ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ: 26-9-2021ರಿಂದ 2-10-2021ರವರೆಗೆ

Last Updated 25 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕ: 8197304680

**
ಮೇಷ ರಾಶಿ ( ಅಶ್ವಿನಿ ಭರಣಿ ಕೃತಿಕ 1)
ಔಷಧಿ ವ್ಯಾಪಾರಿಗಳಿಗೆ ಉತ್ತಮ ವ್ಯವಹಾರವಿರುತ್ತದೆ. ಹತ್ತಿ ಬಟ್ಟೆಯನ್ನು ತಯಾರಿಸುವವರಿಗೆ ಮಾರುಕಟ್ಟೆ ವಿಸ್ತಾರಗೊಳ್ಳುತ್ತದೆ. ಮಕ್ಕಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಅಗತ್ಯ. ಜಂಟಿ ವ್ಯವಹಾರಗಳಿಗೆ ಕೈಹಾಕದೆ ಇರುವುದು ಬಹಳ ಉತ್ತಮ. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಕೃಷಿ ಉತ್ಪನ್ನಗಳಿಂದ ಆಹಾರ ವಸ್ತುಗಳನ್ನು ತಯಾರಿಸುವವರಿಗೆ ಬೇಡಿಕೆ ಹೆಚ್ಚುತ್ತದೆ. ರಾಸಾಯನಿಕ ವಸ್ತುಗಳನ್ನು ತಯಾರಿಸುವವರಿಗೆ ಮಾರುಕಟ್ಟೆ ವಿಸ್ತರಿಸುತ್ತದೆ. ನೆರೆಹೊರೆಯವರೊಂದಿಗೆ ಕ್ಷುಲ್ಲಕ ವಿಚಾರಕ್ಕಾಗಿ ಜಗಳ ಆಗಬಹುದು. ಆರ್ಥಿಕ ಸಹಾಯ ದೊರೆತು ತಮ್ಮ ಉದ್ಯಮವನ್ನು ನವೀಕರಣ ಮಾಡಿಕೊಳ್ಳಲಿಕ್ಕೆ ಈಗ ಸೂಕ್ತ ಸಮಯ. ಕಣ್ಣಿನ ಬಗ್ಗೆ ಎಚ್ಚರಿಕೆ ಇರಲಿ.

**
ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ತೆರಿಗೆ ತಜ್ಞರಿಗೆ ಸೂಕ್ತ ಪದೋನ್ನತಿ ದೊರೆಯುತ್ತದೆ. ಹೊಸವಾಹನದ ಖರೀದಿ ಬಗ್ಗೆ ಸಾಕಷ್ಟು ಚಿಂತನೆ ಮಾಡುವಿರಿ. ಹಣದ ಒಳಹರಿವು ನಿಮ್ಮ ಅಗತ್ಯ ಪೂರೈಸುತ್ತದೆ. ನಿಮ್ಮ ಕೌಟುಂಬಿಕ ಸಮಸ್ಯೆಗಳ ಬಗ್ಗೆ ಹಿರಿಯರು ನೀಡುವ ಸಲಹೆ ಉಪಯೋಗಕ್ಕೆ ಬರಲಿದೆ. ಪೆಟ್ರೋಲಿಯಂ ವಸ್ತುಗಳ ವ್ಯಾಪಾರಿಗಳಿಗೆ ವ್ಯವಹಾರದಲ್ಲಿ ಲಾಭ ಹೆಚ್ಚುತ್ತದೆ. ಉದ್ದಿಮೆದಾರರು ತಮ್ಮ ತೆರಿಗೆ ಪತ್ರಗಳನ್ನು ಪುನಃ ಪರಿಶೀಲನೆಗಾಗಿ ಕಳಿಸಬೇಕಾಗುತ್ತದೆ. ಮಕ್ಕಳ ನಡುವೆ ಹೊಂದಾಣಿಕೆ ಕಡಿಮೆಯಾಗಿ ನಿಮಗೆ ಬೇಸರವಾಗಲಿದೆ. ಪಾರಂಪರಿಕ ಕೃಷಿ ಪದ್ಧತಿಯಿಂದ ಬೆಳೆದ ಬೆಳೆಗಳಿಗೆ ಹೆಚ್ಚು ಬೆಲೆ ದೊರೆಯುತ್ತದೆ. ಕೆಲವು ನಾಟಿ ವೈದ್ಯರಿಗೆ ಬೇಡಿಕೆ ಹೆಚ್ಚುತ್ತದೆ.

**
ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಆಸ್ತಿ ವಿಚಾರದಲ್ಲಿ ರಾಜಿ ಸಂಧಾನಗಳು ನಡೆದು ವಿಚಾರ ಸುಖಾಂತ್ಯವಾಗುತ್ತದೆ. ವ್ಯವಹಾರದಲ್ಲಿ ಹೊಸ ವ್ಯಕ್ತಿಗಳಿಂದ ಸಹಾಯ ಸಹಕಾರ ದೊರೆಯುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಸಂಗೀತ ವಿದ್ವಾಂಸರುಗಳಿಗೆ ಪುರಸ್ಕಾರ ದೊರೆಯುವ ಸಾಧ್ಯತೆಯಿದೆ. ನಿರೀಕ್ಷಿತ ಮೂಲದಿಂದ ಧನಸಹಾಯ ದೊರೆಯದಿದ್ದರೂ ಅನಿರೀಕ್ಷಿತ ಮೂಲದಿಂದ ಸ್ವಲ್ಪ ಸಹಾಯವಾಗುತ್ತದೆ. ಮಿಶ್ರಲೋಹಗಳ ವ್ಯಾಪಾರ ಮಾಡುವವರಿಗೆ ವ್ಯವಹಾರ ವೃದ್ಧಿಸಿ ಆದಾಯವು ಹೆಚ್ಚುತ್ತದೆ. ಹಣಕಾಸು ಸಂಸ್ಥೆಗಳಲ್ಲಿ ಪಾಲುದಾರರ ವ್ಯತಿರಿಕ್ತ ತೀರ್ಮಾನಗಳಿಂದ ಸ್ವಲ್ಪ ನಷ್ಟ ಆಗಬಹುದು. ಗಣಕಯಂತ್ರ ಮೊದಲಾದ ಯಾಂತ್ರಿಕ ವಸ್ತುಗಳನ್ನು ಮಾರಾಟ ಮಾಡುವವರ ವ್ಯವಹಾರ ವಿಸ್ತರಿಸುತ್ತದೆ.

**
ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)
ನೌಕರಿಯಲ್ಲಿರುವವರಿಗೆ ಸಹೋದ್ಯೋಗಿಗಳಿಂದ ಕಿರಿಕಿರಿ ಉಂಟಾಗುವ ಸಾಧ್ಯತೆಯಿದೆ. ಸಂಗಾತಿಯ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು. ಮೊದಲೇ ಎಚ್ಚರಿಕೆ ತೆಗೆದುಕೊಂಡು ಮಾಡಿದ ಕೆಲಸಗಳಲ್ಲಿ ಈಗ ಫಲಿತಾಂಶವನ್ನು ಕಾಣಬಹುದು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಸರಿಯಾಗಿ ಗಮನಹರಿಸಿರಿ. ಹೊಸ ವಿಚಾರ ಬರಹಗಳಿಂದಾಗಿ ಪತ್ರಿಕಾ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡುವಿರಿ. ಆಮದು-ರಫ್ತು ವ್ಯವಹಾರವನ್ನು ಮಾಡುತ್ತಿರುವವರಿಗೆ ವ್ಯವಹಾರ ವಿಸ್ತರಿಸುವುದರ ಜೊತೆಗೆ ಲಾಭವು ಹೆಚ್ಚುತ್ತದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಇರುಸು ಮುರುಸಾದರೂ ನಿಮ್ಮ ಸ್ಥಾನಕ್ಕೆ ತೊಂದರೆ ಏನಿಲ್ಲ. ಆರ್ಥಿಕ ಸ್ಥಿತಿಯು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಸ್ತ್ರೀಯರಿಗೆ ಅತಿಯಾದ ಕೆಲಸದಿಂದ ದೇಹಾಲಸ್ಯ ಉಂಟಾಗಬಹುದು.

**
ಸಿಂಹ ರಾಶಿ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಹಿರಿಯರು ಹಾಗೂ ಮಕ್ಕಳೊಂದಿಗೆ ವಾದವಿವಾದ ಮಾಡದಿರುವುದು ಉತ್ತಮ. ಸ್ತ್ರೀಯರೊಂದಿಗೆ ಹಣಕಾಸಿನ ವ್ಯವಹಾರವನ್ನು ಮಾಡುವಾಗ ಅತಿಯಾದ ಎಚ್ಚರಿಕೆ ಇರಲಿ. ಬಂಧುಗಳೊಂದಿಗೆ ಇದ್ದ ಭಿನ್ನಾಭಿಪ್ರಾಯಗಳು ದೂರವಾಗುತ್ತವೆ. ಉದ್ದಿಮೆಯೊಂದರ ಸ್ಥಾಪನೆಗಾಗಿ ಬೇಕಾದ ಆದೇಶದ ಪ್ರತಿಯನ್ನು ಈಗ ಪ್ರಯತ್ನಪಟ್ಟು ಪಡೆಯಬಹುದು. ಆರ್ಥಿಕ ಸಂಪನ್ಮೂಲಗಳು ಹೆಚ್ಚು ಒದಗಿ ಸ್ಥಿರತೆಯನ್ನು ಕಾಣಬಹುದು. ಸ್ವಯಂ ಉದ್ಯೋಗವನ್ನು ಹೊಂದಿರುವ ಮಹಿಳೆಯರ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ಹಿರಿಯರ ಸಲಹೆಗಳು ನಿಮಗೆ ಬಹಳ ಉಪಯೋಗ ಆಗುತ್ತವೆ. ನಿಮ್ಮ ವಿರುದ್ಧ ಕುಯುಕ್ತಿಯನ್ನು ಮಾಡುತ್ತಿರುವವರ ವಿವರಗಳು ನಿಮಗೆ ದೊರೆಯುತ್ತವೆ. ಜಾಮೀನು ವ್ಯವಹಾರಗಳಲ್ಲಿ ತಲೆ ಹಾಕದಿರುವುದು ಬಹಳ ಉತ್ತಮ.

**
ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಉನ್ನತ ಶಿಕ್ಷಣ ಮಾಡಬೇಕೆನ್ನುವವರ ಆಸೆ ಕೈಗೂಡುತ್ತದೆ. ವಾದ-ವಿವಾದಗಳಲ್ಲಿ ನಿಮಗೆ ಯಶಸ್ಸು ದೊರೆಯುತ್ತದೆ. ಯಂತ್ರೋಪಕರಣಗಳ ವ್ಯಾಪಾರ ಮಾಡುವವರಿಗೆ ವ್ಯಾಪಾರ ವೃದ್ಧಿಸುತ್ತದೆ. ಬಂಧುಗಳೊಡನೆ ಉತ್ತಮ ಸಂಬಂಧವನ್ನು ಹೊಂದಲು ಸಾಕಷ್ಟು ಯತ್ನ ಮಾಡುವಿರಿ. ಆಧ್ಯಾತ್ಮಿಕ ಚಿಂತನೆಗಳಿಂದ ಮನಸ್ಸಿನ ದುಗುಡವನ್ನು ದೂರಮಾಡಿಕೊಳ್ಳುವಿರಿ. ಕೆಲವು ವಿಮಾ ಅಧಿಕಾರಿಗಳಿಗೆ ಸ್ಥಾನ ಬದಲಾವಣೆಯಾಗುವ ಸೂಚನೆಯಿದೆ. ಕೈಗಾರಿಕೋದ್ಯಮಿಗಳಿಗೆ ಅಪೇಕ್ಷಿಸಿದ ಧನ ಸಹಾಯ ಒದಗಿಬರುತ್ತದೆ ಮತ್ತು ತಯಾರಿಕಾ ಆದೇಶಗಳು ಸಹ ದೊರೆಯುತ್ತವೆ. ಆರ್ಥಿಕ ಸ್ಥಿತಿಯು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಹಿರಿಯರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯನ್ನು ಕಾಣಬಹುದು.

**
ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಕುಟುಂಬದಲ್ಲಿ ವಾದ ವಿವಾದಗಳಿಂದಾಗಿ ಸಾಕಷ್ಟು ಬೇಸರ ಮೂಡಬಹುದು. ಹಿತಶತ್ರುಗಳ ಬಾಧೆ ನಿಮ್ಮನ್ನು ಹೆಚ್ಚಾಗಿ ಬಾಧಿಸುತ್ತದೆ. ನಿಮ್ಮ ಸಂಗಾತಿಯ ವ್ಯತಿರಿಕ್ತ ನಡವಳಿಕೆಗಳು ನಿಮಗೆ ಗಾಬರಿ ತರುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಅಲ್ಪ ಯಶಸ್ಸು ಇರುತ್ತದೆ. ಸಂಪೂರ್ಣವಾಗಿ ತಾವೇ ಕುಟುಂಬವನ್ನು ನಡೆಸುತ್ತಿರುವ ಮಹಿಳೆಯರಿಗೆ ಉತ್ತಮ ಗೌರವ ಸಿಗುತ್ತದೆ. ತಂದೆ ಮತ್ತು ಮಕ್ಕಳ ನಡುವೆ ಇದ್ದ ವೈಮನಸ್ಸು ಕಡಿಮೆಯಾಗುತ್ತದೆ. ಅಮೂಲ್ಯವಾದ ಪಾರಂಪರಿಕ ವಸ್ತುಗಳನ್ನು ಸಂಗ್ರಹ ಮಾಡುವಿರಿ. ಅಧಿಕಾರಿಗಳ ಅಸಹಕಾರದಿಂದ ಆಗಬೇಕಾದ ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆಯಾಗಲಿದೆ.

**
ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)
ಮಹಿಳೆಯರಿಗೆ ಉದ್ಯೋಗದಲ್ಲಿ ಉತ್ತಮ ಅವಕಾಶ ತೆರೆದುಕೊಳ್ಳುವ ಸಾಧ್ಯತೆಯಿದೆ. ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಬೇಕಾದ ಸಲಕರಣೆಗಳು ಒದಗಿಬರುತ್ತವೆ. ಸಂಗಾತಿಗೆ ನೆರೆಹೊರೆಯವರಿಂದ ವಿರೋಧ ಎದುರಾಗಬಹುದು. ಅಂದುಕೊಂಡ ಕೆಲಸಗಳಲ್ಲಿ ಮಿತ್ರರ ಸಹಕಾರದಿಂದ ಕೆಲವು ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿರಿ. ಹಣಕಾಸು ವ್ಯವಹಾರ ಮಾಡುವವರು ಎಚ್ಚರವಾಗಿರಿ. ಇವರಿಗೆ ರಾಜಕೀಯದವರಿಂದ ತೊಂದರೆ ಬರಬಹುದು. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಜಂಟಿ ವ್ಯವಹಾರಗಳನ್ನು ಮುಂದುವರಿಸಿಕೊಂಡು ಹೋಗುವುದು ನಿಮಗೆ ಉತ್ತಮ. ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ಉತ್ತಮ ಕೆಲಸ ಮತ್ತು ಆದಾಯ ವಿರುತ್ತದೆ.

**
ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1)
ವ್ಯವಸಾಯದಲ್ಲಿ ತೊಡಗಿಸಿಕೊಂಡಿರುವವರಿಗೆ ಸಹಾಯಧನ ಹರಿದು ಬರುತ್ತದೆ. ಬಂಧುಗಳ ಮಧ್ಯಪ್ರವೇಶದಿಂದಾಗಿ ಪ್ರೇಮ ಪ್ರಕರಣ ಯಶಸ್ಸನ್ನು ಕಾಣುತ್ತದೆ. ಸರ್ಕಾರಿ ಹುದ್ದೆಯಲ್ಲಿರುವವರು ಭ್ರಷ್ಟಾಚಾರದ ಆರೋಪವನ್ನು ಎದುರಿಸುವ ಸಾಧ್ಯತೆ ಇದೆ. ಈ ಬಗ್ಗೆ ಎಚ್ಚರವಾಗಿರಿ. ಆದರೆ ವಿಚಾರಣಾ ವೇಳೆಯಲ್ಲಿ ಸಂಯಮವನ್ನು ಕಾಪಾಡಿಕೊಂಡಲ್ಲಿ ಸಮಸ್ಯೆ ದೊಡ್ಡದಾಗುವುದಿಲ್ಲ. ಮನೆಯನ್ನು ಆಧುನಿಕ ರೀತಿಯಲ್ಲಿ ನವೀಕರಣ ಮಾಡಲು ಪ್ರಯತ್ನ ಪಡುವಿರಿ. ಅನ್ಯರ ಮಾತಿನಲ್ಲಿ ಅತಿಯಾದ ವಿಶ್ವಾಸ ಬೇಡ. ಸ್ವಲ್ಪ ಪರಿಶೀಲನೆ ಮಾಡುವುದು ಅತಿ ಮುಖ್ಯ. ಆರ್ಥಿಕ ಸ್ಥಿತಿಯು ಸಮಾಧಾನಕರವಾಗಿರುತ್ತದೆ.

**
ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ವ್ಯವಹಾರಗಳಿಂದ ನಿಮ್ಮ ಸಂಪರ್ಕವನ್ನು ವೃದ್ಧಿ ಮಾಡಿಕೊಳ್ಳುವಿರಿ. ಲೆಕ್ಕಪರಿಶೋಧಕರಿಗೆ ಬಿಡುವಿಲ್ಲದ ಕೆಲಸವಿರುತ್ತದೆ. ತನ್ಮೂಲಕ ಆದಾಯವೂ ಹೆಚ್ಚುತ್ತದೆ. ಒಂದು ಋಣ ಪರಿಹಾರ ಮಾಡಿ ತೃಪ್ತಿಯನ್ನು ಕಾಣುವಿರಿ. ವೈಯಕ್ತಿಕ ವಿವರಗಳನ್ನು ಹೆಚ್ಚು ಬಹಿರಂಗಪಡಿಸುವುದು ಬೇಡವೇ ಬೇಡ. ತಂದೆಯಿಂದ ಸಾಂಪ್ರದಾಯಿಕ ಕೃಷಿಯ ಬಗ್ಗೆ ವಿವರಗಳು ದೊರೆಯುತ್ತವೆ. ಆಸ್ತಿ ನೋಂದಣಿಯನ್ನು ಮಾಡಿಸುವ ಮಧ್ಯವರ್ತಿಗಳ ಆದಾಯ ಹೆಚ್ಚುತ್ತದೆ. ಹೊಸ ಆಸ್ತಿ ಕೊಳ್ಳುವುದು ಈಗ ಬೇಡ. ಧನಾದಾಯ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಮಹಿಳಾ ಉದ್ಯೋಗಿಗಳಿಗೆ ವೃತ್ತಿಯಲ್ಲಿ ಅಭಿವೃದ್ಧಿ ಇರುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ಮೂಡುತ್ತದೆ.

**
ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಆತ್ಮೀಯ ಸಲಹೆಯಿಂದ ವೃತ್ತಿಯಲ್ಲಿ ಎದುರಾದ ಆಪತ್ತಿನಿಂದ ಪಾರಾಗುವಿರಿ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಯುವಕರು ಉಡಾಫೆ ಮಾತಿನಿಂದ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬಹುದು. ಮಿತ್ರರಿಂದ ಸ್ವಲ್ಪ ಮಟ್ಟಿಗೆ ಆರ್ಥಿಕ ಸಹಾಯ ದೊರೆಯುತ್ತದೆ. ಕೋರ್ಟ್‌ ಕಚೇರಿ ವ್ಯವಹಾರಗಳಲ್ಲಿ ಯಶಸ್ಸು ಕಾಣತೊಡಗುತ್ತದೆ. ಕೆಲವು ವ್ಯವಹಾರಗಳಿಗೆ ಹೂಡಿಕೆ ಮಾಡುವಂತೆ ಬಂಧುಗಳು ಒತ್ತಾಯ ಮಾಡುವರು. ಇಂಥವರ ಬಗ್ಗೆ ಸಾಕಷ್ಟು ಎಚ್ಚರವಾಗಿರಿ. ಸ್ವಯಂ ಉದ್ಯೋಗಗಳು ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರ ಆದಾಯದಲ್ಲಿ ಹೆಚ್ಚಳ ಆಗುತ್ತದೆ. ಕುಟುಂಬ ಸಮೇತರಾಗಿ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ.

**
ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಪ್ರವಾಸೋದ್ಯಮ ವ್ಯವಹಾರವನ್ನು ಮಾಡುವವರ ವ್ಯವಹಾರ ಸುಧಾರಿಸುತ್ತದೆ. ಹಣಕಾಸಿನ ವಿಷಯದಲ್ಲಿ ಜಾಗರೂಕತೆ ಅತಿ ಮುಖ್ಯ. ಮಕ್ಕಳ ಆರೋಗ್ಯದಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ಕಾಣಬಹುದು. ತರಕಾರಿ ವ್ಯಾಪಾರಿಗಳಿಗೆ ವ್ಯಾಪಾರ ಹೆಚ್ಚುತ್ತದೆ. ಆಹಾರ ಪದಾರ್ಥಗಳನ್ನು ಸಂಸ್ಕರಿಸಿ ಮಾರುವವರಿಗೆ ವ್ಯವಹಾರದ ವಿಸ್ತರಣೆ ಇದೆ. ಕ್ರೀಡಾಪಟುಗಳಿಗೆ ಸ್ಪರ್ಧೆಯಲ್ಲಿ ಉತ್ತಮ ಸಾಧನೆಯನ್ನು ತೋರಿಸುವ ಅವಕಾಶ ಒದಗುತ್ತದೆ. ಅನಿರೀಕ್ಷಿತ ಮೂಲದಿಂದ ಆದಾಯ ಬರುತ್ತದೆ. ಹಳೆ ಕಬ್ಬಿಣವನ್ನು ಸಂಸ್ಕರಿಸಿ ಮಾರುವವರಿಗೆ ಸಂಪಾದನೆ ಹೆಚ್ಚುತ್ತದೆ. ವೈಯಕ್ತಿಕ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿರಿ. ಹಿರಿಯರ ಬುದ್ಧಿ ಮಾತು ನಿಮಗೆ ಕೋಪ ತೋರಿಸಿದರೂ ಅದರಲ್ಲಿ ನಿಮಗೆ ಒಳಿತು ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT