<p>ವಿಜಯಪುರ: ಸದ್ಗುರು ಸಮರ್ಥ ರಂಗರಾವ್ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ, ಧ್ಯಾನ ಮಂದಿರ, ವಾಸ್ತುಶಾಂತಿ ಕಳಸಾರೋಹಣದ ಅಂಗವಾಗಿ ಶನಿವಾರ ಹೋಮ, ಹವನ, ಕಳಸ ಸ್ಥಾಪನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ಜರುಗಿದವು.</p>.<p>ಉಡುಪಿ ಜಿಲ್ಲೆ ಕಟಪಾಡಿಯ ಕಾಳಹಸ್ತೇಂದ್ರ ಸ್ವಾಮೀಜಿ, ಭಕ್ತನಾದವನು ಗುರುವಿನ ಸೇವೆಯಲ್ಲಿದ್ದರೆ ಅವನಿಗೆ ಎಂದು ಕಷ್ಟಗಳು ಬರಲಾರವು. ಸಿರಿಸಂಪತ್ತಿಗೆ ಎಂದೂ ಕೊರತೆಯಾಗದು ಎಂದರು.</p>.<p>ಹಾಸನ ಜಿಲ್ಲೆಯ ಅರೇಮಾದನಹಳ್ಳಿಯ ಶಿವಸುಜ್ಞಾನತೀರ್ಥ ಸ್ವಾಮೀಜಿ ಮಾತನಾಡಿ, ಗುರು–ಶಿಷ್ಯರ ಸಂಬಂಧ ಆಯಸ್ಕಾಂತದಂತಿರಬೇಕು. ಮನುಷ್ಯ ಜನ್ಮ ದುರ್ಲಭವಾದುದು, ಅದು ನಮಗೆ ಲಭಿಸಿದೆ ಎಂದರೆ ಅದು ನಮ್ಮ ಪೂರ್ವಪುಣ್ಯಗಳ ಸುಕೃತ ಫಲ. ಈ ಅಮೂಲ್ಯವಾದ ಮನುಷ್ಯ ಜನ್ಮವನ್ನು ಗುರುವಿನ ಕೃಪೆಯಿಂದ ಇಹಬಂಧನ ಕಳಚಿಕೊಂಡು ಮೋಕ್ಷ ಪ್ರಾಪ್ತಿ ಮಾಡಿಕೊಳ್ಳಬೇಕು ಎಂದರು.</p>.<p>ಜೀವಾತ್ಮ-ಪರಮಾತ್ಮರ ಸಂಬಂಧಗಳು ಎರಡು ದೀಪಗಳ ಸಂಬಂಧದಂತೆ. ಅವು ಎರಡೂ ಬೇರೆ ಬೇರೆ ಅಲ್ಲ. ಅವು ಎರಡೂ ಒಂದೇ ಎಂದರು.</p>.<p>ಮುಚಳಾಂಬ ಪ್ರಣವಾನಂದ ಸ್ವಾಮೀಜಿ, ದೇವನಲ್ಲಿ ಭಕ್ತನಿಗೆ ಶ್ರದ್ಧೆ ಬಲು ಮುಖ್ಯವಾದುದು, ಅದಿಲ್ಲದೆ ಭಕ್ತಿಮಾರ್ಗ ಪಯಣದಲ್ಲಿ ಕಿಂಚಿತ್ತೂ ಮುಂದೆ ಸಾಗಲಾರದು ಎಂದರು.</p>.<p>ಮೌನೇಶ್ವರ ಶರ್ಮಾ, ವೀರರಾಘವ ಶರ್ಮಾ ಸ್ವಾಮಿ, ಪ್ರಣವ ಪ್ರಕಾಶ ಮಹಾರಾಜರು, ಜಗನ್ನಾಥ ಸ್ವಾಮೀಜಿ, ಬಿಜೆಪಿ ಮುಖಂಡ ವಿಜುಗೌಡ ಪಾಟೀಲ, ಮಹೇಶ ಮನ್ವಾಚಾರಿ, ಪ್ರಮೋದ ಬಡಿಗೇರ, ಕೆ. ಸುನಂದಾ, ಗೀತಾ ಶಿರವಾಳ , ಸುರೇಶ ಸಾತಲಗಾಂವ, ಭೀಮರಾವ ಅಟಪಟಕರ, ಲಕ್ಷ್ಮಣ ಪತ್ತಾರ, ಸಿದ್ದು ಬಡಿಗೇರ, ಅಮರ ಪೊದ್ದಾರ, ಸಂದೀಪ ಪತ್ತಾರ, ರೋಹಿತ ಮನ್ವಾಚಾರಿ, ಮೋಹನ ಸೋನಾರ, ಕಲ್ಲಪ್ಪ ಕೊಕಟನೂರ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260414-26-2000256109</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಜಯಪುರ: ಸದ್ಗುರು ಸಮರ್ಥ ರಂಗರಾವ್ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ, ಧ್ಯಾನ ಮಂದಿರ, ವಾಸ್ತುಶಾಂತಿ ಕಳಸಾರೋಹಣದ ಅಂಗವಾಗಿ ಶನಿವಾರ ಹೋಮ, ಹವನ, ಕಳಸ ಸ್ಥಾಪನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ಜರುಗಿದವು.</p>.<p>ಉಡುಪಿ ಜಿಲ್ಲೆ ಕಟಪಾಡಿಯ ಕಾಳಹಸ್ತೇಂದ್ರ ಸ್ವಾಮೀಜಿ, ಭಕ್ತನಾದವನು ಗುರುವಿನ ಸೇವೆಯಲ್ಲಿದ್ದರೆ ಅವನಿಗೆ ಎಂದು ಕಷ್ಟಗಳು ಬರಲಾರವು. ಸಿರಿಸಂಪತ್ತಿಗೆ ಎಂದೂ ಕೊರತೆಯಾಗದು ಎಂದರು.</p>.<p>ಹಾಸನ ಜಿಲ್ಲೆಯ ಅರೇಮಾದನಹಳ್ಳಿಯ ಶಿವಸುಜ್ಞಾನತೀರ್ಥ ಸ್ವಾಮೀಜಿ ಮಾತನಾಡಿ, ಗುರು–ಶಿಷ್ಯರ ಸಂಬಂಧ ಆಯಸ್ಕಾಂತದಂತಿರಬೇಕು. ಮನುಷ್ಯ ಜನ್ಮ ದುರ್ಲಭವಾದುದು, ಅದು ನಮಗೆ ಲಭಿಸಿದೆ ಎಂದರೆ ಅದು ನಮ್ಮ ಪೂರ್ವಪುಣ್ಯಗಳ ಸುಕೃತ ಫಲ. ಈ ಅಮೂಲ್ಯವಾದ ಮನುಷ್ಯ ಜನ್ಮವನ್ನು ಗುರುವಿನ ಕೃಪೆಯಿಂದ ಇಹಬಂಧನ ಕಳಚಿಕೊಂಡು ಮೋಕ್ಷ ಪ್ರಾಪ್ತಿ ಮಾಡಿಕೊಳ್ಳಬೇಕು ಎಂದರು.</p>.<p>ಜೀವಾತ್ಮ-ಪರಮಾತ್ಮರ ಸಂಬಂಧಗಳು ಎರಡು ದೀಪಗಳ ಸಂಬಂಧದಂತೆ. ಅವು ಎರಡೂ ಬೇರೆ ಬೇರೆ ಅಲ್ಲ. ಅವು ಎರಡೂ ಒಂದೇ ಎಂದರು.</p>.<p>ಮುಚಳಾಂಬ ಪ್ರಣವಾನಂದ ಸ್ವಾಮೀಜಿ, ದೇವನಲ್ಲಿ ಭಕ್ತನಿಗೆ ಶ್ರದ್ಧೆ ಬಲು ಮುಖ್ಯವಾದುದು, ಅದಿಲ್ಲದೆ ಭಕ್ತಿಮಾರ್ಗ ಪಯಣದಲ್ಲಿ ಕಿಂಚಿತ್ತೂ ಮುಂದೆ ಸಾಗಲಾರದು ಎಂದರು.</p>.<p>ಮೌನೇಶ್ವರ ಶರ್ಮಾ, ವೀರರಾಘವ ಶರ್ಮಾ ಸ್ವಾಮಿ, ಪ್ರಣವ ಪ್ರಕಾಶ ಮಹಾರಾಜರು, ಜಗನ್ನಾಥ ಸ್ವಾಮೀಜಿ, ಬಿಜೆಪಿ ಮುಖಂಡ ವಿಜುಗೌಡ ಪಾಟೀಲ, ಮಹೇಶ ಮನ್ವಾಚಾರಿ, ಪ್ರಮೋದ ಬಡಿಗೇರ, ಕೆ. ಸುನಂದಾ, ಗೀತಾ ಶಿರವಾಳ , ಸುರೇಶ ಸಾತಲಗಾಂವ, ಭೀಮರಾವ ಅಟಪಟಕರ, ಲಕ್ಷ್ಮಣ ಪತ್ತಾರ, ಸಿದ್ದು ಬಡಿಗೇರ, ಅಮರ ಪೊದ್ದಾರ, ಸಂದೀಪ ಪತ್ತಾರ, ರೋಹಿತ ಮನ್ವಾಚಾರಿ, ಮೋಹನ ಸೋನಾರ, ಕಲ್ಲಪ್ಪ ಕೊಕಟನೂರ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260414-26-2000256109</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>