ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ: 04-10-2020ರಿಂದ 10-10-2020ರವರೆಗೆ

ಅಕ್ಷರ ಗಾತ್ರ

ಡಾ.ಎಂ ಎನ್ ಲಕ್ಷ್ಮೀನರಸಿಂಹಸ್ವಾಮಿ, ಮೊಬೈಲ್‌ ನಂಬರ್‌: 8197304680

***

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)

ಖಾಸಗಿ ಉದ್ಯೋಗಿಗಳಿಗೆ ಉತ್ತಮ ಯಶಸ್ಸು. ನಿಮ್ಮ ಅನುಭವ ಮತ್ತು ಕಾರ್ಯಕ್ಷಮತೆಗೆ ಅನುಗುಣವಾಗಿ ಹೊಸ ಕೆಲಸಗಳು ದೊರೆಯುವ ಸಾಧ್ಯತೆ ಇದೆ. ಹಿರಿಯ ರಾಜಕೀಯ ಮುಖಂಡರು ತಮ್ಮ ವೃತ್ತಿ ಜೀವನದಲ್ಲಿ ಹಿನ್ನಡೆಯಾಗಿ ಸ್ವಲ್ಪ ಅತಂತ್ರ ಸ್ಥಿತಿ ಕಾಣಬೇಕಾಗಬಹುದು. ವ್ಯವಹಾರಗಳಲ್ಲಿ ಆತುರದ ತೀರ್ಮಾನ ಬೇಡ, ತಜ್ಞರ ಸಲಹೆಯಂತೆ ತೀರ್ಮಾನಿಸಿ. ಹೆಣ್ಣುಮಕ್ಕಳ ಅಭಿವೃದ್ಧಿಯು ನಿರೀಕ್ಷೆಗೆ ಮೀರಿ ಇರುತ್ತದೆ. ಕಣ್ಣಿನ ಸೋಂಕು ಕಂಡುಬಂದಲ್ಲಿ ಉಪೇಕ್ಷಿಸದೆ ವೈದ್ಯಕೀಯ ಸಲಹೆ ಪಡೆಯಿರಿ.

***

ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ನಿಮ್ಮ ವ್ಯವಹಾರಗಳಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ನಿಮ್ಮ ಕಾರ್ಯಯೋಜನೆಗಳಿಗೆ ಕಾಲಮಿತಿ ಹಾಕಿಕೊಂಡು ಕೆಲಸ ಮಾಡಿ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಕಾಲ. ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹಣ ಖರ್ಚು ಮಾಡುವಿರಿ. ಕೃಷಿಕರ ಬೆಳೆಗಳಿಗೆ ಇದ್ದಲ್ಲೇ ಉತ್ತಮ ಬೆಲೆ ಸಿಗುವ ಸಾಧ್ಯತೆಯಿದೆ. ಹಿರಿಯರೊಂದಿಗೆ ಸಂಬಂಧ ಬಹಳಷ್ಟು ಸುಧಾರಿಸುತ್ತದೆ. ವೃತ್ತಿಯಲ್ಲಿ ಸ್ವಲ್ಪ ಅಡೆತಡೆ ಕಾಣಬಹುದು. ತಾಯಿಯ ಆರೋಗ್ಯಕ್ಕಾಗಿ ಹಣ ಮೀಸಲಿಡಬೇಕಾಗಬಹುದು.

***

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ನಿಮ್ಮ ಕಾರ್ಯಕ್ಷಮತೆ ಮತ್ತು ಅನುಭವದಿಂದ ಉತ್ತಮ ಅವಕಾಶಗಳು ನಿಮ್ಮನ್ನು ಅರಸಿ ಬರುವುವು. ಮಕ್ಕಳಿಂದ ಹಣದ ಸಹಾಯ ಒದಗಿಬರುತ್ತದೆ. ಸಹೋದರಿಯರಿಂದ ನಿಮ್ಮ ಕೆಲಸಕಾರ್ಯಗಳಿಗೆ ಸಹಾಯ ಒದಗುತ್ತದೆ. ವಿದ್ಯಾರ್ಥಿಗಳಿಗೆ ಓದಲು ನೆಚ್ಚಿನ ವಿಷಯಗಳು ದೊರೆತು ಸಂತಸವಾಗುತ್ತದೆ. ಹಣದ ಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ವಿವಾಹ ಆಕಾಂಕ್ಷಿಗಳಿಗೆ ಉತ್ತಮ ಸಂಬಂಧಗಳು ಒದಗುವ ಎಲ್ಲಾ ಲಕ್ಷಣಗಳಿವೆ. ಕೃಷಿಯನ್ನು ಉದ್ಯಮದ ರೀತಿ ನಡೆಸುವವರಿಗೆ ಪ್ರಗತಿ ಇರುತ್ತದೆ. ಹೈನುಗಾರಿಕೆ ಮಾಡುತ್ತಿರುವವರಿಗೆ ಲಾಭದ ಹಾದಿ ತೆರೆದುಕೊಳ್ಳುತ್ತದೆ.

***

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)

ಧನದ ಒಳಹರಿವು ಉತ್ತಮ. ಸಂಗೀತ ಕ್ಷೇತ್ರದಲ್ಲಿರುವವರಿಗೆ ಉತ್ತಮ ಅವಕಾಶಗಳು ಒದಗಿ ಬರುತ್ತವೆ. ಹಾಗೂ ಅವರ ಪ್ರತಿಭೆಗೆ ತಕ್ಕ ಗೌರವ ಸಹ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಅವರ ಪರಿಶ್ರಮಕ್ಕೆ ತಕ್ಕಂತೆ ಫಲಿತಾಂಶ ಒದಗುತ್ತದೆ. ಆಹಾರದ ವ್ಯತ್ಯಾಸದಿಂದ ಅನಾರೋಗ್ಯ ಬರಬಹುದು. ಸಂಗಾತಿಯು ನಿಮ್ಮ ಮೇಲೆ ಕೋಪಗೊಳ್ಳಬಹುದು, ಸ್ವಲ್ಪ ತಾಳ್ಮೆಯಿಂದ ಇದ್ದಲ್ಲಿ ಎಲ್ಲವೂ ಸರಿಯಾಗುವುದು. ಹೊಸದಾಗಿ ಹಣ ಹೂಡಿಕೆ ಮಾಡುವಾಗ ಎಚ್ಚರ ಅಗತ್ಯ. ಆಮದು ವ್ಯವಹಾರವನ್ನು ಮಾಡುವವರಿಗೆ ವ್ಯವಹಾರದಲ್ಲಿ ಸ್ವಲ್ಪ ಹಿನ್ನಡೆ ಇರುತ್ತದೆ.

***

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ನಿಮ್ಮ ನಡೆನುಡಿಗಳಿಂದ ಉತ್ತಮ ಗೌರವ ಸಂಪಾದಿಸುವಿರಿ. ಹಣದ ಒಳಹರಿವು ಪ್ರಗತಿಯ ಪಥದಲ್ಲಿ ಇರುತ್ತದೆ. ಬೇರೆಯವರ ಸಲಹೆಗಳನ್ನು ಕಡೆಗಣಿಸುವುದಕ್ಕೆ ಮುನ್ನ ಒಮ್ಮೆ ಆಲೋಚಿಸಿರಿ. ನೌಕರ ವರ್ಗದವರ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಸ್ತ್ರೀಯರು ಹೆಚ್ಚು ಭಾವೋದ್ವೇಗಕ್ಕೆ ಒಳಗಾಗುವುದು ಬೇಡ, ಸಮಚಿತ್ತರಾಗಿ ವ್ಯವಹರಿಸಿದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಮಕ್ಕಳ ಅಭಿವೃದ್ಧಿಯು ಉತ್ತಮವಾಗಿರುತ್ತದೆ. ವೃತ್ತಿಯಲ್ಲಿ ಅನಿರೀಕ್ಷಿತ ತೊಡಕುಗಳು ಎದುರಾದರೂ ಅಂತಹ ತೊಂದರೆ ಇರುವುದಿಲ್ಲ. ಮೂಳೆ ನೋವುಗಳ ಬಗ್ಗೆ ಗಮನ ಹರಿಸಿರಿ.

***

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಸ್ಥಿರ ಸಂಪನ್ಮೂಲಗಳ ಅಭಿವೃದ್ಧಿಯತ್ತ ಗಮನ ಹರಿಸುವಿರಿ. ಸಂಪನ್ಮೂಲಗಳ ಕ್ರೋಡೀಕರಣದಲ್ಲಿ ಅತಿ ಆತುರ ಬೇಡ. ವಿದ್ಯಾರ್ಥಿಗಳು ಅಭ್ಯಾಸದತ್ತ ಹೆಚ್ಚು ಗಮನಹರಿಸಬೇಕು. ಅತಿಯಾದ ಆತ್ಮಗೌರವ ತೋರಿದರೆ, ನಿಮಗೆ ಸಿಗುವ ಸಹಾಯ ನಿಲ್ಲಬಹುದು. ತಂದೆ ಮಕ್ಕಳ ನಡುವೆ ವಾಗ್ವಾದ ಆಗಬಹುದು. ಸಂಗಾತಿಯಿಂದ ನಿಮ್ಮ ಕೆಲಸಗಳಿಗೆ ಸಹಾಯ ಒದಗುತ್ತದೆ. ತಾಯಿಯಿಂದ ಅನಿರೀಕ್ಷಿತ ಸಹಾಯ ಒದಗಿಬರುತ್ತದೆ. ವೃತ್ತಿಯಲ್ಲಿ ಎಲ್ಲರೊಂದಿಗೆ ಹೊಂದಿಕೊಂಡು ಹೋಗುವುದು ನಿಮಗೇ ಒಳಿತು. ಆದಾಯದಷ್ಟೇ ಖರ್ಚು ಇರುತ್ತದೆ.

***

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಉದ್ಯೋಗ ಕಳೆದುಕೊಂಡವರಿಗೆ ಹಿಂದಿನ ಉದ್ಯೋಗದಾತರು ಪುನಃ ಕರೆಯಬಹುದು. ನಿಮ್ಮ ಹಳೆಯ ಉದ್ಯೋಗದಲ್ಲಿ ನೀವು ಅಭಿವೃದ್ಧಿ ಕಾಣಬಹುದು. ಸಮಾಜದ ಒಳಿತಿಗಾಗಿ ಕೆಲಸ ಮಾಡುವವರಿಗೆ ಉತ್ತಮ ಹೆಸರು ಮತ್ತು ಸಹಕಾರ ದೊರೆಯುತ್ತದೆ. ವ್ಯವಹಾರಗಳಲ್ಲಿ ಲಾಭ ಸ್ವಲ್ಪ ಕಡಿಮೆಯಾಗುತ್ತದೆ. ಲೇವಾದೇವಿ ವ್ಯವಹಾರ ಮಾಡುವುದು ಬೇಡ. ಸಂಗಾತಿಗಾಗಿ ನೂತನ ಒಡವೆ ಮತ್ತು ವಸ್ತುಗಳನ್ನು ಕೊಳ್ಳುವ ಸಾಧ್ಯತೆ ಇದೆ. ಹಣದ ಒಳಹರಿವು ಮಂದಗತಿ. ಪಿತ್ರಾರ್ಜಿತ ಆಸ್ತಿಯಲ್ಲಿ ನಿಮ್ಮಪಾಲನ್ನುಸಂಬಂಧಿಗಳ ಜೊತೆ ಕುಳಿತು ಮಾತನಾಡಿ ಪಡೆಯಬಹುದು.

***
ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)

ವಿವಿಧ ಮೂಲಗಳಿಂದ ಧನಾನುಕೂಲ ಆಗುತ್ತದೆ. ವೈಯಕ್ತಿಕ ಕೆಲಸಗಳು ಸಮರ್ಪಕವಾಗಿ ನಡೆಯುತ್ತವೆ. ಮಹಿಳಾ ಉದ್ಯೋಗಿಗಳಿಗೆ ಬಡ್ತಿಯ ಜೊತೆಗೆ ಹೊಸ ಜವಾಬ್ದಾರಿ ಹೆಗಲೇರುತ್ತದೆ. ನಿಮ್ಮ ಶತ್ರುಗಳನ್ನು ಸದೆ ಬಡಿಯಲು ಹೊಸ ತಂತ್ರಗಳನ್ನು ಹೂಡುವಿರಿ. ಮಕ್ಕಳು ನಿಮ್ಮ ಮಾತಿಗೆ ಬೆಲೆಕೊಟ್ಟು ನಿಮ್ಮ ಕೆಲಸಗಳಲ್ಲಿ ಸಹಕಾರ ನೀಡುವರು. ನಿಮ್ಮೊಡನೆ ಮುನಿಸಿಕೊಂಡು ದೂರವಾಗಿದ್ದ ಸಂಗಾತಿಯು ಈಗ ಹತ್ತಿರವಾಗುವರು. ತಂದೆಯ ಆರೋಗ್ಯಕ್ಕಾಗಿ ಹಣ ಖರ್ಚು ಮಾಡುವಿರಿ. ಬೆಳ್ಳಿ ಬಂಗಾರದ ಆಭರಣ ವ್ಯಾಪಾರಿಗಳಿಗೆ ಲಾಭ ಹೆಚ್ಚಲಿದೆ.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)

ಅನಿವಾರ್ಯವಾದ ಬಾಕಿ ಕೆಲಸಗಳನ್ನು ಈಗ ಪೂರ್ಣಗೊಳಿಸಬಹುದು. ಧನದ ಒಳಹರಿವು ಅಷ್ಟು ಜಾಸ್ತಿ ಇರುವುದಿಲ್ಲ. ನಿಮ್ಮ ಬುದ್ಧಿವಂತಿಕೆ ಮತ್ತು ತಿಳಿವಳಿಕೆಗೆ ಸವಾಲೆಸೆಯುವಂತಹ ಕೆಲಸ ನಿಮ್ಮ ಪಾಲಿಗೆ ಬರುತ್ತದೆ, ಅದನ್ನು ಸಮರ್ಥವಾಗಿ ನಿಭಾಯಿಸುವಿರಿ. ಆಸ್ತಿ ಅಭಿವೃದ್ಧಿ ಬಗೆಗಿನ ನಿಮ್ಮ ಚಿಂತನೆಗಳು ಸಾಕಾರ ಆಗುವ ಸಂದರ್ಭ ಇದೆ. ಸಂಗೀತ ಮತ್ತು ಲಲಿತ ಕಲೆ ಅಭ್ಯಸುತ್ತಿರುವವರಿಗೆ ಉತ್ತಮ ಗುರುಗಳು ದೊರೆಯುವರು. ಕೀಲುಗಳ ನೋವು ಬಾಧಿಸಬಹುದು. ಅವಿವಾಹಿತರಿಗೆ ಕಂಕಣ ಬಲದ ಯೋಗವಿದೆ. ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ಪ್ರಗತಿ.

***

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ಎಷ್ಟೇ ಸಂಕಷ್ಟಗಳು ಬಂದರೂ ಜಾಣ್ಮೆಯಿಂದ ಎದುರಿಸಿ ಗೆಲ್ಲುವಿರಿ. ಈ ವಿಚಾರದಲ್ಲಿ ಬಂಧುಗಳು ಸಹಾಯಕ್ಕೆ ನಿಲ್ಲುವರು. ನಿಮ್ಮ ಕೆಲವು ಬಂಧುಗಳು ನಿಮ್ಮ ಪ್ರಗತಿ ಕಂಡು ಅಸೂಯೆಪಡುವರು. ವಿದ್ಯಾರ್ಥಿಗಳ ಏಕಾಗ್ರತೆಗೆ ತೊಡಕಾದರೂ ಸಾಧನೆಗೆ ಅಡ್ಡಿಯೇನು ಇರುವುದಿಲ್ಲ. ಸಣ್ಣಪುಟ್ಟ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ ಇರುತ್ತದೆ. ಮಕ್ಕಳ ನಡವಳಿಕೆಯ ಬಗ್ಗೆ ಗಮನ ಹರಿಸಿರಿ. ತಾಯಿಯ ಸೌಖ್ಯಕ್ಕಾಗಿ ಹಣ ನೀಡುವಿರಿ. ಪ್ರಯಾಣದಲ್ಲಿ ಒಡವೆ ವಸ್ತುಗಳ ಬಗ್ಗೆ ಸರಿಯಾಗಿ ನಿಗಾ ಇಡಿರಿ. ಉದ್ಯಮ ನಡೆಸುತ್ತಿರುವವರಿಗೆ ಕಾಡುತ್ತಿದ್ದ ಕಾರ್ಮಿಕರ ಬವಣೆಗಳು ತಪ್ಪುತ್ತವೆ.

***

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಹಣದ ಹರಿವುನಿರೀಕ್ಷಿತವಾಗಿರುತ್ತದೆ. ಯುವಕರು ಒರಟು ಮಾತಿನಿಂದ ಕೆಲವು ಆಗುವ ಕೆಲಸಗಳನ್ನು ಹಾಳು ಮಾಡಿಕೊಳ್ಳುವರು ಹಾಗಾಗಿ ಮಾತನಾಡುವಾಗ ಎಚ್ಚರ ಇರಲಿ. ಬಹಳ ದಿನಗಳಿಂದ ಇದ್ದ ವೃತ್ತಿಯಲ್ಲಿನ ಉದ್ವಿಗ್ನತೆ ದೂರವಾಗುತ್ತದೆ. ನಿವೃತ್ತ ಉದ್ಯೋಗಿಗಳಿಗೆ ಹೊಸ ಉದ್ಯೋಗದ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಸಂತೋಷವಾಗಿ ಕಾಲ ಕಳೆಯುವ ಅವಕಾಶವಿದೆ. ಸರ್ಕಾರದಿಂದ ಅಥವಾ ಸರ್ಕಾರಿ ಸಂಸ್ಥೆಗಳಿಂದ ಬಯಸಿದ್ದ ಸಾಲಗಳು ದೊರೆಯುವುದು ಸ್ವಲ್ಪ ನಿಧಾನ. ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆ ಮಾಡುವ ಅವಕಾಶವಿದೆ.

***

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಅತ್ಯಂತ ಚುರುಕಾಗಿ ಕೆಲಸ ಮಾಡುವಿರಿ. ನಯವಾದ ಮಾತಿನಿಂದ ಕೆಲಸಗಾರರಿಂದ ಕೆಲಸ ತೆಗೆಯುವಿರಿ. ಉದ್ಯೋಗ ಬದಲಾವಣೆಯ ಬಗ್ಗೆ ಆತುರ ಬೇಡ, ಇರುವ ಉದ್ಯೋಗದಲ್ಲಿ ಇರುವುದು ಉತ್ತಮ. ಆದಾಯ ವೆಚ್ಚ ಎರಡೂ ಏರುವ ಸಾಧ್ಯತೆ ಇದೆ. ಖರ್ಚುಸರಿದೂಗಿಸಲು ಆದಾಯದ ಹೊಸ ದಾರಿ ಹುಡುಕುವಿರಿ. ಈ ವಿಚಾರದಲ್ಲಿ ಸಂಗಾತಿಯು ಬಹಳಷ್ಟು ಸಹಾಯ ಮಾಡುವರು. ನ್ಯಾಯಾಲಯದ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಕಬ್ಬಿಣದ ವ್ಯಾಪಾರಿಗಳಿಗೆ ಆದಾಯ ಹೆಚ್ಚುತ್ತದೆ. ಹಿರಿಯರಿಂದ ಏನಾದರೂ ದೊರೆಯುವ ಸಂಭವವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT