ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 ವಾರ ಭವಿಷ್ಯ | 2023 ಏಪ್ರಿಲ್ 09, ಭಾನುವಾರದಿಂದ ಏಪ್ರಿಲ್‌ 15, ಶನಿವಾರದವರೆಗೆ

ಅಕ್ಷರ ಗಾತ್ರ

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)

ಸಂಬಂಧಗಳನ್ನು ಗಟ್ಟಿ ಮಾಡಿಕೊಳ್ಳುವುದರಿಂದ ನಿಮಗೆ ವೈಯಕ್ತಿಕ ಜೀವನದಲ್ಲಿ ಲಾಭವಾಗುತ್ತದೆ. ಕೆಲವೊಮ್ಮೆ ನೀವು ಹಾಕಿಕೊಂಡ ನಿಯಮಗಳನ್ನು ಬದಿಗಿಟ್ಟು ಹೊಂದಿಕೊಳ್ಳುವ ಅನಿವಾರ್ಯತೆ ಎದುರಾಗಬಹುದು. ಹೋಟೆಲ್ ಉದ್ಯಮದವರಿಗೆ ನಿತ್ಯದ ಆದಾಯದಲ್ಲಿ ಸಾಕಷ್ಟು ವ್ಯತ್ಯಾಸಗಳು ಕಂಡುಬರುವುದು. ವಿದ್ಯಾರ್ಥಿಗಳು ತಮ್ಮ ಅಭ್ಯಾಸವನ್ನು ಹೆಚ್ಚಿನ ಶ್ರದ್ಧೆಯಿಂದ ಮಾಡುವುದರಿಂದ ಯಶಸ್ಸನ್ನು ಪಡೆಯುವರು. ವೃತ್ತಿಯಲ್ಲಿ ಉನ್ನತ ಅಧಿಕಾರಿಗಳ ಭೇಟಿ ಆಗುವ ಸಂದರ್ಭವಿದೆ. ಧಾನ್ಯಗಳ ವ್ಯಾಪಾರಿಗಳಿಗೆ ದವಸವನ್ನು ಶೇಖರಣೆ ಮಾಡಲು ಅನುಕೂಲ ದೊರೆಯುತ್ತದೆ. ಸಂಸಾರದಲ್ಲಿ ಸಾಕಷ್ಟು ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯವಾಗಬಹುದು. ಸರ್ಕಾರಿ ಕೆಲಸಗಳಲ್ಲಿ ನಿಧಾನಗತಿಯನ್ನು ಕಾಣಬಹುದು. ಹಣದ ಒಳಹರಿವು ಸ್ವಲ್ಪಮಟ್ಟಿಗೆ ಸುಧಾರಿಸುತ್ತದೆ.

ವೃಷಭರಾಶಿ(ಕೃತಿಕಾ2, 3, 4 ರೋಹಿಣಿ ಮೃಗಶಿರಾ1, 2)

ಅಭಿವೃದ್ಧಿಯ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸೂಕ್ತ ಸಮಯ ಇದಾಗಿದೆ. ಬೇರೆಯವರ ಸಹಾಯವನ್ನು ಅಪೇಕ್ಷಿಸುತ್ತದೆ. ನಿಮ್ಮ ವೈಯಕ್ತಿಕ ಜವಾಬ್ದಾರಿಯಿಂದ ನಡೆದುಕೊಂಡಲ್ಲಿ ಹೆಚ್ಚಿನ ಮನ್ನಣೆ ಇರುತ್ತದೆ. ಇರುವ ಕೆಲಸವನ್ನು ಬಿಟ್ಟು ಹೊಸ ಕೆಲಸಕ್ಕೆ ಹೋಗಲು ರಾಜೀನಾಮೆ ನೀಡುವಿರಿ. ಹೊಸ ಕಂಪನಿಯೊಂದಿಗೆ ಸರಿಯಾಗಿ ಒಪ್ಪಂದವನ್ನು ಮಾಡಿಕೊಳ್ಳಿರಿ. ಕೃಷಿ ಆಧಾರಿತ ವಸ್ತುಗಳಿಗೆ ಉತ್ತಮ ಬೇಡಿಕೆ ಬರುತ್ತದೆ. ವಿದೇಶದಲ್ಲಿ ಉದ್ಯೋಗಕ್ಕಾಗಿ ಶ್ರಮಿಸುತ್ತಿರುವವರಿಗೆ ಉದ್ಯೋಗದ ಅವಕಾಶಗಳು ದೊರೆಯುತ್ತವೆ. ನಿಮ್ಮ ಆರೋಗ್ಯದಲ್ಲಾಗುವ ಬದಲಾವಣೆಗಳಿಗೆ ಆಹಾರವೇ ಮುಖ್ಯ ಕಾರಣವಾಗಬಹುದು. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿರುತ್ತದೆ. ರಾಜಕೀಯ ರಂಗದಲ್ಲಿ ರುವವರಿಗೆ ಮುಂದಾಳತ್ವ ವಹಿಸುವ ಅವಕಾಶ ದೊರೆಯಬಹುದು.

ಮಿಥುನ ರಾಶಿ(ಮೃಗಶಿರಾ 3, 4 ಆರಿದ್ರಾ ಪುನರ್ವಸು 1, 2,3)

ನಿಮ್ಮ ಸಹವರ್ತಿಗಳು ಹಾಗೂ ಬಂಧುಗಳನ್ನು ವಿಶ್ವಾಸದಿಂದ ಕಾಣುವುದು ಬಹಳ ಮುಖ್ಯ ಇಲ್ಲದಿದ್ದಲ್ಲಿ ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿ ಉಂಟು ಮಾಡಬಹುದು. ತಾಂತ್ರಿಕ ಕ್ಷೇತ್ರದಲ್ಲಿರುವ ಕೆಲವರಿಗೆ ಸಾಧನೆ ಮಾಡುವುದು ಕಷ್ಟವೆನಿಸಬಹುದು. ಹೆಚ್ಚಿನಶ್ರಮ ಹಾಕಿ ಸಾಧಿಸಿರಿ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಆತಂಕವೇನಿಲ್ಲ.ಮಕ್ಕಳ ವಿದ್ಯಾಭ್ಯಾಸದಲ್ಲಿ ಸಾಧಾರಣ ಪ್ರಗತಿ ಇರುತ್ತದೆ. ಟ್ರಾವೆಲ್ ಏಜೆಂಟರುಗಳಿಗೆ ಹೆಚ್ಚಿನ ವ್ಯವಹಾರ ನಡೆಯುವ ಸಾಧ್ಯತೆಗಳಿವೆ. ಕೃಷಿಕರು ಹೆಚ್ಚಿನ ಆದಾಯವನ್ನು ನಿರೀಕ್ಷಿಸಬಹುದು. ಹೆಣ್ಣು ಮಕ್ಕಳ ಪ್ರಗತಿ ತೃಪ್ತಿಕರವಾಗಿರುತ್ತದೆ. ಹರಿತವಾದ ಆಯುಧಗಳಿಂದ ಸ್ವಲ್ಪ ದೂರವಿರುವುದು ಉತ್ತಮ. ತ್ತಿಯಲ್ಲಿ ಇದ್ದ ಗೋಜಲುಗಳು ನಿವಾರಣೆಯಾಗಿ ಬಡ್ತಿ ಸಿಗುವ ಯೋಗವಿದೆ. ಹಣದ ಒಳಹರಿವು ಸಾಮಾನ್ಯ ಮಟ್ಟದಲ್ಲಿ ಇರುತ್ತದೆ.

ಕಟಕ ರಾಶಿ( ಪುನರ್ವಸು 4 ಪುಷ್ಯಾ, ಆಶ್ಲೇಷ)

ವಾಸ ಮಾಡುವ ಜಾಗದ ಬದಲಾವಣೆಯು ಅನಿವಾರ್ಯವಾಗಬಹುದು. ಸಂದರ್ಭಗಳನ್ನು ನಿಮಗೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳುವ ಜಾಣ್ಮೆಯನ್ನು ರೂಡಿಸಿಕೊಳ್ಳಿರಿ. ಲೆಕ್ಕಪತ್ರಗಳಲ್ಲಿ ಕಂಡುಬಂದಿದ್ದ ಕ್ಲಿಷ್ಟ ಸಮಸ್ಯೆಯು ಬಗೆಹರಿಯುತ್ತದೆ. ರಿಯಲ್ ಎಸ್ಟೇಟ್ ಉದ್ಯಮದವರಿಗೆ ವ್ಯವಹಾರ ನಿಧಾನವಾಗಬಹುದು. ಇಂಜಿನಿಯರಿಂಗ್ ಕ್ಷೇತ್ರದ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಾಧನೆ ಮಾಡುವ ಯೋಗವಿದೆ. ವಕೀಲರಿಗೆ ಕೋರ್ಟಿನಲ್ಲಿ ಸಾಕಷ್ಟು ಗೊಂದಲದ ವಾತಾವರಣಗಳು ಎದುರಾಗಬಹುದು. ಹೊಸದಾಗಿ ಉದ್ಯೋಗಕ್ಕೆ ಸೇರಿದವರಿಗೆ ಹೊಸ ರೀತಿಯ ಜವಾಬ್ದಾರಿಗಳು ಸಿಗುತ್ತವೆ. ಉಪಾಧ್ಯಾಯರಿಗೆ ಹೆಚ್ಚಿನ ಗೌರವ ದೊರೆಯುತ್ತದೆ. ಹಣದ ಒಳಹರಿವು ನಿರೀಕ್ಷೆಯ ಹತ್ತಿರ ಬರುತ್ತದೆ. ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ನಿರೀಕ್ಷಿಸಿದ್ದ ಸ್ಥಳಕ್ಕೆ ವರ್ಗಾವಣೆಯ ದೊರೆಯಬಹುದು.

ಸಿಂಹ ರಾಶಿ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ಕೃಷಿ ಕೆಲಸ ಕಾರ್ಯಗಳು ನಿಮ್ಮ ನಿರೀಕ್ಷೆಗೆ ತಕ್ಕಂತೆ ನಡೆಯುತ್ತವೆ. ಕೃಷಿಯಿಂದ ಆದಾಯವನ್ನು ನಿರೀಕ್ಷಣೆ ಮಾಡಬಹುದು. ಮೇಲಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳುವುದು ಮುಖ್ಯ. ಎಲೆಕ್ಟ್ರಿಕಲ್ ಗುತ್ತಿಗೆದಾರರಿಗೆ ಹೆಚ್ಚಿನ ಕೆಲಸಗಳು ದೊರೆಯುತ್ತವೆ. ಶುಷ್ಕ ಹಣ್ಣುಗಳನ್ನು ಮಾರಾಟ ಮಾಡುವವರ ವ್ಯವಹಾರ ವಿಸ್ತರಿಸುತ್ತದೆ. ಹಣದ ಒಳಹರಿವು ಏರಿಕೆಯ ಹಂತದಲ್ಲಿರುತ್ತದೆ. ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಿರಿ. ಆಸ್ತಿ ವ್ಯವಹಾರ ಮಾಡುವವರ ಆದಾಯ ಹೆಚ್ಚುತ್ತದೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಅನಿಸಿದರೂ ಕೆಲಸ ಕಾರ್ಯಗಳು ಆಗುತ್ತವೆ. ಕುಟುಂಬದಲ್ಲಿ ಬರುವ ವ್ಯತ್ಯಾಸ ಗಳನ್ನು ಶಾಂತತೆಯಿಂದ ಎದುರಿಸುವುದು ಮುಖ್ಯ. ವಿದೇಶಿ ವ್ಯವಹಾರ ಮಾಡುವರ ಆದಾಯ ಹೆಚ್ಚಾಗುತ್ತದೆ.

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ವೃತ್ತಿಜೀವನಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಗೊಂದಲ ಉಂಟಾಗಬಹುದು, ಪರಿಣಿತರ ಸಲಹೆ ಸೂಚನೆಗಳನ್ನು ತಿಳಿದು ನಡೆಯಿರಿ. ವಿಲಾಸಿ ಜೀವನದತ್ತ ಮನಸ್ಸು ಹೊರಳುತ್ತದೆ ಈ ಬಗ್ಗೆ ಎಚ್ಚರವಹಿಸಿರಿ. ಶೇರು ಮಾರುಕಟ್ಟೆ ವ್ಯವಹಾರ ಮಾಡುವವರಿಗೆ ನಷ್ಟದ ಬಿಸಿ ತಟ್ಟಬಹುದು. ವಾಹನ ಖರೀದಿಯ ಬಗ್ಗೆ ಚಿಂತನೆ ಬರುತ್ತದೆ. ಕಬ್ಬಿಣ, ಸಿಮೆಂಟ್ ವ್ಯಾಪಾರ ಮಾಡುವವರಿಗೆ ವ್ಯವಹಾರ ಚೆನ್ನಾಗಿರುತ್ತದೆ. ಕಟ್ಟಡ ಕಾರ್ಮಿಕರಿಗೆ ಹೆಚ್ಚು ಕೆಲಸ ದೊರೆತು ಹೆಚ್ಚಿನ ಸಂಪಾದನೆಯಾಗುತ್ತದೆ. ಸಂಘ ಸಂಸ್ಥೆಗಳಲ್ಲಿ ನಿಮಗೆ ಪ್ರಾಮುಖ್ಯತೆ ಪಡೆಯಲು ಪ್ರಯತ್ನ ಪಡುವಿರಿ. ಬೇಕರಿ ವಸ್ತುಗಳು ಹಾಗೂ ಸಿಹಿ ತಿಂಡಿಗಳನ್ನು ಮಾರಾಟ ಮಾಡುವವರಿಗೆ ಹೆಚ್ಚು ವ್ಯಾಪಾರವಿರುತ್ತದೆ. ಕೃಷಿ ಸಲಕರಣೆಗಳನ್ನು ತಯಾರಿಸಿ ಮಾರುವವರಿಗೆ ಲಾಭವಿರುತ್ತದೆ.

ತುಲಾ ರಾಶಿ( ಚಿತ್ತಾ 3, 4 ಸ್ವಾತಿ, ವಿಶಾಖ 1, 2, 3)

ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುಂಚೆ ಭವಿಷ್ಯದ ಚಿಂತೆ ಇರಲಿ. ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಲೇಬೇಕಾಗುತ್ತದೆ. ನಿಮ್ಮ ಕೆಲಸ ಕಾರ್ಯಗಳಿಂದಲೇ ನೀವು ಸಮಸ್ಯೆಗೆ ಸಿಲುಕುವಿರಿ. ಕೃಷಿ ಕಾರ್ಮಿಕರಿಗೆ ಬಿಡುವಿಲ್ಲದ ಕೆಲಸ ದೊರೆತು ಉತ್ತಮ ಸಂಪಾದನೆ ಆಗುತ್ತದೆ. ನಿಮ್ಮ ಕೆಲವೊಂದು ಯೋಜನೆಗಳು ಅರ್ಧದಲ್ಲೇ ನಿಲ್ಲುವ ಲಕ್ಷಣಗಳಿವೆ. ಮರಗೆಲಸ ಮಾಡುವವರಿಗೆ ಹೆಚ್ಚಿನ ಕೆಲಸ ದೊರೆತು ಆದಾಯ ಹೆಚ್ಚುತ್ತದೆ. ರಾಸಾಯನಿಕ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ವ್ಯವಹಾರ ವಿಸ್ತರಿಸುತ್ತದೆ. ಸರ್ಕಾರಿ ಗುತ್ತಿಗೆ ಮಾಡುತ್ತಿರುವವರಿಗೆ ಆಪಾದನೆಗಳು ಬರುವ ಸಾಧ್ಯತೆ ಇದೆ. ಎಚ್ಚರ ವಹಿಸಿರಿ. ವಿದ್ಯಾರ್ಥಿಗಳಿಗೆ ಸಾಧಾರಣ ಫಲಿತಾಂಶ ಇರುತ್ತದೆ. ಬೆಲೆ ಬಾಳುವ ವಸ್ತುಗಳ ಬಗ್ಗೆ ಎಚ್ಚರ ಇರಲಿ. ಧನದಾಯವು ಮಂದಗತಿಯಲ್ಲಿರುತ್ತದೆ.

ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)

ವಿಲಾಸಿ ಜೀವನಕ್ಕೆ ಮೊರೆ ಹೋಗದಂತೆ ಎಚ್ಚರ ವಹಿಸಿರಿ. ನಿಮ್ಮ ಧನದ ಸಮಸ್ಯೆಗಳಿಗೆ ಮೂಲ ಕಾರಣವನ್ನು ತಿಳಿಯುವುದು ಬಹಳ ಮುಖ್ಯ. ಧನದಾ ಯವು ಸಾಮಾನ್ಯ ಸ್ಥಿತಿಯಲ್ಲಿ ಇರುತ್ತದೆ. ಸರ್ಕಾರಿ ಸಾಲ ಸೌಲಭ್ಯಗಳು ಈಗ ದೊರೆಯುತ್ತವೆ. ಸಿವಿಲ್ ಇಂಜಿನಿಯರ್‌ಗಳಿಗೆ ನಿರ್ಮಾಣ ಕಾರ್ಯಗಳ ಗುತ್ತಿಗೆ ದೊರೆಯುತ್ತವೆ. ಸಂಸ್ಥೆಗಳಲ್ಲಿ ಲೆಕ್ಕಾಚಾರದ ಜವಾಬ್ದಾರಿಯನ್ನು ಹೊಂದಿರುವವರು ಎಚ್ಚರದಲ್ಲಿ ಕೆಲಸ ಮಾಡಬೇಕು. ಪಶುಸಂಗೋಪನೆಗಾಗಿ ಬಂಡವಾಳ ಹೂಡುವಿರಿ. ಉದ್ಯೋಗ ನಿಮಿತ್ತವಾಗಿ ದೂರದ ಪ್ರಯಾಣ ಮಾಡಬೇಕಾಗಬಹುದು. ಕೃಷಿ ಉಪಕರಣಗಳನ್ನು ತಯಾರಿಸಿ ಮಾರುವವರಿಗೆ ಹೆಚ್ಚಿನ ವ್ಯವಹಾರ ನಡೆದು ಆದಾಯ ಬರುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಗತಿ ಯನ್ನು ಕಾಣುವ ಯೋಗವಿದೆ. ಸಂಗಾತಿಯ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು.

ಧನಸ್ಸು ರಾಶಿ(ಮೂಲ, ಪೂರ್ವಾಷಾಢ ಉತ್ತರಾಷಾಢ 1)

ಕೈ ಹಾಕಿದ ಕೆಲವು ಕೆಲಸಗಳು ಯಾವುದೇ ಅಡೆತಡೆ ಇಲ್ಲದೆ ನೆರವೇರುತ್ತವೆ. ಮಿತ್ರ ವೃಂದದಲ್ಲಿ ಹಣಕಾಸಿನ ವಿಚಾರದ ಸಮಸ್ಯೆಗಳು ಬರಬಹುದು. ಆಸ್ತಿಯ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತಾಳ್ಮೆಯಿಂದ ಇರುವುದು ಬಹಳ ಮುಖ್ಯ. ಉಳಿತಾಯದ ಹಣದ ಹೊಂದಾಣಿಕೆಯಿಂದ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸುವಿರಿ. ವಕೀಲರುಗಳಿಗೆ ಅವರ ಕಕ್ಷಿದಾರರಿಂದ ಹೆಚ್ಚಿನ ಆದಾಯ ಬರುವ ಸಾಧ್ಯತೆಗಳು ಇವೆ. ರಾಜಕೀಯ ವ್ಯಕ್ತಿಗಳು ಜನರ ಮನಸ್ಸನ್ನು ತಲುಪಲು ಮಾಡುವ ಯತ್ನದಲ್ಲಿ ಸಫಲತೆಯನ್ನು ಕಾಣುವರು. ಔಷಧ ತಯಾರಕರಿಗೆ ಹೆಚ್ಚಿನ ತಯಾರಿಕಾ ಬೇಡಿಕೆಗಳು ದೊರೆಯುತ್ತವೆ. ಆರೋಗ್ಯದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಬಂದರೂ ತೊಂದರೆ ಇಲ್ಲ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ಕಡಿಮೆ ಮಾತನಾಡುವುದು ನಿಮಗೆ ಒಳ್ಳೆಯದು.

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ನಿಮ್ಮ ಕಲ್ಪನಾ ಶಕ್ತಿ ಚುರುಕಾಗಿ ಕೆಲಸ ಮಾಡಿ ನಿಮಗೆ ಗೌರವವನ್ನು ತಂದು ಕೊಡುತ್ತದೆ. ಎಲೆಕ್ಟ್ರಾನಿಕ್ ಉಪಕರಣಗಳನ್ನು ಮಾರಾಟ ಮಾಡುವವರಿಗೆ ವ್ಯಾಪಾರ ವೃದ್ಧಿಯಾಗುತ್ತದೆ. ಮಾತಿನಲ್ಲಿ ಕಾಠಿಣ್ಯತೆ ಖಂಡಿತ ಬೇಡ. ವಿದೇಶಕ್ಕೆ ಅದಿರನ್ನು ರಫ್ತು ಮಾಡುವವರಿಗೆ ಬೇಡಿಕೆ ಹೆಚ್ಚಾಗುತ್ತದೆ. ಮಕ್ಕಳ ವಿಷಯದಲ್ಲಿ ಶುಭ ವಾರ್ತೆಗಳನ್ನು ಕೇಳುವಿರಿ. ಕೃಷಿಯಿಂದ ನಿರೀಕ್ಷಿತ ಆದಾಯ ದೊರಕುವುದಿಲ್ಲ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಸಾಮಾಜಿಕ ಕಾರ್ಯಗಳಲ್ಲಿ ವೇದಿಕೆ ಹಂಚಿಕೊಳ್ಳುವ ಯೋಗವಿದೆ. ಬಂಧುಬಾಂಧವರ ಒಡನಾಟ ಹೆಚ್ಚುತ್ತದೆ. ಹೊಸ ವಾಹನವನ್ನು ಕೊಳ್ಳುವ ಆಲೋಚನೆಯನ್ನು ಮಾಡುವಿರಿ. ಕ್ರೀಡಾಪಟುಗಳಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ.

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ, ಪೂರ್ವಭಾದ್ರ 1 2 3)

ಹಿರಿಯರ ಸರಳತೆ ಅವರಿಗೆ ಹೆಚ್ಚು ಮೆರಗು ತರುತ್ತದೆ. ಸಕಾರಾತ್ಮಕ ಮನೋಭಾವದಿಂದ ಎಲ್ಲರ ಮನವನ್ನು ಗೆಲ್ಲುವರು. ವ್ಯಾಪಾರ ವ್ಯವಹಾರಗಳಲ್ಲಿ ಪೈಪೋಟಿ ಹೆಚ್ಚಾಗುತ್ತದೆ. ನಿಧಾನ ಗತಿಯಲ್ಲಿ ಸಾಗುತ್ತಿದ್ದ ನಿರ್ಮಾಣ ಕಾರ್ಯಗಳು ಮುಕ್ತಾಯ ಹಂತಕ್ಕೆ ಬರುತ್ತವೆ. ಕೋರ್ಟು ಕಚೇರಿ ವಿಷಯದಲ್ಲಿ ನಿಮಗೆ ಶುಭ ಸಮಾಚಾರಗಳು ಕೇಳಿ ಬರುತ್ತವೆ. ವೃತ್ತಿ ರಂಗದಲ್ಲಿ ಹಿತಶತ್ರುಗಳು ಹೆಚ್ಚಾಗಬಹುದು. ಧನಾದಾಯವು ನಿರೀಕ್ಷೆಯ ಮಟ್ಟಕ್ಕೆ ಇರುತ್ತದೆ. ಹಿರಿಯರ ಆರೋಗ್ಯ ಸುಧಾರಣೆಯಾಗಿ ನೆಮ್ಮದಿ ಅನಿಸುತ್ತದೆ. ಹೊಸ ಜನರ ಸಂಪರ್ಕ ದೊರೆತು ಹೊಸ ವಿಷಯಗಳನ್ನು ತಿಳಿಯುವಿರಿ. ಯುವಕರು ಉದ್ಯೋಗ ಸ್ಥಳದಲ್ಲಿನ ಶಿಷ್ಟಾಚಾರಗಳನ್ನು ಪಾಲಿಸುವುದು ಬಹಳ ಮುಖ್ಯ. ಪುಸ್ತಕ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಬರುತ್ತದೆ.

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಕೆಲಸಗಳನ್ನು ಮುಂದೂಡುವ ಅಭ್ಯಾಸವನ್ನು ಕಡಿಮೆ ಮಾಡಿರಿ. ನಿಮ್ಮ ವ್ಯವಹಾರದಲ್ಲಿನ ಯೋಜನೆ ಹಾಗೂ ಅವುಗಳ ಬೆಳವಣಿಗೆಗೆ ಬಗ್ಗೆ ಗಮನಹರಿಸುವುದು ಬಹಳ ಮುಖ್ಯ. ಅಧ್ಯಯನಕ್ಕಾಗಿ ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. ನೃತ್ಯ ಮತ್ತು ಅಭಿನಯ ಕಲೆಗಳನ್ನು ಪ್ರದರ್ಶಿಸುವವರಿಗೆ ಬೇಡಿಕೆ ಬರುತ್ತದೆ. ಪ್ರಭಾವಿ ರಾಜಕಾರಣಿಗಳ ಜೊತೆ ಮಾತನಾಡಿ ನಿಮ್ಮ ಆಸ್ತಿ ವ್ಯವಹಾರಗಳನ್ನು ಸರಿಪಡಿಸಿಕೊಳ್ಳುವಿರಿ. ಹಣದ ಒಳಹರಿವು ಮಧ್ಯಮ ಗತಿಯಲ್ಲಿರುತ್ತದೆ. ವಿದೇಶಿ ಯಂತ್ರಗಳನ್ನು ತರಿಸಿ ಮಾರಾಟ ಮಾಡುವವರಿಗೆ ಹೆಚ್ಚಿನ ವ್ಯವಹಾರ ನಡೆಯುತ್ತದೆ. ಆಶಿಸುತ್ತಿದ್ದ ಆಸ್ತಿಯನ್ನು ಈಗ ಕೊಳ್ಳಬಹುದು. ಬಂಧು ಗಳೊಡನೆ ವಿಶ್ವಾಸವನ್ನು ಮೂಡಿಸಿಕೊಳ್ಳುವುದು ಒಳಿತು. ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ಎದುರಾಗಿದ್ದ ಕಾನೂನು ತೊಡಕುಗಳು ಈಗ ನಿವಾರಣೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT