<p>ಯಾದಗಿರಿ: ‘ನಮ್ಮ ಭಾರತದಲ್ಲಿ ಹಲವು ಮಹಾಪುರುಷರು, ದಾರ್ಶನಿಕರು, ಶರಣರ ಜಯಂತಿಗಳನ್ನು ಆಚರಿಸಲಾಗುತ್ತದೆ. ಈ ಆಚರಣೆಗಳಿಂದ ಸನಾತನ ಧರ್ಮದ ಪರಂಪರೆಯ ಸ್ಮರಣೆಯಾಗುತ್ತದೆ’ ಎಂದು ಗಾಯತ್ರಿ ಸಮಾಜದ ಮುಖಂಡ ದಿನೇಶ ಶರ್ಮಾ ಹೇಳಿದರು.</p>.<p>ನಗರದ ಬಾಲಾಜಿ ಮಂದಿರದಲ್ಲಿ ಭಾನುವಾರ ಗಾಯತ್ರಿ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಪರಶುರಾಮ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಆಯಾ ಸಮಾಜದವರು ಆ ಸಮಾಜದ ಮಹಾತ್ಮರ ಜಯಂತಿ ಆಚರಿಸುವ ಮೂಲಕ ತಮ್ಮ ಪರಂಪರೆಯನ್ನು ನೆನಪಿಸಿಕೊಳ್ಳುತ್ತಾರೆ’ ಎಂದರು.</p>.<p>‘ಗಾಯಿತ್ರಿ ಸಮಾಜದದಿಂದ ಪರಶುರಾಮ ಜಯಂತಿಯನ್ನು ಆಚರಿಸುತ್ತಿದ್ದು, ಈ ಆಚರಣೆಗಳು ಮುಂದಿನ ಪೀಳಿಗೆಯವರೂ ಆಚರಿಸಬೇಕು. ಆ ಮೂಲಕ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಿ’ ಎಂದು ಕರೆ ನೀಡಿದರು.</p>.<p>ನಗರದ ಚಕ್ಕರ ಕಟ್ಟಾ ಬಡಾವಣೆಯಿಂದ ಮಹಾತ್ಮ ಗಾಂಧಿ ವೃತ್ತ, ಬಾಲಾಜಿ ಮಂದಿರದವರೆಗೆ ಭಜನೆ ಮತ್ತು ಮಂಗಳ ವಾದ್ಯಗಳೊಂದಿಗೆ ಪರಶುರಾಮ ಭಾವಚಿತ್ರದ ಮೆರವಣಿಗೆ ಜರುಗಿತು.</p>.<p>ಮುಖಂಡರಾದ ದಿನೇಶ ಪಾರಿಕ್, ಸತ್ಯನಾರಾಯಣ ಗೌರ, ವಿಜಯ ಗೌರ, ಶ್ರೀಕಾಂತ ಜೋಶಿ, ಬದ್ರಿನಾರಾಯಣ ವ್ಯಾಸ, ರೂಪೇಶ ಪಾಂಚಾರಿಯಾ, ಆನಂದ ಗೌರ, ಸತೀಶ ಪಾಂಚಾರಿಯಾ, ಅಶ್ವಿನ ಪಂಚಾಚಾರ್ಯ ಸೇರಿದಂತೆ ಮುಖಂಡರು, ಮಹಿಳೆಯರು ಮತ್ತು ಮಕ್ಕಳು ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260420-30-1392393818</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯಾದಗಿರಿ: ‘ನಮ್ಮ ಭಾರತದಲ್ಲಿ ಹಲವು ಮಹಾಪುರುಷರು, ದಾರ್ಶನಿಕರು, ಶರಣರ ಜಯಂತಿಗಳನ್ನು ಆಚರಿಸಲಾಗುತ್ತದೆ. ಈ ಆಚರಣೆಗಳಿಂದ ಸನಾತನ ಧರ್ಮದ ಪರಂಪರೆಯ ಸ್ಮರಣೆಯಾಗುತ್ತದೆ’ ಎಂದು ಗಾಯತ್ರಿ ಸಮಾಜದ ಮುಖಂಡ ದಿನೇಶ ಶರ್ಮಾ ಹೇಳಿದರು.</p>.<p>ನಗರದ ಬಾಲಾಜಿ ಮಂದಿರದಲ್ಲಿ ಭಾನುವಾರ ಗಾಯತ್ರಿ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಪರಶುರಾಮ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಆಯಾ ಸಮಾಜದವರು ಆ ಸಮಾಜದ ಮಹಾತ್ಮರ ಜಯಂತಿ ಆಚರಿಸುವ ಮೂಲಕ ತಮ್ಮ ಪರಂಪರೆಯನ್ನು ನೆನಪಿಸಿಕೊಳ್ಳುತ್ತಾರೆ’ ಎಂದರು.</p>.<p>‘ಗಾಯಿತ್ರಿ ಸಮಾಜದದಿಂದ ಪರಶುರಾಮ ಜಯಂತಿಯನ್ನು ಆಚರಿಸುತ್ತಿದ್ದು, ಈ ಆಚರಣೆಗಳು ಮುಂದಿನ ಪೀಳಿಗೆಯವರೂ ಆಚರಿಸಬೇಕು. ಆ ಮೂಲಕ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಿ’ ಎಂದು ಕರೆ ನೀಡಿದರು.</p>.<p>ನಗರದ ಚಕ್ಕರ ಕಟ್ಟಾ ಬಡಾವಣೆಯಿಂದ ಮಹಾತ್ಮ ಗಾಂಧಿ ವೃತ್ತ, ಬಾಲಾಜಿ ಮಂದಿರದವರೆಗೆ ಭಜನೆ ಮತ್ತು ಮಂಗಳ ವಾದ್ಯಗಳೊಂದಿಗೆ ಪರಶುರಾಮ ಭಾವಚಿತ್ರದ ಮೆರವಣಿಗೆ ಜರುಗಿತು.</p>.<p>ಮುಖಂಡರಾದ ದಿನೇಶ ಪಾರಿಕ್, ಸತ್ಯನಾರಾಯಣ ಗೌರ, ವಿಜಯ ಗೌರ, ಶ್ರೀಕಾಂತ ಜೋಶಿ, ಬದ್ರಿನಾರಾಯಣ ವ್ಯಾಸ, ರೂಪೇಶ ಪಾಂಚಾರಿಯಾ, ಆನಂದ ಗೌರ, ಸತೀಶ ಪಾಂಚಾರಿಯಾ, ಅಶ್ವಿನ ಪಂಚಾಚಾರ್ಯ ಸೇರಿದಂತೆ ಮುಖಂಡರು, ಮಹಿಳೆಯರು ಮತ್ತು ಮಕ್ಕಳು ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260420-30-1392393818</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>