ಅಪಘಾತದಲ್ಲಿ ಆಟೊ ಚಾಲಕ ಚನ್ನಪಟ್ಟಣದ ಪ್ರಕಾಶ್, ಪ್ರಯಾಣಿಕರಾದ ವಿವೇಕಾನಂದ, ಗೌರಮ್ಮ, ರಘು, ಜ್ಯೋತಿ, ಯಶಸ್ವಿನಿ, ಶ್ರಾವ್ಯ ಎನ್ನುವವರಿಗೆ ಗಂಭೀರ ಗಾಯಗಳಾಗಿವೆ. ಇವರಲ್ಲಿ ಎರಡೂವರೆ ವರ್ಷದ ಬಾಲಕಇಿ ಶ್ರಾವ್ಯ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳಿಗೆ ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ, ಸಂಜಯಗಾಂಧಿ ಮತ್ತು ನಿಮ್ಹಾನ್ಸ್ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.