<p>ಸೊರಬ: ‘12ನೇ ಶತಮಾನದಲ್ಲಿನ ಸಮಸ್ಯೆಗಳಿಗೆ ವಚನಕಾರರು ರಚಿಸಿದ ವಚನಗಳೇ ಪರಿಹಾರವಾಗಿವೆ’ ಎಂದು ಶಿಕಾರಿಪುರ ವಿರಕ್ತ ಮಠದ ಚನ್ನಬಸವ ಸ್ವಾಮೀಜಿ ಹೇಳಿದರು.</p>.<p>ಗುರುವಾರ ಪಟ್ಟಣದ ಮುರುಘಾ ಮಠದಲ್ಲಿ ನಡೆದ ಅಕ್ಕಮಹಾದೇವಿ ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.</p>.<p>‘ಗುರುವಿನಿಂದ ಪಡೆಯುವ ಸಂಸ್ಕಾರದಿಂದಲೇ ಮನುಷ್ಯ ಒಳ್ಳೆಯವನಾಗಲು ಸಾಧ್ಯ. ಮನದಲ್ಲಿ ಮನೆಗೊಳ್ಳುವ ಗುರು ಲಿಂಗವಾಗಿ ದರ್ಶನವಾಗುತ್ತಾನೆ. ಸಾಯುವ, ಕೆಡುವ ಗಂಡರನ್ನೊಲೆಯೊಳಗಿಕ್ಕು ಎನ್ನುವ ಮೂಲಕ ಕ್ಷಣಿಕ ಸುಖಕ್ಕೆ ಹೆಣ್ಣನ್ನು ಅಪೇಕ್ಷೆಪಡುವ ಗಂಡಿನ ಮನೋಧರ್ಮವನ್ನು ಟೀಕಿಸಿ ಮಹಿಳೆಯರ ಆತ್ಮ ಸ್ಥೈರ್ಯಕ್ಕೆ ಉದಾಹರಣೆಯಾಗಿದ್ದಾಳೆ’ ಎಂದರು.</p>.<p>‘ದಾರ್ಶನಿಕರನ್ನು ಸ್ಮರಿಸುವುದರಿಂದ ಆರೋಗ್ಯ, ನೆಮ್ಮದಿ ಶಾಂತಿ ಲಭಿಸುತ್ತದೆ ಎಂದು ಪುರಾಣದಲ್ಲಿ ಹೇಳಲಾಗಿದೆ. ಅಕ್ಕಮಹಾದೇವಿ ಸಮಾಧಾನಿಯಾಗಿ ಲೋಕದ ನಿಂದನೆಗಳಿಗೆ ಪ್ರತ್ಯುತ್ತರವಾದಳು’ ಎಂದು ಉಪನ್ಯಾಸಕ ವಿಜಯಕುಮಾರ್ ದಟ್ಟೇರ್ ತಿಳಿಸಿದರು.</p>.<p>ದವನದ ಹುಣ್ಣಿಮೆಯಂದು ಜನಿಸಿದ ವಿರಕ್ತ ಮಹಿಳೆ ಅಕ್ಕಮಹಾದೇವಿ ಜಯಂತ್ಯುತ್ಸವದ ಅಂಗವಾಗಿ ಅಕ್ಕನ ಬಳಗದ ವತಿಯಿಂದ ತೊಟ್ಟಿಲು ತೂಗುವ ಮೂಲಕ ಅಕ್ಕಮಹಾದೇವಿಯ ಜನ್ಮದಿನವನ್ನು ವಿಶೇಷವಾಗಿ ಆಚರಿಸಲಾಯಿತು.</p>.<p>ಅಕ್ಕನ ಬಳಗದ ಅಧ್ಯಕ್ಷೆ ರೇಣುಕಮ್ಮ ಗೌಳಿ ಮಾತನಾಡಿದರು.</p>.<p>ಈ ವೇಳೆ ಡಿ.ಶಿವಯೋಗಿ, ನಾಗರಾಜಗೌಡ ಆಲಹಳ್ಳಿ, ಜಯಮಾಲಾ, ಪೂರ್ಣಿಮಾ ಶಿವಯೋಗಿ, ಮಮತಾ, ಪವಿತ್ರಾ, ಬಸವರಾಜಗೌಡ, ರೂಪಾ, ಪುಷ್ಪಾ, ಶ್ವೇತಾ, ಸುಧಾ, ಮಲ್ಲಿಕಾರ್ಜನಗೌಡ ತ್ಯಾವಗೋಡು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260403-42-402340140</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸೊರಬ: ‘12ನೇ ಶತಮಾನದಲ್ಲಿನ ಸಮಸ್ಯೆಗಳಿಗೆ ವಚನಕಾರರು ರಚಿಸಿದ ವಚನಗಳೇ ಪರಿಹಾರವಾಗಿವೆ’ ಎಂದು ಶಿಕಾರಿಪುರ ವಿರಕ್ತ ಮಠದ ಚನ್ನಬಸವ ಸ್ವಾಮೀಜಿ ಹೇಳಿದರು.</p>.<p>ಗುರುವಾರ ಪಟ್ಟಣದ ಮುರುಘಾ ಮಠದಲ್ಲಿ ನಡೆದ ಅಕ್ಕಮಹಾದೇವಿ ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.</p>.<p>‘ಗುರುವಿನಿಂದ ಪಡೆಯುವ ಸಂಸ್ಕಾರದಿಂದಲೇ ಮನುಷ್ಯ ಒಳ್ಳೆಯವನಾಗಲು ಸಾಧ್ಯ. ಮನದಲ್ಲಿ ಮನೆಗೊಳ್ಳುವ ಗುರು ಲಿಂಗವಾಗಿ ದರ್ಶನವಾಗುತ್ತಾನೆ. ಸಾಯುವ, ಕೆಡುವ ಗಂಡರನ್ನೊಲೆಯೊಳಗಿಕ್ಕು ಎನ್ನುವ ಮೂಲಕ ಕ್ಷಣಿಕ ಸುಖಕ್ಕೆ ಹೆಣ್ಣನ್ನು ಅಪೇಕ್ಷೆಪಡುವ ಗಂಡಿನ ಮನೋಧರ್ಮವನ್ನು ಟೀಕಿಸಿ ಮಹಿಳೆಯರ ಆತ್ಮ ಸ್ಥೈರ್ಯಕ್ಕೆ ಉದಾಹರಣೆಯಾಗಿದ್ದಾಳೆ’ ಎಂದರು.</p>.<p>‘ದಾರ್ಶನಿಕರನ್ನು ಸ್ಮರಿಸುವುದರಿಂದ ಆರೋಗ್ಯ, ನೆಮ್ಮದಿ ಶಾಂತಿ ಲಭಿಸುತ್ತದೆ ಎಂದು ಪುರಾಣದಲ್ಲಿ ಹೇಳಲಾಗಿದೆ. ಅಕ್ಕಮಹಾದೇವಿ ಸಮಾಧಾನಿಯಾಗಿ ಲೋಕದ ನಿಂದನೆಗಳಿಗೆ ಪ್ರತ್ಯುತ್ತರವಾದಳು’ ಎಂದು ಉಪನ್ಯಾಸಕ ವಿಜಯಕುಮಾರ್ ದಟ್ಟೇರ್ ತಿಳಿಸಿದರು.</p>.<p>ದವನದ ಹುಣ್ಣಿಮೆಯಂದು ಜನಿಸಿದ ವಿರಕ್ತ ಮಹಿಳೆ ಅಕ್ಕಮಹಾದೇವಿ ಜಯಂತ್ಯುತ್ಸವದ ಅಂಗವಾಗಿ ಅಕ್ಕನ ಬಳಗದ ವತಿಯಿಂದ ತೊಟ್ಟಿಲು ತೂಗುವ ಮೂಲಕ ಅಕ್ಕಮಹಾದೇವಿಯ ಜನ್ಮದಿನವನ್ನು ವಿಶೇಷವಾಗಿ ಆಚರಿಸಲಾಯಿತು.</p>.<p>ಅಕ್ಕನ ಬಳಗದ ಅಧ್ಯಕ್ಷೆ ರೇಣುಕಮ್ಮ ಗೌಳಿ ಮಾತನಾಡಿದರು.</p>.<p>ಈ ವೇಳೆ ಡಿ.ಶಿವಯೋಗಿ, ನಾಗರಾಜಗೌಡ ಆಲಹಳ್ಳಿ, ಜಯಮಾಲಾ, ಪೂರ್ಣಿಮಾ ಶಿವಯೋಗಿ, ಮಮತಾ, ಪವಿತ್ರಾ, ಬಸವರಾಜಗೌಡ, ರೂಪಾ, ಪುಷ್ಪಾ, ಶ್ವೇತಾ, ಸುಧಾ, ಮಲ್ಲಿಕಾರ್ಜನಗೌಡ ತ್ಯಾವಗೋಡು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260403-42-402340140</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>