ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ: 21-3-2021 ರಿಂದ 27-3-2021 ರವರೆಗೆ

ಅಕ್ಷರ ಗಾತ್ರ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕ: 8197304680

**
ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ಆರ್ಥಿಕ ಸ್ಥಿತಿಯಲ್ಲಿ ಸ್ವಲ್ಪ ಏರುಪೇರಾದರೂ ದೈವಾನುಗ್ರಹದಿಂದ ನಿಶ್ಚಿತ ಆದಾಯಕ್ಕೆ ತೊಂದರೆ ಇರುವುದಿಲ್ಲ. ಸಂಪನ್ಮೂಲಗಳ ಅಭಿವೃದ್ಧಿಗಾಗಿ ನೀವು ಹೂಡಿದ ಯೋಜನೆಗಳು ಈಗ ಫಲ ಕೊಡುತ್ತವೆ. ಮಹತ್ತರವಾದ ಒಂದು ಯೋಜನೆ ಕೈಗೂಡಿ ನಿಮ್ಮ ಬಂಧುಗಳೆಲ್ಲರೂ ನಿಮ್ಮತ್ತ ತಿರುಗಿ ನೋಡುವರು. ಮಕ್ಕಳ ವಿಷಯದಲ್ಲಿ ಸ್ವಲ್ಪ ಬೇಸರ ಮೂಡಬಹುದು. ಸ್ತ್ರೀಯರಿಗೆ ಅಧಿಕ ದೈಹಿಕ ಶ್ರಮ ಆಗಬಹುದು. ಹಣದ ವಿಷಯದಲ್ಲಿ ದುಡುಕಿನ ಮಾತುಗಳು ಬೇಡವೇ ಬೇಡ.

**
ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವ ಸಾಧ್ಯತೆ ಇದೆ. ಸಾಮಾಜಿಕ ಕೆಲಸಗಳನ್ನು ಮಾಡುವವರಿಗೆ ಜನಮನ್ನಣೆ ಒದಗಿಬರುತ್ತದೆ. ನಿಮ್ಮ ನೇರ ನುಡಿಗಳು ಬಂಧುಗಳಲ್ಲಿ ಅಸಮಾಧಾನ ತರಬಹುದು. ಆದರೆ ಸತ್ಯದ ಅರಿವಾದಾಗ ನಿಮಗೆ ಗೌರವ ಕೊಡುವರು. ಚಿನ್ನದ ಆಭರಣಗಳನ್ನು ಕೊಳ್ಳುವ ಯೋಗವಿದೆ. ಅಂದುಕೊಂಡ ಕಾರ್ಯಗಳನ್ನು ಸಾಧಿಸಲು ಹಲವು ಮಾರ್ಗಗಳನ್ನು ಹುಡುಕಾಟ ಮಾಡುವಿರಿ. ಆರ್ಥಿಕ ತೊಂದರೆ ಕಡಿಮೆಯಾಗುವುದು.

*
ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಹಿರಿಯ ಉದ್ಯೋಗಸ್ಥರಿಗೆ ಹೊಸ ರೀತಿಯ ಸ್ಥಾನಮಾನಗಳು ದೊರೆಯುವ ಸಾಧ್ಯತೆಗಳಿವೆ. ಹಣದ ಒಳಹರಿವು ತೃಪ್ತಿಕರವಾಗಿರುತ್ತದೆ. ವೃತ್ತಿರಂಗದಲ್ಲಿ ಸೂಕ್ತ ಬೆಳವಣಿಗೆಯನ್ನು ಕಾಣಬಹುದು. ಕೆಲವು ರಾಜಕಾರಣಿಗಳಿಗೆ ಸ್ಥಾನಮಾನ ಅನಿರೀಕ್ಷಿತವಾಗಿ ದೊರೆಯುತ್ತದೆ. ಗುತ್ತಿಗೆ ವ್ಯವಹಾರವನ್ನು ಮಾಡುವ ಗುತ್ತಿಗೆದಾರರಿಗೆ ವ್ಯವಹಾರದಲ್ಲಿ ಮುನ್ನಡೆ ಇರುತ್ತದೆ. ಉದ್ದಿಮೆದಾರರಿಗೆ ಇದ್ದ ಸಂಕಷ್ಟಗಳು ನಿವಾರಣೆಯಾಗಿ ಉದ್ದಿಮೆಯನ್ನು ಮುನ್ನಡೆಸುವ ಅವಕಾಶ ಒದಗುತ್ತದೆ.

*
ಕಟಕ ರಾಶಿ ( ಪುನರ್ವಸು 4 ಪುಷ್ಯ ಆಶ್ಲೇಷ)

ವಿದ್ಯಾರ್ಥಿಗಳಿಗೆ ಹೊಸ ರೀತಿಯ ಉತ್ಸಾಹ ಮೂಡಿ ಅಧ್ಯಯನದಲ್ಲಿ ತೊಡಗುವರು. ಪ್ರಮುಖ ಯೋಜನೆಗಳ ಆಗುಹೋಗುಗಳ ಬಗ್ಗೆ ಪರಿಣಿತರ ಹತ್ತಿರ ವಿಚಾರ ಮಾಡುವಿರಿ. ಸಂಗೀತ ಮತ್ತು ಇತರೆ ಲಲಿತಕಲೆಗಳಲ್ಲಿ ಇರುವವರಿಗೆ ಮನ್ನಣೆ ದೊರೆತು ಸಂತಸವಾಗುತ್ತದೆ. ಅವಿವಾಹಿತರಿಗೆ ವಿವಾಹ ಸಂಬಂಧಗಳು ಒದಗಿಬರುವ ಅವಕಾಶಗಳಿವೆ. ಬೇರೆಯವರ ಹಣಕಾಸಿನ ವಿಚಾರದಲ್ಲಿ ಮಧ್ಯಸ್ಥಿಕೆ ಮಾಡಬೇಡಿ.

*
ಸಿಂಹ ರಾಶಿ ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಯಾವುದೇ ಕೆಲಸವನ್ನು ಧಾವಂತದಿಂದ ಮಾಡಬೇಡಿ. ಶುಭಕಾರ್ಯಗಳಿಗಾಗಿ ದೂರ ಪ್ರಯಾಣದ ಸಾಧ್ಯತೆಗಳಿವೆ. ಉದ್ಯೋಗದಲ್ಲಿ ಪ್ರಗತಿಯನ್ನು ಕಾಣಬಹುದು. ಹಿರಿಯರ ಸಲಹೆಗಳಿಂದ ಬರಲಿದ್ದ ಗಂಡಾಂತರಗಳಿಂದ ಪಾರಾಗುವಿರಿ. ಗೃಹ ನವೀಕರಣ ಕಾರ್ಯಗಳನ್ನು ಕೈಗೆತ್ತಿಕೊಳ್ಳುವಿರಿ. ಹಳೆವಾಹನವನ್ನು ನವೀಕರಣಗೊಳಿಸುವಿರಿ. ಶತ್ರುಗಳನ್ನು ಜಾಣ್ಮೆಯಿಂದ ಗೆಲ್ಲುವಿರಿ. ಗೃಹ ನಿರ್ಮಾಣ ಕಾರ್ಯಗಳನ್ನು ಈಗ ಕೈಗೆತ್ತಿಕೊಳ್ಳಬೇಡಿ. ಆಸ್ತಿ ಖರೀದಿಯಲ್ಲಿ ತಕರಾರು ಮೂಡಬಹುದು.

*
ಕನ್ಯಾ ರಾಶಿ ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಭಿನ್ನಾಭಿಪ್ರಾಯದಿಂದಾಗಿ ನಿಂತುಹೋಗಿದ್ದ ಕೆಲಸಗಳು ಒಮ್ಮತದ ಅಭಿಪ್ರಾಯದಿಂದ ಸಾಧಿಸಲ್ಪಡುತ್ತದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ ಇರುತ್ತದೆ. ಸಂಪತ್ತಿನಲ್ಲಿ ವೃದ್ಧಿಯನ್ನು ಕಾಣಬಹುದು. ಜಲ ಸಂಬಂಧಿ ಉದ್ಯೋಗದಲ್ಲಿರುವವರಿಗೆ ಅಭಿವೃದ್ಧಿ ಇರುತ್ತದೆ. ರಾಜಕೀಯ ವ್ಯಕ್ತಿಗಳಿಂದ ಕಿರಿಕಿರಿ ಆಗಬಹುದು. ನಿಮ್ಮ ಅಭಿವೃದ್ಧಿಗೆ ಪೂರಕವಾದ ಕೆಲವು ಅವಕಾಶಗಳು ಒದಗಿಬರುತ್ತವೆ. ಅವುಗಳನ್ನು ಸರಿಯಾಗಿ ಬಳಸಿಕೊಳ್ಳಿರಿ.

*
ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ನಿಮ್ಮ ಕೆಲವು ನಿಲುವುಗಳಲ್ಲಿ ಆಕಸ್ಮಿಕ ಬದಲಾವಣೆಗಳನ್ನು ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಗಳಿವೆ. ವೈದ್ಯಕೀಯ ಔಷಧ ಸಂಶೋಧಕರಿಗೆ ಉತ್ತಮ ಫಲಿತಾಂಶಗಳು ದೊರೆಯುತ್ತವೆ. ವೃತ್ತಿಯಲ್ಲಿ ಹೆಚ್ಚಿನ ಒತ್ತಡಗಳು ಇರುವುದಿಲ್ಲ. ಕೆಲಸಕಾರ್ಯಗಳಲ್ಲಿ ಸ್ವಲ್ಪ ಹಿನ್ನಡೆ ಕಾಣಬಹುದು. ವ್ಯವಹಾರಗಳಲ್ಲಿ ಅನಿರೀಕ್ಷಿತ ಲಾಭ ಕಾಣಬಹುದು. ಬೆಳೆದ ಬೆಳೆಗೆ ಕೃಷಿಕರಿಗೆ ಹೆಚ್ಚಿನ ಲಾಭ ದೊರೆಯುತ್ತದೆ. ಆದಾಯದಷ್ಟೇ ಖರ್ಚು ಸಹ ಇರುತ್ತದೆ.

*
ವೃಶ್ಚಿಕ ರಾಶಿ ( ವಿಶಾಖಾ 4 ಅನುರಾಧ ಜೇಷ್ಠ)
ಕೆಲಸಕಾರ್ಯಗಳಲ್ಲಿ ಪ್ರಗತಿ ಇರುತ್ತದೆ. ಸಾಂಸಾರಿಕ ಜೀವನದಲ್ಲಿ ಸಾಕಷ್ಟು ಹೊಂದಾಣಿಕೆಯನ್ನು ಕಾಣುವ ಸಾಧ್ಯತೆಗಳಿವೆ. ಆರ್ಥಿಕ ಸ್ಥಿತಿಯಲ್ಲಿ ಸ್ವಲ್ಪ ಚೇತರಿಕೆಯನ್ನು ಕಾಣಬಹುದು. ನಿಕಟವರ್ತಿಗಳಿಂದ ಸಹಾಯ ದೊರೆತು ಆತ್ಮಸ್ಥೈರ್ಯ ಹೆಚ್ಚುವುದು. ಕೃಷಿಯಿಂದ ಆದಾಯ ಹೆಚ್ಚುತ್ತದೆ. ಹೊಸ ರೀತಿಯ ವ್ಯಾಪಾರಗಳಿಗೆ ಕರೆ ಬಂದಲ್ಲಿ ಅದರಲ್ಲಿನ ಆಗು ಹೋಗುಗಳ ಬಗ್ಗೆ ಸರಿಯಾಗಿ ತಿಳಿದು ಮುನ್ನಡೆಯಿರಿ. ಕೀಲು ನೋವು ನಿಮ್ಮನ್ನು ಕಾಡಬಹುದು. ವೃತ್ತಿಯಲ್ಲಿ ಯಾವುದೇ ರೀತಿಯ ಏರಿಳಿತಗಳು ಇರುವುದಿಲ್ಲ.

*
ಧನಸ್ಸು ರಾಶಿ ( ಮೂಲ ಪೂರ್ವಷಾಢ ಉತ್ತರಾಷಾಢ 1 )
ಕುಟುಂಬದಲ್ಲಿ ಹೊಂದಾಣಿಕೆಯಿಂದ ಎಲ್ಲರ ಬೆಂಬಲಗಳಿಸುವಿರಿ. ವಿದ್ಯಾರ್ಥಿಗಳಿಗೆ ಮಂದಗತಿಯ ಪ್ರಗತಿ ಇರುತ್ತದೆ. ಸರ್ಕಾರಿ ಉದ್ಯೋಗಿಗಳಿಗೆ ಸ್ಥಾನ ಪಲ್ಲಟವಾಗುವ ಸಾಧ್ಯತೆ ಇದೆ. ನಿಮ್ಮ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳಲು ಈಗ ಸಕಾಲ. ನಿರೀಕ್ಷಿತ ಮೂಲಗಳಿಂದ ಆದಾಯವಿರುತ್ತದೆ. ಶುಭಕಾರ್ಯಗಳನ್ನು ಮಾಡುವ ಉತ್ಸಾಹ ಬರುತ್ತದೆ. ಕಾರ್ಯಯೋಜನೆಗಳಲ್ಲಿ ಹಲವಾರು ಜನರು ಸಲಹೆಯನ್ನು ಕೊಟ್ಟರೂ ಸಹ ಸರಿಯಾಗಿ ತುಲನೆ ಮಾಡಿ ಅನುಷ್ಠಾನಗೊಳಿಸಿರಿ.

*
ಮಕರ ರಾಶಿ ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ವಿಶಾಲ ಮನೋಭಾವದಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಿರಿ. ಕ್ಲಿಷ್ಟವಾದ ಕೆಲಸಗಳನ್ನು ಆಶ್ಚರ್ಯಕರವಾದ ರೀತಿಯಲ್ಲಿ ಸಾಧಿಸಿ ಪ್ರಶಂಸೆಗೆ ಒಳಗಾಗುವಿರಿ. ರಾಜಕೀಯ ಕ್ಷೇತ್ರದಲ್ಲಿ ಸೂತ್ರಧಾರರಾಗಿ ಕೆಲಸ ಮಾಡುವವರಿಗೆ ಬೆಳವಣಿಗೆ ಇರುತ್ತದೆ. ಆದಾಯ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ನಿಮ್ಮ ಒಂದು ಹವ್ಯಾಸ ವೃತ್ತಿಯಾಗಿ ಬದಲಾಗಬಹುದು. ಬಂಡವಾಳ ಹೂಡಿಕೆಯ ವಿಚಾರಗಳಲ್ಲಿ ಸಾಕಷ್ಟು ಎಚ್ಚರಿಕೆ ಅಗತ್ಯ. ಕೆಲವೊಂದು ವಿಚಾರಗಳಲ್ಲಿ ನಿಮ್ಮಲ್ಲಿರುವ ಕೀಳರಿಮೆಯನ್ನು ತೊಡೆದು ಮುನ್ನುಗ್ಗಿದಲ್ಲಿ ಫಲಿತಾಂಶ ನಿಮ್ಮದಾಗಿರುತ್ತದೆ.

*
ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಚಿನ್ನದ ಸಗಟು ಆಭರಣ ತಯಾರಿಕರಿಗೆ ಲಾಭವಿರುತ್ತದೆ. ಆದಾಯ ನಿರೀಕ್ಷಿತ ಮಟ್ಟದಲ್ಲಿ ಇರುತ್ತದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಹೆಚ್ಚಿನ ಅನುಕೂಲವಾಗುತ್ತದೆ. ಸರ್ಕಾರಿ ನೌಕರರಿಗೆ ವೃತ್ತಿಯಲ್ಲಿನ ಅಕಾಲಿಕ ಪ್ರಯಾಣದಿಂದ ಕಿರಿಕಿರಿಯಾಗುತ್ತದೆ ಮತ್ತು ವೃಥಾ ಖರ್ಚಾಗುತ್ತದೆ. ಮಹಿಳೆಯರು ನಡೆಸುವ ವ್ಯಾಪಾರ-ವ್ಯವಹಾರಗಳಲ್ಲಿ ಅಭಿವೃದ್ಧಿ ಇರುತ್ತದೆ. ಐದಾರು ಕೆಲಸಗಳನ್ನು ಒಟ್ಟಿಗೆ ಆರಂಭಿಸಿ ಗೊಂದಲ ಮಾಡಿಕೊಳ್ಳಬೇಡಿರಿ. ಯುವಕರಿಗೆ ವೃತ್ತಿಯಲ್ಲಿ ನಿರೀಕ್ಷಿತ ಮಟ್ಟದ ಪ್ರಗತಿ ಇರುವುದಿಲ್ಲ.

*
ಮೀನ ರಾಶಿ ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಸ್ನೇಹಿತರೊಂದಿಗೆ ಮುಕ್ತವಾಗಿ ಮಾತನಾಡುವುದರಿಂದ ಮನಸ್ಸಿನಲ್ಲಿ ಇದ್ದ ತಪ್ಪು ಕಲ್ಪನೆಗಳು ದೂರವಾಗಿ ಸಂಬಂಧಗಳು ಗಟ್ಟಿಯಾಗುತ್ತವೆ. ವ್ಯವಸಾಯದಲ್ಲಿನ ಅಭಿವೃದ್ಧಿಯಿಂದ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ವೃತ್ತಿಯಲ್ಲಿ ಅನಿವಾರ್ಯ ಒತ್ತಡಗಳನ್ನು ತಾಳಿಕೊಳ್ಳಬೇಕಾಗಬಹುದು. ಅನಾವಶ್ಯಕವಾಗಿ ಬೇರೆಯವರ ವ್ಯವಹಾರಗಳಲ್ಲಿ ಭಾಗಿಯಾಗುವುದುರಿಂದ ಕೆಲವು ಆಪಾದನೆಗಳನ್ನು ಎದುರಿಸಬೇಕಾದೀತು. ಧನದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT