ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ:18 ಸೆಪ್ಟೆಂಬರ್ 2022ರಿಂದ 24 ಸೆಪ್ಟೆಂಬರ್ 2022ರವರೆಗೆ

Last Updated 17 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ವಿದೇಶಿ ವ್ಯವಹಾರ ಮಾಡುವವರಿಗೆ ಹೆಚ್ಚು ಸಂಪಾದನೆ ಆಗುವ ಯೋಗವಿದೆ. ಕ್ರೀಡಾಪಟುಗಳಿಗೆ ಅವರ ಇಲಾಖೆಯಲ್ಲಿ ಮುಂಬಡ್ತಿ ಸಿಗುವ ಯೋಗವಿದೆ. ಸಹೋದರಿಯರು ಮತ್ತು ತಾಯಿಯಿಂದ ಹೆಚ್ಚಿನ ಸಹಕಾರ ದೊರೆಯುತ್ತದೆ. ಸರ್ಕಾರಿ ಕಚೇರಿಯ ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿನ ನಿಧಾನಗತಿಯನ್ನು ಕಾಣಬಹುದು. ಮಾತುಕತೆಯಿಂದ ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳನ್ನು ದೂರಮಾಡಿಕೊಳ್ಳಬಹುದು. ಸ್ನೇಹಿತರಿಂದ ನಿಮ್ಮ ಕೆಲಸಗಳಿಗೆ ಎಲ್ಲಾ ರೀತಿಯ ಸಹಕಾರಗಳು ದೊರೆಯುತ್ತವೆ. ಸರ್ಕಾರಿ ಸಂಸ್ಥೆಗಳ ಜೊತೆಗೆ ವ್ಯವಹಾರ ಮಾಡುವವರಿಗೆ ಮುಂಗಡ ಹಣ ದೊರೆತು ಸಂತೋಷವಾಗುತ್ತದೆ. ಈ ರಾಶಿಯ ಹೆಣ್ಣು ಮಕ್ಕಳ ಅಭಿವೃದ್ಧಿಯು ಬಹಳ ಉತ್ತಮವಾಗಿರುತ್ತದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಉತ್ತಮ ಮುನ್ನಡೆ ಇರುತ್ತದೆ.

ವೃಷಭ ರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ 1 2)
ಹಿರಿಯರ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಕರಕುಶಲ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವವರಿಗೆ ವ್ಯಾಪಾರ ವೃದ್ಧಿಸಿ ಆದಾಯ ಬರುತ್ತದೆ. ಕಾರ್ಯಸಾಧನೆಗೆ ಅಕ್ಕಪಕ್ಕದವರಿಂದ ಅಡ್ಡಿ ಅಥವಾ ಸಹೋದ್ಯೋಗಿಗಳಿಂದ ಅಡ್ಡಿ ಇರುತ್ತದೆ. ಉದ್ಯೋಗದ ಹುಡುಕಾಟದಲ್ಲಿ ಇರುವವರಿಗೆ ಯಾವುದಾದರೊಂದು ಉದ್ಯೋಗ ದೊರೆಯುತ್ತದೆ. ನ್ಯಾಯಾಲಯದ ವಿಚಾರಗಳಲ್ಲಿ ಮುನ್ನಡೆ ಇರುತ್ತದೆ. ಕಚೇರಿ ಕೆಲಸದ ಮೇಲೆ ದೂರ ಪ್ರಯಾಣ ಆಗಬಹುದು. ವಸ್ತ್ರವಿನ್ಯಾಸವನ್ನು ಮಾಡುವವರಿಗೆ ಬೇಡಿಕೆ ಹೆಚ್ಚುತ್ತದೆ. ಹೊಸ ವಾಹನವನ್ನು ಖರೀದಿಸಬೇಕೆಂದು ಇದ್ದವರು ಕೆಲವು ದಿನಗಳ ಕಾಲ ಮುಂದೂಡುವುದು ಒಳ್ಳೆಯದು. ಹೈನುಗಾರಿಕೆಯನ್ನು ಮಾಡುವವರಿಗೆ ಆರ್ಥಿಕ ಅಭಿವೃದ್ಧಿ ನಿಶ್ಚಿತ. ನರದೌರ್ಬಲ್ಯದ ಕಾಯಿಲೆ ಇರುವವರು ಹೆಚ್ಚು ಎಚ್ಚರಿಕೆ ತೆಗೆದುಕೊಳ್ಳುವುದು ಉತ್ತಮ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ನಿಮ್ಮನ್ನು ಮೋಸ ಮಾಡಲು ಕಾಯುತ್ತಿರುವ ಜನರಿದ್ದಾರೆ ಎಚ್ಚರವಾಗಿರಿ. ಉನ್ನತ ವ್ಯಾಸಂಗಕ್ಕಾಗಿ ವಿದೇಶಯಾನ ಮಾಡುವವರಿಗೆ ಅವಕಾಶಗಳು ಈಗ ದೊರೆಯುತ್ತವೆ. ಬಹಳ ದೊಡ್ಡಮಟ್ಟದ ಹೂಡಿಕೆಗಳನ್ನು ಈಗ ಮಾಡುವುದು ಅಷ್ಟು ಒಳಿತಲ್ಲ. ನಿಮ್ಮ ಕೆಲವೊಂದು ವಿಚಾರಗಳಲ್ಲಿ ತೀರ್ಮಾನವನ್ನು ತೆಗೆದುಕೊಳ್ಳಲಾಗದೆ ಗೊಂದಲಕ್ಕೆ ಸಿಲುಕುವಿರಿ. ಕ್ರೀಡಾಪಟುಗಳು ಸಮಬಲ ಹೋರಾಟ ನಡೆಸಿ ಗೆಲುವನ್ನು ಸಾಧಿಸಬಹುದು. ಸಹೋದರಿಯಿಂದ ನಿಮ್ಮ ಕೆಲವು ವ್ಯವಹಾರಗಳಿಗೆ ಆರ್ಥಿಕ ಸಹಾಯ ದೊರೆಯುತ್ತದೆ. ರಕ್ತ ಸಂಬಂಧಿ ಕಾಯಿಲೆ ಇರುವವರು ಎಚ್ಚರವಹಿಸಿರಿ. ಉದ್ಯೋಗಸ್ಥ ಮಹಿಳೆಯರು ಪ್ರೇಮಾಂಕುರದ ಸುಳಿಯಲ್ಲಿ ಸಿಲುಕಬಹುದು. ಹಣದ ಒಳಹರಿವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ಭೂ ವ್ಯವಹಾರ ಮಾಡುವವರಿಗೆ ಹಿನ್ನಡೆ ಇರುತ್ತದೆ.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)
ಆದಾಯದಷ್ಟೇ ಖರ್ಚು ಇರುತ್ತದೆ. ಹಣದ ನಿರ್ವಹಣೆಯನ್ನು ಸರಿಯಾಗಿ ಮಾಡಿರಿ. ಸೋದರರೊಳಗೆ ಆಸ್ತಿ ವಿಷಯದಲ್ಲಿ ಮುಸುಕಿನ ಗುದ್ದಾಟ ಇರುತ್ತದೆ. ನೀವು ಆಸೆ ಪಡುತ್ತಿದ್ದ ಆಸ್ತಿಯನ್ನು ಬೇರೆಯವರು ಖರೀದಿಸಬಹುದು. ಕೃಷಿಭೂಮಿ ಕೊಳ್ಳುವ ಯೋಗವಿದೆ. ಸಾಂಪ್ರದಾಯಿಕ ಕೃಷಿಯನ್ನು ಮಾಡುವ ರೈತರ ಬೆಳೆಗೆ ಬೇಡಿಕೆ ಹೆಚ್ಚುತ್ತದೆ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು. ನಿಮ್ಮ ಸಂಗಾತಿ ನಿಮ್ಮ ಕೆಲಸಕಾರ್ಯಗಳಿಗೆ ಬೆಂಬಲವಾಗಿ ನಿಲ್ಲುವರು. ವಿದೇಶದಲ್ಲಿ ಉದ್ಯೋಗಕ್ಕಾಗಿ ಹುಡುಕುತ್ತಿರುವವರಿಗೆ ಉದ್ಯೋಗ ದೊರೆಯುವ ಸಾಧ್ಯತೆಯಿದೆ. ಸಾಂಪ್ರದಾಯಿಕ ವೈದ್ಯರಿಗೆ ಹೆಚ್ಚು ಬೇಡಿಕೆ ಬರುತ್ತದೆ. ಹಂಗಾಮಿಯಾಗಿ ಕೆಲಸ ಮಾಡುತ್ತಿರುವ ಕೆಲವರಿಗೆ ಉದ್ಯೋಗ ಕಾಯಂ ಆಗಬಹುದು.

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ದಾಯಾದಿಗಳಲ್ಲಿ ಬಂದ ವ್ಯಾಜ್ಯಗಳನ್ನು ನಿವಾರಿಸಿಕೊಳ್ಳಲು ನ್ಯಾಯಾಲಯದ ಮೆಟ್ಟಿಲನ್ನೂ ಹತ್ತಬೇಕಾಗಬಹುದು. ಕೆಲಸ ಮಾಡುವ ಸ್ಥಳದಲ್ಲಿ ಸಹೋದ್ಯೋಗಿಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯವಿದೆ. ಸುಗಂಧ ದ್ರವ್ಯಗಳನ್ನು ಮಾರಾಟ ಮಾಡುವವರ ವ್ಯವಹಾರ ವಿಸ್ತರಿಸುತ್ತದೆ. ಸರ್ಕಾರಿ ಸಂಸ್ಥೆಗಳಿಗೆ ಕಚ್ಛಾ ವಸ್ತು ಪೂರೈಕೆ ಮಾಡುವವರಿಗೆ ಹೆಚ್ಚಿನ ಮಾಲು ಪೂರೈಕೆ ಮಾಡಲು ಆದೇಶ ದೊರೆಯುತ್ತದೆ. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಮಕ್ಕಳ ವಿಚಾರದಲ್ಲಿ ಹೆಚ್ಚಿನ ಕಾಳಜಿ ಅಗತ್ಯ. ಮೂಳೆ ಅಥವಾ ಕೀಲುಗಳ ತೊಂದರೆ ಇರುವವರು ಎಚ್ಚರಿಕೆಯ ಜೊತೆ ಚಿಕಿತ್ಸೆ ಸಹ ಪಡೆಯಬೇಕಾಗಬಹುದು. ನಿಮ್ಮ ದ್ವಂದ್ವ ನಿರ್ಧಾರಗಳು ವ್ಯವಹಾರದಲ್ಲಿ ಹಿನ್ನಡೆಯನ್ನು ತರಬಹುದು. ಪುಸ್ತಕ ವ್ಯಾಪಾರಿಗಳಿಗೆ ಹೆಚ್ಚಿನ ವ್ಯಾಪಾರ ಇರುವುದಿಲ್ಲ.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಸರ್ಕಾರಿ ಉನ್ನತ ಹುದ್ದೆಯಲ್ಲಿರುವವರಿಗೆ ಮೇಲ್ದರ್ಜೆಗೇರುವ ಅವಕಾಶವಿದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ವ್ಯವಹಾರಗಳಲ್ಲಿ ನಿಮ್ಮ ಸ್ಥಾನಮಾನವನ್ನು ಹೋರಾಟ ಮಾಡಿ ಉಳಿಸಿಕೊಳ್ಳಬೇಕಾಗುತ್ತದೆ. ಕೊಟ್ಟ ಸಾಲದ ವಸೂಲಾತಿಗಾಗಿಸಂಗಾತಿಯ ಸಹಚರರು ಬರಬಹುದು. ಉನ್ನತ ವಿದ್ಯಾಭ್ಯಾಸವನ್ನು ಮಾಡುತ್ತಿರುವವರ ಸೌಲಭ್ಯಗಳಲ್ಲಿ ಕುಂಠಿತವಾಗಬಹುದು. ಆಸ್ತಿ ಚಿಕಿತ್ಸಕ ವೈದ್ಯರಿಗೆ ಬೇಡಿಕೆ ಬಂದು ಸಂಪಾದನೆ ಹೆಚ್ಚುತ್ತದೆ. ಕೆಲವು ಬರಹಗಾರರ ಬರಹಗಳಿಗೆ ಬೇಡಿಕೆ ಬಂದು ಮುಂಗಡ ಹಣ ದೊರೆಯುವ ಸಾಧ್ಯತೆ ಇದೆ. ಮಾನಸಿಕ ಸ್ಥಿರತೆ ಋಣಾತ್ಮಕ ಚಿಂತನೆ ನಿಮ್ಮನ್ನು ಕಾಡಬಹುದು. ನಟನಾ ವೃತ್ತಿಯಲ್ಲಿರುವವರಿಗೆ ಖ್ಯಾತಿ ಮತ್ತು ಧನ ಸಂಪಾದನೆಯಾಗುತ್ತದೆ. ಹಿರಿಯರು ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ತಿಳಿಸಿಕೊಡುವರು.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಕೃಷಿಕರಿಗೆ ಉತ್ತಮ ಬೆಳೆಯ ಜೊತೆಗೆ ಉತ್ತಮ ಧನಲಾಭವಿರುತ್ತದೆ. ಹಣದ ಒಳಹರಿವು ಉತ್ತಮವಾಗಿದ್ದರೂ ಅದಕ್ಕಿಂತ ಮೀರಿದ ಖರ್ಚು ಇರುತ್ತದೆ. ನಿಮ್ಮ ಒಡೆದು ಆಳುವ ನೀತಿ ಎಲ್ಲರಿಗೂ ತಿಳಿಯುತ್ತದೆ. ಅದರಲ್ಲೂ ರಾಜಕಾರಣಿಗಳು ಮಾಡುವ ಒಳಸಂಚುಗಳು ಜನರಿಗೆ ತಿಳಿದು ಛೀಮಾರಿ ಹಾಕುವ ಸಂದರ್ಭ ಬರಬಹುದು. ಬಹಳ ಹಿಂದೆ ಕೊಟ್ಟ ಸಾಲ ಈಗ ವಾಪಸ್ ಬರುವ ಸಾಧ್ಯತೆ ಇದೆ. ಚರ್ಮದಿಂದ ಮಾಡಲ್ಪಟ್ಟ ವಸ್ತುಗಳನ್ನು ರಫ್ತು ಮಾಡುವವರಿಗೆ ಮಾರುಕಟ್ಟೆಯ ವಿಸ್ತರಣೆಗೆ ಯೋಗ ಇದೆ. ಹೋಟೆಲ್ ಉದ್ಯಮದವರಿಗೆ ವ್ಯವಹಾರ ಜಾಸ್ತಿಯಾಗುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಬೇಕಾದ ಸೌಲಭ್ಯಗಳು ದೊರೆಯುತ್ತವೆ. ಶೀತಬಾಧೆ ಇರುವವರು ಎಚ್ಚರವಾಗಿರುವುದು ಒಳ್ಳೆಯದು. ತಾಯಿಯಿಂದ ಬರಬೇಕಿದ್ದ ಸಹಾಯ ನಿಲ್ಲುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಸ್ತ್ರೀ ಮೇಲಧಿಕಾರಿಯ ಸಹಾಯದಿಂದ ನೀವು ಕೆಲವು ಆಪಾದನೆಗಳಿಂದ ಮುಕ್ತರಾಗುವಿರಿ.

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)
ಶ್ರಮಜೀವಿಗಳಾದ ನಿಮಗೆ ಗುರು-ಹಿರಿಯರ ಆಶೀರ್ವಾದದಿಂದ ಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ. ಸಾಮಾಜಿಕ ಕೆಲಸಗಳ ಜೊತೆಗೆ ಊರಿನ ಅಭಿವೃದ್ಧಿ ಕೆಲಸಗಳನ್ನು ಮಾಡಲೆತ್ನಿಸುವಿರಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಓದಿನಿಂದಾಗಿ ಸ್ವಲ್ಪ ಬದಲಾವಣೆ ಬೇಕೆನಿಸುತ್ತದೆ. ತೈಲ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಲಾಭ ಹೆಚ್ಚುತ್ತದೆ. ವಿವಾಹ ಆಕಾಂಕ್ಷಿಗಳಿಗೆ ಸಂಬಂಧ ಒದಗುವ ಸಾಧ್ಯತೆ ಇದೆ. ಪ್ರೇಮಿಗಳ ಪಾಲಿಗೆ ಮಹತ್ತರದ ಬೆಳವಣಿಗೆ ನಡೆದು ಹಿರಿಯರು ಒಪ್ಪಿಗೆ ಸೂಚಿಸುವರು. ಗುರಿ ಸಾಧಿಸಲು ನಿಮ್ಮ ಕೆಲಸಕಾರ್ಯಗಳಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳುವಿರಿ. ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಿಗಬೇಕಾದ ಸವಲತ್ತುಗಳು ದೊರೆಯುತ್ತವೆ. ವೃತ್ತಿಯಲ್ಲಿ ಆದಾಯ ಹೆಚ್ಚುವ ಸಾಧ್ಯತೆ ಇದೆ. ಲೋಹಗಳ ಎರಕಗಳನ್ನು ತಯಾರಿಸಿ ಕೊಡುವವರಿಗೆ ಲಾಭ ಇರುತ್ತದೆ.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)
ಬಂಧುಗಳ ಕುಟುಂಬ ಕಲಹಗಳನ್ನು ರಾಜಿಮಾಡಿಸಿ ವಾತಾವರಣವನ್ನು ತಿಳಿಗೊಳಿಸುವಿರಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ವಿಶೇಷ ಆಸಕ್ತಿ ಬರುತ್ತದೆ. ವೃತ್ತಿಯಲ್ಲಿ ಹಿತಶತ್ರುಗಳ ಬಾಧೆಯನ್ನು ಕಾಣಬಹುದು. ಷೇರು ಮಾರುಕಟ್ಟೆ ವ್ಯವಹಾರಗಳು ಅಂತಹ ಲಾಭವನ್ನು ತರುವುದಿಲ್ಲ. ಕುಟುಂಬದ ವ್ಯವಹಾರಗಳಲ್ಲಿ ಅಂತಃಕಲಹ ಜಾಸ್ತಿಯಾಗಬಹುದು. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ವೃತ್ತಿರಂಗದಲ್ಲಿ ಬರುವ ತೊಂದರೆಗಳನ್ನು ಎದುರಿಸಲು ಸಹೋದ್ಯೋಗಿಗಳು ಸಾಕಷ್ಟು ಸಹಾಯ ಮಾಡುವರು. ಸ್ವತ್ತಿನ ವಿಚಾರದಲ್ಲಿ ಬಂಧುಗಳು ನಿಮ್ಮ ಪರವಾಗಿ ನಿಲ್ಲುವರು. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಭೂ ವ್ಯವಹಾರವನ್ನು ಮಾಡುವವರಿಗೆ ಸಾಮಾನ್ಯವಾದ ಪ್ರಗತಿ ಇರುತ್ತದೆ. ನಿಮ್ಮ ಪ್ರೀತಿ ಪ್ರೇಮ ಉತ್ತಮ ಫಲದತ್ತ ಸಾಗುತ್ತವೆ.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಉದ್ದಿಮೆದಾರರು ತಮ್ಮ ಕೆಲಸಗಾರರ ಕೆಲಸದ ಅವಧಿಯನ್ನು ಹೆಚ್ಚಿಸಬಹುದು. ಹಣ್ಣು ಮತ್ತು ತರಕಾರಿ ವ್ಯಾಪಾರಗಾರರಿಗೆ ಉತ್ತಮ ವ್ಯವಹಾರವಿರುತ್ತದೆ. ಧಾರ್ಮಿಕ ದತ್ತಿ ಇಲಾಖೆಗಳಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಜವಾಬ್ದಾರಿಗಳು ಬರುತ್ತವೆ. ಸರ್ಕಾರಿ ವ್ಯವಹಾರಗಳ ಒಪ್ಪಂದಗಳಿಂದ ನಿಮಗೆ ಲಾಭವಾಗುತ್ತದೆ. ಎಲೆಕ್ಟ್ರಾನಿಕ್ ಉಪಕರಣಗಳನ್ನು ತಯಾರಿಸುವವರಿಗೆ ಅಭಿವೃದ್ಧಿ ಇರುತ್ತದೆ. ದ್ರವರೂಪದ ಆಹಾರ ವಸ್ತುಗಳನ್ನು ಮಾರಾಟ ಮಾಡುವವರಿಗೆ ಲಾಭ ಹೆಚ್ಚುತ್ತದೆ. ಸಂಗಾತಿಯ ದುಬಾರಿ ಬೇಡಿಕೆಗಳನ್ನು ಈಡೇರಿಸಲು ನಿರಾಕರಣೆ ಮಾಡುವಿರಿ. ನಿಮ್ಮ ತಂದೆಯಿಂದ ವ್ಯವಹಾರದ ಒಂದು ಪಾಲು ನಿಮಗೆ ದೊರೆಯುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳುವಿರಿ. ಕೃಷಿಕರಿಗೆ ಅಲ್ಪ ಲಾಭ ದೊರೆಯುವ ಸಂದರ್ಭವಿದೆ.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ವೃತ್ತಿ ಮತ್ತು ಪ್ರವೃತ್ತಿಗಳಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವುದು ಅಗತ್ಯವಿರುತ್ತದೆ. ಪ್ರವೃತ್ತಿಯಿಂದ ಹೆಚ್ಚು ಸಂಪಾದನೆಯಾದರೂ ವೃತ್ತಿಯ ಬಗ್ಗೆ ಹೆಚ್ಚಿನ ಗಮನವಿರಲಿ. ಹಣದ ಒಳಹರಿವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ನಿಮ್ಮ ಬೆಳವಣಿಗೆಗಳ ಬಗ್ಗೆ ನಿಮ್ಮ ಬಂಧುಗಳಲ್ಲಿ ಮೆಚ್ಚುಗೆ ವ್ಯಕ್ತವಾದರೂ ಕೆಲವರಿಗೆ ಅಸೂಯೆ ಇರುತ್ತದೆ. ವಾರದ ಮಧ್ಯದಲ್ಲಿ ಸವಿಯಾದ ಭೋಜನದ ಯೋಗವಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣಬಹುದು. ನಿಮ್ಮ ಯೋಜನೆಗಳು ಮತ್ತು ಅವುಗಳ ಸಾಧಕ-ಬಾಧಕಗಳ ಬಗ್ಗೆ ತಜ್ಞರ ಜೊತೆ ಸಮಾಲೋಚನೆ ಮಾಡಿರಿ. ಲೇವಾದೇವಿ ವ್ಯವಹಾರಗಳು ಅಲ್ಪ ಮಟ್ಟಿನ ಲಾಭವನ್ನು ಕೊಡುತ್ತವೆ. ಕೆಲವು ಯುವಕರು ದುಡುಕಿನ ನಿರ್ಧಾರದಿಂದ ಕೋರ್ಟ್‌ ಕಚೇರಿಯ ಮೆಟ್ಟಿಲು ಹತ್ತುವ ಸಂದರ್ಭವನ್ನು ತಂದುಕೊಳ್ಳುವರು.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಉದ್ದಿಮೆದಾರರಿಗೆ ವಿದೇಶಿ ಕಂಪನಿಗಳ ಸಹಕಾರ ದೊರೆಯುತ್ತದೆ. ಕೆಲಸಗಳನ್ನು ಪೂರ್ಣಗೊಳಿಸಲು ಕಾಲಮಿತಿಯನ್ನು ಹಾಕಿಕೊಳ್ಳುವುದು ಅತಿ ಅಗತ್ಯ. ವೈಯಕ್ತಿಕ ಕೆಲಸಗಳನ್ನು ಅಡೆತಡೆಯಿಲ್ಲದೇ ಮಾಡಿಕೊಳ್ಳುವಿರಿ. ಆಮದು ರಫ್ತು ವ್ಯವಹಾರ ಮಾಡುವವರಿಗೆ ಸಾಕಷ್ಟು ಪ್ರಗತಿ ಇರುತ್ತದೆ. ಕಟ್ಟಡ ನಿರ್ಮಾಣ ಕೆಲಸ ಮಾಡುವವರಿಗೆ ಕೈತುಂಬಾ ಕೆಲಸವಿರುತ್ತದೆ. ಕಬ್ಬಿಣದ ವ್ಯಾಪಾರಿಗಳಿಗೆ ವ್ಯವಹಾರ ವೃದ್ಧಿಸಿ ಉತ್ತಮ ಲಾಭವಿರುತ್ತದೆ. ಸಾಮಾಜಿಕ ಕ್ಷೇತ್ರಗಳಲ್ಲಿ ಅತಿಯಾಗಿ ಮಾತಾಡಿ ನಿಮ್ಮ ಗೌರವಕ್ಕೆ ಕುಂದು ತಂದುಕೊಳ್ಳುವಿರಿ. ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಉತ್ತಮ ಬೆಳವಣಿಗೆಯನ್ನು ಕಾಣಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ನಿರೀಕ್ಷಿಸಿದ ಯಶಸ್ಸು ಇರುತ್ತದೆ. ನಿಮ್ಮ ಕೆಲಸಗಳಿಗೆ ಸಂಗಾತಿಯ ಸಹಕಾರ ದೊರೆಯುತ್ತದೆ. ಭಾಷಣಕಾರರಿಗೆ ಉತ್ತಮ ವೇದಿಕೆ ಮತ್ತು ಉತ್ತಮ ವಿಷಯ ದೊರೆತು ಹೆಸರುಗಳಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT