷ್ಟು ಇದ್ದೇ ಇರುತ್ತದೆ. ಹೈನುಗಾರಿಕೆಯವರಿಗೆ ಹಾಲಿನ ಇಳುವರಿಯಲ್ಲಿ ಸ್ವಲ್ಪ ಕಡಿಮೆಯಾಗಬಹುದು. ಕೆಲವರಿಗೆ ಉದ್ಯೋಗದಲ್ಲಿ ಹೆಚ್ಚು ಓಡಾಟವಿರುತ್ತದೆ. ಆರ್ಥಿಕ ಸ್ಥಿರತೆಯ ಬಗ್ಗೆ ಗಮನ ಕೊಡಿರಿ. ದೀರ್ಘಕಾಲೀನ ಹೂಡಿಕೆಯ ಬಗ್ಗೆ ತಜ್ಞರೊಡನೆ ಅಭಿಪ್ರಾಯ ಪಡೆದು ಮುನ್ನಡೆಯುವುದು ಉತ್ತಮ. ನಾಟ್ಯ ಪ್ರವೀಣರಿಗೆ ಹೆಚ್ಚು ಅವಕಾಶಗಳು ದೊರೆತು ಹೆಚ್ಚು ಧನ ಸಂಪಾದನೆ ಆಗುತ್ತದೆ. ವಿದ್ಯಾರ್ಥಿಗಳಿಗೆ ಸ್ವಲ್ಪ ಹಿನ್ನಡೆ ಆಗಬಹುದು. ಭೂ ವ್ಯವಹಾರ ಮಾಡುವವರು ತಮ್ಮ ಪಾಲಿನ ಕಮಿಷನ್ ಬಗ್ಗೆ ಸರಿಯಾಗಿ ಮಾತನಾಡಿಕೊಳ್ಳುವುದು ಉತ್ತಮ. ಕೌಟುಂಬಿಕ ವಿಷಯಗಳ ಬಗ್ಗೆ ತಂದೆಯ ಸಲಹೆ ಉತ್ತಮವಾಗಿರುತ್ತದೆ. ಅನಾರೋಗ್ಯ ಪೀಡಿತರಿಗೆ ಆರೋಗ್ಯ ಸುಧಾರಿಸುವ ಎಲ್ಲಾ ಸೂಚನೆಗಳಿವೆ.

ಸಿಂಹ ರಾಶಿ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ಮೇಧಾವಿ ಜನರ ಸಂಪರ್ಕದಿಂದ ಕೆಲಸ ಕಾರ್ಯಗಳು ಸುಲಭವಾಗುತ್ತದೆ. ಯಂತ್ರಗಳ ಬಿಡಿ ಭಾಗಗಳನ್ನು ತಯಾರಿಸಿ ಮಾರಾಟ ಮಾಡುವವರಿಗೆ ವ್ಯವಹಾರ ಹೆಚ್ಚುತ್ತದೆ. ಉದ್ಯೋಗದಲ್ಲಿರುವ ಬಾಕಿ ಕೆಲಸಗಳನ್ನು ಪೂರ್ಣಗೊಳಿಸಲು ಸಾಕಷ್ಟು ಪ್ರಯತ್ನ ಪಡುವಿರಿ. ವ್ಯಾಪಾರ-ವ್ಯವಹಾರದ ಆದಾಯದಲ್ಲಿ ಸ್ವಲ್ಪಮಟ್ಟಿನ ಏರಿಕೆಯನ್ನು ಕಾಣಬಹುದು. ಕಟ್ಟಡ ನಿರ್ಮಾಣಕಾರರಿಗೆ ಹೆಚ್ಚಿನ ಸಂಪಾದನೆ ಇರುತ್ತದೆ. ಹೊಸ ನಿರ್ಮಾಣ ಗುತ್ತಿಗೆ ದೊರೆಯುವ ಸಾಧ್ಯತೆ ಇದೆ. ಕೋರ್ಟು-ಕಚೇರಿ ವ್ಯವಹಾರಗಳು ರಾಜಿ ಸಂಧಾನದ ಮೂಲಕ ಪರಿಹಾರವಾಗಬಹುದು. ಅದಿರು ಉತ್ಪಾದಕರಿಗೆ ಹೆಚ್ಚಿನ ಉತ್ಪಾದನಾ ಬೇಡಿಕೆ ಬರುತ್ತದೆ. ಕಲ್ಲು ಗಣಿಗಾರಿಕೆಯವರಿಗೆ ಬೇಕಾದ ಸರ್ಕಾರಿ ಆದೇಶ ಪತ್ರಗಳು ದೊರೆಯುತ್ತವೆ.

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಏನನ್ನಾದರೂ ಸಾಧಿಸಬೇಕೆನ್ನುವ ನಿಮಗೆ ಆತ್ಮಸ್ಥೈರ್ಯದ ಕೊರತೆ ಕಾಣುತ್ತದೆ. ಹಣದ ಒಳ ಹರಿವು ಮಂದಗತಿಯಲ್ಲಿ ಇರುತ್ತದೆ. ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆಗಳಿವೆ. ರಾಜಕೀಯ ವ್ಯಕ್ತಿಗಳ ಸಂಪರ್ಕ ದೊರೆಯುವ ಸಾಧ್ಯತೆ ಇದೆ. ನೀವು ರೂಪಿಸಿದ ಷಡ್ಯಂತ್ರವೊಂದು ನಿಮಗೆ ತಿರುಗುಬಾಣವಾಗುವ ಸಾಧ್ಯತೆಗಳಿವೆ. ಗರ್ಭಿಣಿಯರು ಹೆಚ್ಚು ಎಚ್ಚರದಿಂದಿರುವುದು ಒಳ್ಳೆಯದು. ಸಂಗಾತಿಯ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ಕಾನೂನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮುನ್ನಡೆ ಇರುತ್ತದೆ. ಮನೆಗೆ ಕೆಲವು ಅಲಂಕಾರಿಕ ವಸ್ತುಗಳನ್ನು ಕೊಳ್ಳುವಿರಿ. ಆಭರಣಗಳ ಸಗಟು ವ್ಯಾಪಾರಗಾರರಿಗೆ ಹೆಚ್ಚು ವ್ಯಾಪಾರವಾಗಿ ಲಾಭ ಹೆಚ್ಚುತ್ತದೆ. ಅಜೀರ್ಣದಿಂದ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ.

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)

ವೃತ್ತಿಯಲ್ಲಿ ವರ್ಗಾವಣೆ ಮಾಡಿಸಿಕೊಳ್ಳುವ ವಿಚಾರದಲ್ಲಿ ಹಿನ್ನಡೆಯಾಗುತ್ತದೆ. ಕೇಟರಿಂಗ್ ಸೇವೆಗಳನ್ನು ಮಾಡುವವರ ವ್ಯವಹಾರ ವಿಸ್ತರಣೆಯಾಗಿ ಆದಾಯ ಹೆಚ್ಚುತ್ತದೆ. ಷೇರು ವ್ಯವಹಾರಗಳಲ್ಲಿ ಹಣ ತೊಡಗಿಸುವ ಮುನ್ನ ಆಲೋಚನೆ ಮಾಡಿರಿ. ಜಮೀನು ಮಾರಾಟ ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆಯನ್ನು ಕಾಣಬಹುದು. ಸಂಸಾರದಲ್ಲಿ ಹೆಚ್ಚಿನ ಸಂಘರ್ಷಗಳನ್ನು ಕಾಣಬಹುದು. ಹಣದ ಒಳಹರಿವು ನಿಧಾನಗತಿಯಲ್ಲಿ ಇರುತ್ತದೆ. ಉನ್ನತ ಹುದ್ದೆಯಲ್ಲಿರುವವರು ಹಣ ವರ್ಗಾವಣೆ ವಿಚಾರದಲ್ಲಿ ಮುಜುಗರಕ್ಕೆ ಒಳಗಾಗುವರು. ಉದ್ದಿಮೆದಾರರು ಕಾರ್ಮಿಕರ ಬೇಡಿಕೆಗಳನ್ನು ಸ್ವಲ್ಪ ಮಟ್ಟಿಗೆ ಈಡೇರಿಸಿ ಅವರನ್ನು ತಮ್ಮಲ್ಲೇ ಉಳಿಸಿಕೊಳ್ಳುವುದು ಉತ್ತಮ. ಆಮದು ಮತ್ತು ರಫ್ತು ವ್ಯವಹಾರಗಳನ್ನು ಮಾಡುವವರಿಗೆ ಉತ್ತೇಜನ ದೊರೆಯುತ್ತದೆ.

ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)

ನಿಮ್ಮ ಕೆಲವೊಂದು ವೈಯಕ್ತಿಕ ಆಸೆ-ಆಕಾಂಕ್ಷೆಗಳು ಪೂರ್ಣಗೊಳ್ಳಬಹುದು. ನಿವೃತ್ತ ಉಪಾಧ್ಯಾಯರಿಗೆ ಮನೆಯ ಪಾಠಮಾಡುವ ಅವಕಾಶಗಳು ಒದಗಿ ಬರುತ್ತವೆ. ಹಾಲಿನ ಪದಾರ್ಥಗಳ ಉತ್ಪಾದಕರಿಗೆ ಬೇಡಿಕೆ ಹೆಚ್ಚುತ್ತದೆ. ಉನ್ನತ ಹುದ್ದೆಯಿಂದ ಮನಸ್ಸಿಗೆ ಖುಷಿಗೆ ಇದ್ದರೂ ಕೆಲಸದ ಒತ್ತಡ ಬೇಸರವೆನಿಸುತ್ತದೆ. ಗುತ್ತಿಗೆ ಕೆಲಸಗಾರರಿಗೆ ಶ್ರಮಕ್ಕೆ ತಕ್ಕ ಫಲ ಇರುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆ ಮಾಡುವ ಯೋಗವಿದೆ. ನಿಂತಿದ್ದ ವಿದ್ಯೆಯನ್ನು ಈಗ ಮುಂದುವರಿಸಬಹುದು. ಶತ್ರುಗಳನ್ನು ಮಣಿಸಲು ನಿಮ್ಮದೇ ಆದ ತಂತ್ರವನ್ನು ಬಳಸುವಿರಿ. ನಿಮ್ಮ ಅಚ್ಚುಕಟ್ಟಾದ ಕೆಲಸಗಳನ್ನು ಗಮನಿಸಿ ಹಿರಿಯರು ಮೆಚ್ಚುಗೆ ವ್ಯಕ್ತಪಡಿಸುವರು. ವಿವಿಧ ಮಿಶ್ರಲೋಹ ತಯಾರಕರಿಗೆ ಬೇಡಿಕೆ ಬರುತ್ತದೆ. ಸ್ವಂತ ಆರೋಗ್ಯದ ಕಡೆಗೆ ಗಮನ ಇರಲಿ.

ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1 )

ಬಹಳಷ್ಟು ತಾಳ್ಮೆಯಿಂದ ಕೆಲಸಗಳನ್ನು ನಿರ್ವಹಿಸಬೇಕಾದ ಅನಿವಾರ್ಯವಿದೆ. ಕಾನೂನು ಹೋರಾಟದಲ್ಲಿ ಯಶಸ್ಸಿನತ್ತ ವಾಲುವಿರಿ. ಆಪ್ತ ಸ್ನೇಹಿತರ ಸಹಾಯದಿಂದ ಗೃಹ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಿಕೊಳ್ಳುವಿರಿ. ಅಧಿಕಾರಿಗಳ ಜೊತೆ ಮುಕ್ತ ಚರ್ಚೆ ಮಾಡಿದಲ್ಲಿ ಉದ್ಯೋಗದ ಕೆಲವು ಸಮಸ್ಯೆಗಳು ಪರಿಹಾರವಾಗುವುದು. ದಂತ ವೈದ್ಯರಿಗೆ ಹೆಚ್ಚು ಸಂಪಾದನೆಯಾಗುವ ಸಂಭವವಿದೆ. ವಾಣಿಜ್ಯ ಬೆಳೆಗಾರರಿಗೆ ಲಾಭ ಹೆಚ್ಚುತ್ತದೆ. ಹಳೆಯ ಸಾಲವನ್ನು ನಿಧಾನವಾಗಿ ತೀರಿಸಿಕೊಳ್ಳಬಹುದು. ರಾಜಕೀಯ ವರ್ಗದವರಿಗೆ ಹೆಚ್ಚು ಜನಮನ್ನಣೆ ಸಿಗುವ ಸಾಧ್ಯತೆ ಇದೆ. ಆಸ್ತಿ ವಿಚಾರದಲ್ಲಿ ಶುಭ ಸುದ್ದಿಯನ್ನು ನಿರೀಕ್ಷೆ ಮಾಡಬಹುದು. ತಂದೆಯಿಂದ ನಿಮಗೆ ಸಾಕಷ್ಟು ಸಹಾಯ ಮತ್ತು ಸಲಹೆ ದೊರೆಯುತ್ತದೆ.

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ಕನಸುಗಳು ಕೈಗೂಡುವ ದಿನ ಹತ್ತಿರ ಇದೆ. ನಿಮ್ಮ ಪ್ರಾಮಾಣಿಕತೆಗೆ ಅತಿಯಾದ ಗೌರವ ದೊರೆತು ಸಂಭ್ರಮಿಸುವಿರಿ. ಗೃಹೋಪಕರಣ ಮತ್ತು ಪೀಠೋಪಕರಣಗಳ ಮಾರಾಟಗಾರರಿಗೆ ವ್ಯಾಪಾರ ಹೆಚ್ಚಾಗಿ ಲಾಭ ಹೆಚ್ಚುತ್ತದೆ. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿ ಇದ್ದರೂ ಹಣದ ನಿರ್ವಹಣೆಯನ್ನು ಉತ್ತಮವಾಗಿ ಮಾಡುವಿರಿ. ಉದ್ಯೋಗದಲ್ಲಿ ಬದಲಾವಣೆಗೆ ಪೂರಕ ಸನ್ನಿವೇಶ ಕಂಡುಬರುತ್ತಿದೆ. ವಿದ್ಯುತ್ ಗುತ್ತಿಗೆದಾರರಿಗೆ ಸರ್ಕಾರದಿಂದ ಗುತ್ತಿಗೆ ದೊರೆಯುವ ಸಾಧ್ಯತೆ ಇದೆ. ಸ್ಥಿರಾಸ್ತಿ ಮಾರಾಟದಿಂದ ಹೆಚ್ಚು ಲಾಭ ಬರುತ್ತದೆ. ತರಕಾರಿ ಬೆಳೆಗಾರರಿಗೆ ಉತ್ತಮ ಬೆಲೆ ಸಿಗುವ ಸಾಧ್ಯತೆ ಇದೆ. ಸಂಗಾತಿಯ ಸಹಕಾರ ನಿಮ್ಮೆಲ್ಲಾ ಕೆಲಸಗಳಿಗೆ ದೊರೆಯುತ್ತದೆ. ಹೊಸ ವ್ಯಾಪಾರ-ವ್ಯವಹಾರಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆಗಳಿವೆ.

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಯಾವುದೇ ವಾದ-ವಿವಾದ ಆದರೂ ಕಾರ್ಯಸಾಧನೆಗೆ ಅಡ್ಡಿಯಾಗುವುದಿಲ್ಲ. ಸೃಜನಶೀಲ ಬರಹಗಾರರು ತಮ್ಮ ಬರವಣಿಗೆಯಿಂದ ಖ್ಯಾತಿ ಹಾಗೂ ಧನ ಸಂಪಾದನೆ ಮಾಡಿಕೊಳ್ಳುವರು. ಸ್ವಲ್ಪ ಧಾರ್ಮಿಕ ಶ್ರದ್ಧೆ ಹಿರಿಯರಲ್ಲಿ ಹೆಚ್ಚಾಗುವುದು. ಅದಕ್ಕೆ ತಕ್ಕಂತೆ ಸಮಾಜದ ಸಹಕಾರ ದೊರೆಯುತ್ತದೆ. ಸ್ವಲ್ಪ ವ್ಯತ್ಯಾಸವಾಗಿದ್ದ ಶಾರೀರಿಕ ಸಮಸ್ಯೆ ಈಗ ಸರಿಯಾಗುವುದು. ಸಹೋದ್ಯೋಗಿಗಳ ನಡವಳಿಕೆ ನಿಮಗೆ ಕೆಲಸದಲ್ಲಿ ಹೆಚ್ಚಿನ ಸ್ಫೂರ್ತಿಯನ್ನು ಕೊಡುವುದು. ತಮ್ಮ ಉಡಾಫೆ ಮಾತುಗಳಿಂದ ವೃತ್ತಿಯಲ್ಲಿ ಸಮಸ್ಯೆಯಾಗಬಹುದು. ಪತ್ರಿಕೋದ್ಯಮದಲ್ಲಿ ಇರುವವರಿಗೆ ಮುನ್ನಡೆ ಇರುತ್ತದೆ. ಕಬ್ಬಿಣದ ಜೊತೆ ಕೆಲಸ ಮಾಡುವವರು ಎಚ್ಚರಿಕೆಯಿಂದ ಕೆಲಸ ಮಾಡುವುದು ಒಳ್ಳೆಯದು. ಅನಿರೀಕ್ಷಿತ ಪ್ರಯಾಣ ಕೆಲವರಿಗೆ ಒದಗಿಬರುತ್ತದೆ. ಸರ್ಕಾರಿ ಕಚೇರಿ ಕೆಲಸಗಳಲ್ಲಿಅನುಕೂಲವಾಗುತ್ತದೆ.

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಸಹೋದ್ಯೋಗಿಯೊಬ್ಬರು ನಿಮ್ಮ ಕೆಲಸಕಾರ್ಯಗಳಿಗೆ ಹೆಚ್ಚಿನ ಸಹಕಾರ ಕೊಡುವರು. ಶ್ರಮಜೀವಿಗಳಿಗೆ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತವಾಗಿ ದೊರೆತು ತೃಪ್ತಿಪಡುವರು. ಕೆಲವರಿಗೆ ಕಚೇರಿ ಕೆಲಸದ ಮೇಲೆ ಆಕಸ್ಮಿಕ ಪ್ರಯಾಣ ಬರಬಹುದು. ಕಾನೂನು ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಪ್ರಗತಿ ಇರುತ್ತದೆ. ನ್ಯಾಯವಾದಿಗಳಿಗೆ ಹೆಚ್ಚಿನ ದಾವೆಗಳು ದೊರೆತು ಸಂಪಾದನೆ ಹೆಚ್ಚುತ್ತದೆ. ನವೀನ ರೀತಿಯ ವಸ್ತ್ರವಿನ್ಯಾಸ ಮಾಡುವವರಿಗೆ ಬೇಡಿಕೆ ಹೆಚ್ಚಾಗುತ್ತದೆ. ಕಾರ್ಖಾನೆಗಳನ್ನು ನಡೆಸುವವರು ಕಾರ್ಮಿಕರ ಜೊತೆ ಉತ್ತಮ ಸಂಬಂಧ ಇರಿಸಿಕೊಳ್ಳುವುದು ಅನಿವಾರ್ಯ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮವಾದ ಸೌಲಭ್ಯಗಳು ದೊರೆಯುತ್ತವೆ. ಹೊಸ ವ್ಯಾಪಾರ ವ್ಯವಹಾರಗಳಿಗೆ ಆಹ್ವಾನ ಬಂದರೂ ಪರಿಶೀಲಿಸಿ ಮುಂದುವರಿಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT