ಆದರೆ, ಇಲ್ಲಿ ಬಸವಣ್ಣನವರು ನಮ್ಮ ತಪ್ಪುಗಳಿಗೆ ಪರಿಹಾರವಿದೆ; ಹಾಗೆಯೇ ನೆಮ್ಮದಿಯೂ ಸಿಗುತ್ತದೆ ಎನ್ನುವುದು ಹೇಗೆ ಎಂಬುದನ್ನು ವಚನದ ಮೂಲಕ ತಿಳಿಸಿದ್ದಾರೆ. ನಿಷ್ಠೆ, ಶ್ರದ್ಧೆಯಿಂದ ಭಗವಂತನ ನಾಮಸ್ಮರಣೆ ಮಾಡಿದರೆ ಮಾತ್ರ ಅದು ಸಾಧ್ಯವಿದೆ ಎಂದಿದ್ದಾರೆ. ಶಿವನಾಮಸ್ಮರಣೆಯಿಂದ ಶಾಂತಿ, ನೆಮ್ಮದಿ ದೊರೆಯಲು ಸಾಧ್ಯ. ಲಿಂಗಧಾರಿ ಸದಾಶುಚಿ ಎನ್ನುವಂತೆ, ಭಗವಂತನ ಒಲುಮೆಗೆ ನಾವು ಸದಾ ಕಾಲ ಪ್ರಾರ್ಥನೆ, ಧ್ಯಾನ, ತಪಸ್ಸು ಮಾಡುತ್ತಿರಬೇಕು. ಇಲ್ಲವಾದರೆ ಮನಸ್ಸು ಮಲಿನವಾಗಿ, ಕೆಟ್ಟ ಕೆಲಸಗಳಿಗೆ ಪ್ರೇರಣೆ ನೀಡುತ್ತದೆ. ಉಂಡಿಗೆಯ ಪಶು ಎಂದರೆ ಲಿಂಗಮುದ್ರಾಂಕಿತವಾದ ಪಶು. ಶಿವನನ್ನು ನಿಷ್ಠೆಯಿಂದ ಪ್ರಾರ್ಥಿಸುವ, ಶಿವನ ಆರಾಧಕನಾಗಿದ್ದೇನೆ. ಸತ್ಯ, ಶುದ್ಧ ಕಾಯಕ ಮಾಡಿ, ಅದರಿಂದ ಬಂದ ಫಲದಿಂದ ದಾಸೋಹ ಮಾಡಿ, ಶಿವನನ್ನು ಒಲಿಸಿಕೊಳ್ಳುವುದೆ ನಮ್ಮ ಪರಮ ಗುರಿಯಾಗಬೇಕು.