ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ: 27-2-2022ರಿಂದ 5-3-2022ರ ವರೆಗೆ

Last Updated 26 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕ: 8197304680

***

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)

ಕೆಲವೊಂದು ವೈಯಕ್ತಿಕ ತೊಂದರೆಗಳಿಂದ ಮುಕ್ತಿ ಪಡೆಯುವಿರಿ. ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ನಿಮ್ಮ ಕೆಲವೊಂದು ಅನಿವಾರ್ಯವಲ್ಲದ ಕೆಲಸ ಕಾರ್ಯಗಳನ್ನು ಮುಂದೂಡುವುದು ಉತ್ತಮ. ಮಕ್ಕಳಿಗಾಗಿ ಬಂಡವಾಳ ಹೂಡಲು ಸಿದ್ಧರಾಗುವಿರಿ. ಬೇರೆಯವರ ತಳುಕಿನ ಮಾತಿಗೆ ಬೆರಗಾಗಿ ಬಂಡವಾಳ ಹೂಡಲು ಹೋಗಬೇಡಿರಿ. ವೈಯಕ್ತಿಕ ಆರೋಗ್ಯದ ಕಡೆಗೆ ಹೆಚ್ಚಿನ ಗಮನವನ್ನು ಹರಿಸಿರಿ. ಸಣ್ಣ ಕೈಗಾರಿಕೋದ್ಯಮಿಗಳಿಗೆ ವಸ್ತುಗಳನ್ನು ಪೂರೈಸಲು ಆದೇಶಗಳು ದೊರೆಯುತ್ತವೆ. ಹಿತಶತ್ರುಗಳ ಭರವಸೆಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ಇರಲಿ. ಉನ್ನತ ವ್ಯಾಸಂಗ ಮಾಡುತ್ತಿರುವವರಿಗೆ ಅಧ್ಯಯನದಲ್ಲಿ ಮುನ್ನಡೆ ಇರುತ್ತದೆ. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಸಾಕಷ್ಟು ಯಶಸ್ಸು ದೊರೆಯುತ್ತದೆ.

***
ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ಹಿರಿಯರ ಮನೋಭಿಲಾಷೆಗಳು ಈಗ ಈಡೇರುವ ಕಾಲ. ಯಾವುದೋ ಒಂದು ಸತ್ಯವನ್ನು ಅನ್ವೇಷಣೆ ಮಾಡಲು ಹೋಗಿ ಜಯ ಸಾಧಿಸುವಿರಿ. ಬಂಧುಗಳಿಂದ ಸಾಕಷ್ಟು ಸಹಕಾರ ದೊರೆತು ಮನೆಯ ನಿರ್ಮಾಣ ಕಾರ್ಯದಲ್ಲಿ ಕೆಲಸ ಸುಗಮವಾಗುತ್ತದೆ. ಕೆಲವೊಮ್ಮೆ ಅನಿರೀಕ್ಷಿತ ಖರ್ಚುಗಳು ಎದುರಾಗುವ ಸಾಧ್ಯತೆ ಇದೆ. ಉಪಾಧ್ಯಾಯರುಗಳಿಗೆ ಉತ್ತಮ ಗೌರವ ದೊರೆಯುತ್ತದೆ. ಭೂ ವ್ಯವಹಾರ ಮಾಡುವವರಿಗೆ ಹೆಚ್ಚು ಲಾಭವಿರುತ್ತದೆ. ಆಡಳಿತಾತ್ಮಕ ಹುದ್ದೆಯಲ್ಲಿರುವವರಿಗೆ ಬಡ್ತಿ ದೊರೆಯುವ ಸಾಧ್ಯತೆಯಿದೆ. ಸೌಂದರ್ಯವರ್ಧಕಗಳನ್ನು ತಯಾರು ಮಾಡುವವರಿಗೆ ಮಾರುಕಟ್ಟೆ ವಿಸ್ತರಿಸುತ್ತದೆ. ಹಣದ ಒಳಹರಿವು ಸಾಮಾನ್ಯ ಮಟ್ಟದಲ್ಲಿರುತ್ತದೆ.

***

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಪರಸ್ಪರ ಭಿನ್ನಾಭಿಪ್ರಾಯಗಳು ಮಾಯವಾಗಿ ದಾಂಪತ್ಯದಲ್ಲಿ ಸುಖ ಜೀವನಕ್ಕೆ ನಾಂದಿಯಾಗುತ್ತದೆ. ನಿಮ್ಮ ವಿರುದ್ಧ ಸಹೋದ್ಯೋಗಿಗಳಿಂದ ಸಣ್ಣ ಪಿತೂರಿಯೊಂದು ರೂಪುಗೊಳ್ಳುತ್ತದೆ. ಹೇಗೋ ಅದರ ಸುಳಿವು ನಿಮಗೆ ತಿಳಿದು ಅದರಿಂದ ಪಾರಾಗುವಿರಿ. ಪ್ರಾಪ್ತ ವಯಸ್ಕರಿಗೆ ಸಂಬಂಧ ಕೂಡಿ ಬರುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿಯು ಸ್ವಲ್ಪ ಉನ್ನತಿಯತ್ತ ಸಾಗುತ್ತದೆ. ಶತ್ರುಗಳ ವಿರುದ್ಧ ಸವಾರಿ ಮಾಡುವ ಅವಕಾಶ ದೊರೆಯುತ್ತದೆ. ಸಮಾರಂಭಗಳಲ್ಲಿ ಭಾಗವಹಿಸಿ ಬಂಧು ಬಾಂಧವರೊಡನೆ ಸಂತಸದ ಕಾಲವನ್ನು ಕಳೆಯುವಿರಿ. ಸಂಗಾತಿಯೊಡನೆ ವಿಹಾರಕ್ಕಾಗಿ ಹೋಗಿ ಬರುವ ಸಾಧ್ಯತೆಗಳಿವೆ. ಉದರಶೂಲೆ ಈ ವಾರ ನಿಮ್ಮನ್ನು ಭಾದಿಸಬಹುದು. ಹೊಸ ವ್ಯಕ್ತಿಗಳ ಪರಿಚಯದಿಂದ ಸಂತಸವಾಗುತ್ತದೆ.

***

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)

ಓದಿನಲ್ಲಿ ವಿದ್ಯಾರ್ಥಿಗಳಿಗೆ ಪ್ರಗತಿ ಇರುತ್ತದೆ. ಸರ್ಕಾರಿ ಮಟ್ಟದ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಆಗುತ್ತವೆ. ದೃಢ ನಿರ್ಧಾರಗಳಿಂದ ವ್ಯವಹಾರದಲ್ಲಿ ಪಾಲ್ಗೊಳ್ಳದಿದ್ದರೆ ಸ್ವಲ್ಪ ನಷ್ಟವಾಗುವ ಸಂದರ್ಭವಿದೆ. ಕಳೆದುಹೋದ ವಿದ್ಯಮಾನಗಳಿಗೆ ಚಿಂತಿಸದೆ ಮುಂಬರುವ ಕೆಲಸ-ಕಾರ್ಯಗಳ ಬಗ್ಗೆ ಹೆಚ್ಚು ಚಿಂತನೆಯನ್ನು ಮಾಡಿರಿ. ನಿಮ್ಮ ಕಾರ್ಯಕ್ಷೇತ್ರಗಳನ್ನು ವಿಸ್ತರಿಸಲು ನಿಮಗೆ ಅನುಮತಿ ದೊರೆಯುತ್ತದೆ. ಇಲಾಖಾವಾರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತಮ್ಮ ಸಾಧನೆಯನ್ನು ಮಾಡುವ ಯೋಗವಿದೆ. ತಲೆನೋವು ನಿಮ್ಮನ್ನು ಕಾಡಬಹುದು. ಮಹಿಳೆಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಯಶಸ್ಸು ಇರುತ್ತದೆ. ಹಣದ ಒಳಹರಿವು ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ನಿಮ್ಮ ಬುದ್ಧಿವಂತಿಕೆಯ ಪ್ರದರ್ಶನಕ್ಕೆ ಉತ್ತಮ ಅವಕಾಶ ದೊರೆಯುತ್ತದೆ.

***

ಸಿಂಹ ರಾಶಿ( ಮಖಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ಅನವಶ್ಯಕ ಪ್ರಯಾಣದಿಂದ ದೇಹಾಲಸ್ಯದ ಜೊತೆಗೆ ಧನನಷ್ಟವಾಗುತ್ತದೆ. ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಹೆಚ್ಚು ಗಮನಕೊಡುವಿರಿ. ನಿಮ್ಮ ಉದ್ಯೋಗದಲ್ಲಿನ ಪ್ರಮುಖರನ್ನು ಭೇಟಿ ಮಾಡಿ ಉದ್ಯೋಗದಲ್ಲಿ ಮೇಲೇರುವ ಬಗ್ಗೆ ಚರ್ಚೆ ಮಾಡುವಿರಿ. ಹಣದ ಒಳಹರಿವು ಸಾಮಾನ್ಯ ಮಟ್ಟದಲ್ಲಿರುತ್ತದೆ. ವಿದ್ಯಾರ್ಥಿಗಳಿಗೆ ಇದ್ದ ಸಮಸ್ಯೆಗಳು ಬಗೆಹರಿದು ವಿದ್ಯೆಗೆ ಬೇಕಾದಂತಹ ಅನುಕೂಲ ಒದಗಿಬರುತ್ತದೆ. ಗುಂಪುಗಾರಿಕೆ ಮಾಡುವವರಿಗೆ ತಿರುಗೇಟನ್ನು ಕೊಟ್ಟು ಎಚ್ಚರಿಸುವಿರಿ. ರಾಜತಾಂತ್ರಿಕ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಹೆಚ್ಚಿನ ಸ್ಥಾನಮಾನ ದೊರೆಯುವ ಅವಕಾಶವಿದೆ. ಕಚೇರಿ ಕೆಲಸದ ಮೇಲೆ ವಿದೇಶಕ್ಕೆ ಹೋಗಿ ಬರುವ ಸಾಧ್ಯತೆಗಳಿವೆ.

***

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ರಾಸಾಯನಿಕ ವಸ್ತುಗಳನ್ನು ಆಮದು ರಫ್ತು ಮಾಡುವವರಿಗೆ ಉತ್ತಮ ವ್ಯವಹಾರವಿರುತ್ತದೆ. ನಿಮ್ಮ ಅನುಕೂಲವನ್ನು ಅನುಸರಿಸಿಸಮಯಕ್ಕೆ ತಕ್ಕಂತೆ ಜನಗಳ ಓಲೈಕೆ ಮಾಡುವಿರಿ. ಸಾಲ ಕೊಟ್ಟವರು ಎಡೆಬಿಡದೆ ಮರುಪಾವತಿಗಾಗಿ ತಗಾದೆ ಮಾಡುವರು. ನಿರ್ಮಾಣ ಕಾರ್ಯಗಳನ್ನು ಮಾಡುವವರಿಗೆ ಹೆಚ್ಚಿನ ಕೆಲಸಗಳು ದೊರೆಯುತ್ತವೆ. ಅಬಕಾರಿ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಕೆಲಸದ ಒತ್ತಡ ಹೆಚ್ಚುತ್ತದೆ. ವಿವಾಹದ ವಿಷಯದಲ್ಲಿ ಮಧ್ಯವರ್ತಿಗಳನ್ನು ದೂರವಿಟ್ಟು ನೇರ ಮಾತುಕತೆ ನಡೆಸುವುದು ಬಹಳ ಒಳ್ಳೆಯದು. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಕಣ್ಣಿನ ತೊಂದರೆ ಸ್ವಲ್ಪ ಭಾದಿಸಬಹುದು. ಹಿರಿಯರ ಆಸ್ತಿಯನ್ನು ಕೊಳ್ಳುವ ಪ್ರಯತ್ನ ಮಾಡುವಿರಿ.

***

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)

ವ್ಯವಹಾರದಲ್ಲಿ ಪಾಲುದಾರರಿಂದ ವ್ಯವಹಾರಕ್ಕೆ ಪ್ರೋತ್ಸಾಹ ಇರುವುದು. ಮಕ್ಕಳಿಂದ ಮನಸ್ಸಿಗೆ ಚಿಂತೆ ಮೂಡುತ್ತದೆ. ಸಾಮಾಜಿಕ ಕಾರ್ಯಗಳನ್ನು ಮಾಡುವವರಿಗೆ ಅಪವಾದ ಬರುವ ಸಾಧ್ಯತೆಗಳಿವೆ ಎಚ್ಚರ ವಹಿಸಿರಿ. ಹಿರಿಯ ಕಲಾವಿದರುಗಳಿಗೆ ಗೌರವಧನ ದೊರೆಯುವ ಸಾಧ್ಯತೆ ಇದೆ. ಸಂಗಾತಿಯಿಂದ ನಿಮ್ಮ ಚಿಂತೆಗೆ ಪರಿಹಾರ ದೊರೆಯುತ್ತದೆ. ಧಾರ್ಮಿಕ ಚರ್ಚೆಗಳಲ್ಲಿ ಭಾಗವಹಿಸಿ ನಿಮ್ಮ ವಾದವನ್ನು ಮಂಡಿಸುವ ಸಾಧ್ಯತೆ ಇದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕುವುದು ಬಹಳ ಒಳ್ಳೆಯದು. ನಿಮ್ಮ ಮಕ್ಕಳಿಂದ ನಿಮಗೆ ಧನ ಸಹಾಯ ದೊರೆಯುತ್ತದೆ. ನಂಬಿಕೊಂಡಿರುವ ಧುರೀಣರು ಸಮಯದಲ್ಲಿ ಕೈಕೊಡುವ ಸಾಧ್ಯತೆಗಳಿವೆ, ಎಚ್ಚರ ವಹಿಸಿರಿ.

***

ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)

ನಡವಳಿಕೆಯಿಂದ ನಿಮ್ಮ ವೈಯಕ್ತಿಕ ಜೀವನವನ್ನು ಉತ್ತಮಪಡಿಸಿಕೊಳ್ಳುವಿರಿ. ಸಾಮಾಜಿಕ ಚಿಂತನೆಗಳಿಂದ ಗೌರವಾದರಗಳನ್ನು ಪಡೆಯುವಿರಿ. ಮನಸ್ಸಿಗೆ ನೆಮ್ಮದಿಕೊಡುವ ಮಾರ್ಗವೊಂದು ನಿಮಗೆ ಗೋಚರವಾಗುತ್ತದೆ. ಕೈಗೊಂಡ ಕೆಲಸಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವಿರಿ. ದಿನಸಿ ವ್ಯಾಪಾರಿಗಳಿಗೆ ಹೆಚ್ಚು ವ್ಯಾಪಾರವಾಗಿ ಲಾಭವೂ ಹೆಚ್ಚುತ್ತದೆ. ಕಲ್ಲು ಗಣಿಗಾರಿಕೆಯನ್ನು ಮಾಡುವವರಿಗೆ ಬೇಕಾದ ಪರವಾನಗಿ ದೊರೆಯುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಸಾಧನೆಯಲ್ಲಿ ಯಶಸ್ಸು ಇರುತ್ತದೆ. ಮಾತೃ ವರ್ಗದವರಿಂದ ನಿಮ್ಮ ಕೆಲಸಗಳಲ್ಲಿ ವೈಯಕ್ತಿಕ ಸಹಾಯ ದೊರೆಯುತ್ತದೆ. ಭೂವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಇರುತ್ತದೆ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ ಬರಬಹುದು.

***

ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1 )

ಹಿರಿಯರು, ಸಂಬಂಧವಿಲ್ಲದ ವಿಷಯಗಳಲ್ಲಿ ಮೂಗು ತೂರಿಸಲು ಹೋಗಿ ಮುಜುಗರಕ್ಕೆ ಒಳಗಾಗುವ ಸಂದರ್ಭಗಳಿವೆ. ನೆರೆಹೊರೆಯವರೊಡನೆ ಉತ್ತಮ ಬಾಂಧವ್ಯವನ್ನು ಉಳಿಸಿಕೊಳ್ಳುವುದು ಬಹಳ ಒಳ್ಳೆಯದು. ಮಕ್ಕಳಿಂದ ಸಾಕಷ್ಟು ಅನುಕೂಲ ಒದಗಿಬರುತ್ತದೆ. ವಿವಿಧ ಮೂಲಗಳಿಂದ ಹೆಚ್ಚಿನ ಆದಾಯ ಬರುವ ಸಾಧ್ಯತೆ ಇದೆ. ನಿವೇಶನ ಅಥವಾ ಜಮೀನು ಖರೀದಿಯ ಸಾಧ್ಯತೆಗಳಿವೆ. ಆದರೆ ದಾಖಲಾತಿ ಪರಿಶೀಲನೆ ಅತಿ ಅಗತ್ಯ. ನಿರುದ್ಯೋಗಿಗಳಿಗೆ ಉದ್ಯೋಗ ದೊರಕುವ ಸಾಧ್ಯತೆಗಳಿವೆ. ಸಿಗಲಾರದೆಂದುಕೊಂಡಿದ್ದ ವಸ್ತುವೊಂದು ದೊರೆತು ಸಂತಸವಾಗುತ್ತದೆ. ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಧನ ಸಂಗ್ರಹ ಮಾಡುವಿರಿ. ಕೃಷಿಕರಿಗೆ ಸರ್ಕಾರದಿಂದ ಬರಬೇಕಾಗಿದ್ದ ಧನ ಸಹಾಯ ಬರುತ್ತದೆ.

***

ಮಕರ ರಾಶಿ(ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ಕೈಗೆತ್ತಿಕೊಂಡ ಕಾರ್ಯಗಳಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ. ಕೆಲವು ಸರ್ಕಾರಿ ಅಧಿಕಾರಿಗಳಿಗೆ ಯೋಜನೆಯನ್ನು ರೂಪಿಸುವ ಹೊಸ ಜವಾಬ್ದಾರಿ ದೊರೆಯುತ್ತದೆ. ಹೆಣ್ಣುಮಕ್ಕಳು ಪ್ರೀತಿ-ಪ್ರೇಮದ ಹುಚ್ಚುಹೊಳೆಯಲ್ಲಿ ಸಿಕ್ಕಿ ಬೀಳುವ ಸಾಧ್ಯತೆ ಇದೆ, ಎಚ್ಚರ ವಹಿಸಿರಿ. ಹತ್ತಿ, ನಾರು ಇವುಗಳಿಂದ ವಿವಿಧ ಬಗೆಯ ವಸ್ತ್ರಗಳನ್ನು ತಯಾರಿಸಿ ಮಾರುವವರ ವ್ಯವಹಾರದಲ್ಲಿ ಹೆಚ್ಚಳವಾಗಲಿದೆ. ಜನರ ಜೊತೆ ವ್ಯವಹರಿಸುವಾಗ ಗಂಭೀರ ನಡವಳಿಕೆ ಅತಿ ಅಗತ್ಯ. ಹಣದ ಒಳಹರಿವು ನಿಮ್ಮ ಅಗತ್ಯಕ್ಕಿಂತ ಹೆಚ್ಚಿಗೆ ಇರುತ್ತದೆ. ಹಾಸ್ಯ ಕಲಾವಿದರುಗಳಿಗೆ ಉತ್ತಮ ವೇದಿಕೆ ದೊರೆತು ಗೌರವದ ಜೊತೆ ಧನ ಸಂಪಾದನೆಯಾಗುತ್ತದೆ. ವಿದೇಶದಲ್ಲಿರುವ ಮಕ್ಕಳ ಬಗ್ಗೆ ಶುಭ ಸಮಾಚಾರಗಳನ್ನು ಕೇಳಬಹುದು.

***

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 23)

ನಿಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ಕ್ರಮಕೈ‌ಗೊಳ್ಳಿರಿ. ಬಾಲಬಡುಕರನ್ನು ಸ್ವಲ್ಪಮಟ್ಟಿಗೆ ದೂರವಿಡಿ. ವಿದೇಶಕ್ಕೆ ರಫ್ತು ವ್ಯಾಪಾರ ಮಾಡುವವರಿಗೆ ವ್ಯವಹಾರದಲ್ಲಿ ಹೆಚ್ಚಿನ ಲಾಭವಿರುತ್ತದೆ. ಧನಾದಾಯವಿದ್ದರೂ ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು. ಬಟ್ಟೆ ವ್ಯಾಪಾರಿಗಳಿಗೆ ಅವರ ವ್ಯವಹಾರ ವಿಸ್ತರಿಸಿ ಹೆಚ್ಚು ಲಾಭವಾಗುತ್ತದೆ. ಯುವಕರ ನಿರ್ಲಕ್ಷ್ಯತನ ಅವರ ಉದ್ಯೋಗಕ್ಕೆ ಪೆಟ್ಟು ಕೊಡುವ ಸಾಧ್ಯತೆ ಇದೆ. ಹೈನುಗಾರಿಕೆಯ ವ್ಯವಹಾರದಲ್ಲಿ ಇರುವವರೆಗೆ ಆದಾಯ ಹೆಚ್ಚುತ್ತದೆ. ಸಿಹಿ ತಿಂಡಿತಿನಿಸುಗಳನ್ನು ತಯಾರು ಮಾಡುವವರ ಮಾರುಕಟ್ಟೆ ವಿಸ್ತರಿಸುತ್ತದೆ. ಸಂಗಾತಿಯ ಕಡೆಯಿಂದ ಹೆಚ್ಚಿನ ಸಹಕಾರ ದೊರೆಯುತ್ತದೆ. ದ್ರವರೂಪದ ಆಹಾರ ವಸ್ತುಗಳನ್ನು ಮಾರಾಟ ಮಾಡುವವರ ಆದಾಯ ಹೆಚ್ಚುತ್ತದೆ.

***

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಆರ್ಥಿಕ ಚೇತರಿಕೆ ಕಂಡರೂ ಖರ್ಚಿನ ವಿಷಯದಲ್ಲಿ ಎಚ್ಚರಿಕೆ ವಹಿಸಿರಿ. ಕೆಲವರೊಂದಿಗೆ ಅತಿಯಾದ ಸ್ನೇಹ ಸಂಬಂಧಗಳು ವೃದ್ಧಿಸುವ ಸಾಧ್ಯತೆ ಇದೆ. ಗೃಹಿಣಿಯರು ಹರಿತವಾದ ಆಯುಧಗಳನ್ನು ಉಪಯೋಗಿಸುವಾಗ ಎಚ್ಚರ ಇರಲಿ. ರೇಷ್ಮೆ ನೂಲು ತೆಗೆಯುವವರಿಗೆ ಬೇಡಿಕೆ ಬರುತ್ತದೆ. ಔಷಧಿ ತಯಾರಿಕಾ ಸಂಸ್ಥೆಗಳನ್ನು ನಡೆಸುತ್ತಿರುವವರ ಆದಾಯ ಹೆಚ್ಚುತ್ತದೆ. ಹಣ ಉಳಿತಾಯ ಮಾಡುವಲ್ಲಿ ಸ್ವಲ್ಪ ಪ್ರಗತಿ ಸಾಧಿಸುವಿರಿ. ನಿಂತುಹೋಗಿದ್ದ ಕೆಲಸವೊಂದು ಈಗ ಆರಂಭಗೊಂಡು ಪ್ರಗತಿಯನ್ನು ಕಾಣಬಹುದು. ರಾಜಕೀಯ ಸೇರಬೇಕೆನ್ನುವವರಿಗೆ ಸೂಕ್ತ ಮಾರ್ಗದರ್ಶಕರು ದೊರೆಯುತ್ತಾರೆ. ಗಣಿಗಾರಿಕೆ ನಡೆಸುವವರ ವ್ಯವಹಾರಗಳು ವಿಸ್ತರಣೆಯಾಗುತ್ತದೆ. ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ಇಡಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT