ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ: 30-8-2020ರಿಂದ 5-9-2020 ರವರೆಗೆ

ಅಕ್ಷರ ಗಾತ್ರ

ಡಾ.ಎಂ.ಎನ್.ಲಕ್ಷ್ಮೀನರಸಿಂಹಸ್ವಾಮಿ

ಜ್ಯೋತಿಷ್ಯ ಪದ್ಮಭೂಷಣ

ಸಂಪರ್ಕಕ್ಕೆ 81973 04680

***

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)
ಮನೆಯಲ್ಲಿ ಸ್ವಲ್ಪ ಗಡಿಬಿಡಿ. ಯಾವುದೇ ವಿಚಾರಕ್ಕೂ ತಾಳ್ಮೆ ಕಳೆದುಕೊಳ್ಳಬೇಡಿ. ಮಕ್ಕಳ ವಿಚಾರದಲ್ಲಿ ಸಲ್ಪ ಯೋಚಿಸಿ ವಿವೇಕ ಮತ್ತು ಗೌರವದಿಂದ ನಡೆದುಕೊಳ್ಳಿ. ಇಲ್ಲವಾದಲ್ಲಿ ನಿಮ್ಮ ಗೌರವದ ಜೊತೆಗೆ ಮನೆಯ ಗೌರವ ಕಡಿಮೆಯಾಗಬಹುದು. ಹಣಕಾಸಿನ ವಿಷಯದಲ್ಲಿ ಸ್ವಲ್ಪ ಹಿಂಜರಿಕೆ ಕಾಣಬಹುದು. ಪ್ರಮುಖ ವಿಚಾರಗಳಲ್ಲಿ ಈಗಲೇ ನಿರ್ಧಾರ ತೆಗೆದುಕೊಳ್ಳಬೇಡಿ. ತುರ್ತು ವಿಷಯಗಳಿಗೆ ಸಂಬಂಧಿಕರ ಅಥವಾ ಸ್ನೇಹಿತರ ನೆರವು ಪಡೆಯುವುದು ಉತ್ತಮ. ವಿದ್ಯಾರ್ಥಿಗಳಿಗೆ ಅವರ ಶ್ರಮಕ್ಕೆ ತಕ್ಕ ಫಲ.

**

ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ನಿಮ್ಮ ಕೆಲ ತಪ್ಪು ನಿರ್ಧಾರಗಳಿಂದ ವ್ಯವಹಾರ ಕುಂಠಿತ ಆಗಬಹುದು. ಆದರೆ ಕೆಲ ಯೋಜನೆಗಳು ಮುಂದುವರೆದು ಆದಾಯ ತರುತ್ತವೆ. ಆದಾಯದಲ್ಲಿ ಸ್ವಲ್ಪ ಹಿನ್ನಡೆಯಾದರೂ ನಷ್ಟವಿಲ್ಲ. ಹಿಂದಿನ ಸಾಲಗಳನ್ನು ತೀರಿಸಿ ನಿರಾಳತೆ ಪಡೆಯುವಿರಿ. ಆಸ್ತಿಕೊಳ್ಳುವ ವಿಚಾರಗಳಲ್ಲಿ ಮುಂದುವರೆಯಬಹುದು. ಮಕ್ಕಳ ಬಗ್ಗೆ ಅಸಮಾಧಾನಗಳು ದೂರವಾಗುತ್ತವೆ. ಸಂಗಾತಿಯ ಅಲಂಕಾರಿಕ ವಸ್ತುಗಳಿಗಾಗಿ ಹಣ ವ್ಯಯಿಸುವಿರಿ. ವೃತ್ತಿಯಲ್ಲಿ ಹಿರಿಯ ಅಧಿಕಾರಿಗಳನ್ನು ಗೌರವಿಸುವುದು ಒಳಿತು.

**

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ನಿಮ್ಮ ಕೆಲವು ಆಸೆಗಳು ಈಡೇರುತ್ತವೆ. ಕಾರ್ಯದಕ್ಷತೆಯಿಂದ ಕೆಲಸ ಮಾಡಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಪಡೆಯುವಿರಿ, ಇದರಿಂದ ಹೆಚ್ಚಿನ ಜವಾಬ್ದಾರಿ ನಿಮ್ಮ ಹೆಗಲೇರುತ್ತದೆ. ವಯಸ್ಕರಿಗೆ ವಿವಾಹಕ್ಕಾಗಿ ಸಂಬಂಧಗಳು ಕೂಡಿಬರಬಹುದು. ಸಂಗಾತಿಯ ಕಡೆಯವರ ಸಂತೋಷ ಕೂಟಕ್ಕೆ ಹೋಗಿ ಬರಬಹುದು. ಹಣ್ಣು-ತರಕಾರಿ ಬೆಳೆಗಾರರಿಗೆ ಉತ್ತಮ ಬೆಳೆ. ಸಂಗಾತಿ ಆದಾಯದಲ್ಲಿ ತುಸು ಏರಿಕೆ. ಸಂಬಂಧಿಕರಿಂದ ಸಹಾಯ ದೊರೆತು, ತಮ್ಮ ಕೃಷಿ ಮುಂದುವರಿಸಬಹುದು. ಬಾಯಿಯಲ್ಲಿ ಹುಣ್ಣು ಅಥವಾ ಹಲ್ಲಿನ ತೊಂದರೆ ಬಾಧಿಸಬಹುದು.

**

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)
ಸರ್ಕಾರಿ ಕೆಲಸಗಳು ಸರಾಗವಾಗಿ ಆಗುತ್ತವೆ. ಸರ್ಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸುವವರೆಗೆ ಸಹಾಯಧನಗಳು ಹರಿದುಬರುತ್ತವೆ. ಹಿರಿಯ ಸಹೋದ್ಯೋಗಿಗಳ ಸಲಹೆಯಿಂದ ನಿಮಗೆ ಅನುಕೂಲವಾಗುತ್ತದೆ. ಹಳೆಯ ಆಸ್ತಿ ವಿವಾದಗಳು ಹಿರಿಯರ ಮಧ್ಯ ಪ್ರವೇಶದಿಂದ ನಿವಾರಣೆಯಾಗುತ್ತವೆ. ಆರ್ಥಿಕ ಹಿಂಜರಿತದಿಂದ ಹೊರಬರಲು ಮಾರುಕಟ್ಟೆ ನೋಡಿ ವ್ಯವಹರಿಸಿರಿ. ಸರ್ಕಾರಿ ಸಾಲಗಳು ಸರಾಗವಾಗಿ ಸಿಗುತ್ತವೆ. ಹಿರಿಯರ ಆರೋಗ್ಯದಲ್ಲಿ ಚೇತರಿಕೆ. ಬರೀ ಮಾತಿನ ಮೇಲೆ ಸಾಲ ಕೊಡಬೇಡಿ.

**

ಸಿಂಹ ರಾಶಿ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ನೌಕರರ ಪರಿಶ್ರಮಕ್ಕೆ ತಕ್ಕ ಪ್ರತಿಫಲ. ಮಹಿಳೆಯರು ಭಾವೋದ್ವೇಗಕ್ಕೆ ಒಳಗಾಗುವ ಸಾಧ್ಯತೆ ಇದ್ದು, ಸಮಾಧಾನದಿಂದ ವ್ಯವಹರಿಸುವುದು ಒಳ್ಳೆಯದು. ಸವಾಲಿನ ಕ್ಷಣಗಳನ್ನು ಎದುರಿಸಿ ಯಶಸ್ಸುಪಡೆಯುವಿರಿ. ಬಂಧುಗಳ ನಡುವಿನ ವಿವಾದ ಬಗೆಹರಿಸಲು ನಿಮಗೆ ಕರೆ ಬರಬಹುದು, ಈ ವಿಚಾರದಲ್ಲಿ ಸಂಗಾತಿಯ ಸಲಹೆಯೂ ಅತಿ ಮುಖ್ಯ. ವಿದ್ಯಾಭ್ಯಾಸಕ್ಕಾಗಿ ಹಣಕಾಸು ಸಂಸ್ಥೆಗಳ ಮೊರೆ ಹೋಗಬೇಕಾದೀತು. ಮಕ್ಕಳ ವಿದ್ಯಾಭ್ಯಾಸ ಮತ್ತು ಅಭಿವೃದ್ಧಿ ಉತ್ತಮ.

**

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಗಣ್ಯರೊಂದಿಗೆ ಸಮಾರಂಭದಲ್ಲಿ ಭಾಗವಹಿಸುವ ಅವಕಾಶವಿದೆ. ಪ್ರಾಪ್ತ ವಯಸ್ಕರು ವೈವಾಹಿಕ ಜೀವನಕ್ಕೆ ಕಾಲಿಡಲು ಮಾಡುವ ಪ್ರಯತ್ನಗಳಿಗೆ ಫಲಿತಾಂಶ ಇರುತ್ತದೆ. ಸಣ್ಣ ಪ್ರಮಾಣದ ತೊಡಕುಗಳನ್ನು ವೃತ್ತಿಯಲ್ಲಿ ಎದುರಿಸಬೇಕಾಗುತ್ತದೆ. ಅಪರಿಚಿತರ ಸಹಕಾರದಿಂದ ಈ ತೊಡಕುಗಳು ನಿವಾರಣೆಯಾಗುತ್ತವೆ. ಆದಾಯಕ್ಕಿಂತ ಖರ್ಚು ಹೆಚ್ಚು. ನಿಮ್ಮ ಮತ್ತು ಮಕ್ಕಳ ನಡುವೆ ಅಂತರ ಹೆಚ್ಚುತ್ತದೆ. ಮೂಳೆಯ ನೋವುಗಳು ಸ್ವಲ್ಪ ಬಾಧಿಸಬಹುದು. ಸ್ವಂತ ಉದ್ದಿಮೆ ಮಾಡುತ್ತಿರುವವರ ಆದಾಯ ನಿಧಾನವಾಗಿ ಏರುತ್ತದೆ.

**

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಮನೆಯವರ ವಿರೋಧದ ನಡುವೆಯೂ ವೃತ್ತಿಗಾಗಿ ದೂರ ಪ್ರಯಾಣಿಸಬೇಕಾಗಬಹುದು. ಪ್ರಯಾಣದ ಕಾಲದಲ್ಲಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ನಿಮ್ಮ ಮಾತುಗಳು ಇತರರಿಗೆ ಬೇರೆ ಅರ್ಥವನ್ನು ಕೊಟ್ಟು ಘರ್ಷಣೆಗೆ ಕಾರಣ ಆಗಬಹುದು. ಇತರರ ವಿಷಯದಲ್ಲಿ ಅನಗತ್ಯ ಮೂಗುತೂರಿಸುವುದು ಬೇಡ, ಇದು ನಿಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿಯಬಹುದು. ಕೆಲಸ ಕಾರ್ಯಗಳಿಗೆ ಕಾಲಮಿತಿ ಹಾಕಿಕೊಂಡರೆ ಯಶಸ್ಸು. ಸಂಗಾತಿಯ ಕಡೆಯಿಂದ ಧನಸಹಾಯ ಒದಗುತ್ತದೆ. ಕೃಷಿಕರಿಗೆ ಅಲ್ಪ ಲಾಭ.

**

ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)
ಸಿದ್ಧಪಡಿಸಿದ ಆಹಾರ ವಸ್ತುಗಳನ್ನು ಮಾರುವವರಿಗೆ ವ್ಯವಹಾರದ ವಿಸ್ತರಣೆ ಇದೆ. ತೆರಿಗೆ ತಜ್ಞರಿಗೆ ದಾಖಲೆಯ ಪರಿಶೀಲನಗಾಗಿ ಹೆಚ್ಚಿನ ಸಮಯ ಬೇಕಾಗುತ್ತದೆ. ಪುಸ್ತಕ ಅಥವಾ ಗ್ರಂಥಗಳನ್ನು ಖರೀದಿಸುವಿರಿ. ಅತ್ಯಂತ ಪ್ರೀತಿಪಾತ್ರರಾದವರನ್ನು ಭೇಟಿ ಮಾಡುವಿರಿ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಕಡಿಮೆಯಾದರೂ ಗುರಿ ಸಾಧನೆಗೆ ತೊಂದರೆ ಇಲ್ಲ. ದಿನಸಿ ವ್ಯಾಪಾರಿಗಳಿಗೆ ನಿರೀಕ್ಷಿತ ವ್ಯಾಪಾರ. ಸರ್ಕಾರಿ ಗುತ್ತಿಗೆಗಳನ್ನು ಮಾಡುವವರಿಗೆ ಬಾಕಿ ಹಣ ಬರುತ್ತದೆ. ಒಡಹುಟ್ಟಿದವರು ಕೊಟ್ಟ ಸಾಲವನ್ನು ಈಗ ತೀರಿಸಬೇಕಾದ ಬಹುದು.

**

ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1 )
ಇಷ್ಟು ದಿನ ತೊಡಕಾಗಿದ್ದ ಕೆಲಸಗಳು ಈಗ ಸರಾಗವಾಗಿ ಆಗುತ್ತವೆ. ಮನೆಯವರ ಇಚ್ಛೆ ಪೂರೈಸುವ ಮೂಲಕ ಅವರ ಮನಸ್ಸುಗೆಲ್ಲುವಿರಿ. ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು. ಸತ್ಪುರುಷರ ದರ್ಶನ ಮಾಡುವ ಸಾಧ್ಯತೆಯಿದೆ. ಅಧ್ಯಯನದಲ್ಲಿನ ಆಸಕ್ತಿ ಹೆಚ್ಚಾಗಿ ಉತ್ತಮ ಜ್ಞಾನ ಸಂಪಾದನೆ ಆಗುತ್ತದೆ. ಮಕ್ಕಳ ಕ್ರೀಡಾ ಸಾಧನೆಗಳು ಮನಸ್ಸಿಗೆ ಸಂತೋಷ ತರುತ್ತವೆ. ತಂದೆಯಿಂದ ವ್ಯವಹಾರದ ಜವಾಬ್ದಾರಿಯ ಬಗ್ಗೆ ತಿಳಿದುಕೊಳ್ಳಬಹುದು. ಹೆಂಗಸರು ನಡೆಸುವ ಆಹಾರ ವಸ್ತುಗಳ ವ್ಯವಹಾರವು ಚೆನ್ನಾಗಿ ನಡೆಯುತ್ತದೆ.

**

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಉದ್ಯೋಗಿಗಳೊಡನೆ ಉತ್ತಮ ಸಂಬಂಧ ಇಟ್ಟುಕೊಳ್ಳುವಿರಿ. ನಿಮ್ಮ ಯೋಜನೆಗಳಿಗೆ ಬೇಕಾದ ಪೂರಕ ಮಾಹಿತಿ ಸಂಗ್ರಹಿಸುವಿರಿ. ಮಹಿಳಾ ಉದ್ಯೋಗಿಗಳಿಗೆ ಇದ್ದ ಮೇಲಧಿಕಾರಿಯ ಕಿರಿಕಿರಿ ತಪ್ಪುತ್ತದೆ. ಹಳೆಯ ಸ್ನೇಹಿತರ ಭೇಟಿಯಾಗಲಿದೆ. ಬಂಧುಗಳ ಮನೆಯ ಶುಭಕಾರ್ಯಕ್ಕೆ ಹೆಚ್ಚಿನ ಸಹಾಯ ಮಾಡುವಿರಿ. ಮಕ್ಕಳಿಂದ ಹೆಚ್ಚಿನ ಖರ್ಚು. ಸರ್ಕಾರಿ ಕೆಲಸಗಳಲ್ಲಿ ಸ್ವಲ್ಪ ನಿಧಾನಗತಿ. ಅಲಂಕಾರಿಕ ವಸ್ತು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ತಯಾರಿಸುವವರಿಗೆ ಬೇಡಿಕೆ ಹೆಚ್ಚುತ್ತದೆ.

**

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ವೈಯಕ್ತಿಕ ವಿಚಾರಗಳ ಬಗ್ಗೆ ಗಮನ ಹರಿಸಿರಿ. ನೆರೆಹೊರೆಯವರೊಂದಿಗೆ ಸಂಬಂಧಗಳು ವೃದ್ಧಿಸುತ್ತವೆ. ಕೆಲಸದಲ್ಲಿ ಶ್ರದ್ಧೆ ಮತ್ತು ವಿಶ್ವಾಸದಿಂದ ಮುಂದುವರಿಯಿರಿ. ಶತ್ರುಗಳು ಸಹ ನಿಮ್ಮ ಸಹಾಯ ಅಪೇಕ್ಷಿಸಿ ಬರುವರು. ಬಿಡುವಿಲ್ಲದ ಕಾರ್ಯಗಳಿಂದ ದೇಹಾಲಸ್ಯ ಉಂಟಾಗಬಹುದು. ಕೃಷಿಕರಿಗೆ ಉತ್ತಮ ಸೌಕರ್ಯಗಳು ಒದಗಿಬರುತ್ತವೆ. ಸರ್ಕಾರಿ ಕೆಲಸಗಳಲ್ಲಿ ಮುನ್ನಡೆ. ತಾಯಿಯಿಂದ ಸಹಾಯ ದೊರೆಯುತ್ತದೆ. ಬಂಧುಗಳೊಡನೆ ಕೂಡಿ ಮಾಡಿದ ವ್ಯವಹಾರಗಳಲ್ಲಿ ಲಾಭ.

**

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಜಮೀನು ಕೆಲಸಗಳು, ವಿಸ್ತರಣಾ ಕಾರ್ಯಗಳು ನಡೆಯುವುವು. ಬೇರೆಯವರ ಖುಷಿಗಾಗಿ ಬಣ್ಣದ ಮಾತು ಆಡಬೇಡಿ, ನೇರ ನಡೆ-ನುಡಿ ಅನುಸರಿಸಿ. ನಿಮ್ಮ ಪ್ರಾಮಾಣಿಕತೆಯು ಜನರಲ್ಲಿ ನಂಬಿಕೆ ತರುತ್ತದೆ. ಪದೇ ಪದೇ ಮಾತು ಬದಲಿಸುವುದರಿಂದ ಕುಟುಂಬ ಸದಸ್ಯರಿಂದ ವಿರೋಧ ಎದುರಿಸಬೇಕಾಗಬಹುದು. ವಾರದ ಮಧ್ಯಭಾಗದಲ್ಲಿ ಪುಷ್ಕಳ ಭೋಜನದ ಯೋಗವಿದೆ. ಹಳೆಯ ವಸ್ತುಗಳ ಮಾರಾಟಗಾರರಿಗೆ ವ್ಯಾಪಾರ ಇರುತ್ತದೆ. ಉದ್ಯೋಗದಲ್ಲಿ ಹೆಂಗಸರಿಗೆ ಬಡ್ತಿಯ ಯೋಗವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT