ಮಾನವರು ವಾಸಿಸುವ ಈ ಜಗತ್ತನ್ನು ಬಸವಣ್ಣನವರು ಅರಣ್ಯಕ್ಕೆ ಹೋಲಿಸಿದ್ದಾರೆ. ತಮ್ಮನ್ನು ತಾವು ಗಿಳಿಗೆ ಹೋಲಿಸಿಕೊಂಡಿದ್ದಾರೆ. ತಾನು ಸದಾಕಾಲ ಶಿವನ ನಾಮಸ್ಮರಣೆ ಮಾಡುವಂತೆ ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ. ಭಕ್ತಿ ಎಂಬ ಪಂಜರದೊಳಗೆ ಇರಿಸಿ ತನ್ನನ್ನು ಕಾಯುವಂತೆ ಹಂಬಲಿಸಿದ್ದಾರೆ. ಭಗವಂತನನ್ನು ಸದಾಕಾಲ ನಾವು ಸ್ಮರಿಸಬೇಕಾದರೆ ನಮ್ಮಲ್ಲಿ ಭಕ್ತಿಯು ಅತ್ಯವಶ್ಯವಾಗಿ ಬೇಕಾಗುತ್ತದೆ.