ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ: 31-7-2022ರಿಂದ 6-8-2022ರವರೆಗೆ

ಅಕ್ಷರ ಗಾತ್ರ

ಎಂ.ಎನ್.ಲಕ್ಷ್ಮೀನರಸಿಂಹಸ್ವಾಮಿ, ಮಾದಾಪುರ,
ಜ್ಯೋತಿಷ್ಯ ವಿಶಾರದ, ಸಂಪರ್ಕಕ್ಕೆ: 8197304680

***

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)

ಕೃಷಿ ಸಂಬಂಧಿತ ಉದ್ಯೋಗಗಳಿಂದ ಆದಾಯ ಬರುತ್ತದೆ. ಕೆಲವೊಂದು ಕೆಲಸ ಕಾರ್ಯಗಳು ಕೈಗೂಡಿದರೂ ಕೆಲವು ಕೆಲಸಗಳಲ್ಲಿ ಹಿನ್ನಡೆ ಇರುತ್ತದೆ. ಅಕಾಲ ಭೋಜನದಿಂದಾಗಿ ಆರೋಗ್ಯ ತಪ್ಪಬಹುದು. ದೂರ ಪ್ರಯಾಣದಿಂದ ದೇಹಾಲಸ್ಯ ಆಗುವ ಸಾಧ್ಯತೆ ಇದೆ. ಆಸ್ತಿಗೆ ಸಂಬಂಧಪಟ್ಟ ವಿಷಯಗಳನ್ನು ಕಲೆ ಹಾಕಲು ಸಾಕಷ್ಟು ಸುತ್ತಾಟ ಮಾಡುವಿರಿ. ನಿಮ್ಮ ಸಂಗಾತಿಯ ಕುಹಕ ಮಾತು ನಿಮ್ಮನ್ನು ಕೆರಳಿಸುತ್ತದೆ. ಛಾಯಾಗ್ರಾಹಕರುಗಳಿಗೆ ಹೆಚ್ಚು ವ್ಯವಹಾರವಾಗಿ ಸಂಪಾದನೆ ಹೆಚ್ಚುತ್ತದೆ. ಚಿತ್ರೀಕರಣ ಮಾಡುವ ತಂಡಗಳಿಗೆ ಬಿಡುವಿಲ್ಲದ ಕೆಲಸವಿರುತ್ತದೆ. ನಿರೀಕ್ಷಿಸಿದ ಸಾಲ ಸೌಲಭ್ಯ ಬರುವುದು ನಿಧಾನವಾಗಬಹುದು. ಹಣದ ಒಳಹರಿವು ನಿಧಾನಗತಿಯಲ್ಲಿ ಇರುತ್ತದೆ. ಹಿರಿಯರ ಸಹಕಾರದಿಂದ ಆರ್ಥಿಕ ಬಿಕ್ಕಟ್ಟು ನಿವಾರಣೆಯಾಗುತ್ತದೆ.

ವೃಷಭ ರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ಹಣಕಾಸಿನ ಅನುಕೂಲತೆ ಒದಗಿಬರುತ್ತದೆ. ಕಾನೂನಿಗೆ ಸಂಬಂಧಪಟ್ಟ ವ್ಯವಹಾರಗಳಲ್ಲಿ ಮುನ್ನಡೆ ಇರುತ್ತದೆ. ಮನೆಯವರ ಮನೋಗುಣಕ್ಕೆ ಅನುವಾಗಿ ಹೊಂದಿಕೊಳ್ಳುವಿರಿ. ಸಾಲಮಾಡಿ ಸಣ್ಣಪುಟ್ಟ ಕೈಸಾಲಗಳನ್ನು ತೀರಿಸಿಕೊಳ್ಳುವಿರಿ. ಉದ್ಯೋಗದಾತರ ಕೃಪೆಯಿಂದ ತಾಂತ್ರಿಕತೆಯಲ್ಲಿ ಕೌಶಲ ಪಡೆದುಕೊಳ್ಳುವಿರಿ. ಸಹೋದ್ಯೋಗಿಗಳ ಗೆಳೆತನವನ್ನು ಗಟ್ಟಿ ಮಾಡಿಕೊಳ್ಳುವಿರಿ. ಮಕ್ಕಳಿಂದ ಸಂತೋಷದ ಸುದ್ದಿಗಳನ್ನು ಕೇಳುವಿರಿ. ರಾಜಕೀಯ ವ್ಯಕ್ತಿಗಳು ಸೂಕ್ಷ್ಮವಾದ ವಿಷಯಗಳ ಬಗ್ಗೆ ಹೆಚ್ಚು ಗಮನಹರಿಸುವರು. ಮಹಿಳಾ ಉದ್ದಿಮೆದಾರರಿಗೆ ಮುನ್ನೆಡೆಯಾಗಿ ಲಾಭ ಹೆಚ್ಚುತ್ತದೆ. ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತೋಷ ಮೂಡುತ್ತದೆ. ಮಕ್ಕಳ ಮನರಂಜನೆಗಾಗಿ ಹೆಚ್ಚು ಹಣ ಖರ್ಚು ಮಾಡುವಿರಿ.

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಮನೆಯವರೊಂದಿಗೆ ಚರ್ಚೆಯ ಮೂಲಕ ಕುಟುಂಬದಲ್ಲಿದ್ದ ಭಿನ್ನಾಭಿಪ್ರಾಯಗಳನ್ನು ದೂರ ಮಾಡುವಿರಿ. ಇದರಲ್ಲಿ ನಿಮ್ಮ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ದೊರೆತು ನೆಮ್ಮದಿಯಾಗುವುದು. ದ್ರವ ರೂಪದ ರಾಸಾಯನಿಕ ಪದಾರ್ಥಗಳನ್ನು ಮಾರಾಟ ಮಾಡುವವರ ವ್ಯವಹಾರ ವಿಸ್ತರಿಸುತ್ತದೆ. ಹಿರಿಯ ಗಣ್ಯವ್ಯಕ್ತಿಗಳಿಗೆ ಸಮಾಜದಲ್ಲಿ ಸ್ಥಾನಮಾನ ದೊರೆತು ತನ್ಮೂಲಕ ರಾಜಕೀಯ ಪ್ರವೇಶಕ್ಕೆ ಹೆಚ್ಚು ಅನುಕೂಲ ಆಗುತ್ತದೆ. ಧನಾದಾಯವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಕೆಲವು ಉನ್ನತ ಹುದ್ದೆಯಲ್ಲಿರುವವರಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ಭಾಷಣಕಾರರಿಗೆ ಉತ್ತಮ ವೇದಿಕೆ ಹಾಗೂ ಹೆಚ್ಚು ಪ್ರಚಾರ ದೊರೆತು ಸಂತಸವಾಗುತ್ತದೆ. ಕೃಷಿ ಕ್ಷೇತ್ರ ಅಥವಾ ಸಸ್ಯಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಅಧ್ಯಯನಕ್ಕೆ ಮತ್ತು ತರಬೇತಿಗಾಗಿ ವಿದೇಶಕ್ಕೆ ಹೋಗಿ ಬರುವ ಅವಕಾಶ ದೊರೆಯುತ್ತದೆ.

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)

ಹೊಸ ಜನರ ಪರಿಚಯವಾಗಿ ವ್ಯವಹಾರದಲ್ಲಿ ಚೇತರಿಕೆಯನ್ನು ಕಾಣಬಹುದು. ಆರ್ಥಿಕ ಸ್ಥಿತಿಯು ಉತ್ತಮ ಸ್ಥಿತಿಯತ್ತ ಹೊರಳುತ್ತದೆ. ಭಾಷಣಕಾರರಿಗೆ ಉತ್ತಮ ವೇದಿಕೆ ದೊರೆಯುತ್ತದೆ. ಇಲ್ಲಿ ಅವರು ತಮ್ಮ ಮನೋಗತವನ್ನು ಪ್ರಚುರಪಡಿಸಬಹುದು. ಮಿಲಿಟರಿ ಸಂಶೋಧನಾ ವಿಭಾಗದಲ್ಲಿ ಕೆಲಸ ಮಾಡುತ್ತಿರುವವರಿಗೆ ಹೊಸ ರೀತಿಯ ಅನುಕೂಲಕರ ಫಲಿತಾಂಶಗಳು ದೊರೆತು ಹೆಮ್ಮೆಯಾಗುತ್ತದೆ. ಸಿದ್ಧ ಉಡುಪನ್ನು ಮಾರುವವರ ವ್ಯವಹಾರ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚು ಶ್ರಮ ಹಾಕಲೇಬೇಕಾದ ಅನಿವಾರ್ಯವಿದೆ. ಕೆಲವು ಕೆಲಸಗಳಿಗೆ ಒಡಹುಟ್ಟಿದವರಿಂದ ತೀವ್ರ ವಿರೋಧ ಬರಬಹುದು. ಕೆಲವು ಹೆಣ್ಣುಮಕ್ಕಳಿಗೆ ತವರಿನಿಂದ ಹೆಚ್ಚಿನ ಸಹಾಯ ದೊರೆಯುತ್ತದೆ. ವಿದೇಶಿ ವ್ಯವಹಾರಗಳನ್ನು ಮಾಡುವವರ ವ್ಯವಹಾರ ನಿಧಾನಗತಿಯಾದರೂ ನಿಲ್ಲುವುದಿಲ್ಲ.

ಸಿಂಹ ರಾಶಿ(ಮಖಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ಚಿನ್ನ, ಬೆಳ್ಳಿ ವ್ಯಾಪಾರಸ್ಥರಿಗೆ ಹೆಚ್ಚಿನ ವ್ಯಾಪಾರ ನಡೆಯುವ ಸಂದರ್ಭವಿದೆ. ಹಿರಿಯರ ಹದಗೆಟ್ಟ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆಯನ್ನು ಕಾಣಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಉತ್ತಮ ಕಾಲವಾದರೂ ಹೆಚ್ಚಿನ ಶ್ರಮ ಆಗತ್ಯ. ಖರ್ಚಿನ ಬಗ್ಗೆ ಹೆಚ್ಚು ಎಚ್ಚರ ವಹಿಸಿರಿ. ಮಿತಿಮೀರಿದಲ್ಲಿ ಸಾಲ ಮಾಡಬೇಕಾದ ಸಂದರ್ಭ ಬರಬಹುದು. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ತಕರಾರಿನ ವಿಷಯಗಳಲ್ಲಿ ಹಿರಿಯರ ಸಲಹೆಗಳು ಬಹಳ ಉತ್ತಮ ಫಲಿತಾಂಶವನ್ನು ಕೊಡುತ್ತದೆ. ವೃತ್ತಿಯಲ್ಲಿ ವೇತನ ಏರಿಕೆಯ ಸಂಭವವಿದೆ. ಗಿರವಿ ಅಂಗಡಿಯವರ ವ್ಯವಹಾರ ಹೆಚ್ಚಾಗಿ ಲಾಭ ಬರುತ್ತದೆ. ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರುವವರ ವ್ಯವಹಾರ ವಿಸ್ತರಿಸುತ್ತದೆ. ಮಿತ್ರರೊಂದಿಗೆ ಮಾಡುವ ಕೆಲವು ಸಮಾಲೋಚನೆಗಳು ತೃಪ್ತಿಕರವಾಗಿರುತ್ತವೆ.

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಸಂಗಾತಿ ಆದಾಯದಲ್ಲಿ ಸ್ವಲ್ಪ ಏರಿಕೆ ಕಂಡು ಬರುತ್ತದೆ ಹಾಗೂ ನಿಮ್ಮೆಲ್ಲಾ ಕೆಲಸಗಳಿಗೂ ಸಂಗಾತಿಯ ಸಹಕಾರ ದೊರೆಯುತ್ತದೆ. ವೃತ್ತಿಯಲ್ಲಿ ಮಹಿಳಾ ಹಿರಿಯ ಅಧಿಕಾರಿಗಳಿಂದ ಸಾಕಷ್ಟು ಸಹಾಯ ದೊರೆಯುತ್ತದೆ. ಕೆಲವೊಂದು ಗೃಹ ಕೈಗಾರಿಕೆಯ ತರಬೇತಿ ಶಿಬಿರಗಳಲ್ಲಿ ಭಾಗವಹಿಸುವ ಅವಕಾಶವಿದೆ. ಜಾಹೀರಾತು ಸಂಸ್ಥೆಯನ್ನು ನಡೆಸುತ್ತಿರುವವರಿಗೆ ಹೆಚ್ಚು ವ್ಯವಹಾರಗಳಾಗಿ ಆದಾಯ ಬರುತ್ತದೆ. ವಾಣಿಜ್ಯ ವ್ಯವಹಾರಗಳ ಒಪ್ಪಂದದಲ್ಲಿ ಸಾಕಷ್ಟು ಜಾಗರೂಕರಾಗಿ ಇರುವುದು ಒಳ್ಳೆಯದು. ನಿರುದ್ಯೋಗಿಗಳು ಬಂದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವುದು ಬಹಳ ಉತ್ತಮ. ಸರ್ಕಾರಿ ಇಲಾಖೆಯ ಕೆಲಸಕಾರ್ಯಗಳು ಸರಾಗವಾಗಿ ಆಗುತ್ತದೆ. ವಾಹನ ಚಲಾಯಿಸುವಾಗ ಎಚ್ಚರ ಇರಲಿ. ವಸ್ತ್ರ ವಿನ್ಯಾಸಕಾರರಿಗೆ ಹೆಚ್ಚು ಬೇಡಿಕೆ ಬರುತ್ತದೆ.

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಸಂಗಾತಿಯ ಕಡೆಯಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಧನಸಹಾಯ ಒದಗುತ್ತದೆ. ಸರ್ಕಾರಿ ವೃತ್ತಿಯಲ್ಲಿರುವವರಿಗೆ ಬಡ್ತಿ ಸಿಗುವ ಸಂದರ್ಭವಿದೆ. ಸರ್ಕಾರಿ ಇಲಾಖಾ ಪತ್ರ ವ್ಯವಹಾರಗಳಲ್ಲಿ ಮುನ್ನಡೆಯನ್ನು ಸಾಧಿಸಬಹುದು. ಗೃಹ ಬಳಕೆ ಸಾಮಗ್ರಿಗಳನ್ನು ಮಾರಾಟ ಮಾಡುವವರ ವ್ಯವಹಾರ ವಿಸ್ತರಿಸುತ್ತದೆ. ಗಣ್ಯರ ಸಂಪರ್ಕಗಳನ್ನು ಪಡೆದು ಸ್ವಂತ ಕೆಲಸಗಳನ್ನು ಮಾಡಿಕೊಳ್ಳುವಿರಿ. ಸಂಶೋಧನಾಕಾರರಿಗೆ ತಮ್ಮ ಆವಿಷ್ಕಾರಗಳನ್ನು ಹಿರಿಯ ಸಂಶೋಧಕರ ಸಮ್ಮುಖದಲ್ಲಿ ಹಂಚಿಕೊಳ್ಳುವ ಸಂದರ್ಭ ಸಿಗುತ್ತದೆ. ಕೆಲಸದ ಒತ್ತಡಗಳು ಹೆಚ್ಚಾಗುವ ಸಂದರ್ಭವಿದೆ. ವಾದ-ವಿವಾದಗಳಿಗಿಂತ ರಾಜಿ ಸೂತ್ರಗಳು ಬಹಳ ಪರಿಣಾಮಕಾರಿಯಾಗಿ ಫಲಿತಾಂಶ ಕೊಡುತ್ತದೆ. ದ್ರವರೂಪದ ವಸ್ತುಗಳನ್ನು ಮಾರಾಟ ಮಾಡುವವರ ವ್ಯವಹಾರ ವಿಸ್ತರಿಸುತ್ತದೆ.

ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)

ಬರಹಗಾರರು, ಕಲಾವಿದರಿಗೆ ಉತ್ತಮ ಉತ್ತೇಜನ ದೊರೆಯುತ್ತದೆ. ಕೃಷಿಕರು ಬೆಳೆದ ಬೆಳೆಗೆ ಉತ್ತಮ ಬೆಲೆ ದೊರೆಯುತ್ತದೆ. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಮಕ್ಕಳ ಬದುಕಿನಲ್ಲಿ ಹೊಸ ತಿರುವು ಕಂಡು ಮುನ್ನಡೆಯನ್ನು ಕಾಣಬಹುದು. ಸಾಂಸ್ಕೃತಿಕ ಕಾರ್ಯಗಳನ್ನು ಏರ್ಪಾಡು ಮಾಡುವವರಿಗೆ ಬಿಡುವಿಲ್ಲದ ಕೆಲಸಗಳಿರುತ್ತವೆ. ಕೆಲಸಕಾರ್ಯಗಳಲ್ಲಿ ಇದ್ದ ಒತ್ತಡಗಳು ಕಡಿಮೆಯಾಗುವ ಸಂದರ್ಭವಿದೆ. ವಾಹನ ದುರಸ್ತಿ ಮಾಡುವವರ ವ್ಯವಹಾರ ಹೆಚ್ಚಾಗುತ್ತದೆ. ಹದಿಹರೆಯದವರ ವಿಚಿತ್ರ ನಡವಳಿಕೆಗಳಿಂದ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ನಿಮ್ಮ ಆತ್ಮವಿಶ್ವಾಸದ ನುಡಿಗಳು ಕೆಲಸಗಾರರನ್ನು ಹೆಚ್ಚು ಕೆಲಸಮಾಡುವಂತೆ ಪ್ರೇರೇಪಿಸುತ್ತವೆ. ದಿನಸಿ ಸಗಟು ವ್ಯಾಪಾರಿಗಳಿಗೆ ದಾಸ್ತಾನು ಹೆಚ್ಚಿಸಿಕೊಳ್ಳುವ ಅವಕಾಶವಿರುತ್ತದೆ.

ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1)

ಔದ್ಯೋಗಿಕ ಸಮಸ್ಯೆಗಳು ಮೇಲಧಿಕಾರಿಯ ನೆರವಿನಿಂದ ಪರಿಹಾರವಾಗುವುದು. ನಿಮ್ಮ ವ್ಯಾಪಾರ ವ್ಯವಹಾರಗಳಿಗೆ ವಾಣಿಜ್ಯ ಅಧಿಕಾರಿಗಳು ಮತ್ತು ಸರ್ಕಾರದ ಸಹಕಾರ ದೊರೆಯುತ್ತದೆ. ಸ್ಥಿರಾಸ್ತಿ ಕೊಳ್ಳುವ ಯೋಗವಿದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಶತ್ರುಗಳನ್ನು ಮಣಿಸಲು ಅವರದೇ ತಂತ್ರಗಳನ್ನು ಬಳಸುವಿರಿ. ವಿದ್ಯಾರ್ಥಿಗಳಿಗೆ ಹೆಚ್ಚು ಶ್ರದ್ಧೆ ವಹಿಸಬೇಕಾದ ಅನಿವಾರ್ಯವಿದೆ. ಸಂಗಾತಿಯ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ಕೆಲವು ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆಯಾಗಬಹುದು. ಆದರೆ ನಂತರ ನಿಧಾನವಾಗಿ ಕೆಲಸ ಆಗಬಹುದು. ತಾಯಿಯಿಂದ ನಿಮ್ಮ ಕೆಲಸಗಳಿಗೆ ಹೆಚ್ಚಿನ ಸಹಕಾರ ದೊರೆಯುತ್ತದೆ. ಧಾರ್ಮಿಕ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಮೂಡುತ್ತದೆ. ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಅತಿ ಅಗತ್ಯ.

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ಅಬಕಾರಿ ಇಲಾಖೆಯ ಕೆಲಸಗಾರರಿಗೆ ಬಿಡುವಿಲ್ಲದ ಕೆಲಸವಿರುತ್ತದೆ. ಕೆಲವು ರಾಜಕಾರಣಿಗಳಿಗೆ ಗೊಂದಲಮಯ ಸನ್ನಿವೇಶಗಳು ಉಂಟಾಗುತ್ತವೆ. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿ ಇರುತ್ತದೆ. ಲೇವಾದೇವಿ ಮಾಡುವವರಿಗೆ ಸ್ವಲ್ಪ ವಸೂಲಾತಿ ಆಗುತ್ತದೆ. ವಿದ್ಯಾರ್ಥಿಗಳ ಪ್ರಯತ್ನಕ್ಕೆ ತಕ್ಕ ಫಲ ಇರುತ್ತದೆ. ಪರಿಣಿತ ತಂತ್ರಜ್ಞರಿಗೆ ಎಲ್ಲಿಲ್ಲದ ಬೇಡಿಕೆ ಬರುತ್ತದೆ. ಸರ್ಕಾರಿ ಸಾಲ ಅಥವಾ ಸಹಾಯಧನ ಸರಾಗವಾಗಿ ಸಿಗುತ್ತದೆ. ತಾಯಿಯೊಡನೆ ನಿಷ್ಠುರದ ಮಾತುಗಳು ಆಗಬಹುದು. ಅತಿ ಶೀತಬಾಧೆ ಇರುವವರು ಎಚ್ಚರ ವಹಿಸಿರಿ. ಕೌಟುಂಬಿಕ ಸಮಸ್ಯೆಗಳಿಗೆ ಶೀಘ್ರ ಪರಿಹಾರಗಳು ದೊರೆಯುತ್ತವೆ. ರಾಜಕಾರಣಿಗಳಿಗೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಅವಕಾಶ ದೊರೆಯುತ್ತದೆ. ಮನಃಶಾಂತಿಗಾಗಿ ದೇವತಾ ಆರಾಧನೆಯನ್ನು ಮಾಡುವಿರಿ.

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಉಪನ್ಯಾಸಕರಿಗೆ, ಭಾಷಣಕಾರರಿಗೆ ಉತ್ತಮ ವೇದಿಕೆ ದೊರೆಯುತ್ತದೆ ಹಾಗೂ ಉಪನ್ಯಾಸಗಳು ಜನ ಮನ್ನಣೆಗೆ ಪಾತ್ರವಾಗುತ್ತದೆ. ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಬೇಕೆನ್ನುವವರಿಗೆ ಈಗ ಅವಕಾಶ ದೊರೆಯುತ್ತದೆ. ಹಣದ ಒಳಹರಿವು ಉತ್ತಮವಾಗಿದ್ದರೂ ಅದರ ನಿರ್ವಹಣೆ ಅತಿ ಮುಖ್ಯ. ಯುವಕರ ನಡವಳಿಕೆಗಳು ಸಮಾಜದಲ್ಲಿ ಪ್ರಶ್ನಾರ್ಹವಾಗಿ ಎಲ್ಲರ ಮುಂದೆ ಸಣ್ಣವರಾಗುವರು. ನಿಮ್ಮ ವ್ಯವಹಾರಗಳನ್ನು ಸುಧಾರಣೆ ಮಾಡಲು ಈಗ ಸಕಾಲ. ಸಂಗೀತಗಾರರಿಗೆ ಅದರಲ್ಲಿ ಸಾಧನೆ ಮಾಡುವ ಕಾಲ. ಹೆಣ್ಣುಮಕ್ಕಳ ಅಭಿವೃದ್ಧಿಯು ನಿರೀಕ್ಷೆಗಿಂತ ಉತ್ತಮವಾಗಿರುತ್ತದೆ. ಉಸಿರಾಟದ ತೊಂದರೆ ಇರುವವರು ಸಾಕಷ್ಟು ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಪ್ರೀತಿ, ಪ್ರೇಮ ಹುಸಿಯಾಗುವ ಸಾಧ್ಯತೆ ಇದೆ.

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಬಹಳ ದಿನಗಳಿಂದ ಬಾಕಿ ಇರುವ ಕೆಲಸಗಳನ್ನು ಮುಗಿಸುವ ಬಗ್ಗೆ ಆಲೋಚನೆ ಮಾಡಿರಿ. ಉನ್ನತ ವಿದ್ಯಾಭ್ಯಾಸಕ್ಕೆ ಬೇಕಾಗುವ ಎಲ್ಲಾ ರೀತಿಯ ಅನುಕೂಲಗಳು ಒದಗುತ್ತದೆ. ದ್ವಿದಳ ಧಾನ್ಯದ ಬೆಳೆಗಾರರಿಗೆ ಹೆಚ್ಚು ಲಾಭವಿರುತ್ತದೆ. ಹಣದ ಒಳಹರಿವು ಕಡಿಮೆಯಿರುತ್ತದೆ. ನಿಮಗಾಗಿ ಅಲಂಕಾರಿಕ ವಸ್ತುಗಳನ್ನು ಕೊಳ್ಳುವಿರಿ. ಉಸಿರಾಟದ ತೊಂದರೆ ಇರುವವರು ಎಚ್ಚರಿಕೆ ವಹಿಸಬೇಕಾದ ಅನಿವಾರ್ಯವಿದೆ. ಮಕ್ಕಳ ಹಿತಕ್ಕಾಗಿ ಕೆಲವು ದೈವ ಕಾರ್ಯದ ಆಚರಣೆಯನ್ನು ಮಾಡುವಿರಿ. ಉದ್ಯೋಗದ ಸ್ಥಳದಲ್ಲಿ ಅತಿಯಾದ ಸಂಶಯದಿಂದಾಗಿ ಮುಜುಗರ ಪಡುವಿರಿ. ಕೃಷಿಕರಿಗೆ ಹೆಚ್ಚಿನ ಲಾಭವಿರುತ್ತದೆ. ಕಬ್ಬಿಣದಲ್ಲಿ ಗೃಹ ಉಪಯೋಗಿ ವಸ್ತುಗಳನ್ನು ತಯಾರಿಸಿ ಮಾರುವವರ ವ್ಯವಹಾರ ವಿಸ್ತರಣೆಯಾಗುತ್ತದೆ. ಬಟ್ಟೆ ತಯಾರಕರಿಗೆ ವ್ಯಾಪಾರ ಹೆಚ್ಚುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT