<p>ಶಿರಸಿ: ತಾಲ್ಲೂಕಿನ ಸ್ವರ್ಣವಲ್ಲಿ ಮಹಾಸಂಸ್ಥಾನದ ಆಶ್ರಯದಲ್ಲಿ ಆಯೋಜಿಸಲಾಗಿರುವ ಐದು ದಿನಗಳ ಶಾಸ್ತ್ರಾಧ್ಯಯನ ಗೋಷ್ಠಿ ಕಾರ್ಯಕ್ರಮವು ಸಂಸ್ಕೃತ ಹಾಗೂ ಶಾಸ್ತ್ರಾಭ್ಯಾಸಿಗಳ ಗಮನ ಸೆಳೆಯುತ್ತಿದ್ದು, ನಾಡಿನ ವಿವಿಧ ಭಾಗಗಳಿಂದ ಆಗಮಿಸಿರುವ ವಿದ್ವಾಂಸರ ಸಾನ್ನಿಧ್ಯದಲ್ಲಿ ಗಂಭೀರ ಶಾಸ್ತ್ರ ಚರ್ಚೆಗಳು ಆರಂಭಗೊಂಡಿವೆ.</p>.<p>ಮಠದ ರಾಜರಾಜೇಶ್ವರಿ ಸಂಸ್ಕೃತ ಮಹಾವಿದ್ಯಾಲಯದ ಆಶ್ರಯದಲ್ಲಿ ನಡೆಯುತ್ತಿರುವ ಗೋಷ್ಠಿಗೆ ಮಠದ ಕಿರಿಯ ಯತಿಗಳಾದ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಈಚೆಗೆ ಚಾಲನೆ ನೀಡಿದರು. ಗಂಗಾಧರೇಂದ್ರ ಸರಸ್ವತೀ ಶ್ರೀ ಹಾಗೂ ಕಿರಿಯ ಯತಿಗಳ ಸಾನ್ನಿಧ್ಯದಲ್ಲಿ ಚಿಂತನಾ ಗೋಷ್ಠಿಗಳು ನಡೆಯುತ್ತಿವೆ.</p>.<p>ಪ್ರಾಚೀನ ಶಾಸ್ತ್ರಾಧ್ಯಯನ ಪರಂಪರೆಯನ್ನು ಪುನರುಜ್ಜೀವನಗೊಳಿಸುವುದು, ಶಾಸ್ತ್ರಾಭ್ಯಾಸಿಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದು ಹಾಗೂ ವಿದ್ವಾಂಸರ ಮಧ್ಯೆ ಜ್ಞಾನ ವಿನಿಮಯಕ್ಕೆ ಅವಕಾಶ ಒದಗಿಸುವುದು ಗೋಷ್ಠಿಯ ಪ್ರಮುಖ ಉದ್ದೇಶವಾಗಿದೆ. ಗೋಷ್ಠಿಯಲ್ಲಿ ವ್ಯಾಕರಣ, ನ್ಯಾಯ, ಧರ್ಮಶಾಸ್ತ್ರ, ಯೋಗದರ್ಶನ, ಪೂರ್ವಮೀಮಾಂಸಾ, ಅಲಂಕಾರ, ಶ್ರೌತ, ಜ್ಯೋತಿಷ್ಯ ಹಾಗೂ ವೇದಾಂತ ಸೇರಿದಂತೆ 9 ಶಾಸ್ತ್ರಗಳ ಕುರಿತಾಗಿ ಆಳವಾದ ಚರ್ಚೆಗಳು ಮತ್ತು ಪ್ರಬಂಧ ಮಂಡನೆಗಳು ನಡೆಯುತ್ತಿವೆ.</p>.<p>ವಿದ್ವಾನ್ ಸೂರ್ಯನಾರಾಯಣ ಭಟ್ ಹಿತ್ಲಳ್ಳಿ ಅವರ ಅಧ್ಯಕ್ಷತೆಯಲ್ಲಿ ಗೋಷ್ಠಿ ನಡೆಯುತ್ತಿದ್ದು, ವಿದ್ವಾನ್ ಉಮಾಕಾಂತ ಭಟ್ ಕೆರೆಕೈ, ಮಹಾಬಲೇಶ್ವರ ಭಟ್, ಮಹೇಶ ಭಟ್ ಇಡಗುಂದಿ, ಚಂದ್ರಶೇಖರ ಭಟ್ ಶೃಂಗೇರಿ ಪಾಲ್ಗೊಂಡಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260514-20-1123010305</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿರಸಿ: ತಾಲ್ಲೂಕಿನ ಸ್ವರ್ಣವಲ್ಲಿ ಮಹಾಸಂಸ್ಥಾನದ ಆಶ್ರಯದಲ್ಲಿ ಆಯೋಜಿಸಲಾಗಿರುವ ಐದು ದಿನಗಳ ಶಾಸ್ತ್ರಾಧ್ಯಯನ ಗೋಷ್ಠಿ ಕಾರ್ಯಕ್ರಮವು ಸಂಸ್ಕೃತ ಹಾಗೂ ಶಾಸ್ತ್ರಾಭ್ಯಾಸಿಗಳ ಗಮನ ಸೆಳೆಯುತ್ತಿದ್ದು, ನಾಡಿನ ವಿವಿಧ ಭಾಗಗಳಿಂದ ಆಗಮಿಸಿರುವ ವಿದ್ವಾಂಸರ ಸಾನ್ನಿಧ್ಯದಲ್ಲಿ ಗಂಭೀರ ಶಾಸ್ತ್ರ ಚರ್ಚೆಗಳು ಆರಂಭಗೊಂಡಿವೆ.</p>.<p>ಮಠದ ರಾಜರಾಜೇಶ್ವರಿ ಸಂಸ್ಕೃತ ಮಹಾವಿದ್ಯಾಲಯದ ಆಶ್ರಯದಲ್ಲಿ ನಡೆಯುತ್ತಿರುವ ಗೋಷ್ಠಿಗೆ ಮಠದ ಕಿರಿಯ ಯತಿಗಳಾದ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಈಚೆಗೆ ಚಾಲನೆ ನೀಡಿದರು. ಗಂಗಾಧರೇಂದ್ರ ಸರಸ್ವತೀ ಶ್ರೀ ಹಾಗೂ ಕಿರಿಯ ಯತಿಗಳ ಸಾನ್ನಿಧ್ಯದಲ್ಲಿ ಚಿಂತನಾ ಗೋಷ್ಠಿಗಳು ನಡೆಯುತ್ತಿವೆ.</p>.<p>ಪ್ರಾಚೀನ ಶಾಸ್ತ್ರಾಧ್ಯಯನ ಪರಂಪರೆಯನ್ನು ಪುನರುಜ್ಜೀವನಗೊಳಿಸುವುದು, ಶಾಸ್ತ್ರಾಭ್ಯಾಸಿಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದು ಹಾಗೂ ವಿದ್ವಾಂಸರ ಮಧ್ಯೆ ಜ್ಞಾನ ವಿನಿಮಯಕ್ಕೆ ಅವಕಾಶ ಒದಗಿಸುವುದು ಗೋಷ್ಠಿಯ ಪ್ರಮುಖ ಉದ್ದೇಶವಾಗಿದೆ. ಗೋಷ್ಠಿಯಲ್ಲಿ ವ್ಯಾಕರಣ, ನ್ಯಾಯ, ಧರ್ಮಶಾಸ್ತ್ರ, ಯೋಗದರ್ಶನ, ಪೂರ್ವಮೀಮಾಂಸಾ, ಅಲಂಕಾರ, ಶ್ರೌತ, ಜ್ಯೋತಿಷ್ಯ ಹಾಗೂ ವೇದಾಂತ ಸೇರಿದಂತೆ 9 ಶಾಸ್ತ್ರಗಳ ಕುರಿತಾಗಿ ಆಳವಾದ ಚರ್ಚೆಗಳು ಮತ್ತು ಪ್ರಬಂಧ ಮಂಡನೆಗಳು ನಡೆಯುತ್ತಿವೆ.</p>.<p>ವಿದ್ವಾನ್ ಸೂರ್ಯನಾರಾಯಣ ಭಟ್ ಹಿತ್ಲಳ್ಳಿ ಅವರ ಅಧ್ಯಕ್ಷತೆಯಲ್ಲಿ ಗೋಷ್ಠಿ ನಡೆಯುತ್ತಿದ್ದು, ವಿದ್ವಾನ್ ಉಮಾಕಾಂತ ಭಟ್ ಕೆರೆಕೈ, ಮಹಾಬಲೇಶ್ವರ ಭಟ್, ಮಹೇಶ ಭಟ್ ಇಡಗುಂದಿ, ಚಂದ್ರಶೇಖರ ಭಟ್ ಶೃಂಗೇರಿ ಪಾಲ್ಗೊಂಡಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260514-20-1123010305</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>