ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ: 28-3-2021ರಿಂದ 3-4-2021 ರವರೆಗೆ

ಅಕ್ಷರ ಗಾತ್ರ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕ: 8197304680

***

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ಹಿರಿಯರ ಮಾರ್ಗದರ್ಶನದಿಂದಾಗಿ ನಿಮ್ಮ ಕೆಲಸಗಳು ಸುಗಮವಾಗಿ ಆಗುತ್ತವೆ. ಉನ್ನತ ವ್ಯಾಸಂಗ ಮಾಡಲು ದೂರದ ಊರಿಗೆ ಹೋಗಿ ಬರುವ ಸಾಧ್ಯತೆ ಇದೆ. ಹಳೆಯ ವ್ಯವಹಾರವನ್ನು ಬಿಟ್ಟು ಹೊಸ ವ್ಯವಹಾರವನ್ನು ಮಾಡುವ ಸಾಧ್ಯತೆಗಳು ದಟ್ಟವಾಗಿವೆ. ಕೃಷಿಕರಿಗೆ ಉತ್ತಮ ಬೆಳೆಯ ಜೊತೆಗೆ ಉತ್ತಮ ಲಾಭ ಸಹ ದೊರೆಯುತ್ತದೆ. ವಿದೇಶಕ್ಕೆ ಆಹಾರ ಪದಾರ್ಥಗಳನ್ನು ರಫ್ತು ಮಾಡುವವರಿಗೆ ವ್ಯವಹಾರ ವಿಸ್ತಾರವಾಗುತ್ತದೆ. ಮಕ್ಕಳ ವಿಚಾರದಲ್ಲಿ ವಿವಾದಗಳು ಉಂಟಾಗುವ ಸಾಧ್ಯತೆಗಳಿವೆ.

ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ರಾಸಾಯನಿಕ ವಸ್ತುಗಳ ಮಾರಾಟಗಾರರಿಗೆ ವ್ಯವಹಾರ ವಿಸ್ತರಿಸಿ ಲಾಭ ಹೆಚ್ಚುತ್ತದೆ. ಆಸ್ತಿ ಹಂಚಿಕೆ ಕುರಿತು ಸಂಬಂಧಿಗಳೊಡನೆ ಸಾಕಷ್ಟು ಮಾತುಕತೆ ಮಾಡುವಿರಿ. ಅಗತ್ಯಕ್ಕೆ ತಕ್ಕಷ್ಟು ಹಣದ ಒಳಹರಿವು ಇರುತ್ತದೆ.ಉದ್ಯೋಗದಲ್ಲಿ ಹೆಚ್ಚಿದ ಜವಾಬ್ದಾರಿಗಳಿಂದ ಮಾನಸಿಕ ಒತ್ತಡ ಹೆಚ್ಚಾಗುವುದು. ಯಾವುದಕ್ಕೂ ನಿಮ್ಮ ಆಲೋಚನಾ ಶಕ್ತಿಯನ್ನು ಜಾಗೃತಗೊಳಿಸಿ ಸಂಯಮದಿಂದಿರಿ. ವಿದ್ಯಾರ್ಥಿಗಳಿಗೆ ಉತ್ತಮ ಸಲಹೆ ಸೂಚನೆಗಳು ದೊರೆಯುತ್ತವೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿರುವ ಹಿರಿಯ ಅಧಿಕಾರಿಗಳಿಗೆ ವರ್ಗಾವಣೆಯ ಸಾಧ್ಯತೆಗಳಿವೆ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ರಾಜಕೀಯ ಪ್ರವೇಶವನ್ನು ಮಾಡಬೇಕೆಂದು ಇಚ್ಛಿಸುವವರಿಗೆ ಈಗ ಕಾಲ ಕೂಡಿಬರುತ್ತದೆ, ಮಾಡಿದ್ದ ಸಾಮಾಜಿಕ ಸೇವೆಗಳು ಈಗ ನಿಮ್ಮ ನೆರವಿಗೆ ಬರುತ್ತವೆ. ಮಕ್ಕಳ ಭವಿಷ್ಯದ ಬಗ್ಗೆ ಅತಿಯಾದ ಚಿಂತೆ ಬೇಡ. ಆರ್ಥಿಕತೆಯಲ್ಲಿ ಅಲ್ಪ ಚೇತರಿಕೆಯನ್ನು ಕಾಣಬಹುದು. ಖರ್ಚುವೆಚ್ಚಗಳಲ್ಲಿ ಹತೋಟಿಯನ್ನು ಮಾಡುವುದು ಒಳಿತು. ಸಂಗಾತಿಗೆ ತಿಳಿಯದಂತೆ ಮಾಡಿದ ವ್ಯವಹಾರಗಳು ಗೊತ್ತಾಗಿ ಮನೆಯಲ್ಲಿ ಕಾವೇರಿದ ವಾತಾವರಣ ಮೂಡಬಹುದು. ಹಿರಿಯರ ಮಧ್ಯಸ್ಥಿಕೆಯಿಂದ ವಾತಾವರಣ ತಿಳಿಯಾಗುವುದು. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಈ ಹಿಂದೆ ಸಿಗದಿದ್ದ ಸೌಲಭ್ಯಗಳು ಈಗ ಸಿಗುತ್ತವೆ. ಆಭರಣ ಮಾರಾಟಗಾರರಿಗೆ ಉತ್ತಮ ವ್ಯವಹಾರಗಳು ಇರುತ್ತವೆ.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)
ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ಮೊದಲು ನಂಬಿಕೆ ಇರಲಿ, ಅರ್ಧ ಮನಸ್ಸಿನಿಂದ ಮಾಡಿದ ಕೆಲಸಗಳು ಫಲಿತಾಂಶ ಕೊಡುವುದಿಲ್ಲ. ಸಾಮಾಜಿಕ ಕ್ಷೇತ್ರಗಳಲ್ಲಿ ಹೆಚ್ಚಿನ ಮನ್ನಣೆಯೊಂದಿಗೆ ಸನ್ಮಾನಗಳು ಸಹ ದೊರೆಯುತ್ತವೆ. ಅವಿವಾಹಿತರಿಗೆ ಸಂಬಂಧಗಳು ಕೂಡಿಬರುವ ಸಾಧ್ಯತೆಗಳಿವೆ. ಆರ್ಥಿಕ ಸ್ಥಿತಿಯು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ಕೊಂಚ ಹಿನ್ನಡೆಯ ಸಾಧ್ಯತೆಗಳಿವೆ. ಕೊಳ್ಳಬೇಕೆಂದು ಆಶಿಸಿದ್ದ ನಿವೇಶನವನ್ನು ಈಗ ಕೊಳ್ಳಬಹುದು. ಚಿನ್ನದ ಒಡವೆ ಮಾರಾಟಗಾರರಿಗೆ ವ್ಯಾಪಾರದಲ್ಲಿ ಮುನ್ನಡೆ ಇರುತ್ತದೆ.

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಪುಷ್ಪೋದ್ಯಮದಲ್ಲಿ ತೊಡಗಿಕೊಂಡಿರುವವರಿಗೆ ಉತ್ತಮ ಬೆಳವಣಿಗೆ ಇರುತ್ತದೆ. ಕೃಷಿ ಕಾರ್ಯಗಳಿಗಾಗಿ ಹೆಚ್ಚಿನ ಸಮಯ ಮತ್ತು ಹಣ ಮೀಸಲಿಡುವಿರಿ. ಹೊಸ ಮನೆ ಖರೀದಿ ಯತ್ನ ಮುಂದುವರೆಸುವಿರಿ. ಆದಾಯದಲ್ಲಿ ಸಾಕಷ್ಟು ಏರಿಕೆಯನ್ನು ಕಾಣಬಹುದು. ಹೊರಗುತ್ತಿಗೆ ಕೆಲಸ ಮಾಡುವವರಿಗೆ ಸಾಕಷ್ಟು ಬೆಳವಣಿಗೆ ಇರುತ್ತದೆ. ವಿದ್ಯಾರ್ಥಿಗಳು ಸಾಕಷ್ಟು ಶ್ರಮವನ್ನು ವಹಿಸಬೇಕಾದ ಅನಿವಾರ್ಯತೆ ಇದೆ. ಕಲಾತ್ಮಕ ವಸ್ತ್ರವಿನ್ಯಾಸಗಾರರಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ಹೊಸ ಆಸ್ತಿಯ ಖರೀದಿಗೆ ತಕ್ಕ ಸಮಯವಲ್ಲ. ಸಂಗಾತಿಯ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಹಿರಿಯ ಉದ್ಯೋಗಿಗಳು ದೇಹದ ಆಲಸ್ಯದಿಂದ ತಮ್ಮ ಜವಾಬ್ದಾರಿಯ ಕಾರ್ಯಬಾಹುಳ್ಯವನ್ನು ಬೇರೆಯವರಿಗೆ ವಹಿಸಿ ಕೊಡಬೇಕಾದ ಸಾಧ್ಯತೆ ಇದೆ. ಆರೋಗ್ಯದ ವಿಷಯದಲ್ಲಿ ಎಚ್ಚರಿಕೆಯನ್ನು ವಹಿಸಬೇಕು. ಕೈ ಬಿಟ್ಟು ಹೋಗಿದ್ದ ಆಸ್ತಿಯ ಬಗ್ಗೆ ಸಾಕಷ್ಟು ವಿಚಾರಗಳು ತಿಳಿದುಬರುವುದು. ನಿಮ್ಮ ಸಂಶಯಗಳಿಂದ ಕುಟುಂಬದ ಸದಸ್ಯರನ್ನು ದೂರ ಮಾಡಿಕೊಳ್ಳುವಿರಿ. ಸಂಗಾತಿಯ ಆದಾಯದಲ್ಲಿ ಸಾಕಷ್ಟು ಏರಿಕೆ ಕಂಡರೂ ಅವರ ಧೋರಣೆಯ ನಡೆ ಕಂಡು ಬೇಸರವಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆ ಮಾಡುವ ಕಾಲ. ಈ ಹಿಂದೆ ಕೂಡಿಟ್ಟಿದ್ದ ಹಣವು ಈಗ ನಿಮ್ಮ ಕಷ್ಟಕ್ಕೆ ಒದಗುವುದು.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)
ದುಡುಕು ಸ್ವಭಾವದಿಂದ ಕೆಲಸಕಾರ್ಯಗಳಲ್ಲಿ ಹಿನ್ನಡೆಯಾಗಬಹುದು. ಬಾಲ್ಯ ಸ್ನೇಹಿತರ ಪುನರ್ ಪರಿಚಯದಿಂದ ಹೊಸ ವ್ಯವಹಾರಗಳಲ್ಲಿ ಅವಕಾಶ ದೊರೆಯುತ್ತದೆ. ತಾಂತ್ರಿಕ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳು ಹುಡುಕಿಕೊಂಡು ಬರಲಿದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ಗುತ್ತಿಗೆ ವ್ಯವಹಾರವನ್ನು ಮಾಡುವವರಿಗೆ ಹೆಚ್ಚಿನ ಆದಾಯ ತರುವಂತಹ ಹೊಸ ಗುತ್ತಿಗೆಗಳು ದೊರೆಯುತ್ತವೆ. ಹೈನುಗಾರಿಕೆ ಮಾಡುವವರಿಗೆ ಹೆಚ್ಚಿನ ಲಾಭವಿದೆ. ಒಡಹುಟ್ಟಿದವರೊಡನೆ ಹೆಚ್ಚಿನ ಹೊಂದಾಣಿಕೆ ಮಾಡಿಕೊಳ್ಳುವುದು ಅಗತ್ಯ.

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)
ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಉದ್ಯೋಗದಲ್ಲಿ ನಿಮ್ಮ ಶ್ರದ್ಧೆಯನ್ನು ಕಂಡು ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸುವರು. ಕಾರ್ಯಸಾಧನೆಗಾಗಿ ಹೆಚ್ಚಿನ ಶ್ರಮವಹಿಸಿ ಯಶಸ್ಸನ್ನು ಸಾಧಿಸುವಿರಿ. ನಿಮ್ಮ ಪ್ರಾಮಾಣಿಕತೆಯಿಂದಾಗಿ ಜನರು ನಿಮ್ಮ ಬಗ್ಗೆ ಅಭಿಮಾನವನ್ನು ತೋರುವರು. ಸಂಶೋಧನಾ ವ್ಯಕ್ತಿಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆತು ಸಂಪೂರ್ಣವಾಗಿ ಸಂಶೋಧನೆಯಲ್ಲಿ ತೊಡಗಿಕೊಳ್ಳುವರು. ಮಕ್ಕಳು ಮಾಡುವ ಖರ್ಚುವೆಚ್ಚಗಳ ಬಗ್ಗೆ ಸರಿಯಾಗಿ ಗಮನವಿರಿಸಿ. ಹಿರಿಯರ ಸಹಕಾರದಿಂದ ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ಮುನ್ನಡೆ ಇರುತ್ತದೆ.

ಧನಸ್ಸು ರಾಶಿ (ಮೂಲ ಪೂರ್ವಷಾಢ ಉತ್ತರಾಷಾಢ 1)
ಬಹಳ ದಿನಗಳಿಂದ ಬರದೇ ಇದ್ದ ಬಾಕಿ ಹಣ ಈಗ ಬರಲಾರಂಭಿಸುತ್ತದೆ. ನಿಂತುಹೋಗಿದ್ದ ವಿವಾಹ ಸಂಬಂಧದ ಮಾತುಕತೆ ಈಗ ಮುಂದುವರೆಯಬಹುದು. ಕಠಿಣ ಪರಿಸ್ಥಿತಿಗಳಲ್ಲಿ ಉತ್ತಮ ನಿರ್ಧಾರ ತೆಗೆದುಕೊಂಡು ಯಶಸ್ಸನ್ನು ಕಾಣುವಿರಿ. ಸಂಗಾತಿಯ ಸಲಹೆಗಳಿಗೆ ಅನಾದರ ಮಾಡಬೇಡಿ. ಹಿರಿಯರು ತಮ್ಮ ದುಡುಕು ಮಾತಿನಿಂದ ಸಂಬಂಧಗಳನ್ನು ಕಳೆದುಕೊಳ್ಳಬಹುದು. ಜಾಹೀರಾತು ಕಂಪನಿಗಳಿಗೆ ಉತ್ತಮ ಬೆಳವಣಿಗೆ ಇರುತ್ತದೆ. ವಸ್ತ್ರ ವಿನ್ಯಾಸಕಾರರಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ಅಪರೂಪದ ವ್ಯಕ್ತಿಯೊಬ್ಬರನ್ನು ಭೇಟಿಯಾಗುವ ಸಂದರ್ಭ ಒದಗಿ ಬರುತ್ತದೆ. ಮಕ್ಕಳಿಂದ ಧನಸಹಾಯ ಸಿಗುತ್ತದೆ.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಆಭರಣಗಳ ವ್ಯಾಪಾರಿಗಳಿಗೆ ವ್ಯಾಪಾರ ವೃದ್ಧಿಸಿ ಲಾಭ ಹೆಚ್ಚುತ್ತದೆ. ನಿಮ್ಮ ಮನಸ್ಸಿನ ಭಾವನೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದು ಅಷ್ಟು ಒಳಿತಲ್ಲ. ಭಕ್ತಿಗೀತೆಗಳನ್ನು ಹಾಡುವವರಿಗೆ ಬೇಡಿಕೆ ಹೆಚ್ಚಾಗುವುದು. ಹೊಸ ಪಾಲುದಾರರೊಡನೆ ಸೇರಿ ಮಾಡಿದ ವ್ಯವಹಾರಗಳಲ್ಲಿ ಲಾಭ ಬರುತ್ತದೆ. ರಂಗಕಲೆಯನ್ನು ಅಭ್ಯಾಸ ಮಾಡುವವರಿಗೆ ಉತ್ತಮ ಗುರುಗಳು ದೊರೆತು ಉತ್ತಮ ಸೌಲಭ್ಯ ಸಹ ಸಿಗುತ್ತದೆ. ಎಂಜಿನಿಯರಿಂಗ್ ವಿನ್ಯಾಸಕಾರರಿಗೆ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ. ಹಣದ ಒಳಹರಿವು ಉತ್ತಮವಾಗಿರುತ್ತದೆ. ವೇದಿಕೆಗಳಲ್ಲಿ ನಿರೂಪಕರಾಗಿ ಕೆಲಸ ಮಾಡುವವರಿಗೆ ಪ್ರತಿಷ್ಠಿತ ವೇದಿಕೆಗಳು ದೊರೆಯುತ್ತವೆ.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳುವುದಕ್ಕೆ ಆತ್ಮೀಯರಿಂದ ಸಾಕಷ್ಟು ಸಲಹೆಗಳು ಬರುತ್ತವೆ, ಅವುಗಳನ್ನು ಪರಿಶೀಲಿಸಿ ಕಾರ್ಯಗತಗೊಳಿಸಿರಿ. ಹಣದ ಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಹಿರಿಯರಿಂದ ಉಡುಗೊರೆಗಳನ್ನು ಪಡೆಯುವ ಸಾಧ್ಯತೆಗಳಿವೆ. ಉದ್ಯೋಗದ ಸ್ಥಳದಲ್ಲಿ ಮೇಲಾಧಿಕಾರಿಗಳ ಬಗ್ಗೆ ಮಾತನಾಡುವಾಗ ಎಚ್ಚರವಾಗಿರಿ, ಎಚ್ಚರ ತಪ್ಪಿದಲ್ಲಿ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗ ಬೇಕಾಗಬಹುದು. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಕೊಂಚ ಹಿನ್ನಡೆ ಎನಿಸಿದರೂ ಕೆಲಸ ಆಗುವುದು.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಹಿಂದಿನ ಕಹಿ ನೆನಪುಗಳು ಮಾಸಿ ಹೊಸ ದಾರಿ ಆರಂಭವಾಗುತ್ತದೆ. ದೂರದೂರಿನಿಂದ ಬಂಧುಗಳ ಆಗಮನವಾಗುತ್ತದೆ. ಅವರು ನಿಮಗೆ ಹೊಸ ವರಮಾನದ ಮಾರ್ಗವೊಂದನ್ನು ತಿಳಿಸುವರು, ನಿಮ್ಮ ಶಕ್ತಿಗನುಸಾರವಾಗಿ ಅರಿತು ಮುನ್ನಡೆಯಿರಿ. ಕೆಲವರಿಗೆ ದೂರದೂರಿಗೆ ಉದ್ಯೋಗ ನಿಮಿತ್ತ ವರ್ಗಾವಣೆಯಾಗುವ ಸಾಧ್ಯತೆಗಳಿವೆ. ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ, ಅಲ್ಲಿ ನೀವು ಎಲ್ಲರ ಆರ‍್ಷಣೆಯ ವ್ಯಕ್ತಿಯಾಗಿ ಇರುವಿರಿ. ಸ್ವಂತ ಉದ್ದಿಮೆಯನ್ನು ನಡೆಸುತ್ತಿರುವವರ ಲಾಭ ಹೆಚ್ಚುತ್ತದೆ. ಆರೋಗ್ಯದ ಕಡೆ ಹೆಚ್ಚಿನ ಗಮನವಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT