ಬೃಹತ್ತಾದ ಬೆಟ್ಟಕ್ಕೆ ಚಳಿಯಾದರೆ ಏನನ್ನು ಹೊದಿಸಲು ಸಾಧ್ಯ? ವಿಶಾಲವಾದ ಬಯಲು ಬೆತ್ತಲೆ ಇದೆ. ಆದರೆ, ಅದಕ್ಕೆ ಏನಾದರೂ ಉಡಿಸಲು ಸಾಧ್ಯವೆ? ಹಾಗೆ ಸನ್ಮಾರ್ಗದಲ್ಲಿ ನಡೆಯಬೇಕಾದ, ಇನ್ನೊಬ್ಬರಿಗೆ ಮಾದರಿಯಾಗಿ ನಿಲ್ಲಬೇಕಾದ ಭಕ್ತನು ದುರ್ವ್ಯಸನಿಯೂ, ದುರ್ಗುಣಿಯೂ, ದುರಾಚಾರಿಯೂ ಆದರೆ ಇನ್ನು ಏನು ತಾನೆ ಹೇಳಲು ಸಾಧ್ಯ ಎಂದು ಅಲ್ಲಮಪ್ರಭುಗಳು ತಮ್ಮ ವಚನದಲ್ಲಿ ಹೇಳಿದ್ದಾರೆ.