ಬೆಂಗಳೂರು: ರಾಜ್ಯದ ಒಟ್ಟು 14 ಕ್ಷೇತ್ರಗಳಿಗೆ ಇಂದು(ಏ.18, ಬುಧವಾರ) ಮತದಾನ ನಡೆಯಲಿದೆ. ಈ ಪೈಕಿ ಬೆಂಗಳೂರು ದಕ್ಷಿಣ, ಮಂಡ್ಯ, ಹಾಸನ, ತುಮಕೂರು ಕ್ಷೇತ್ರಗಳು ದೇಶದ ಗಮನ ಸೆಳೆದಿವೆ. ಈ ಕ್ಷೇತ್ರಗಳಲ್ಲಿ ಚುನಾವಣೆ ಘೋಷಣೆಯಾದ ನಂತರ ಈವರೆಗೆ ನಡೆದಿರುವ ರಾಜಕೀಯ ಬೆಳವಣಿಗೆಗಳ ಸಮಗ್ರ ಮಾಹಿತಿ ಇಲ್ಲಿದೆ.
ದೇವೇಗೌಡರು ಸ್ಪರ್ಧಿಸಿರುವ ತುಮಕೂರು, ದೇವೇಗೌಡರ ಮೊಮ್ಮಕ್ಕಳಾದ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿರುವ ಹಾಸನ,ನಿಖಿಲ್ ಕುಮಾರಸ್ವಾಮಿ ಕಣದಲ್ಲಿರುವ ಮಂಡ್ಯ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಾಳೆ ನಿರ್ಧರಿಸುತ್ತಾರೆ.
ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ತಪ್ಪಿದ್ದು ದೊಡ್ಡ ಸುದ್ದಿಯಾಗಿತ್ತು. ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ಘೋಷಣೆಯಾದ ಬೆನ್ನಲ್ಲೇಡಾ.ಸೋಮ್ ದತ್ತಾ ಅವರ ಹಳೆಯ ಟ್ವೀಟ್ಗಳು ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿದ್ದವು. ಈ ಎಲ್ಲ ಕಾರಣಗಳಿಂದ ಬೆಂಗಳೂರು ದಕ್ಷಿಣ ಸಹ ದೇಶದ ಗಮನ ಸೆಳೆದಿತ್ತು.
ಉಳಿದಂತೆ ಉಡುಪಿ–ಚಿಕ್ಕಮಗಳೂರು, ಮಂಗಳೂರು, ಚಿತ್ರದುರ್ಗ, ತುಮಕೂರು, ಮೈಸೂರು–ಕೊಡಗು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದೆ.
ಚುನಾವಣಾ ಕಣದಲ್ಲಿ ಈವರೆಗೆ ನಡೆದಿರುವ ಬೆಳವಣಿಗೆಗಳು, ಅಪರೂಪದ ಸಂದರ್ಶನಗಳು, ಕ್ಷೇತ್ರದ ಸಮಗ್ರ ನೋಟ ನೀಡುವ ‘ಅಖಾಡದಲ್ಲೊಂದು ಸುತ್ತು’, ರಾಜಕೀಯ ಬೆಳವಣಿಗೆಗಳನ್ನು ವಿಶ್ಲೇಷಿಸುವ ‘ಕ್ಷೇತ್ರನೋಟ’ದ ಲಿಂಕ್ಗಳು ಕೆಳಗಿವೆ. ಈ ಲಿಂಕ್ಗಳನ್ನು ಬಳಸಿ ನೀವು ಚುನಾವಣಾ ಕಣದ ಸಮಗ್ರ ಪರಿಚಯ ಮಾಡಿಕೊಳ್ಳಬಹುದು.
ತುಮಕೂರು ಕ್ಷೇತ್ರದಲ್ಲಿ ಈವರೆಗೆ...
*ಅಖಾಡದಲ್ಲೊಂದು ಸುತ್ತು– ದೇವೇಗೌಡರ ಮೇಲೆ ಆಸೆ, ಮೋದಿ ಬಗ್ಗೆ ಪ್ರೀತಿ
*ಕ್ಷೇತ್ರ ನೋಟ–ದೇವೇಗೌಡ–ಬಸವರಾಜು ಜಿದ್ದಾಜಿದ್ದಿ
*ಎಚ್.ಡಿ.ದೇವೇಗೌಡ ಸಂದರ್ಶನ-ಜಿಲ್ಲೆಯ ಎಲ್ಲ ಹಳ್ಳಿಗಳಿಗೆ ನೀರಿನ ಭರವಸೆ
*ಬಿಜೆಪಿ ಅಭ್ಯರ್ಥಿಜಿ.ಎಸ್.ಬಸವರಾಜ್ ಸಂದರ್ಶನ–‘ತುಮಕೂರನ್ನು ದೇಶದ ಮಾದರಿ ಜಿಲ್ಲೆ ಮಾಡುವೆ’
*ತುಮಕೂರು ಲೋಕಸಭಾ ಕ್ಷೇತ್ರ ದರ್ಶನ
*ಮುದ್ದಹನುಮೇಗೌಡರಿಗೆ ಮತ್ತೆ ಭ್ರಮನಿರಸನ
*ದೇವೇಗೌಡ ಸ್ಪರ್ಧೆಗೆ ತೀವ್ರ ವಿರೋಧ–ಪರಮೇಶ್ವರ ತುರ್ತು ಸಭೆ
*ಮನವೊಲಿಕೆಗೆ ಬಗ್ಗಿದ ಮುದ್ದಹನುಮೇಗೌಡ, ರಾಜಣ್ಣ?
ಮಂಡ್ಯಕಣದ ಬಗ್ಗೆ ಇನ್ನಷ್ಟು...
*ಅಖಾಡದಲ್ಲೊಂದು ಸುತ್ತು– ‘ಫೈಟ್ ಜೋರಾಗೈತೆ, ನೋಡಾನ ಏನಾಯ್ತದೆ...’
*ಕ್ಷೇತ್ರ ನೋಟ– ಸುಮಲತಾ ಎದುರು ಅಷ್ಟ ದಿಕ್ಪಾಲಕರು
*ಗಾರ್ಮೆಂಟ್ಸ್ ಮೊರೆಹೋದ ಮಂಡ್ಯ ಜಿಲ್ಲೆಯ ರೈತ ಮಹಿಳೆಯರು
*ವಿವಾದ ಸೃಷ್ಟಿಸಿದ ಕಹಳೆ ಚಿತ್ರ
*ಉತ್ತರದ ಜಯಪ್ರದಾ- ದಕ್ಷಿಣದ ಸುಮಲತಾ ಇಬ್ಬರಿಗೂ ಸಾಮ್ಯತೆಗಳೇನು ಗೊತ್ತೇ?
*ಜೆಡಿಎಸ್ ಪರ ಪ್ರಚಾರಕ್ಕೆ ತಲೆಗೆ ₹ 500; ಶಿವರಾಮೇಗೌಡರ ಆಡಿಯೊ ವೈರಲ್
*ನಿಖಿಲ್ ಕುಮಾರಸ್ವಾಮಿ ಸಂದರ್ಶನ–ಹಿಂಬಾಗಿಲಲ್ಲಿ ಅಧಿಕಾರ ಕೇಳುತ್ತಿಲ್ಲ
*ಸುಮಲತಾ ಸಂದರ್ಶನ–ಅಭಿವೃದ್ಧಿಗೆ ಮುಖ್ಯಮಂತ್ರಿ ಮಗನೇ ಸಂಸದನಾಗಬೇಕೆ?
*ವಿಡಿಯೊ– ಸುಮಲತಾ ಮಾತು–ರಾಜಕೀಯಕ್ಕೆ ಬಂದಿದ್ದೇ ಮಂಡ್ಯಕ್ಕಾಗಿ
ಮಂಗಳೂರು ಕ್ಷೇತ್ರದ ಪ್ರಮುಖ ಚುನಾವಣಾ ಘಟನಾವಳಿಗಳು
*ದಕ್ಷಿಣ ಕನ್ನಡ: ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಬಳಿ ₹ 2.86 ಕೋಟಿ ಆಸ್ತಿ
*ಮೋದಿಗಾಗಿ ಸಿಡ್ನಿ ಕೆಲಸ ತ್ಯಜಿಸಿದ ಅಭಿಮಾನಿ
*ಅಖಾಡಕ್ಕೆ ಇಳಿದ ಆರ್ಎಸ್ಎಸ್
*‘ಇಳಿಯಿರಿ,ಇಳಿಯಿರಿ..ನಾ ಮತ್ತೊಮ್ಮೆ ಬರುವೆ’ ಮರ ಏರಿದ್ದ ಅಭಿಮಾನಿಗಳಿಗೆ ಮೋದಿ ಮನವಿ
*ಮೋದಿ ಪ್ರಚಾರದ ಬಳಿಕ ಹಲ್ಲೆ –ನಾಲ್ವರಿಗೆ ಗಾಯ
*ವಂಶೋದಯ-ಕ್ಕೆ ‘ಇತಿಶ್ರೀ’ ಹಾಡಿ: ಮಂಗಳೂರಿನಲ್ಲಿ ಪ್ರಧಾನಿ ಮೋದಿ ಕರೆ
ಪ್ರಜಾವಾಣಿ ವಿಶೇಷಸಂದರ್ಶನಗಳು...
*ನಾನೆಂದೂ ಕುಟುಂಬ ರಾಜಕಾರಣ ಮಾಡಿಲ್ಲ: ದೇವೇಗೌಡ
*ಕುಟುಂಬ ರಾಜಕಾರಣದಿಂದಲೇ ಉಳಿದಿವೆ ಪ್ರಾದೇಶಿಕ ಪಕ್ಷಗಳು: ಕುಮಾರಸ್ವಾಮಿ
*ನಾನು ಈ ಜನ್ಮದಲ್ಲಿ ಯಾವ ರಾಜ್ಯದ ರಾಜ್ಯಪಾಲನೂ ಆಗಲ್ಲ: ಯಡಿಯೂರಪ್ಪ
*ಮೈತ್ರಿ ಸರ್ಕಾರಕ್ಕೆ ನಾನು ಮೂಗುದಾರ ಹಾಕಿಲ್ಲ: ಸಿದ್ದರಾಮಯ್ಯ
*ನಾಯಕರ ಮೌನದಿಂದ ಅವಮಾನವಾಗಿದೆ: ತೇಜಸ್ವಿನಿ ಅನಂತಕುಮಾರ್
*ಬಡವರದ್ದಲ್ಲ, ಕಾಂಗ್ರೆಸ್ನವರ ಗರೀಬಿ ಹಠಾವ್ ಆಯಿತು: ಸದಾನಂದಗೌಡ
*ದಲಿತರನ್ನು ಒಡೆಯಬೇಡಿ, ಎಡಗೈ–ಬಲಗೈ ಅಂತ ಎತ್ತಿಕಟ್ಟಿದರೆ ಯಾರಿಗೂ ಲಾಭವಿಲ್ಲ: ಮಲ್ಲಿಕಾರ್ಜುನ ಖರ್ಗೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.