ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ: 6-6-2021ರಿಂದ 12-6-2021 ರವರೆಗೆ

ಅಕ್ಷರ ಗಾತ್ರ

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)

ಆಪ್ತರೊಂದಿಗೆ ವಿಚಾರ ವಿನಿಮಯ ಮಾಡಿ ಆರ್ಥಿಕ ಸಂಕಷ್ಟದಿಂದ ಹೊರಬರಲು ಯೋಜನೆಯೊಂದನ್ನು ರೂಪಿಸುವಿರಿ. ರಫ್ತು ಮಾರಾಟಗಾರರಿಗೆ ವ್ಯವಹಾರ ಕುದುರುವುದರಿಂದ ಲಾಭ ಸಹ ಹೆಚ್ಚುತ್ತದೆ. ಅನಿರೀಕ್ಷಿತ ಧನಾಗಮನದ ಸಾಧ್ಯತೆಗಳಿವೆ. ಕಲಾವಿದರುಗಳಿಗೆ ಹೆಚ್ಚಿನ ಅವಕಾಶಗಳು ದೊರೆತು ಸಂಪಾದನೆ ಹೆಚ್ಚುತ್ತದೆ. ಅವಿವಾಹಿತರಿಗೆ ವಿವಾಹ ಸಂಬಂಧಗಳು ಒದಗಿಬರುವ ಸಾಧ್ಯತೆಗಳಿವೆ. ಮಹಿಳೆಯರಿಗೆ ಸಂಗಾತಿಯಿಂದ ವಿಶೇಷ ಉಡುಗೊರೆ ದೊರೆಯುವ ಸಾಧ್ಯತೆ ಇದೆ. ಮಕ್ಕಳಿಂದ ಶುಭ ಸುದ್ದಿಯೊಂದು ಕೇಳಿ ಬರುತ್ತದೆ. ಗೃಹಾಲಂಕಾರ ವಸ್ತುಗಳನ್ನು ಖರೀದಿಸುವ ಸಾಧ್ಯತೆಯಿದೆ. ಭೂ ಸಂಬಂಧಿ ವ್ಯವಹಾರಗಳನ್ನು ನಡೆಸುವವರಿಗೆ ವ್ಯವಹಾರ ಹೆಚ್ಚಾಗಿ ಲಾಭ ಬರುತ್ತದೆ.

***

ವೃಷಭರಾಶಿ(ಕೃತಿಕಾ 2 3 4 ರೋಹಿಣಿ ಮೃಗಶಿರಾ1 2)

ಕೆಲವು ಸರ್ಕಾರಿ ನೌಕರರಿಗೆ ಪದೋನ್ನತಿಯು ಆಗುವ ಲಕ್ಷಣಗಳಿವೆ ಮತ್ತು ಜವಾಬ್ದಾರಿಗಳು ಹೆಚ್ಚಾಗುತ್ತದೆ. ಕಳೆದುಹೋಗಿದ್ದ ವಸ್ತುವೊಂದು ಈಗ ಸಿಕ್ಕು ಮನಸ್ಸಿಗೆ ನಿರಾಳವೆನಿಸುವುದು. ನಿಂತುಹೋಗಿದ್ದ ಕೆಲವು ಯೋಜನೆಗಳು ಪುನಃ ಆರಂಭವಾಗುತ್ತವೆ. ಕೈಮಗ್ಗ ನೇಕಾರರಿಗೆ ಕೈತುಂಬಾ ಕೆಲಸ ದೊರೆಯುತ್ತದೆ. ಶೃಂಗಾರ ಸಾಮಗ್ರಿಗಳನ್ನು ಮಾರುವವರ ವ್ಯವಹಾರ ಬಹಳ ವಿಸ್ತರಿಸುತ್ತದೆ. ಸ್ವಂತ ಉದ್ಯಮವನ್ನು ನಡೆಸುತ್ತಿರುವವರಿಗೆ ಇದ್ದ ತೊಂದರೆಗಳು ನಿವಾರಣೆ ಆಗುತ್ತವೆ. ಆಪ್ತರೊಬ್ಬರ ಭೇಟಿಯ ಸಂದರ್ಭ ಒದಗಿಬರಲಿದೆ. ಧನದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ.

***

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಬಂಧುಗಳೊಂದಿಗೆ ನಿಮ್ಮ ಸಂಬಂಧಗಳು ಬಹಳ ಗಟ್ಟಿಯಾಗುತ್ತವೆ. ಮನೆಯ ಜವಾಬ್ದಾರಿಗಳನ್ನು ಹೊರುವುದರಲ್ಲಿ ನಿರ್ಲಕ್ಷ್ಯ ಖಂಡಿತಬೇಡ. ಹಿರಿಯರಿಂದ ಆಸ್ತಿ ಒದಗುವ ಸಾಧ್ಯತೆಗಳಿವೆ. ವಾಹನ ಮಾರಾಟಗಾರರಿಗೆ ವ್ಯವಹಾರ ಹೆಚ್ಚಾಗಿ ಲಾಭವೂ ಹೆಚ್ಚುತ್ತದೆ. ಗೃಹ ನಿರ್ಮಾಣ ಕಾರ್ಯಗಳನ್ನು ಮಾಡಬಹುದು. ಆದರೆ ಬಂಡವಾಳದ ಬಗ್ಗೆ ಸರಿಯಾಗಿ ನಿರ್ಧಾರ ಮಾಡಿರಿ. ಆಸ್ತಿ ಖರೀದಿಸುವ ಸಾಧ್ಯತೆಗಳಿವೆ. ರೈತರ ಉತ್ಪನ್ನಗಳಿಗೆ ಹೆಚ್ಚು ಬೆಲೆ ದೊರೆತು ಲಾಭವಾಗುತ್ತದೆ. ವಿದ್ಯುತ್ ಉಪಕರಣಗಳನ್ನು ತಯಾರಿಸುವವರಿಗೆ ಬೇಡಿಕೆ ಹೆಚ್ಚಾಗುತ್ತದೆ. ಹೈನುಗಾರಿಕೆಯನ್ನು ಮಾಡುತ್ತಿರುವವರ ಆದಾಯ ಹೆಚ್ಚಾಗುತ್ತದೆ. ವೃತ್ತಿಯಲ್ಲಿದ್ದ ಗೊಂದಲಗಳು ನಿವಾರಣೆಯಾಗಿ ಮನಸ್ಸು ನಿರಾಳವಾಗುತ್ತದೆ.

***
ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)

ಒಂದು ಅಪವಾದದಿಂದ ಪಾರಾಗಲಿದ್ದೀರಿ. ವೃತ್ತಿ ನೈಪುಣ್ಯತೆಯಿಂದ ನೌಕರರಿಗೆ ವಿಶೇಷ ಸ್ಥಾನಮಾನಗಳು ದೊರೆಯುತ್ತವೆ. ಪದೋನ್ನತಿ ಇಂದ ಕೊಂಚ ಆರ್ಥಿಕ ಸುಧಾರಣೆ ಆಗುತ್ತದೆ. ನಿತ್ಯ ಕೆಲಸದ ಜೊತೆಗೆ ಹೊಸ ಕೆಲಸವನ್ನು ಹಮ್ಮಿಕೊಂಡು ಮಾಡಿ ಮುಗಿಸುವಿರಿ. ಮಾತನಾಡುವಾಗ ಒರಟುತನ ಖಂಡಿತ ಬೇಡ. ಮಕ್ಕಳ ನಡವಳಿಕೆಯಿಂದ ಮನಸ್ಸಿಗೆ ಬೇಸರವಾಗಬಹುದು. ಗುತ್ತಿಗೆ ವ್ಯವಹಾರಗಳನ್ನು ಮಾಡುವವರ ಕಾರ್ಯನೈಪುಣ್ಯತೆಯಿಂದ ಹೊಸ ಗುತ್ತಿಗೆಗಳು ದೊರೆಯುತ್ತವೆ. ಸಂಸಾರದಲ್ಲಿ ಕಾವೇರಿದ ಮಾತುಗಳು ನಡೆಯಬಹುದು, ಸಮಾಧಾನವೇ ಇದಕ್ಕೆ ತಕ್ಕ ಉತ್ತರ. ವಿದೇಶಾಂಗ ಇಲಾಖೆಗಳಲ್ಲಿ ಕೆಲಸ ಮಾಡುವವರ ಸ್ಥಾನಮಾನಗಳು ಹೆಚ್ಚಾಗಬಹುದು. ಹೊಸ ಹುದ್ದೆಗಳು ದೊರೆಯುವ ಸಂದರ್ಭವಿದೆ.

***

ಸಿಂಹ ರಾಶಿ(ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ಅನಿರೀಕ್ಷಿತ ಧನಲಾಭ ಹರಿದುಬರುತ್ತದೆ. ಅನಗತ್ಯ ಮಾತುಗಳು ಚರ್ಚೆಗಳಲ್ಲಿ ಭಾಗವಹಿಸದಿರುವುದು ಉತ್ತಮ. ಆಸ್ತಿ ಸಂಬಂಧವಾಗಿ ಹೊಸ ವ್ಯಾಜ್ಯಗಳು ತಲೆದೋರುವುದು. ಕ್ರೀಡಾಪಟುಗಳಿಗೆ ಉತ್ತೇಜನ ಕಡಿಮೆಯಾಗಬಹುದು. ವಾಹನ ವ್ಯಾಪಾರ ಮಾಡುವವರಿಗೆ ಲಾಭವಾಗುತ್ತದೆ. ಕಚೇರಿಗಳಲ್ಲಿ ಹಿರಿಯ ಅಧಿಕಾರಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ಮೂಳೆ ನೋವು ಕೆಲವರಿಗೆ ಬಾಧಿಸಬಹುದು. ತಾಯಿಯಿಂದ ಧನಸಹಾಯ ದೊರೆಯುವ ಸಂದರ್ಭವಿದೆ. ಹೊಸ ವ್ಯಾಪಾರಗಳಿಗಾಗಿ ನಿಮಗೆ ಆಹ್ವಾನ ಬರುತ್ತದೆ.

***

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ವೃತ್ತಿಜೀವನದಲ್ಲಿ ವರ್ಗಾವಣೆ ಆಗುವ ಲಕ್ಷಣಗಳಿವೆ. ಹಿರಿಯರ ವಿಚಾರಗಳಲ್ಲಿ ಉದಾಸೀನ ಸಲ್ಲದು. ಕುಟುಂಬದಲ್ಲಿನ ವಿವಾದಗಳು ಇತ್ಯರ್ಥವಾಗಿ ಮನಸ್ಸಿಗೆ ಮುದವಾಗಿ ಹೊಸಜೀವನ ಆರಂಭಿಸಬಹುದು. ಆಮದು ಮತ್ತು ರಫ್ತು ವ್ಯವಹಾರವನ್ನು ಮಾಡುವವರ ಆದಾಯ ಏರಿಕೆ ಕಾಣುತ್ತದೆ. ಅವಶ್ಯಕತೆಗಿಂತ ಹೆಚ್ಚಿನ ಹಣದ ನೆರವನ್ನು ಪಡೆಯುವುದು ಬೇಡ, ಇದು ಸಾಲಭಾದೆಗೆ ಕಾರಣವಾಗಬಹುದು. ಹಿರಿಯರ ಸಲಹೆ ಮಾತುಗಳು ಮುಂಬರುವ ಸಂಕಷ್ಟಗಳನ್ನು ದೂರ ಮಾಡುತ್ತವೆ. ಮಕ್ಕಳ ನಡವಳಿಕೆಗಳು ನಿಮಗೆ ಬೇಸರ ತರಬಹುದು. ತಾಯಿಯೊಡನೆ ಸಿಡುಕಿನ ಮಾತುಗಳು ಆಗಬಹುದು. ಹಿರಿಯರು ತಮ್ಮ ಮಕ್ಕಳನ್ನು ನೋಡುವ ಸಲುವಾಗಿ ದೂರ ಪ್ರಯಾಣ ಮಾಡಬಹುದು.

***

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಪ್ರಭಾವಿ ವ್ಯಕ್ತಿಗಳ ಜೊತೆ ಒಡನಾಟವನ್ನು ಮಾಡಿಕೊಂಡು ನಿಮ್ಮ ವ್ಯಕ್ತಿತ್ವವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವಿರಿ. ರಾಜಕೀಯದಲ್ಲಿ ಹೊಸ ತಿರುವು ಪಡೆದು ನಿಮ್ಮ ಸ್ಥಾನ ಬದಲಾಗಬಹುದು. ಶಿಕ್ಷಣ ಕ್ಷೇತ್ರದಲ್ಲಿರುವ ಕೆಲವರ ಸೇವೆಯನ್ನು ಗಮನಿಸಿ ವಿದ್ಯಾರ್ಥಿಗಳು ಸನ್ಮಾನ ಮಾಡುವರು. ನಿಮ್ಮ ಪ್ರಭಾವದಿಂದ ನೆರೆಹೊರೆಯವರ ಸಮಸ್ಯೆಗಳನ್ನು ಪರಿಹರಿಸಿ ಸಂತೋಷ ಪಡುವಿರಿ. ವ್ಯವಹಾರದಲ್ಲಿನ ವಿವಾದಗಳು ಇತ್ಯರ್ಥಗೊಂಡು ವ್ಯವಹಾರಗಳು ಸರಾಗವಾಗಿ ಸಾಗುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ವೃತ್ತಿಯಲ್ಲಿ ಇದ್ದ ಕಿರಿಕಿರಿಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದು.

***

ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)

ರಾಸಾಯನಿಕ ವಸ್ತುಗಳನ್ನು ತಯಾರಿಸಿ ರಫ್ತು ಮಾಡುವವರಿಗೆ ವ್ಯವಹಾರ ವಿಸ್ತರಿಸುತ್ತದೆ. ಗೃಹ ನಿರ್ಮಾಣ ಕಾರ್ಯದಲ್ಲಿ ಪ್ರಗತಿ ಇರುತ್ತದೆ. ಬರವಣಿಗೆ ಅಥವಾ ಸಾಹಿತ್ಯ ರಚನೆಕಾರರಿಗೆ ಅನುವಾದ ಮಾಡಿಕೊಡುವ ಕೆಲಸ ದೊರೆಯುತ್ತದೆ. ಉನ್ನತಾಧಿಕಾರಿಗಳ ಸಹಕಾರದಿಂದ ನೌಕರಿಯಲ್ಲಿ ಅನುಕೂಲತೆಗಳು ಹೆಚ್ಚಾಗುತ್ತವೆ. ತಾಯಿಯೊಡನೆ ಸಂಬಂಧ ಸುಧಾರಿಸುತ್ತವೆ. ಸರ್ಕಾರಿ ಕೆಲಸಗಳಲ್ಲಿ ಪ್ರಗತಿ ಇರುತ್ತದೆ. ಸರ್ಕಾರಿ ಸಂಸ್ಥೆಗಳಿಗೆ ಕಚ್ಚಾವಸ್ತುಗಳನ್ನು ಪೂರೈಕೆ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಹಿರಿಯರಿಂದ ಬರಬೇಕಾಗಿದ್ದ ಆಸ್ತಿಯು ಬರುವುದು ನಿಧಾನವಾಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ಆಸಕ್ತಿ ಬರುತ್ತದೆ.

***

ಧನಸ್ಸು ರಾಶಿ( ಮೂಲ ಪೂರ್ವಷಾಢ ಉತ್ತರಾಷಾಢ 1)

ಕೃಷಿಕರಿಗೆ ಅವರು ಬೆಳೆದ ಫಸಲಿನಿಂದ ಉತ್ತಮ ಆದಾಯ ದೊರೆಯುತ್ತದೆ. ತೈಲ ಉತ್ಪನ್ನಗಳ ಮಾರಾಟಗಾರರಿಗೆ ವ್ಯವಹಾರ ವಿಸ್ತರಿಸಿ ಲಾಭವೂ ಹೆಚ್ಚುತ್ತದೆ. ಆಭರಣ ತಯಾರಿಕೆ ಮಾಡುವವರಿಗೆ ಬೇಡಿಕೆ ಹೆಚ್ಚಾಗಿ ಹೆಚ್ಚು ತಯಾರಿಕಾ ಆದೇಶಗಳು ದೊರೆಯುತ್ತವೆ. ನೆನೆಗುದಿಗೆ ಬಿದ್ದಿದ್ದ ಕೆಲವು ಕೆಲಸಗಳು ಈಗ ಚುರುಕುಗೊಳ್ಳುತ್ತವೆ. ಮಕ್ಕಳಿಗಾಗಿ ಕೆಲವು ಆಲಂಕಾರಿಕ ವಸ್ತುಗಳನ್ನು ಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ. ಆರ್ಥಿಕ ಅಡಚಣೆಗಳು ಹಂತಹಂತವಾಗಿ ನಿವಾರಣೆಯಾಗುತ್ತವೆ. ಶಾರೀರಿಕ ಆಯಾಸ ಕಂಡುಬಂದರೂ ಕೆಲಸಗಳನ್ನು ಉತ್ಸಾಹದಿಂದ ಮಾಡುವಿರಿ. ರಾಜಕೀಯ ನಾಯಕರಿಗೆ ಹೆಚ್ಚಿನ ಹಿಂಬಾಲಕರು ದೊರೆಯುತ್ತಾರೆ.

***

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ಉದ್ಯಮವನ್ನು ವಿಸ್ತರಿಸಬೇಕೆಂದು ಇದ್ದವರು ಈಗ ವಿಸ್ತರಣೆಯನ್ನು ಮಾಡಬಹುದು. ಕಾರ್ಯಕ್ಷೇತ್ರವನ್ನು ವಿದೇಶದಲ್ಲಿ ಸ್ಥಾಪಿಸಬೇಕೆಂದು ಇರುವವರಿಗೆ ಈಗ ಅವಕಾಶ ಒದಗಿ ಬರುತ್ತದೆ. ಮಕ್ಕಳ ಸಾಧನೆಯ ಬಗ್ಗೆ ಹೆಮ್ಮೆ ಇರುತ್ತದೆ. ಮುಂದಾಲೋಚನೆಯಿಂದ ಆಲೋಚನೆ ಮಾಡಿ ನಿಮ್ಮ ವ್ಯವಹಾರದಲ್ಲಿ ಬರುವ ತೊಂದರೆಗಳನ್ನು ನಿವಾರಣೆ ಮಾಡಿಕೊಳ್ಳುವಿರಿ. ಸಮಾಜ ಕಲ್ಯಾಣಕ್ಕಾಗಿ ನೀವು ಕೊಡುವ ಸಲಹೆಗೆ ಉತ್ತಮ ಬೆಲೆ ಬರುತ್ತದೆ. ಸಂಗೀತ ಕಲಾಕಾರರಿಗೆ ಉತ್ತಮ ಸಂಗೀತಗಾರರ ಒಡನಾಟ ದೊರೆಯುವ ಸಾಧ್ಯತೆ ಇದೆ. ರಿಯಲ್ ಎಸ್ಟೇಟ್‌ನಂತಹ ಭೂಸಂಬಂಧಿ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ದೊರೆಯುತ್ತದೆ. ಹಣದ ಒಳಹರಿವು ಉತ್ತಮವಾಗಿರುತ್ತದೆ.

***

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ನಿಂತಿದ್ದ ನಿರ್ಮಾಣ ಕಾರ್ಯಗಳು ನಿಧಾನವಾಗಿ ಆರಂಭಗೊಳ್ಳುತ್ತವೆ. ವಾಹನ ಖರೀದಿ ಮಾಡುವವರು ಈಗ ಮಾಡಬಹುದು. ಪಾಲುದಾರಿಕೆಯ ವ್ಯವಹಾರದಲ್ಲಿ ಸ್ವಲ್ಪ ಬಿರುಕು ಮೂಡುವ ಸಾಧ್ಯತೆಗಳಿವೆ ಇದನ್ನು ಮಾತಿನಿಂದ ಸರಿಪಡಿಸಿಕೊಳ್ಳಿರಿ. ಆರ್ಥಿಕ ಸ್ಥಿತಿಯು ನಿಧಾನವಾಗಿ ಚೇತರಿಕೆಯತ್ತ ಸಾಗುತ್ತದೆ. ಸಣ್ಣ ಕೈಗಾರಿಕೆಗಳನ್ನು ನಡೆಸುತ್ತಿರುವವರು ಸ್ವಲ್ಪ ಚೇತರಿಕೆಯನ್ನು ಕಾಣಬಹುದು. ಆರ್ಥಿಕ ಸ್ಥಿತಿಯನ್ನು ಹತೋಟಿಗೆ ತಂದು ಕೆಲವು ಯೋಜನೆಗಳನ್ನು ಪ್ರಾರಂಭಿಸಬಹುದು. ಹಣದ ಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ವಾಹನ ಮಾರಾಟ ಮಾಡುವವರ ವ್ಯವಹಾರ ವೃದ್ಧಿಸಿ ಹೆಚ್ಚು ವಾಹನಗಳು ಮಾರಾಟವಾಗುತ್ತವೆ. ಉನ್ನತ ಹುದ್ದೆಯ ಸರ್ಕಾರಿ ಅಧಿಕಾರಿಗಳಿಗೆ ಕಾರ್ಯದ ಒತ್ತಡ ಹೆಚ್ಚಾಗುತ್ತದೆ.

***

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಕೆಲವರಿಗೆ ಪ್ರಮುಖ ಜಾಗಗಳಲ್ಲಿ ಸಲಹೆಗಾರರಾಗಿ ಕೆಲಸ ಮಾಡುವ ಅವಕಾಶ ಒದಗುತ್ತದೆ. ಜಾಹೀರಾತು ಕಂಪನಿಗಳು ಸ್ವಲ್ಪ ಏಳಿಗೆಯನ್ನು ಕಾಣಬಹುದು. ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಹಿನ್ನಡೆಯಾದರೂ ನಂತರ ಸರಿಯಾಗುತ್ತದೆ. ಹಣದ ಹರಿವು ಸಾಕಷ್ಟಿರುತ್ತದೆ. ಕೆಲವರಿಗೆ ಸರ್ಕಾರಿ ಕೆಲಸಗಳಲ್ಲಿ ಹೆಚ್ಚಿನ ಅನುಕೂಲ ಸಿಗುತ್ತದೆ. ಕೋರ್ಟ್‌ ಕಚೇರಿ ವ್ಯವಹಾರಗಳಲ್ಲಿ ಮುನ್ನಡೆಯನ್ನು ಕಾಣಬಹುದು. ಕ್ರೀಡಾಪಟುಗಳಿಗೆ ಅವರ ಸಾಧನೆಯನ್ನು ತೋರಿಸಲು ಅವಕಾಶ ಸಿಗುತ್ತದೆ. ಕೃಷಿ ವಿಜ್ಞಾನವನ್ನು ಸಂಶೋಧನೆಯನ್ನು ಮಾಡುತ್ತಿರುವವರಿಗೆ ಉತ್ತಮ ಸವಲತ್ತುಗಳು ದೊರೆಯುತ್ತವೆ. ಹಿರಿಯರೊಡನೆ ಸಂಬಂಧಗಳು ಕಡಿಮೆಯಾಗಬಹುದು. ಕಬ್ಬಿಣದ ವ್ಯಾಪಾರಿಗಳಿಗೆ ವ್ಯವಹಾರ ಹೆಚ್ಚಾಗಿ ಹಣದ ಹರಿವು ಹೆಚ್ಚುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT