ಅಧ್ಯಕ್ಷೆ ನಯನಾ ಶ್ರೀಪಾದ ಹೆಗಡೆ ಮಾತನಾಡಿ, ’ಕೊರೊನಾ ನಿಯಂತ್ರಣಕ್ಕೆ ಜಾಗೃತಿಯೊಂದಿಗೆ ಎಲ್ಲರ ಸಹಕಾರ ಮುಖ್ಯ. ಅನವಶ್ಯಕವಾಗಿ ಜನರು ಓಡಾಟ ನಿಲ್ಲಿಸಬೇಕಿದೆ. ತಾಲ್ಲೂಕು ಆಡಳಿತ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಯಾವುದೇ ಸಹಕಾರ ಬಯಸಿದರೂ ತಾಲ್ಲೂಕು ಪಂಚಾಯಿತಿ ನೆರವಿಗೆ ಸಿದ್ಧವಿದೆ. ₹61 ಸಾವಿರಗಳನ್ನು ಸಂಕಷ್ಟದಲ್ಲಿರುವ ಕುಟುಂಬಗಳ ನೆರವಿಗೆ ಬಳಸಿಕೊಳ್ಳಬೇಕು‘ ಎಂದರು.