<p>ತುಮಕೂರು: ವೀರಶೈವ– ಲಿಂಗಾಯತ ಧರ್ಮವು ಜೀವನ ನಿರ್ವಹಣೆಗೆ ಸರಿಯಾದ ಮಾರ್ಗದರ್ಶನ ನೀಡುತ್ತಿದೆ. ನಾವು ಅದನ್ನು ಅರ್ಥ ಮಾಡಿಕೊಳ್ಳದೆ ವಿಕೃತಿ ಬೆಳೆಸಿಕೊಳ್ಳುತಿದ್ದೇವೆ ಎಂದು ಸಿದ್ಧಗಂಗಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ ವಿಷಾದಿಸಿದರು.</p>.<p>ತಾಲ್ಲೂಕಿನ ಹಿರೇಹಳ್ಳಿ ಸಮೀಪದ ಹಿರೇಮಠದ ತಪೋವನದಲ್ಲಿ ಈಚೆಗೆ ಅಖಿಲ ಭಾರತ ವೀರಶೈವ– ಲಿಂಗಾಯತ ಮಹಾಸಭಾದಿಂದ ಆಯೋಜಿಸಿದ್ದ ಧಾರ್ಮಿಕ ಶಿಬಿರ ಉದ್ಘಾಟಿಸಿ ಮಾತನಾಡಿದರು.</p>.<p>ವೀರಶೈವರೊ, ಲಿಂಗಾಯತರೊ ಎಂಬ ವಿವಾದದಲ್ಲೇ ನಮ್ಮ ಶಕ್ತಿ ವ್ಯಯ ಮಾಡದೆ, ಧರ್ಮದ ಮೂಲ ಆಚರಣೆ ಅನುಸರಿಸಬೇಕು. ಇಬ್ಬಂದಿತನ ಬಿಟ್ಟು ಶಿವನನ್ನು ಆರಾಧಿಸಬೇಕು. ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರದ ಪಾಠ ಕಲಿಸಬೇಕು ಎಂದು ಸಲಹೆ ಮಾಡಿದರು.</p>.<p>ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಸ್.ಪರಮೇಶ್, ‘ವೀರಶೈವ– ಲಿಂಗಾಯತ ಧರ್ಮದ ರೀತಿ ನೀತಿಗಳನ್ನು ಮಕ್ಕಳಿಗೆ, ಯುವ ಜನತೆಗೆ, ಮುಂದಿನ ಪೀಳಿಗೆಗೆ ವರ್ಗಾಯಿಸಲು ಶಿಬಿರ ಆಯೋಜಿಸಲಾಗಿದೆ. ಎಲ್ಲಾ ತಾಲ್ಲೂಕುಗಳಲ್ಲಿ ಶಿಬಿರ ನಡೆಸಲಾಗುವುದು’ ಎಂದು ತಿಳಿಸಿದರು.</p>.<p>ಹಿರೇಮಠ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ‘ಜಾತ್ಯತೀತತೆ ತತ್ವ ಈಗ ಅಪ್ರಸ್ತುತವಾಗಿದೆ. ಜಾತೀಯತೆ ಎಲ್ಲೆಲ್ಲೂ ವಿಜೃಂಭಿಸುತ್ತಿದೆ. ಶರಣರು ಪ್ರತಿಪಾದಿಸಿದ ‘ಇವ ನಮ್ಮವ ಇವ ನಮ್ಮವ’ ಎನ್ನುವ ತತ್ವ ಅಳವಡಿಸಿಕೊಂಡರೆ ಮಾತ್ರ ಪರಿಶುದ್ಧ ಸಮಾಜ ನಿರ್ಮಾಣ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.</p>.<p>ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಿ.ವಿ.ಪರಮಶಿವಮೂರ್ತಿ, ‘ವಚನಗಳು ಸಾರ್ವಕಾಲಿಕ ಸತ್ಯವಾಗಿದ್ದರೂ ಅವುಗಳನ್ನು ನಾವು ಮರೆಯುತ್ತಿದ್ದೇವೆ. ವಚನಕಾರರು ಪ್ರತಿಪಾದಿಸಿದ ಧರ್ಮ ಮಾರ್ಗದಿಂದ ವಿಮುಖರಾಗುತ್ತಿದ್ದೇವೆ’ ಎಂದರು.</p>.<p>ವೀರಶೈವ– ಲಿಂಗಾಯತ ಮಹಾಸಭಾ ಪದಾಧಿಕಾರಿಗಳಾದ ಸಾಗರನಹಳ್ಳಿ ನಟರಾಜ್, ಕೆ.ಎಸ್.ಉಮಾ ಮಹೇಶ್, ಕೆ.ಎಲ್.ದರ್ಶನ್, ಟಿ.ಎಂ.ವಿಜಯಕುಮಾರ್, ಆರ್.ಬಿ.ಜಯಣ್ಣ, ಪುಷ್ಪಾ ಉದಯ್, ಸುಮಾ ಪ್ರಸನ್ನ, ಗೀತಾ ರುದ್ರೇಶ್, ನಳಿನಿ ಶಿವಾನಂದ್, ಧರ್ಮಪಾಲ್, ಬಿ.ರಾಜಶೇಖರ್, ರೇಣುಕಾರಾಧ್ಯ, ಬಿ.ಎಸ್.ಮಂಜುನಾಥ್, ಷಡಕ್ಷರಿ, ಸಿ.ಕೆ.ಜಗದೀಶ್, ಡಿ.ಎನ್.ಯೋಗೀಶ್ವರಪ್ಪ ಇತರರು ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260408-17-1432715265</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತುಮಕೂರು: ವೀರಶೈವ– ಲಿಂಗಾಯತ ಧರ್ಮವು ಜೀವನ ನಿರ್ವಹಣೆಗೆ ಸರಿಯಾದ ಮಾರ್ಗದರ್ಶನ ನೀಡುತ್ತಿದೆ. ನಾವು ಅದನ್ನು ಅರ್ಥ ಮಾಡಿಕೊಳ್ಳದೆ ವಿಕೃತಿ ಬೆಳೆಸಿಕೊಳ್ಳುತಿದ್ದೇವೆ ಎಂದು ಸಿದ್ಧಗಂಗಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ ವಿಷಾದಿಸಿದರು.</p>.<p>ತಾಲ್ಲೂಕಿನ ಹಿರೇಹಳ್ಳಿ ಸಮೀಪದ ಹಿರೇಮಠದ ತಪೋವನದಲ್ಲಿ ಈಚೆಗೆ ಅಖಿಲ ಭಾರತ ವೀರಶೈವ– ಲಿಂಗಾಯತ ಮಹಾಸಭಾದಿಂದ ಆಯೋಜಿಸಿದ್ದ ಧಾರ್ಮಿಕ ಶಿಬಿರ ಉದ್ಘಾಟಿಸಿ ಮಾತನಾಡಿದರು.</p>.<p>ವೀರಶೈವರೊ, ಲಿಂಗಾಯತರೊ ಎಂಬ ವಿವಾದದಲ್ಲೇ ನಮ್ಮ ಶಕ್ತಿ ವ್ಯಯ ಮಾಡದೆ, ಧರ್ಮದ ಮೂಲ ಆಚರಣೆ ಅನುಸರಿಸಬೇಕು. ಇಬ್ಬಂದಿತನ ಬಿಟ್ಟು ಶಿವನನ್ನು ಆರಾಧಿಸಬೇಕು. ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರದ ಪಾಠ ಕಲಿಸಬೇಕು ಎಂದು ಸಲಹೆ ಮಾಡಿದರು.</p>.<p>ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಸ್.ಪರಮೇಶ್, ‘ವೀರಶೈವ– ಲಿಂಗಾಯತ ಧರ್ಮದ ರೀತಿ ನೀತಿಗಳನ್ನು ಮಕ್ಕಳಿಗೆ, ಯುವ ಜನತೆಗೆ, ಮುಂದಿನ ಪೀಳಿಗೆಗೆ ವರ್ಗಾಯಿಸಲು ಶಿಬಿರ ಆಯೋಜಿಸಲಾಗಿದೆ. ಎಲ್ಲಾ ತಾಲ್ಲೂಕುಗಳಲ್ಲಿ ಶಿಬಿರ ನಡೆಸಲಾಗುವುದು’ ಎಂದು ತಿಳಿಸಿದರು.</p>.<p>ಹಿರೇಮಠ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ‘ಜಾತ್ಯತೀತತೆ ತತ್ವ ಈಗ ಅಪ್ರಸ್ತುತವಾಗಿದೆ. ಜಾತೀಯತೆ ಎಲ್ಲೆಲ್ಲೂ ವಿಜೃಂಭಿಸುತ್ತಿದೆ. ಶರಣರು ಪ್ರತಿಪಾದಿಸಿದ ‘ಇವ ನಮ್ಮವ ಇವ ನಮ್ಮವ’ ಎನ್ನುವ ತತ್ವ ಅಳವಡಿಸಿಕೊಂಡರೆ ಮಾತ್ರ ಪರಿಶುದ್ಧ ಸಮಾಜ ನಿರ್ಮಾಣ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.</p>.<p>ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಿ.ವಿ.ಪರಮಶಿವಮೂರ್ತಿ, ‘ವಚನಗಳು ಸಾರ್ವಕಾಲಿಕ ಸತ್ಯವಾಗಿದ್ದರೂ ಅವುಗಳನ್ನು ನಾವು ಮರೆಯುತ್ತಿದ್ದೇವೆ. ವಚನಕಾರರು ಪ್ರತಿಪಾದಿಸಿದ ಧರ್ಮ ಮಾರ್ಗದಿಂದ ವಿಮುಖರಾಗುತ್ತಿದ್ದೇವೆ’ ಎಂದರು.</p>.<p>ವೀರಶೈವ– ಲಿಂಗಾಯತ ಮಹಾಸಭಾ ಪದಾಧಿಕಾರಿಗಳಾದ ಸಾಗರನಹಳ್ಳಿ ನಟರಾಜ್, ಕೆ.ಎಸ್.ಉಮಾ ಮಹೇಶ್, ಕೆ.ಎಲ್.ದರ್ಶನ್, ಟಿ.ಎಂ.ವಿಜಯಕುಮಾರ್, ಆರ್.ಬಿ.ಜಯಣ್ಣ, ಪುಷ್ಪಾ ಉದಯ್, ಸುಮಾ ಪ್ರಸನ್ನ, ಗೀತಾ ರುದ್ರೇಶ್, ನಳಿನಿ ಶಿವಾನಂದ್, ಧರ್ಮಪಾಲ್, ಬಿ.ರಾಜಶೇಖರ್, ರೇಣುಕಾರಾಧ್ಯ, ಬಿ.ಎಸ್.ಮಂಜುನಾಥ್, ಷಡಕ್ಷರಿ, ಸಿ.ಕೆ.ಜಗದೀಶ್, ಡಿ.ಎನ್.ಯೋಗೀಶ್ವರಪ್ಪ ಇತರರು ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260408-17-1432715265</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>