<p>ಸಾಗರ: ‘ಧರ್ಮಾಚರಣೆಯೇ ಮುಕ್ತಿ ಮಾರ್ಗಕ್ಕೆ ಇರುವ ಹೆದ್ದಾರಿ’ ಎಂದು ಚರ್ಯಾಶಿರೋಮಣಿ ಶ್ರೀ 108 ವಿಧಿತ ಸಾಗರ ಮುನಿ ಮಹಾರಾಜ ಹೇಳಿದರು.</p>.<p>ಇಲ್ಲಿನ ವಿನೋಬ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿಗಂಬರ ಜೈನ ಸಮಾಜ ಸೇವಾ ಟ್ರಸ್ಟ್ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದರು.</p>.<p>‘ಜೈನ ಧರ್ಮದಲ್ಲಿ ಶ್ರಮಣ ಮತ್ತು ಶ್ರಾವಕ ಎಂಬ ಎರಡು ರೀತಿಯ ಧರ್ಮಾಚರಣೆಗಳಿವೆ. ಮುನಿಧರ್ಮ ವರ್ಗಕ್ಕೆ ಸೇರಿದ ತ್ಯಾಗಿಗಳು ಅತ್ಯಂತ ಕಠಿಣವಾದ ಶ್ರಮಣ ಆಚರಣೆಯನ್ನು ಅನುಸರಿಸುತ್ತಾರೆ. ಲೌಕಿಕ ಬದುಕಿನಲ್ಲಿರುವ ಶ್ರಾವಕರು ದುಶ್ಚಟಗಳಿಂದ ದೂರವಿದ್ದು ಧರ್ಮ ಪಾಲಿಸಬೇಕು’ ಎಂದು ಕಿವಿಮಾತು ಹೇಳಿದರು.</p>.<p>‘ಜೈನ ಧರ್ಮದಲ್ಲಿ ದಾನಕ್ಕೆ ವಿಶೇಷ ಮಹತ್ವವಿದೆ. ಅಗತ್ಯಯುಳ್ಳ ವರ್ಗಕ್ಕೆ ಅಗತ್ಯ ವಸ್ತುಗಳನ್ನು ದಾನ ಮಾಡುವುದು ಧಾರ್ಮಿಕ ಆಚರಣೆಯ ಒಂದು ಭಾಗ. ಸದಭಿರುಚಿಯ ಮಾರ್ಗವನ್ನು ಅನುಸರಿಸುವುದೂ ಧರ್ಮಕ್ಕೆ ಬೆಲೆ ನೀಡಿದಂತೆ’ ಎಂದರು.</p>.<p>ಪ್ರಮುಖರಾದ ಎಸ್.ವಿ.ಹಿತಕರ ಜೈನ್, ವಿ.ಟಿ.ಸ್ವಾಮಿ, ಜಿನದತ್ತ ಜೈನ್, ರತಿ ಹೊಯ್ಸಳ, ಸುನಿಲ್ ಕುಮಾರ್, ನೀಲೇಂದ್ರ ಜೈನ್, ಪುಟ್ಟಸ್ವಾಮಿ ಜೈನ್, ಮೇಘರಾಜ್, ಲೋಕರಾಜ್, ಪಾರ್ಶ್ವನಾಥ, ಓಂಕಾರ್ ಜೈನ್, ಜೀವನ್, ಹೇಮಾವತಿ, ಸುಷ್ಮಾ, ಗೀತಾ, ಯಶೋಧರ, ಸುಧಾ ಕಾನೂರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260419-42-1839256247</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಾಗರ: ‘ಧರ್ಮಾಚರಣೆಯೇ ಮುಕ್ತಿ ಮಾರ್ಗಕ್ಕೆ ಇರುವ ಹೆದ್ದಾರಿ’ ಎಂದು ಚರ್ಯಾಶಿರೋಮಣಿ ಶ್ರೀ 108 ವಿಧಿತ ಸಾಗರ ಮುನಿ ಮಹಾರಾಜ ಹೇಳಿದರು.</p>.<p>ಇಲ್ಲಿನ ವಿನೋಬ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿಗಂಬರ ಜೈನ ಸಮಾಜ ಸೇವಾ ಟ್ರಸ್ಟ್ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದರು.</p>.<p>‘ಜೈನ ಧರ್ಮದಲ್ಲಿ ಶ್ರಮಣ ಮತ್ತು ಶ್ರಾವಕ ಎಂಬ ಎರಡು ರೀತಿಯ ಧರ್ಮಾಚರಣೆಗಳಿವೆ. ಮುನಿಧರ್ಮ ವರ್ಗಕ್ಕೆ ಸೇರಿದ ತ್ಯಾಗಿಗಳು ಅತ್ಯಂತ ಕಠಿಣವಾದ ಶ್ರಮಣ ಆಚರಣೆಯನ್ನು ಅನುಸರಿಸುತ್ತಾರೆ. ಲೌಕಿಕ ಬದುಕಿನಲ್ಲಿರುವ ಶ್ರಾವಕರು ದುಶ್ಚಟಗಳಿಂದ ದೂರವಿದ್ದು ಧರ್ಮ ಪಾಲಿಸಬೇಕು’ ಎಂದು ಕಿವಿಮಾತು ಹೇಳಿದರು.</p>.<p>‘ಜೈನ ಧರ್ಮದಲ್ಲಿ ದಾನಕ್ಕೆ ವಿಶೇಷ ಮಹತ್ವವಿದೆ. ಅಗತ್ಯಯುಳ್ಳ ವರ್ಗಕ್ಕೆ ಅಗತ್ಯ ವಸ್ತುಗಳನ್ನು ದಾನ ಮಾಡುವುದು ಧಾರ್ಮಿಕ ಆಚರಣೆಯ ಒಂದು ಭಾಗ. ಸದಭಿರುಚಿಯ ಮಾರ್ಗವನ್ನು ಅನುಸರಿಸುವುದೂ ಧರ್ಮಕ್ಕೆ ಬೆಲೆ ನೀಡಿದಂತೆ’ ಎಂದರು.</p>.<p>ಪ್ರಮುಖರಾದ ಎಸ್.ವಿ.ಹಿತಕರ ಜೈನ್, ವಿ.ಟಿ.ಸ್ವಾಮಿ, ಜಿನದತ್ತ ಜೈನ್, ರತಿ ಹೊಯ್ಸಳ, ಸುನಿಲ್ ಕುಮಾರ್, ನೀಲೇಂದ್ರ ಜೈನ್, ಪುಟ್ಟಸ್ವಾಮಿ ಜೈನ್, ಮೇಘರಾಜ್, ಲೋಕರಾಜ್, ಪಾರ್ಶ್ವನಾಥ, ಓಂಕಾರ್ ಜೈನ್, ಜೀವನ್, ಹೇಮಾವತಿ, ಸುಷ್ಮಾ, ಗೀತಾ, ಯಶೋಧರ, ಸುಧಾ ಕಾನೂರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260419-42-1839256247</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>