ಪ್ರಸ್ತುತ ರೋಗ ಹರಡದಂತೆ ತಡೆಗಟ್ಟಲು ಅಗತ್ಯವಿರುವ ವೆಂಟಿಲೇಟರ್ಸ್, ಕಿಟ್, ಮಾಸ್ಕ್ ಹಾಗೂ ಔಷಧಗಳ ಖರೀದಿಗೆ ಶಿವಮೊಗ್ಗ ಸಂಸದರ ನಿಧಿಯಿಂದ ₹ 1 ಕೋಟಿ ನೀಡಲಾಗಿದೆ. ಕೊರೊನಾ ವೈರಾಣು ಹರಡದಂತೆ ತಡೆಗಟ್ಟುವುದು ಎಲ್ಲರ ಆದ್ಯ ಕರ್ತವ್ಯವಾಗಿದ್ದು, ಮನೆಯಿಂದ ಹೊರಗೆ ಬಾರದೇ ಮನೆಯೊಳಗೇ ಇದ್ದು ಕೊರೊನಾವನ್ನು ಮನೆಗೆ ಬಾರದಂತೆ ತಡೆಗಟ್ಟುವಲ್ಲಿ ಎಲ್ಲರೂ ದೃಢನಿರ್ಣಯ ಕೈಗೊಳ್ಳಬೇಕು’ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.