ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ: 10-7-2022ರಿಂದ 16-7-2022ರವರೆಗೆ

ಅಕ್ಷರ ಗಾತ್ರ

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)

ವೃತ್ತಿ ಮತ್ತು ಪ್ರವೃತ್ತಿಗಳಲ್ಲಿ ವ್ಯತ್ಯಾಸಗಳನ್ನು ಅರಿತು ಸಮಾಧಾನಚಿತ್ತದಿಂದ ಇರುವುದು ಬಹಳ ಮುಖ್ಯ. ಪ್ರೇಮ ಪ್ರಕರಣದಲ್ಲಿ ದುಡುಕುತನ ಖಂಡಿತ ಬೇಡ. ಹಣದ ಒಳಹರಿವು ನಿರೀಕ್ಷೆಯ ಮಟ್ಟದ ಹತ್ತಿರ ಇರುತ್ತದೆ. ನೆರೆಹೊರೆಯವರೊಡನೆ ಕಲಹ ಏರ್ಪಡುವ ಸಂಭವವಿದೆ. ಮಕ್ಕಳಿಂದ ಅಗೌರವ ಆಗಬಹುದು. ಮಿತ್ರರಿಂದ ನಿಮ್ಮ ಕೆಲಸಗಳಿಗೆ ಧನಸಹಾಯ ಒದಗುತ್ತದೆ. ಕೃಷಿಕರಿಗೆ ಆತಂಕಗಳಿದ್ದರೂ ತೊಂದರೆಯಿಲ್ಲ. ಕೆಲವು ಕೆಲಸಗಳಿಗೆ ಸಂಗಾತಿಯ ವಿರೋಧ ಎದುರಾಗಬಹುದು. ತಲೆನೋವು ಅಥವಾ ಶೀತಬಾಧೆ ಇರುವವರು ಎಚ್ಚರವಹಿಸಿರಿ. ಕಬ್ಬಿಣದ ವ್ಯಾಪಾರಿಗಳಿಗೆ ಹೆಚ್ಚು ಲಾಭವಿರುತ್ತದೆ. ಕೃಷಿ ಯಂತ್ರೋಪಕರಣಗಳನ್ನು ಬಳಸುವಾಗ ಎಚ್ಚರಿಕೆ ಅಗತ್ಯ. ಸರ್ಕಾರಿ ಸಂಸ್ಥೆಗಳ ಜೊತೆ ವ್ಯವಹಾರ ಮಾಡುವವರಿಗೆ ಅಭಿವೃದ್ಧಿ ಇದೆ.

ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ಗೃಹೋಪಯೋಗಿ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವವರ ವ್ಯವಹಾರ ವಿಸ್ತರಿಸುತ್ತದೆ. ವೃತ್ತಿಯಲ್ಲಿ ನಿಮ್ಮ ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಗೌರವ ದೊರೆಯುತ್ತದೆ. ವ್ಯಾಪಾರ-ವ್ಯವಹಾರಗಳಲ್ಲಿ ನಿಮ್ಮ ಪಾಲಿನ ಲಾಭ ದೊರೆಯುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಂಭವವಿದೆ. ಹೊಸ ಯೋಜನೆಗಳನ್ನು ಕೈಗೊಳ್ಳುವಂತೆ ಗುತ್ತಿಗೆದಾರರಿಗೆ ಆಹ್ವಾನ ಬರಬಹುದು. ಅವುಗಳ ಆಗುಹೋಗುಗಳನ್ನು ತಿಳಿದು ಕೈ ಹಾಕುವುದು ಒಳ್ಳೆಯದು. ಕೌಟುಂಬಿಕ ಸೌಹಾರ್ದತೆಯಿಂದ ಸಂತೃಪ್ತಿ ಮೂಡುತ್ತದೆ. ಖಾಸಗಿ ಉದ್ಯೋಗಸ್ಥ ಮಹಿಳೆಯರಿಗೆ ಹೆಚ್ಚು ಯಶಸ್ಸು ಇರುತ್ತದೆ. ದೀರ್ಘಕಾಲೀನ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಪರಿಹಾರ ಕಾಣುತ್ತದೆ. ಹಣದ ಒಳಹರಿವು ನಿರೀಕ್ಷೆಯ ಮಟ್ಟಕ್ಕೆ ಇರುತ್ತದೆ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಹೊಸ ವ್ಯಕ್ತಿಗಳಿಂದ ಹೆಚ್ಚಿನ ಸಹಕಾರ ದೊರೆಯುತ್ತದೆ. ಸಿನಿಮಾ ಕಲಾವಿದರುಗಳಿಗೆ ಹೆಚ್ಚಿನ ಅವಕಾಶ ದೊರೆತು ಸಂಪಾದನೆ ಹೆಚ್ಚುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತೆ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳಲು ಆಲೋಚನೆಯನ್ನು ಮಾಡುವಿರಿ. ವಿದ್ಯಾರ್ಥಿಗಳಿಗೆ ಸಾಮಾನ್ಯ ಯಶಸ್ಸು ಇರುತ್ತದೆ. ವಿದೇಶ ಪ್ರಯಾಣ ಮಾಡಬೇಕೆನ್ನುವವರಿಗೆ ಅವಕಾಶ ದೊರೆಯುವ ಸಾಧ್ಯತೆಗಳಿವೆ. ಪತ್ರವ್ಯವಹಾರಗಳಲ್ಲಿ ಅತಿ ಹೆಚ್ಚಿನ ಜಾಗರೂಕತೆ ಅತಿ ಅಗತ್ಯ. ಗೃಹ ನಿರ್ಮಾಣ ಕಾರ್ಯದಲ್ಲಿ ಸ್ವಲ್ಪಮಟ್ಟಿನ ಪ್ರಗತಿಯನ್ನು ಕಾಣಬಹುದು. ಭೂಮಿಯ ವ್ಯವಹಾರವನ್ನು ಮಾಡುವವರಿಗೆ ಹೆಚ್ಚಿನ ಲಾಭವಿರುತ್ತದೆ. ಉದ್ದಿಮೆದಾರರಿಗೆ ಯಂತ್ರೋಪಕರಣಗಳ ರಿಪೇರಿಗಾಗಿ ಹಣ ಖರ್ಚಾಗುತ್ತದೆ.

ಕಟಕ ರಾಶಿ ( ಪುನರ್ವಸು 4 ಪುಷ್ಯ ಆಶ್ಲೇಷ)

ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಅಗತ್ಯ. ಹಣದ ಕೊಡು-ಕೊಳ್ಳುವ ವ್ಯವಹಾರದಲ್ಲಿ ಹೆಚ್ಚು ನೈಪುಣ್ಯತೆಯನ್ನು ಸಾಧಿಸಿತೋರುವಿರಿ. ಹಣದ ಹರಿವು ನಿರೀಕ್ಷೆಯಷ್ಟು ಇದ್ದರೂ ಖರ್ಚಿಗೆ ಕಡಿವಾಣ ಹಾಕಲೇ ಬೇಕಾದ ಅನಿವಾರ್ಯವಿದೆ. ಸಾರ್ವಜನಿಕ ಗೌರವ ಸ್ವೀಕರಿಸಲು ಹೋದಾಗ ಹೊಸ ಜವಾಬ್ದಾರಿ ಒಂದು ಹೆಗಲೇರುತ್ತದೆ. ಭೂಮಿಯ ಕೊಡುಕೊಳ್ಳುವ ವ್ಯವಹಾರಗಳು ಹೆಚ್ಚಾಗಿ, ಹೆಚ್ಚಿನ ಲಾಭ ಬರುತ್ತದೆ. ಮನೆಯಲ್ಲಿ ಹೊಸ ಅತಿಥಿ ಬರುವ ಸಾಧ್ಯತೆ ಇದೆ. ದಂಪತಿಯ ಕೌಟುಂಬಿಕ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ವ್ಯವಹಾರ ವೃದ್ಧಿಸುತ್ತದೆ. ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆಯನ್ನು ಕಾಣಬಹುದು.

ಸಿಂಹ ರಾಶಿ ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ಗುರುತರವಾದ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿ ಬಂಧುಗಳ ನಡುವೆ ಭೇಷ್ ಎನಿಸಿಕೊಳ್ಳುವಿರಿ. ಆರ್ಥಿಕ ವಿಷಯದಲ್ಲಿ ಪ್ರಗತಿಯನ್ನು ಕಾಣುವಿರಿ. ಬಂಧುಗಳಲ್ಲಿ ನಿಮ್ಮ ಬಗ್ಗೆ ಭಿನ್ನಾಭಿಪ್ರಾಯಗಳು ಹೆಚ್ಚುತ್ತವೆ. ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸ್ವಲ್ಪ ನಿರಾಳ ಆಗುತ್ತದೆ. ಹೆಂಗಸರ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವವರಿಗೆ ಉತ್ತಮ ಲಾಭವಿದೆ. ಕೃಷಿಯ ಒಕ್ಕಲುತನದ ಕಾರ್ಯಗಳಲ್ಲಿ ಸ್ವಲ್ಪಮಟ್ಟಿನ ತೊಡಕನ್ನು ಕಾಣಬಹುದು. ವಿದೇಶಿ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಕಾನೂನಿನ ತೊಡಕುಗಳು ಕಂಡು ಬರುವ ಸಾಧ್ಯತೆ ಇದೆ. ರಾಜಕೀಯ ವ್ಯಕ್ತಿಗಳಿಗೆ ಸಾಲದ ಕಂಟಕಗಳು ಎದುರಾಗಬಹುದು. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ.

ಕನ್ಯಾ ರಾಶಿ ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಸರ್ಕಾರಿ ಮಟ್ಟದ ಕೆಲಸಕಾರ್ಯಗಳಲ್ಲಿ ಪ್ರಗತಿ ಕಾಣಬಹುದು. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ನಿಮ್ಮ ಕೆಲಸಗಳಿಗೆ ತಾಯಿಯ ಸಹಕಾರ ಸಂಪೂರ್ಣವಾಗಿ ದೊರೆಯುತ್ತದೆ. ಹೆಚ್ಚಿನ ಶ್ರಮವನ್ನು ಹಾಕಲೇಬೇಕಾದ ಪರಿಸ್ಥಿತಿ ವಿದ್ಯಾರ್ಥಿಗಳಿಗೆ ಇದೆ. ಸಾಲಗಾರರು ವಸೂಲಿಗೆ ಬಂದು ಪೀಡಿಸಬಹುದು. ಮಧುಮೇಹಿಗಳು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾವಹಿಸುವುದು ಅಗತ್ಯ. ದೂರ ಪ್ರಯಾಣ ಅಷ್ಟು ಹಿತವಲ್ಲ. ಮಿತ್ರರೊಂದಿಗೆ ವ್ಯವಹಾರ ಮಾಡುವಾಗ ಸಾಕಷ್ಟು ಎಚ್ಚರಿಕೆ ಇರಲಿ. ಮಕ್ಕಳಿಂದ ನೆಮ್ಮದಿಗೆ ಭಂಗ ಬರಬಹುದು ಹಾಗೂ ಹೆಚ್ಚು ಹಣ ಖರ್ಚು ಮಾಡಬೇಕಾಗಬಹುದು. ನ್ಯಾಯಾಲಯದ ವಿಚಾರಗಳು ಮುಂದೂಡಲ್ಪಡಬಹುದು. ಪ್ರತಿಭಾವಂತರ ಮಾರ್ಗದರ್ಶನ ನಿಮಗೆ ಒಳಿತನ್ನು ಮಾಡುತ್ತದೆ.

ತುಲಾ ರಾಶಿ ( ಚಿತ್ತಾ 3 4 ಸ್ವಾತಿ ವಿಶಾಖ 1 2 3)

ವಿದ್ಯಾರ್ಥಿಗಳು ಅಧ್ಯಯನದಲ್ಲಿ ಹೆಚ್ಚು ಗಮನ ಹರಿಸುವುದು ಒಳ್ಳೆಯದು. ಹಣದ ಒಳಹರಿವಿನಲ್ಲಿ ಚೇತರಿಕೆಯನ್ನು ಕಾಣಬಹುದು. ಮಹಿಳಾ ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ. ಆದಾಯದ ಹೊಸಮೂಲಗಳ ಹುಡುಕಾಟ ನಡೆಸುವಿರಿ. ಸಂಗಾತಿಯ ಕೋಪಕ್ಕೆ ತಾಳ್ಮೆಯೇ ಉತ್ತರ. ಸ್ವಂತ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಯ ಆಗಲಿದೆ. ಮಕ್ಕಳಿಂದ ನಿಮ್ಮ ನೆಮ್ಮದಿಗೆ ಕುತ್ತು ಬರಬಹುದು. ಗೃಹ ನಿರ್ಮಾಣ ಕಾರ್ಯವನ್ನು ಮಾಡುವವರಿಗೆ ಪ್ರಗತಿ ಇರುತ್ತದೆ. ಹೊಸ ನಿರ್ಮಾಣ ಒಪ್ಪಂದಗಳು ಆಗುವ ಸಂದರ್ಭಗಳಿವೆ. ಅನವಶ್ಯಕ ಮಾತುಗಳಿಂದ ಸಂಘ-ಸಂಸ್ಥೆಗಳಲ್ಲಿ ವೈರತ್ವ ತಲೆದೋರಬಹುದು. ವಿದೇಶದಲ್ಲಿ ಆಸ್ತಿ ಮಾಡಬೇಕೆನ್ನುವವರಿಗೆ ಈಗ ಅನುಕೂಲವಾಗುತ್ತದೆ. ತಂದೆಯ ವ್ಯವಹಾರಗಳ ಬಗ್ಗೆ ತಿಳಿವಳಿಕೆಯನ್ನು ಪಡೆಯಬಹುದು.

ವೃಶ್ಚಿಕ ರಾಶಿ ( ವಿಶಾಖಾ 4 ಅನುರಾಧ ಜೇಷ್ಠ)

ಆರ್ಥಿಕ ಅಭಿವೃದ್ಧಿ ಬಗ್ಗೆ ಹೊಸಮಾರ್ಗವನ್ನು ಕಂಡುಕೊಳ್ಳುವಿರಿ. ಹಿರಿಯರಿಗೆ ಬಹಳ ದಿನಗಳಿಂದ ಕಿರಿಕಿರಿ ಉಂಟು ಮಾಡುತ್ತಿದ್ದ ಸಮಸ್ಯೆಗಳು ಪರಿಹಾರವಾಗುತ್ತವೆ. ಸಾಮಾಜಿಕ ಸೇವೆಗಳನ್ನು ಮಾಡಿ ಸಂತಸಪಡುವಿರಿ. ಕೆಲವೊಂದು ಕೆಲಸಗಳಿಗೆ ನಿಮ್ಮ ಮಿತ್ರರ ಸಂಪೂರ್ಣ ಸಹಕಾರ ದೊರೆತು ಕೆಲಸವಾಗುತ್ತದೆ. ಆಸ್ತಿ ವಿವಾದಗಳಲ್ಲಿ ಹೊಸ ಆಶಾಕಿರಣವೊಂದು ಮೂಡುತ್ತದೆ. ವೃತ್ತಿಜೀವನದ ಸಮಸ್ಯೆಗಳಿಗೆ ಹೊಸ ರೀತಿಯ ಪರಿಹಾರ ಬರುತ್ತದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಆಪ್ತರೊಡನೆ ಗಹನವಾದ ಚರ್ಚೆಯನ್ನು ಮಾಡುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶದತ್ತ ಸಾಗುವ ಕಾಲ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ವಿದ್ಯಾಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ಕೆಲವೊಂದು ಅನುಕೂಲಗಳು ಒದಗಿಬರುತ್ತವೆ.

ಧನಸ್ಸು ರಾಶಿ ( ಮೂಲ ಪೂರ್ವಾಷಾಢ ಉತ್ತರಾಷಾಢ 1 )

ವ್ಯವಹಾರವನ್ನು ಚತುರತೆಯಿಂದ ಮಾಡದಿದ್ದಲ್ಲಿ ಲಾಭಾಂಶ ಕಡಿಮೆಯಾಗಬಹುದು. ವಿದೇಶದಲ್ಲಿ ಇರುವವರಿಗೆ ಸ್ಥಿರಾಸ್ತಿ ಖರೀದಿ ಮಾಡುವ ಯೋಗವಿದೆ. ನಿಮ್ಮ ಮಕ್ಕಳಿಂದ ಸಂತೋಷಪಡುವ ಕಾಲ ಬಂದೊದಗಿದೆ. ದೈನಂದಿನ ಚಟುವಟಿಕೆಗಳಲ್ಲಿ ಹೆಚ್ಚಿನ ಉತ್ಸಾಹ ಮೂಡಿ ಸರಾಗವಾಗಿ ಕೆಲಸಗಳು ಆಗುತ್ತವೆ. ಹೊಸ ಹೊಸ ವಸ್ತುಗಳನ್ನು ಮನೆಯ ಉಪಯೋಗಕ್ಕಾಗಿ ಖರೀದಿ ಮಾಡುವಿರಿ. ನಿಮ್ಮ ವಿರುದ್ಧ ಮಾತನಾಡಿದವರು ಈಗ ನಿಜಾಂಶ ತಿಳಿದು ಸಾಕಷ್ಟು ಪಶ್ಚಾತ್ತಾಪ ಪಡುವರು. ಸರ್ಕಾರಿ ಮಟ್ಟದ ವ್ಯವಹಾರಗಳಲ್ಲಿ ಮುನ್ನಡೆಯನ್ನು ಕಾಣಬಹುದು. ಮನೆಯ ಅವತ್ತಿನ ಒಟ್ಟಿನ ವ್ಯವಹಾರದ ಬಗ್ಗೆ ತಿಳಿವಳಿಕೆ ಬರುತ್ತದೆ.

ಮಕರ ರಾಶಿ ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ಬಂಧು ಬಾಂಧವರೊಡನೆ ಕೂಡಿ ಸಂತೋಷವಾಗಿ ಕಾಲ ಕಳೆಯುವಿರಿ. ಮಹಿಳೆಯರ ಆರೋಗ್ಯ ವಿಚಾರದಲ್ಲಿ ಪ್ರಗತಿಯನ್ನು ಕಾಣಬಹುದು. ಧನದ ಒಳಹರಿವು ಸಾಮಾನ್ಯಗತಿಯಲ್ಲಿ ಇರುತ್ತದೆ. ಮಹಿಳೆಯರಿಗೆ ಆಭರಣಗಳನ್ನು ಖರೀದಿ ಮಾಡುವ ಅವಕಾಶಗಳಿವೆ. ಉದ್ಯೋಗಸ್ಥರಿಗೆ ತಮ್ಮ ಮೇಲಧಿಕಾರಿಗಳಿಂದ ಪ್ರಶಂಸೆಯ ಮಾತನ್ನು ಕೇಳುವ ಅವಕಾಶವಿದೆ. ಸಾಹಸ ಕಲಾವಿದರುಗಳಿಗೆ ಅವಕಾಶಗಳು ದೊರೆತು ಅವರ ಅಪೇಕ್ಷೆಯಂತೆ ಸಂಭಾವನೆ ಹೆಚ್ಚುತ್ತದೆ. ವಿವಾದಾತ್ಮಕ ಕೆಲಸ ಕಾರ್ಯಗಳನ್ನು ಅಲ್ಪ ಮಟ್ಟಿಗೆ ಮುಂದೂಡುವುದು ಒಳ್ಳೆಯದು. ಆಸ್ತಿ ವಿಚಾರದಲ್ಲಿ ಮುನ್ನಡೆಯನ್ನು ಕಾಣಬಹುದು. ದ್ರವರೂಪದ ವಸ್ತುಗಳನ್ನು ಮಾರಾಟ ಮಾಡುವವರಿಗೆ ಉತ್ತಮ ಅಭಿವೃದ್ಧಿ ಇರುತ್ತದೆ. ಹೈನುಗಾರಿಕೆಯನ್ನು ಮಾಡುವವರಿಗೆ ಅಭಿವೃದ್ಧಿ ಇದ್ದೇ ಇರುತ್ತದೆ.

ಕುಂಭ ರಾಶಿ ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಯುವಕರು ಆತುರತೆಯಿಂದ ಕೆಲಸಮಾಡಲು ಹೋಗಿ ತೊಂದರೆಯನ್ನು ತಂದುಕೊಳ್ಳುವರು. ಅನವಶ್ಯಕ ಮಾತುಗಳಿಗೆ ಅಥವಾ ವ್ಯವಹಾರಗಳಿಗೆ ತಲೆ ಹಾಕದಿರುವುದು ಉತ್ತಮ. ಹಿರಿಯ ಲೇಖಕರಿಗೆ ಗೌರವ ಸನ್ಮಾನಗಳು ದೊರೆಯುವ ಸಾಧ್ಯತೆಗಳಿವೆ. ತಾಯಿಯಿಂದ ಕೆಲಸಕಾರ್ಯಗಳಿಗೆ ಸಾಕಷ್ಟು ಸಹಾಯ ದೊರೆಯುತ್ತದೆ. ಸಾಲಸೋಲ ಮಾಡಿದ್ದಲ್ಲಿ ಸ್ವಲ್ಪಮಟ್ಟಿಗೆ ಈಗ ತೀರಿಸಬಹುದು. ಕೃಷಿಕರಿಗೆ ಬೇಕಾದ ಸಹಾಯ ಸರಕಾರದ ಕಡೆಯಿಂದ ಅಥವಾ ಸಂಘ ಸಂಸ್ಥೆಗಳ ಕಡೆಯಿಂದ ದೊರೆಯುತ್ತದೆ. ಹಣದ ಒಳಹರಿವು ಅಗತ್ಯವನ್ನು ಪೂರೈಸುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಸಹಾಯ, ಸಲಹೆಗಳು ದೊರೆಯುತ್ತವೆ. ಸಂಗಾತಿ ಕಡೆಯವರು ನಡೆಸುವ ವ್ಯವಹಾರಗಳಲ್ಲಿ ನಿಮಗೆ ಒಳ್ಳೆಯ ಅವಕಾಶ ದೊರೆಯುತ್ತದೆ.

ಮೀನ ರಾಶಿ ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಅನೇಕ ದಿನಗಳಿಂದ ನನೆಗುದಿಗೆ ಬಿದ್ದಿದ್ದ ನಿಮ್ಮ ವಿರುದ್ಧದ ವಿಚಾರ ಗರಿಗೆದರುವ ಸಾಧ್ಯತೆ ಇದೆ. ಯಾವುದೇ ಕೆಲಸ ಕಾರ್ಯಗಳಲ್ಲಿ ಆತುರದ ನಿರ್ಧಾರ ಖಂಡಿತ ಬೇಡ. ವೈಯಕ್ತಿಕ ಜೀವನದಲ್ಲಿ ಅಭಿವೃದ್ಧಿ ಇರುತ್ತದೆ. ಲೇವಾದೇವಿ ವ್ಯವಹಾರಗಳು ಖಂಡಿತಬೇಡ. ನೀವು ಬಳಸುವ ಆಯುಧಗಳ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ಅಲಂಕಾರಿಕ ವಸ್ತುಗಳನ್ನು ಕೊಳ್ಳುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಅಗತ್ಯ. ಹಣಕಾಸಿನ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಆದಾಯಕ್ಕಿಂತ ಖರ್ಚು ಹೆಚ್ಚಿಗೆ ಬರಬಹುದು. ಹಾಗಾಗಿ ಹಣದ ನಿರ್ವಹಣೆ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಆಸಕ್ತಿ ಹೆಚ್ಚುತ್ತದೆ. ಸಾಂಪ್ರದಾಯಿಕ ಕೃಷಿಯನ್ನು ಮಾಡುವವರಿಗೆ ಬೇಡಿಕೆ ಹೆಚ್ಚುತ್ತದೆ. ಕಬ್ಬಿಣದ ವ್ಯಾಪಾರಿಗಳಿಗೆ ಆದಾಯ ಹೆಚ್ಚುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT