ಯುಗಾದಿ ದಿನ ಪಂಚಾಂಗ ಶ್ರವಣಕ್ಕೆ ವಿಶೇಷ ಮಹತ್ವ. ಬೆಳಿಗ್ಗೆ ಎದ್ದು ಹೊಸ ಪಂಚಾಂಗದ ಪಠಣವನ್ನು ಆಲಿಸುವುದು ಶುಭಪ್ರದ ಎಂಬ ಪ್ರತೀತಿ ಇದೆ. ಇದಕ್ಕಾಗಿ, ವೇದ ವಿದ್ವಾಂಸರೂ, ಜ್ಯೋತಿಷಿಯೂ ಆಗಿರುವ ದೈವಜ್ಞ ಕೆ.ಎನ್.ಸೋಮಯಾಜಿ ಅವರು ಶಾರ್ವರಿ ನಾಮ ಸಂವತ್ಸರದ ನೂತನ ಪಂಚಾಂಗವನ್ನು ಪ್ರಜಾವಾಣಿ ಓದುಗರಿಗಾಗಿ ಪಠಣ ಮಾಡಿದ್ದಾರೆ. ಮತ್ತು ನೂತನ ಸಂವತ್ಸರ ಫಲವನ್ನೂ ವಿವರಿಸಿದ್ದಾರೆ.